Skip to main content

Blog number 1316.ಸೋನಿಯಾ ಗಾಂಧಿ ಅವರು ಪಿ.ಎಂ. ಕೇರ್ ನಿಧಿಯನ್ನು ನಕಲಿ ಅಂತ ಏಐಸಿಸಿ ಟ್ಟೆಟರ್ ಸಂದೇಶ ವಿರೋದಿಸಿ ನ್ಯಾಯಾಲಯದಿಂದ ಎಪ್.ಐ.ಆರ್ ದಾಖಲಿಸಿದ ನಮ್ಮ ಊರಿನ ವಕೀಲರಾದ ಕೆ.ವಿ.ಪ್ರವೀಣ್.

https://youtu.be/ohpBAO3mr1c

#ಸೋನಿಯಾ_ಗಾಂಧಿ_ಮೇಲೆ_FIR_ದಾಖಲಿಸಿದ್ದ_ಸಾಗರದ_ವಕೀಲರು.

#ಕೆ_ವಿ_ಪ್ರವೀಣ್_ನಮ್ಮ_ಊರಿನವರು

#ಶರಾವತಿ_ಮುಳುಗಡೆ_ರೈತ_ಕುಟುಂಬದವರು

#ಅಸಾದಾರಣ_ಬುದ್ದಿಮತ್ತೆ_ಮನುಷ್ಯತ್ವ_ಮತ್ತು_ಸರಳತೆಯ_ಯುವಕ.

    ಕಾಂಗ್ರೇಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ AICC ಟ್ವೀಟರ್ ನಿಂದ ಕೊರಾನಾ ಕಾಲದ ಸಂಕಷ್ಟದಲ್ಲಿ ಪ್ರದಾನಿ ಮೋದಿ ಅವರು ಸಾರ್ವಜನಿಕ ದೇಣಿಗೆಗಾಗಿ ಪ್ರಾರಂಬಿಸಿದ ಪಿ.ಎಮ್. ಕೇರ್ ಪಂಡ್ ಪೇಕ್ ಎಂದು ಬರೆದದ್ದು ನೋಡಿ ಅದರಿಂದ ನೊ೦ದ ಸಾಗರದ ವಕೀಲರಾದ ಕೆ.ವಿ.ಪ್ರವೀಣ್ ಸಾಗರದ ನ್ಯಾಯಾಲಯದಲ್ಲಿ ಖಾಸಾಗಿ ದೂರು ದಾಖಲಿಸಿ FIR ಹಾಕಿಸಿದ್ದು ಇಡೀ ದೇಶದಲ್ಲೇ ಸುದ್ಧಿ ಆಗಿತ್ತು.
  ನಂತರ ಈ ಪ್ರಕರಣ ತನಿಖೆ ಮಾಡಿ ಪೋಲಿಸರು ಬಿ. ರಿಪೋರ್ಟ್ ನ್ಯಾಯಲಯಕ್ಕೆ ಸಲ್ಲಿಸಿ ಮುಕ್ತಾಯ ಮಾಡಿದ್ದನ್ನು ವಕೀಲರಾದ ಕೆ.ವಿ.ಪ್ರವೀಣ್ ನ್ಯಾಯಾಲಯದಲ್ಲಿ ಚಾಲೆಂಜ್ ಮಾಡಿದ್ದಾರೆ.
  ಸಾರ್ವಜನಿಕರ ಹಿತಕ್ಕಾಗಿ ಇಂತಹ ನೂರಾರು ಹೋರಾಟಗಳನ್ನು ನ್ಯಾಯಾಲಯದಲ್ಲಿ ಸದಾ ನಡೆಸುತ್ತಿರುವ  ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ ಗ್ರಾಮ ಪಂಚಾಯತ್ ನ ಕಲ್ಲುಕೊಪ್ಪದ ಶರಾವತಿ ಮುಳುಗಡೆ ರೈತರಾದ ವೀರಭದ್ರಪ್ಪರ ಎರಡನೆ ಪುತ್ರರು ಈ ಪ್ರವೀಣ್.
    ನಮ್ಮ ಕಣ್ಣೆದುರೇ ನಡೆದುಕೊಂಡು ನಮ್ಮ ಮನೆ ಎದುರಿನಿಂದ ಆನಂದಪುರಂನಲ್ಲಿ ಪ್ರಾಥಮಿಕ ಶಾಲೆಯಿಂದ ಪ್ರೌಡ ಶಾಲೆವರೆಗೆ ವಿದ್ಯಾಬ್ಯಾಸ ಮಾಡಿದ ಪ್ರವೀಣ್ ರಲ್ಲಿ ನಾನು ಗಮನಿಸಿದ್ದು ಅವರಲ್ಲಿರುವ ವಿಶೇಷ ಎನರ್ಜ,ಸದಾ ನಗುತ್ತಾ ಚೇಷ್ಟೆ ಮಾಡುತ್ತಾ ಸಹ ವಿದ್ಯಾರ್ಥಿಗಳ ಜೊತೆ ಶಾಲೆಗೆ ಹೋಗಿ ಬರುತ್ತಿದ್ದರು.
   ಇವರ ತಂದೆಯವರಿಗೆ ಸ್ಥಳಿಯ ಜನ ಕರೆಯುವುದು ಮರಿಗೌಡ ರೆಂದೇ, ಆ ಕಾಲದಲ್ಲಿ ವಿದ್ಯಾವಂತರಾಗಿದ್ದ ಮರಿ ಗೌಡರು ಸ್ವಂತ ಪರಿಶ್ರಮದಲ್ಲಿ ಕೃಷಿ ಮಾಡಿ ಉತ್ತಮ ಆದಾಯ ಪಡೆಯುವ ಮಾದರಿ ರೈತರು, ಇವರ ಜಮೀನಿನಲ್ಲಿ ಕೆಲಸ ಮಾಡುವ  ಕೃಷಿ ಕಾರ್ಮಿಕರು ಇವರನ್ನು ಸದಾ ಹೊಗಳುತ್ತಾರೆ.
  ಸಂಘ ಪರಿವಾರದಲ್ಲಿರುವ ಇವರು ಬಿಜೆಪಿ ಪಕ್ಷದ ಲೀಗಲ್ ಸೆಲ್ ನಲ್ಲಿದ್ದಾರೆ, ಈಗಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಅನೇಕ ಹಗರಣ - ಭ್ರಷ್ಟಾಚಾರದ ಬಗ್ಗೆ ಇವರು ವಿರೋದಿಸುತ್ತಾರೆ, ಬಡವರ ಬಗ್ಗೆ ನ್ಯಾಯ ಕೊಡಿಸಲು ಸದಾ ಮುಂದು, ಸರಳ ಜೀವನಕ್ಕೆ - ಪ್ರಾಮಾಣಿಕತೆಗೆ ಮೊದಲ ಆಧ್ಯತೆ ನೀಡುತ್ತಾರೆ ಅದರಿಂದ ಇವರು ಬೇರೆಯವರಿಗಿಂತ ಭಿನ್ನವಾಗಿ ಕಾಣುತ್ತಾರೆ.
  ಆಡಳಿತಾರೂಢ ಬಿಜೆಪಿ ಪಕ್ಷದ ಜನಪ್ರತಿನಿಧಿಗಳು ಇವರಿಂದ ಅಂತರ ಕಾಪಾಡುತ್ತಾರೆ ಆದರೆ ಅದಕ್ಕೆಲ್ಲ ಇವರು ಕೇರ್ ಮಾಡುವುದಿಲ್ಲ ಕಾರಣ ದೆಹಲಿವರೆಗೆ ಸ೦ಘ ಪರಿವಾರದ ಸಂಪರ್ಕ ಇವರಿಗಿದೆ.
   ಹಣ ಇಲ್ಲದಿರಬಹುದು ಆದರೆ ಬಿಜೆಪಿ ಪಕ್ಷದಿಂದ ಸಾಗರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ನನಗೆ ಅರ್ಹತೆ ಇದೆ ಎನ್ನುವ ಇವರೂ ಈ ಭಾರಿಯ ಚುನಾವಣೆಗೆ ಟಿಕೇಟ್ ಆಕಾಂಕ್ಷಿ ಆಗಿದ್ದಾರೆ, ಭ್ರಷ್ಟಾಚಾರ ಇಲ್ಲದ ಸುವ್ಯವಸ್ಥೆಯ ಸಾಗರ ನಿಮಾ೯ಣದ ಕನಸು ಇವರದ್ದು.
  ಹಾಗಂತ ಪಕ್ಷ ಅವಕಾಶ ನೀಡದಿದ್ದರೂ ಇವರು ಬಿಜೆಪಿ ಬಿಡುವುದಿಲ್ಲ ಎನ್ನುತ್ತಾರೆ.
   ಇವರ ಮಾತು ನಡತೆ ಕೆಲವರಿಗೆ ಅರ್ಥವಾಗಲಾರದು ಆದರೆ ಕೆ.ವಿ.ಪ್ರವೀಣ್ ರಲ್ಲಿ ವಿಶೇಷವಾದ ಜ್ಞಾನ ಇದೆ ಇವರನ್ನು ಬಿಜೆಪಿ ಪಕ್ಷ ಸರಿಯಾಗಿ ಬಳಸಿಕೊಂಡಿಲ್ಲ ಮತ್ತು ಬಿಜೆಪಿ ಪಕ್ಷದ ತಪ್ಪುಗಳನ್ನು ನೇರಾ ನೇರಾ ಖಂಡಿಸುವ ಇವರ ನಡತೆ ಬಿಜೆಪಿ ಪಕ್ಷದವರಿಗೆ ಬಿಸಿ ತುಪ್ಪವಾಗಿದೆ.
   ಮುಂದಿನ ದಿನಗಳಲ್ಲಿ ನಮ್ಮ ಊರಿನ ಈ ರೈತ ಯುವ ವಕೀಲರು ವಿದಾನ ಪರಿಷತ್ತಿನ ಸದಸ್ಯರಾಗಲಿ ಎ೦ದು ಹಾರೈಸುತ್ತೇನೆ.
https://photos.app.goo.gl/UdP3z48WErhpeDCR6

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ