Skip to main content

Blog number 1292. ಮಲೆನಾಡಿನ ಒಂಟಿ ಮನೆಗಳು ಕಳ್ಳರಿಗೆ ಸುಲಭದ ತುತ್ತಾಗುತ್ತಿದೆ ಇದನ್ನು ತಡೆಯಲು ಪೋಲಿಸ್ ಇಲಾಖೆಯ ಸಹಭಾಗಿತ್ವದಲ್ಲಿ ಕೆಲವೊಂದು ಸುದಾರಣೆ ಗೃಹ ಸಚಿವರಾದ ಆರಗ ಜ್ಞಾನೇಂದ್ರರು ಅವರ ಅಧಿಕಾರ ಅವದಿಯಲ್ಲಿ ಮಾಡಲು ಸಾಧ್ಯವಿದೆ ಅದಕ್ಕಾಗಿ ಅವರಿಗೆ ಇನ್ನೊಮ್ಮೆ ಮನವಿ.

#ಗೃಹಮಂತ್ರಿ_ಆರಗ_ಜ್ಞಾನೇಂದ್ರರಿಗೆ_ಮನವಿ

#ಮಲೆನಾಡಿನ_ಒಂಟಿ_ಮನೆಗಳಿಗೆ_ಸ್ವಯಂ_ರಕ್ಷಣೆಗೆ_ಪೋಲಿಸ್_ಇಲಾಖೆ_ಸಹಭಾಗಿತ್ವ_ಬೇಕಾಗಿದೆ.

#ಇಲಾಖೆಗೆ_ಯಾವುದೇ_ಆರ್ಥಿಕ_ಹೊರೆ_ಆಗದಂತೆ_ಸುಲಭವಾಗಿ_ಮಾಡಬಹುದು.

#ಇದರಿಂದ_ಅಪರಾದ_ಪತ್ತೆ_ಹಚ್ಚಲು_ಸುಲಭ

#ನಿಮ್ಮ_ಅಧಿಕಾರ_ಅವಧಿಯಲ್ಲೇ_ಜಾರಿ_ಆಗಲಿ.

  ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಿಧಾನಸಭಾ ಸದಸ್ಯರಾದ ಆರಗ ಜ್ಞಾನೇಂದ್ರರು ಗೃಹ ಮಂತ್ರಿಗಳಾದಾಗ ಹೆಚ್ಚು ಸಂತೋಷ ಪಟ್ಟವನು ನಾನು.
   1995-2000 ಇಸವಿಯಲ್ಲಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಆರಗ ಜ್ಞಾನೆಂದ್ರ ಶಾಸಕರಾಗಿ ಜಿಲ್ಲಾ ಪಂಚಾಯತ್ ಸಭೆಗಳಲ್ಲಿ ಒಂದಾಗಿ ಚರ್ಚಿಸುತ್ತಿದ್ದೆವು ಆಗ ಕಾಂಗ್ರೇಸ್ ಪಕ್ಷದ ಸಕಾ೯ರವಿತ್ತು.
   ನಾನು ನನ್ನ ನ್ಯಾಯಪರ ಹೋರಾಟದಿಂದ ಮಂತ್ರಿ ಮಹೋದಯರ ಸಂಸದರ ಕಣ್ಣಿನಲ್ಲಿ ವಿಲನ್ ಆಗಿದ್ದೆ ಆದರೆ ಕಾಂಗ್ರೇಸ್ ಪಕ್ಷದ ಜಿಲ್ಲಾದ್ಯಕ್ಷ ಇಸ್ಮಾಯಿಲ್ ಖಾನ್ ಆದಿಯಾಗಿ ಇಡೀ ಕಾಂಗ್ರೇಸ್ ಪಕ್ಷ ನನ್ನ ಬೆಂಬಲಿಸಿತ್ತು.
  ಆದರೆ ಅಧಿಕಾರ ಇದ್ದವರ ಮಜಿ೯ ನನ್ನ ಮೇಲೆ 22 ಪೋಲಿಸ್ ಕೇಸ್, ತಹಸೀಲ್ದಾರ್ ಕೋರ್ಟ್ ನಲ್ಲಿ ಅನೇಕ 107 ಕೇಸ್ ಗಳು, ಪದೇ ಪದೇ ಬಂದಿಸಿ ಜೈಲಿಗೆ ಹಾಕುವುದು ಅಷ್ಟೇ ಅಲ್ಲ Rowdy ಲಿಸ್ಟ್ ನಲ್ಲೂ ಸೇರಿಸಿದ್ದರು.
   ಆಗೆಲ್ಲ ಜಿಲ್ಲಾ ಪಂಚಾಯತ್ ಒಳಗೆ ಬೆಂಬಲಿಸುತ್ತಿದ್ದವರು ಮತ್ತು ನನ್ನ ಹೋರಾಟಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿ ಸಹಾಯ ಮಾಡಿದವರು ಆರಗ ಜ್ಞಾನೆಂದ್ರ ಅವರು ಶಾಸಕರಾಗುವ ಮೊದಲು ಜಿಲ್ಲಾ ಪರಿಷತ್ ಸದಸ್ಯರಾಗಿದ್ದ ಅನುಭವ ಹೊಂದಿದವರು.
   ಆಗ ಈಶ್ವರಪ್ಪ, ಅಪ್ಪಾಜಿ ಗೌಡರು, ಅಯನೂರು ಮಂಜುನಾಥರು ಶಾಸಕರಾಗಿದ್ದರು ಅವರುಗಳು ವಿಷಯ ಆದಾರಿತವಾಗಿ ಬೆಂಬಲಿಸುತ್ತಿದ್ದರು.
   ಮೊದಲ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಮಾತ್ರ ಜೆ.ಹೆಚ್.ಪಟೇಲರು, ಯಡಿಯೂರಪ್ಪ ಭಾಗವಹಿಸಿದ್ದರು.
  ಆರಗ ಜ್ಞಾನೇಂದ್ರರು ಗೃಹ ಮಂತ್ರಿಗಳಾಗಿದ್ದರಿಂದ ಅವರ ಜೊತೆಯ ಸಲಿಗೆಯಿಂದ ರಾಜ್ಯದಲ್ಲಿ ಯಾವುದೇ ಕ್ರಿಮಿನಲ್ ಚಟುವಟಿಕೆ ಇಲ್ಲದ ಸಾವಿರಾರು ಜನ ಅದರಲ್ಲೂ ರಾಜಕೀಯ ದುರುದ್ದೇಶದಿಂದ Rowdy ಪಟ್ಟಿಯಲ್ಲಿರುವವರನ್ನು ಪರಿಷ್ಕರಣೆ ಮಾಡಲು ವಿನಂತಿಸಿದ್ದೆ.
    ಕಾರಣ ಕಳೆದ 20 ವಷ೯ದಿಂದ ಹಿಂದಿನ ಯಾವ ಸರ್ಕಾರಗಳು ಈ ಪಟ್ಟಿ ಪರಿಷ್ಕರಣೆ ಮಾಡಿರಲಿಲ್ಲ ಆದ್ದರಿಂದ ಈ ಬಗ್ಗೆ ಆರಗ ಜ್ಞಾನೇಂದ್ರ ಕ್ರಮ ತೆಗೆದುಕೊಳ್ಳುವ ಭರವಸೆಯೇನು ನನಗಿರಲಲ್ಲ ಆದರೆ ಆಶ್ಚಯ೯ ಆಗಿದ್ದು ಶಿವಮೊಗ್ಗ ಜಿಲ್ಲೆಯಲ್ಲೇ 1700 ಜನರನ್ನು ಈ ಪಟ್ಟಿಯಿಂದ ಬಿಡುಗಡೆ ಮಾಡಿಸಿದ್ದು ಅದು ಅವರು ಗೃಹ ಖಾತೆ ಪಡೆದು ಆರು ತಿಂಗಳಲ್ಲಿ !! ಇಡೀ ರಾಜ್ಯದಲ್ಲಿ ಇದನ್ನು ಜಾರಿ ತಂದಿದ್ದಾರೆ ಆದ್ದರಿಂದ ಅವರಿಗೆ ಅಭಿನಂದನೆ ಹೇಳಲೇ ಬೇಕು ಮತ್ತು ರಾಜಕೀಯ ದ್ವೇಷದಿಂದ ತಮ್ಮ ವಿರೋದಿಗಳಿಗೆ ಮಟ್ಟ ಹಾಕಲು ಈ ಹಿಂದೆ ಪೋಲಿಸ್ ಇಲಾಖೆ ಬಳಸಿಕೊಂಡು ಸುಳ್ಳು ಕೇಸು ಹಾಕುವ ಘಟನೆಗಳಿಗೆ ಆರಗ ಜ್ಞಾನೇಂದ್ರ ತಡೆ ಹಾಕಿದ್ದಾರೆ.
   ಇದರ ಜೊತೆ ಮಲೆನಾಡಿನ ಒಂಟಿ ಮನೆಗಳು ಸುಲಭವಾಗಿ ದರೋಡೆ ಕೊಲೆ ಮಾಡುವವರಿಗೆ ಟಾರ್ಗೆಟ್ ಆಗುತ್ತಿರುವುದರಿಂದ ಪೋಲಿಸ್ ಇಲಾಖೆ ಸಹಭಾಗಿತ್ವದಲ್ಲಿ ಸುರಕ್ಷೆ ಒದಗಿಸುವ ಬಗ್ಗೆ ಆದರೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿದ್ದು ಗೊತ್ತಾಗಲಿಲ್ಲ.
   ಅವರ ಅಧಿಕಾರ ಅವದಿಯಲ್ಲಿ ಈ ಬಗ್ಗೆ ಅವರು ಸೂಕ್ತವಾದ ಕಾನುನು ಕ್ರಮ ಕೈಗೊಂಡು ಮಲೆನಾಡಿನ ಒಂಟಿ ಮನೆಗಳಲ್ಲಿ ವಾಸಿಸುವರ ರಕ್ಷಿಸಲು ಮತ್ತೊಮ್ಮೆ ವಿನಂತಿಸುತ್ತೇನೆ.
  ಈ ಹಿಂದಿನ ಮನವಿಯ ಈ ಅಂಶಗಳು ಅವರ ಗಮನಕ್ಕಾಗಿ.

ಮಾನ್ಯ ಗೃಹ ಮಂತ್ರಿಗಳಾದ ಶ್ರೀ ಆರಗ ಜ್ಞಾನೇಂದ್ರ ಅವರಿಗೆ.
 
ಮಾನ್ಯರೆ,

       ವಿಷಯ: ಮಲೆನಾಡಿನ ಒ೦ಟಿ ಮನೆಗಳ ಸುರಕ್ಷತೆಗಾಗಿ.

     ಮಲೆನಾಡಿನ ಒಂಟಿ ಮನೆಗಳು ಕಳ್ಳಕಾಕರಿಗೆ ಸುಲಭ ಗುರಿಗಳಾಗಿ ಅನೇಕ ದರೋಡೆ ಕೊಲೆಗಳು ಆಗುತ್ತಿರುವುದು ನಿಮ್ಮ ಗಮನದಲ್ಲಿದೆ.
       ಹಳ್ಳಿಗಳ ಒಂಟಿ ಮನೆಗಳಲ್ಲಿ ವಯಸ್ಸಾದ ತಂದೆ ತಾಯಿಗಳು ವಾಸ ಮಾಡುತ್ತಿದ್ದಾರೆ ಅವರ ಮಕ್ಕಳು ಉದ್ಯೋಗಕ್ಕಾಗಿ ಪಟ್ಟಣ ಸೇರುತ್ತಿರುವುದು ಒಂದು ಕಾರಣ.
    ಗ್ರಾಮೀಣ ಪ್ರದೇಶದಲ್ಲಿ ಅವಿಭಕ್ತ ಕುಟುಂಬಗಳು ಈಗಿಲ್ಲ ಮತ್ತು ನಾಯಿಗಳೂ ಸಾಕುವುದಿಲ್ಲ ಈ ಎಲ್ಲಾ ಕಾರಣದಿಂದ ಮಲೆನಾಡಿನ ಒಂಟಿ ಮನೆಗಳಲ್ಲಿ ಸುರಕ್ಷಿತವಾಗಿ ಜೀವನ ಮಾಡುವುದು ಕಷ್ಟವಾಗಿದೆ.
   ಸರ್ಕಾರಕ್ಕೆ ಆರ್ಥಿಕ ಹೊರೆ ಇಲ್ಲದ ಈ ಕೆಳಕಂಡ ಅಂಶಗಳನ್ನು ತಾವು ಪರಿಶೀಲಿಸಿ ಜಾರಿ ತಂದರೆ ಮಲೆನಾಡಿನ ವಾಸಿಗಳಿಗೆ ದೊಡ್ಡ ಉಪಕಾರವಾಗಲಿದೆ.

   
1. ಮಲೆನಾಡಿನ ಒಂಟಿ ಮನೆಗಳಿಗೆ ಕಡ್ಡಾಯ ಸಿಸಿ ಕ್ಯಾಮೆರಾ ಅಳವಡಿಸುವ ಬಗ್ಗೆ ಸ್ಥಳಿಯ ಗ್ರಾಮ ಪಂಚಾಯತ್ ಸಹಯೋಗದಿಂದ ಪೋಲಿಸ್ ಇಲಾಖೆ ಜನ ಜಾಗೃತಿ ಮಾಡಿ ಸಿಸಿ ಕ್ಯಾಮೆರಾ ಆಯಾ ಮನೆಯವರು ಅವರ ಸ್ವಂತ ಹಣದಿಂದ ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಮಾಡುವುದು.
2. ಹಳ್ಳಿಗಳ ಪ್ರಮುಖ ಜಂಕ್ಷನ್ ಗಳಲ್ಲಿ ಸ್ಥಳಿಯ ದಾನಿಗಳ ಗ್ರಾಮ ಪಂಚಾಯತ್ ಗಳ ಮತ್ತು ಸ್ಥಳಿಯ ಸಂಘ ಸಂಸ್ಥೆಗಳಿಂದ ಸಿಸಿ ಕ್ಯಾಮೆರಾ ಅಳವಡಿಸಲು ಪೋಲಿಸ್ ಇಲಾಖೆ ಪ್ರೇರೇಪಿಸಬೇಕು (ಸಾಗರದಲ್ಲಿ ಎ.ಎಸ್.ಪಿ ಆಗಿದ್ದ ನಿಶಾ ಜೇಮ್ಸ್ ಇದನ್ನ ಯಶಸ್ವಿಗೊಳಿಸಿದ್ದರು)
3. ಶಾಸಕರು ಮತ್ತು ಸಂಸದರ ನಿಧಿಯಲ್ಲಿ ಹೈ ಮಾಸ್ಕ್ ದೀಪ ಅಳವಡಿಸುತ್ತಾರೆ ಅದೇ ಕಂಬಕ್ಕೆ 360° ಸಿಸಿ ಕ್ಯಾಮೆರಾ ಅಳವಡಿಕೆಯ ಅನಿವಾರ್ಯತೆ ಅವರುಗಳಿಗೆ ಗೃಹ ಇಲಾಖೆಯಿಂದ ಮನವರಿಕೆ ಮಾಡಿ ಅದರ ಅಳವಡಿಕೆ ವೆಚ್ಚ ಅವರಿಂದಲೇ ಹೈ ಮಾಸ್ಕ್ ದೀಪದ ಜೊತೆ ಸೇರಿಸುವಂತೆ ಮಾಡಬೇಕು.
4. ಒಂಟಿ ಮನೆಗಳಲ್ಲಿ ಒಂದಕ್ಕಿಂತ ಹೆಚ್ಚು ಒಳ್ಳೆಯ ತಳಿಯ ನಾಯಿಗಳನ್ನು ಸಾಕಲು ಪೋಲಿಸ್ ಇಲಾಖಾ ಅಧಿಕಾರಿಗಳು ಜನಸ್ಪಂದನಾ ಸಭೆಗಳ ಮೂಲಕ ಪ್ರೇರೇಪಿಸಬೇಕು.
5. ಮಲೆನಾಡಿನಲ್ಲಿ ವಯಸ್ಸಾದ ತಂದೆ ತಾಯಿಗಳನ್ನು ಬಿಟ್ಟು ಪಟ್ಟಣಗಳಲ್ಲಿ ಉದ್ಯೋಗ ಮಾಡುವ ಮಕ್ಕಳಿಗೆ ಪೋಲಿಸ್ ಇಲಾಖೆ ಸಿಸಿ ಕ್ಯಾಮೆರಾ ಅಳವಡಿಸಿ ಅವರ ಸೆಲ್ ಫೋನ್ ಗಳಲ್ಲಿ ಮಾನಿಟರಿಂಗ್ ಮಾಡುವ ಬಗ್ಗೆ ಏನಾದರೂ ಅಪಾಯವಾದರೆ ತಕ್ಷಣ ಯಾರನ್ನ ಸಂಪರ್ಕಿಸಬೇಕೆಂಬ ಮಾಹಿತಿ ಸಾಮಾಜಿಕ ಜಾಲ ತಾಣದ ಮೂಲಕ ಪೋಲಿಸ್ ಪ್ರಕಟನೆಗಳು ನಿರಂತರವಾಗಿ ನೀಡುತ್ತಿರಲಿ.
6. ಮಲೆನಾಡಿನ ಹಳ್ಳಿಗಳಲ್ಲಿ ಆಸಕ್ತ ಯುವ ಜನಾಂಗದವರಿಗೆ ತರಬೇತಿ ನೀಡಿ ಗ್ರಾಮ ರಕ್ಷಕ ಪಡೆ ರಚಿಸಿ ಸ್ಥಳಿಯ ಪೋಲಿಸರಿಗೆ ಸಹಕರಿಸಲು, ಗುಪ್ತ ಮಾಹಿತಿ ಹಂಚಿಕೊಳ್ಳುವ ಮೂಲಕ ಅನೇಕ ಅನುಕೂಲ ಪೋಲಿಸ್ ಇಲಾಖೆ ಪಡೆಯಬಹುದು ಸಾಂಗ್ಲಿಯಾನ ಸಾಗರ ತಾಲ್ಲೂಕಿನಲ್ಲಿ ಅವರ ಅವದಿಯಲ್ಲಿ ಇದನ್ನು ಮಾಡಿದ್ದರು.
7. ಪೋಲಿಸ್ ಇಲಾಖೆ ಬಂದೂಕು ತರಬೇತಿ ನೀಡಿ ಒಂಟಿ ಮನೆಗಳಿಗೆ ಸುಲಭವಾಗಿ ಗನ್ ಹೊಂದಲು ಗನ್ ಲೈಸೆನ್ಸ್ ಕೊಡಿಸಬೇಕು.
 8. ಚುನಾವಣೆಗಳಲ್ಲಿ ಬಂದೂಕು ಪೋಲಿಸ್ ಇಲಾಖೆಗೆ ಸರೆಂಡರ್ ಮಾಡುವ ಅವೈಜ್ಞಾನಿಕ ಆದೇಶ ಹಿಂಪಡೆಯಬೇಕು.
  ಇದಕ್ಕೆಲ್ಲ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ ಬೀಳುವುದಿಲ್ಲವಾದ್ದರಿಂದ ಜಿಲ್ಲೆಯವರೇ ಆದ ಗೃಹ ಮಂತ್ರಿಗಳಾದ ಆರಗ ಜ್ಞಾನೇಂದ್ರ ಅವರು ತಕ್ಷಣ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇನೆ.
ಇತಿ ವಿಶ್ವಾಸಗಳೊಂದಿಗೆ.

ಕೆ.ಅರುಣ್ ಪ್ರಸಾದ್
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ
ಆನಂದಪುರಂ - ಸಾಗರ ತಾಲ್ಲೂಕ್

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ