Skip to main content

Blog number 1333. ನೆಂಪೆ ದೇವರಾಜರ ಬೇಟಿಯಲ್ಲಿ 2000 ಇಸವಿಯಲ್ಲಿ ನಾವೆಲ್ಲ ಸೇರಿ ಕಾಗೋಡು ಸುವರ್ಣ ಜ್ಯೋತಿ ಕಾಗೋಡಿನಿಂದ ಕಡಿದಾಳು ಮಂಜಪ್ಪರ ಸಮಾದಿವರೆಗೆ ಜಾಥಾದಲ್ಲಿ ಒಯ್ದ ನೆನಪು

#ನೆಂಪೆದೇವರಾಜ್_ಮತ್ತು_ನನ್ನ_ಬೇಟಿ

#ಇಪ್ಪತೈದು_ವರ್ಷದ_ನಂತರ

#ಸಾಮಾಜಿಕ_ಜಾಲತಾಣದಲ್ಲಿ_ನಿತ್ಯ_ಸಂವಾದದಲ್ಲಿದ್ದೇವೆ.

#ನೆಂಪೆದೇವರಾಜ್_ಆದ್ಯಾಪಕ_ಪತ್ರಕರ್ತ_ಸಾಹಿತಿ_ಜನಪರಹೋರಾಟಗಾರ_ರಾಜಕಾರಣಿ_ಕೃಷಿಕ_ಹೀಗೇ_ಸಾಗುತ್ತದೆ_ಸಾಲು....

#ಕಾಗೋಡು_ಹೋರಾಟದ_ಕಾಗೋಡು_ಸುವರ್ಣ_ಜ್ಯೋತಿ_ಜಾತಕ್ಕೆ_ತಡೆಯುವ_ಪ್ರಯತ್ನ_ನಡೆದಿತ್ತು

#ರಿಸರ್ವ್_ಪೋಲಿಸ್_ವಾಹನದ_ರಕ್ಷಣೆಯಲ್ಲಿ_ಕಾಗೋಡು_ಸುವರ್ಣ_ಜ್ಯೋತಿ_ಉದ್ಫಾಟನೆ

#ಸಾಗರ_ತಾಲ್ಲೂಕಿನ_ಕಾಗೋಡಿನಿಂದ_ತೀರ್ಥಹಳ್ಳಿಯ_ಕಡಿದಾಳು_ಮಂಜಪ್ಪರ_ಸಮಾದಿವರೆಗೆ

#ಇದೆಲ್ಲ_ನೆನಪುಗಳಾಯಿತು.
 
    1997 ರಲ್ಲಿ ನೆಂಪೆ ದೇವರಾಜ್ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯಲ್ಲಿ ವಾಸವಾಗಿದ್ದರು ಕಾರಣ ಅವರ ಪತ್ನಿ ಸಮೀಪದ ಗರ್ತಿಕೆರೆಯ ಪ್ರೌಡ ಶಾಲೆಯಲ್ಲಿ ಉದ್ಯೋಗ ಮಾಡುತ್ತಿದ್ದರು, ನೆಂಪೆ ದೇವರಾಜ್ ರಿಪ್ಪನ್ ಪೇಟೆಯಿಂದ ನಿತ್ಯ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿಗೆ ಪತ್ರಿಕೋದ್ಯಮ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಹೋಗುತ್ತಿದ್ದರು ಆ ಸಂದರ್ಭದಲ್ಲಿ ನನ್ನ ರಾಜಕೀಯ ಹೋರಾಟಗಳ ಚರ್ಚೆ ಮಾಡುತ್ತಿದ್ದ ಕೇಂದ್ರ ರಿಪ್ಪನ್ ಪೇಟೆ ಆಗಿತ್ತು ಅಲ್ಲಿನ ಅನೇಕ ಜನಪರ ಮುಖಂಡರು ನನಗೆ ಸಲಹೆ-ಸಹಕಾರ ನೀಡುತ್ತಿದ್ದರು.
  ರಿಪ್ಪನ್ ಪೇಟೆಯಲ್ಲಿ ಪತ್ರಕರ್ತ ತ. ಮ.ನರಸಿಂಹರ ಬ್ಯಾಚುಲರ್ ಹೊಂನಲ್ಲಿ ನೆಂಪೆ ದೇವರಾಜ್ ಕೆಲವು ಬಾರಿ ಸೇರಿದ್ದೆವು.
   ನಂತರ ಸುಮಾರು 25 ವರ್ಷದ ನಂತರವೇ ಮೊನ್ನೆ ಈ ಮಾರ್ಗದಲ್ಲಿ ಸಂಚರಿಸುವಾಗ ನೆಂಪೆ ದೇವರಾಜ್ ಮತ್ತು ನನ್ನ ಬೇಟಿ ಆಯಿತು, ಇದಕ್ಕೂ ಮೊದಲು ಬಹುಶಃ ಹದಿನೈದು ವರ್ಷದ ಹಿಂದೆ ಕಿಮ್ಮನೆ ರತ್ನಾಕರರ ಪಾದಯಾತ್ರೆ ತೀರ್ಥಹಳ್ಳಿಯಿಂದ ಶಿವಮೊಗ್ಗದ ಜಿಲ್ಲಾಧಿಕಾರಿ ಕಛೇರಿಗೆ ತಲುಪಿದಾಗ ನಾನು ಜಿಲ್ಲಾಧಿಕಾರಿ ಕಛೇರಿಯಿಂದ ಹೊರಬಂದಾಗ ನೆಂಪೆ ಎದುರಾಗಿದ್ದರು ಬಹುಶಃ ಅವರಿಗೆ ನನ್ನ ಗುರುತು ಸಿಕ್ಕಿರಲಿಲ್ಲ.
   ನೆಂಪೆ ದೇವರಾಜ್ ಜನ೯ಲಿಸಂ ಓದಿದವರು, ಜನ೯ಲಿಸಂ ಬೋದಿಸಿದವರು ಮತ್ತು ಜರ್ನಲಿಸ್ಟ್ ಆಗಿ ಕಾರ್ಯನಿರ್ವಹಿಸಿದವರು.
   ಸಾಹಿತಿಗಳೂ ಹೌದು, ಕೆಲವು ಪುಸ್ತಕ ಪ್ರಕಟವಾಗಿದೆ ಅನೇಕ ಬೇರೆ ಬೇರೆ ಪುಸ್ತಕದಲ್ಲಿ ಇವರ ಲೇಖನಗಳು ಪ್ರಕಟ ಆಗಿದೆ ತೀರ್ಥಹಳ್ಳಿ ಸಾಹಿತ್ಯ ಪರಿಷತ್ ಪದಾಧಿಕಾರಿಗಳಾಗಿ ತಾಲ್ಲೂಕ್ ಸಾಹಿತ್ಯ ಸಮಾವೇಶ ನಡೆಸಿದ್ದಾರೆ.
    ಸ್ವತಃ ಕೃಷಿಕರು ಅಡಿಕೆ ಕೊಯ್ಲು, ಕೊಳೆ ಔಷದಿ ಸಿಂಪಡನೆ ಜೊತೆಯಲ್ಲಿ ಮುಂಗಾರ ಮೊದಲ ಮಳೆಗಳಲ್ಲಿ ಹತ್ತು ಮೀನು ಶಿಕಾರಿಯೂ ಮಾಡುತ್ತಾರೆ.
   ರೈತ ಹೋರಾಟಗಾರರು, ಸಮಾಜವಾದಿ ಹೋರಾಟಗಾರರನ್ನು ಹುಡುಕಿ ಅವರ ಸಂದರ್ಶನ ಪ್ರಕಟಿಸುತ್ತಾರೆ.
    ಒಮ್ಮೆ ಜಾತ್ಯಾತೀತ ಜನತಾದಳದಿಂದ ತೀರ್ಥಹಳ್ಳಿ ವಿದಾನ ಸಭಾ ಚುನಾವಣೆಗೂ ಸ್ಪರ್ದಿಸಿದ್ದರು ಅಷ್ಟೆ ಅಲ್ಲ ಜನಪರ ಹೋರಾಟಗಳು - ಜನ ಜಾಗೃತಿ ಜಾಥಾಗಳಿಗೆ ಸದಾ ಬೆಂಬಲಿಸುವ ಜನಪರ ಕಾಳಜಿ ನೆಂಪೆ ದೇವರಾಜರದ್ದು.
  2000ದಲ್ಲಿ ಕಾಗೋಡು ಸತ್ಯಾಗ್ರಹದ ಸುವರ್ಣ ಮಹೋತ್ಸವದ ಅಂಗವಾಗಿ ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪರ ನೇತೃತ್ವದಲ್ಲಿ ಕಾಗೋಡಿನಲ್ಲಿ ಲೋಹಿಯಾರು ಬಾಷಣ ಮಾಡಿದ ಜಾಗದಿಂದ ಕಾಗೋಡು ಸುವರ್ಣ ಜ್ಯೋತಿಯ ಜಾಥಾ (ಕಾಗೋಡಿನಿಂದ ಕಡಿದಾಳಿನವರೆಗೆ) ಹೊರಟು ಕಾಗೋಡು ಹೋರಾಟದ ಆ ದಿನದ ಹೋರಾಟದ ಪ್ರದೇಶಗಳಾದ ಹಿರೆನೆಲ್ಲೂರು - ಕಾನಲೆ- ತಾಳಗುಪ್ಪ - ಮರ್ತೂರು - ಶಿರವಂತೆ - ಸಾಗರ - ಆನಂದಪುರಂ ತಲುಪಿ ಕಾಗೋಡು ಸುವರ್ಣ  ಜ್ಯೋತಿ ಆನಂದಪುರಂ ಸಮೀಪದ ಕೆಂಜಿಗಾಪುರದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಇರಿಸಿದ್ದೆವು.
   ಜಾತಾದ ಪ್ರಮುಖರಾದ ಹೆಚ್.ಗಣಪತಿಯಪ್ಪ, ಕೊಣಂದೂರು ವೆಂಕಪ್ಪ ಗೌಡರು ಮತ್ತು ಸಂಗಾತಿಗಳು ನನ್ನ ಮನೆಯಲ್ಲಿಯೇ ತಂಗಿದ್ದರು.
  ಬೆಳಿಗ್ಗೆ ಮುರುಘಾ ಮಠ ಗಿಳಾಲಗುಂಡಿ, ಮಾದಾಪುರ ಮಾರ್ಗವಾಗಿ ರಿಪ್ಪನ್ ಪೇಟೆ, ಕೋಣಂದೂರು, ತೀರ್ಥಹಳ್ಳಿ ಮಾರ್ಗವಾಗಿ ಕಡಿದಾಳಿನ ಕಡಿದಾಳು ಮಂಜಪ್ಪ ಗೌಡರ ಸಮಾದಿಗೆ ತಲುಪುವಾಗ ಮಧ್ಯ ರಾತ್ರಿ ಅಲ್ಲಿ ಕಡಿದಾಳು ಶಾಮಣ್ಣ ಕ್ರಾಂತಿ ಗೀತೆಯ ಹಾಡುವ ಮೂಲಕ ಕಾಗೋಡು ಸುವರ್ಣ ಜ್ಯೋತಿ ಸ್ವಾಗತಿಸಿದ್ದರು ಈ ಐತಿಹಾಸಿಕ ಭೂಮಿ ಹೋರಾಟದ ಸುವರ್ಣ ಮಹೋತ್ಸವದ ಕಾಗೋಡಿನಿ೦ದ ಕಡಿದಾಳಿಗೆ ಹಮ್ಮಿಕೊಂಡಿದ್ದ ಕಾಗೋಡು ಸುವರ್ಣ ಜ್ಯೋತಿ ಕೋಣಂದೂರಿನಿಂದಲೇ ಸ್ವಾಗತಿಸಿ ಕಡಿದಾಳಿನ ಮಂಜಪ್ಪ ಗೌಡರ ಸಮಾದಿಗೆ ತಲುಪುವ ತನಕ ಭಾಗವಹಿಸಿ ಸಾಕ್ಷಿಗಳಾದ ಪ್ರಮುಖರಲ್ಲಿ ನೆಂಪೆ ದೇವರಾಜರು,ಆಗಿನ ಮಲೆನಾಡು ಅಭಿವೃದ್ದಿ ಮಂಡಳಿ ಅಧ್ಯಕ್ಷೆ ಶ್ರೀಮತಿ ಸ್ಟರ್ಣಾ ಪ್ರಭಾಕರ್, ಕಡಿದಾಳು ಶಾಮಣ್ಣ ಮತ್ತು ಅನೇಕ ಪ್ರಗತಿ ಪರ ಮುಂದಾಳುಗಳು ಭಾಗವಹಿಸಿ ಬೆಂಬಲಿಸಿದ್ದರು ಆದರೆ ಕಾಗೋಡು ಹೋರಾಟ ಪ್ರಾರಂಭವಾದ ನೆಲದಲ್ಲಿ ಆ ಹೋರಾಟದ ರೂವಾರಿ ಗಣಪತಿಯಪ್ಪರಿಗೆ ಕಾಗೋಡು ಸುವರ್ಣ ಜ್ಯೋತಿ ಉದ್ಘಾಟನೆಗೆ ಅವಕಾಶ ನೀಡದಂತೆ ತಡೆಯುವ ವಿಫಲ ಪ್ರಯತ್ನ ನಡೆಯಿತು, ಆಗ ಪ್ರಜಾವಾಣಿ ಪತ್ರಿಕೆಯ ಜಿಲ್ಲಾ ವರದಿಗಾರರಾಗಿದ್ದ ಈ.ಸತ್ಯನಾರಾಯಣರು
 ಸಾಹಿತಿ ಕೊಣಂದೂರು ವೆಂಕಪ್ಪ ಗೌಡರ ಶಿಷ್ಯರು ಮತ್ತು ಜನಪರ ಹೋರಾಟಕ್ಕೆ ಬೆಂಬಲಿಸುವ ಸ೦ವೇದನಾಶೀಲ ಪತ್ರಕರ್ತರಾದ್ದರಿಂದ ಅವರು ಜಿಲ್ಲಾಡಾಳಿತಕ್ಕೆ ತಿಳಿಸಿ ರಿಸರ್ವ್ ಪೋಲಿಸ್ ಹಾಕಿಸಿ ರಕ್ಷಣೆ ನೀಡಿಸಿ ಈ ಜಾತಾ ಉದ್ಘಾಟನೆಗೆ ಅವಕಾಶ ಮಾಡದಿದ್ದರೆ ಜಾತಾ ಉದ್ಘಾಟನೆ ಸಾಧ್ಯವೇ ಇರಲಿಲ್ಲ, ಮರುದಿನ ಪ್ರಜಾವಾಣಿ ಮುಖಪುಟದಲ್ಲಿ ಕಲರ್ ಪ್ರಿಂಟ್ ನಲ್ಲಿ ರಾಜ್ಯದಾದ್ಯಂತ ಸುದ್ದಿ ಆಗುವಂತೆ ಮಾಡಿದ್ದರು.
 ನೆಂಪೆ ದೇವರಾಜರ ಬೇಟಿಯಲ್ಲಿ ಇದನ್ನೆಲ್ಲ ನೆನಪು ಮಾಡಿಕೊಂಡೆವು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ