Skip to main content

Blog number 1317. ಭಾರತದಲ್ಲಿ ಮೊದಲ ಬಾರಿಗೆ ಪ್ರದಾನ ಮಂತ್ರಿ ಲಾಕ್ ಡೌನ್ ಘೋಷಿಸಿ ಇದೇ 24- ಮಾರ್ಚ್ -2023ಕ್ಕೆ ಮೂರು ವರ್ಷಗಳಾಯಿತು ಅವತ್ತಿನ ದಿನಗಳ ಕಷ್ಟ-ನಷ್ಟ - ದುಖಃ ಗಳ ನೆನಪು

#ಶಿವಮೊಗ್ಗದಿಂದ_ರಾಜಸ್ಥಾನದ_ಗಂಗಾನಗರ_ಜಿಲ್ಲೆ_ತನಕ
#ಒಂದೂವರೆ_ಸಾವಿರ_ಕೀಲೋ_ಮೀಟರ್_ಟಾಪ೯ಲ್
#ಮುಚ್ಚಿದ_ಲಾರಿಯಲ್ಲಿ_ಕಳೆದ_ವರ್ಷ_ಕೊರೋನೊ
#ಬೀತಿಯಿಂದ_ಕಷ್ಟಪಟ್ಟು_ಊರು_ಸೇರಿದವರ_ನಿಜಕಥೆ

  ಇವರೆಲ್ಲ ನಮ್ಮ ಲಾಡ್ಜ್ ಕಟ್ಟಡದಲ್ಲಿ ಗ್ರಾನೈಟ್ ಕೆಲಸ ಮಾಡಲು ಬಂದವರು, ಈ ಕೆಲಸದ ಗುತ್ತಿಗೆ ಹಿಡಿದ ಮೊಹರ್ ಸಿಂಗ್ ಮಾರ್ಚ್ ನಲ್ಲಿ ಲಾಕ್ ಡೌನ್ ಆದಾಗ ಭಯ ಪಟ್ಟಾಗ ನಾನು ದೈಯ೯ ಹೇಳಿದ್ದೆ, ಹುಷಾರಾಗಿರಿ ಆರೋಗ್ಯ ಕಾಪಾಡಿಕೊಳ್ಳಿ ಅಂತ.
  ಆದರೆ ಇವರ ಊರುಗಳಿಂದ ಹೇಗಾದರೂ ಮಾಡಿ ಊರು ತಲುಪಿ ಅಂತ ರೋದಿಸುತ್ತಿದ್ದ ಕುಟುಂಬದವರ ಒತ್ತಾಯದಿಂದ ಕೆಲವರು ಲಾರಿಗಳಲ್ಲಿ ಹೋಗಿ ಅರ್ಧ ದಾರಿಯಲ್ಲಿ ಸಿಕ್ಕು ಬಿದ್ದು ಕೊರಾ೦ಟೈಯಿನ್ ಆಗಿದ್ದ ಉದಾಹರಣೆ ಇತ್ತು.
  ಕಳೆದ ವರ್ಷ ಏಪ್ರಿಲ್ 6ಕ್ಕೆ ಮೊಹಾರ್ ಸಿಂಗ್ ತನ್ನ ಕೆಲಸದ ಲೆಖ್ಖ ಮಾಡಿಸಿ ಬಾಕಿ 20 ಸಾವಿರ ಅವತ್ತೇ ಬೇಕು ಅಂತ ಅವಸರಿಸಿದ ಯಾಕೆಂದು ಕೇಳಿದಾಗ ಕೆಲಸದ ಹುಡುಗರು ಇವತ್ತು ಊರಿಗೆ ಹೋಗುತ್ತಾರೆಂದು ಗುಟ್ಟಾಗಿ ಹೇಳಿದ! ಅರೆ ಈಗ ರೈಲಿಲ್ಲ ಬಸ್ಸು ಇಲ್ಲ ಹೇಗೆ ಸಾಧ್ಯ? ಅಂದೆ ಅದಕ್ಕೆ ತಮ್ಮ ಊರಿನ ಲಾರಿ ಒಂದು ಶಿವಮೊಗ್ಗದಿಂದ ರಾತ್ರಿ ಹೊರಡುತ್ತೆ ತಲಾ ನಾಲ್ಕು ಸಾವಿರದಂತೆ ಪಾವತಿ ಮಾಡಿದ ಸುಮಾರು 80 ಜನ ಹೋಗುತ್ತಾರೆ ಅಂದ, ನಾನು ಹಣ ನೀಡಿ "ನೀನು ಮಾತ್ರ ಹೋಗಬೇಡ " ಅಂದೆ ಇಲ್ಲ ತಾನು ಹೋಗುವುದಿಲ್ಲ ಉಳಿದ ಕೆಲಸ ಮುಗಿಸಿಯೇ ಹೋಗುತ್ತೇನೆ ಅಂದಿದ್ದ.
  ನಂತರ 15 ದಿನ ಮೊಹರ್ ಸಿಂಗ್ ಬರಲೂ ಇಲ್ಲ, ಪೋನಿಗೂ ಸಿಗಲಿಲ್ಲ ನಂತರ ಒ0ದು ದಿನ ಮೊಹರ್ ಸಿಂಗ್ ಪೋನ್ ಮಾಡಿದಾಗ ಯಾಕೆ ಕೆಲಸಕ್ಕೆ ಬಂದಿಲ್ಲ ಅಂದಾಗ ಸಿಂಗ್ ಹೇಳಿದ್ದು ತಾವೆಲ್ಲರೂ 80 ಜನ ಲಾರಿಯಲ್ಲಿ ಊರು ಮುಟ್ಟಿದ್ದೇವೆ ಅಂದಾಗಲೇ ಗೊತ್ತಾಯಿತು ಗ್ರಾನೈಟ್ ಗುತ್ತಿಗೆದಾರನೂ ಕೆಲಸಗಾರರ ಜೊತೆ ಲಾರಿಯಲ್ಲಿ ಊರಿಗೆ ತಲುಪಿದ್ದು.
  ಈಗೆಲ್ಲ ಬಂದಿದ್ದಾರೆ ಕೆಲಸ ಪ್ರಾರಂಬಿಸಿದ್ದಾರೆ ಪುನಃ ಎರಡನೇ ಕೊವಿಡ್ ಅಲೆ ಪ್ರಾರಂಭ ಆಗಿದೆ ಆದರೆ ಅವತ್ತಿನ ಭಯ ಆತಂಕ ಇಲ್ಲ.
  ಸುಮಾರು 36 ಗಂಟೆ ಬಿರು ಬೇಸಿಗೆಯ ದಿನದಲ್ಲಿ ಲಾರಿಯಲ್ಲಿ 80 ಜನ ಟಾಪ್೯ಲ್ ಮುಚ್ಚಿಕೊಂಡು ಮೊಬೈಲ್ ಗಳನ್ನು ಆಫ್ ಮಾಡಿಕೊಂಡು ಕತ್ತಲೆಯಲ್ಲಿ ಕುಳಿತುಕೊಂಡೇ ಕಷ್ಟ ಪಟ್ಟು ಊರು ಮುಟ್ಟಿದ ಇವರ ಕಥೆ ನಿಜಕ್ಕೂ ಆತಂಕಕಾರಿ ಆಗಿತ್ತು ಅಂತ ಈ ಲಾರಿಯಲ್ಲಿ ಪ್ರಯಾಣಿಸಿದ ಕೆಲಸಗಾರ ಖರೆ ವಿವರಿಸಿದಾಗ ಬೇಸರ ಆಶ್ಚಯ೯ ಎರೆಡೂ ಆಯಿತು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ