Skip to main content

Blog number 1308. ಪಿಳ್ಳೆ ಯಾನೆ ಮಂಜಪ್ಪ ನನ್ನ ಜಿಲ್ಲಾ ಪಂಚಾಯತ್ ಸದಸ್ಯಾವದಿಯಲ್ಲಿ ಕಡಿದಾಳು ಶಾಮಣ್ಣರಿಂದ ಪ್ರೇರಿತನಾಗಿ ನಿರ್ಮಿಸಿದ ಶೌಚಾಲಯದ ಮೊದಲ ಪಲಾನುಭವಿ

#ಪಿಳ್ಳೆ_ಯಾನೆ_ಆಚಾಪುರದ_ಮ೦ಜಪ್ಪ
#ಒಂದು_ಕಾಲದ_ಭೂಮಾಲಿಕರಾದ_ಬಸವನಕೊಪ್ಪದ_ಚನ್ನವೀರಪ್ಪಗೌಡರ_ಶಿಷ್ಯ
 #ಕಡಿದಾಳು_ಶಾಮಣ್ಣರ_ಪ್ರೇರಣೆಯ_ಶೌಚಾಲಯದ_ಮೊದಲ_ಪಲಾನುಭವಿ.

 ಪಿಳ್ಳೆ ಅಂದರೆ ಮಾತ್ರ ಜನ ಗುರುತಿಸುವ ಆಚಾಪುರದದ ಮಂಜಪ್ಪ ಕಾಡಿನ ಎಲ್ಲಾ ಮಾಹಿತಿ ಇರುವ ನಮ್ಮ ಹಳ್ಳಿ ವಿಜ್ಞಾನಿ, ಒಂದು ಕಾಲದಲ್ಲಿ ಅಂದರೆ 1970 ರ ದಶಕದಲ್ಲಿ ನಮ್ಮ ಭಾಗದ ಪ್ರಸಿದ್ಧ ಭೂಮಾಲಿಕರಾಗಿದ್ದ ಅನ್ನದಾನಿ ಬಸವನಕೊಪ್ಪದ ಚನ್ನವೀರಪ್ಪ ಗೌಡರ ಪಟ್ಟದ ಶಿಷ್ಯ ಆಗಿದ್ದಾತ.
  ಅವರ ಕೊಟ್ಟಿಗೆಯಲ್ಲಿನ ನೂರಾರು ದನ, ಎಮ್ಮೆಗಳು ಕಾಯುವ ಗೋಪಾಲ ವೃತ್ತಿ ಪಿಳ್ಳೆಯದು.
   ಕಾಡಿನ ನ್ಯಾಯ ಮತ್ತು ಪರಿಸರ ವಿಜ್ಞಾನ ರಕ್ತಗತವಾಗಿ ಸಂಪೂಣ೯ವಾಗಿ ಪಿಳ್ಳೆಗೆ ಬಾಲ್ಯದಲ್ಲೇ ಕರತಲಾಮಲಕ ಆಗಿದೆ, ಗಿಡಗಂಟಿ ಯಿಂದ ದೊಡ್ಡ ಅರಣ್ಯದ ಮರ ಮಟ್ಟುಗಳ ಅಪಾರ ಜ್ಞಾನ ಪಿಳ್ಳೆಗೆ ಇದೆ ಆದರೆ ಅದು ಅವರಿಗೆ ವಿಶೇಷ ಅನ್ನಿಸಿಲ್ಲ.
  ಮೊನ್ನೆ ಪಿಳ್ಳೆ ಸಿಕ್ಕಿದಾಗ ವಯಸ್ಸು ಎಷ್ಟಾಯಿತೆಂದರೆ 50 ಅಂದರು, ದೊಡ್ಡ ಮಗಳು ಮದುವೆ ಆಗಿದೆ, ಮಗ ಬಸ್ ಡ್ರೈವರ್ ಆಗಿದ್ದಾನೆ, ಸಣ್ಣ ಮಗಳು ನಸ್೯ ಆಗಿದ್ದ ಬಗ್ಗೆ ತಿಳಿಸಿದರು ಆದರೆ ನನಗಿ೦ತ ಪಿಳ್ಳೆ ದೊಡ್ಡವರು ಈಗ ನನಗೇ 56 ವರ್ಷ.
   1995 ರಲ್ಲಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾದಾಗ ಕಡಿದಾಳು ಶಾಮಣ್ಣರಿಂದ ನಮ್ಮ ಊರಿನ ಕನ್ನಡ ಸಂಘದ ಆವರಣದಲ್ಲಿ ನಾ.ಡಿಸೋಜ ಬಯಲು ರಂಗಮಂದಿರ ಉದ್ಘಾಟನೆ ಮಾಡಿಸಿದ್ದೆ ಆ ದಿನ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗುವ ಮೊದಲು ಕಡಿದಾಳು ಶಾಮಣ್ಣ ಮತ್ತು ನಾ.ಡಿಸೋಜ ದಂಪತಿಗಳು ನನ್ನ ಮನೆಗೆ ಬಂದಿದ್ದರು ಆಗ ಕಡಿದಾಳು ಶಾಮಣ್ಣ ಹಳ್ಳಿಗಳಲ್ಲಿ ಶೌಚಾಲಯದ ಅನಿವಾರ್ಯತೆ ಬಗ್ಗೆ ಮತ್ತು ಇದರಲ್ಲಿ ಅವರ ಪ್ರಯೋಗ ಅದಕ್ಕಾಗಿ ಅವರು ಒಂದು ಘೋಷಣೆ ಕೂಡ ಪ್ರಚಾರ ಮಾಡಿದ್ದು ಚಹಾ ಕುಡಿಯುತ್ತಾ ರಸವತ್ತಾಗಿ ಹೇಳುತ್ತಿದ್ದನ್ನು ನಾನು ಮತ್ತು ನಾ.ಡಿಸೋಜರು ಆಸಕ್ತಿಯಿಂದ ಕೇಳಿದ್ದೆವು.
  ಇಲ್ಲಿ ಕ್ಲಿಕ್ ಮಾಡಿ ನಾ.ಡಿಸೋಜ ಬಯಲು ರಂಗಮಂದಿರದ ಲೇಖನ ಓದಬಹುದು https://arunprasadhombuja.blogspot.com/search?q=%E0.
  ಕಡಿದಾಳು ಶಾಮಣ್ಣರ ಈ ಹಳ್ಳಿಗಳಲ್ಲಿ ಶೌಚಾಲಯ
ನಿಮಿ೯ಸುವ ವಿಚಾರದಿಂದ ಪ್ರೇರೇಪಿತನಾಗಿ ಅವರ ಘೋಷಣೆ  "ಮೊದಲು ಶೌಚಾಲಯ ಅಮೇಲೆ ದೇವಾಲಯ" ದಂತೆ ನಮ್ಮ ಆನಂದಪುರಂ ಹೋಬಳಿಯ ಆಚಾಪುರದ ಪಿಳ್ಳೆಯ ಕಾಲೋನಿಯಲ್ಲಿ ಶೌಚಾಲಯ
ನಿರ್ಮಾಣ ಮಾಡಿಸಿದೆ ಆಗ ಈಗಿನಂತ ಶೌಚಾಲಯ ನಿರ್ಮಾಣಕ್ಕೆ 1995 ರಲ್ಲಿ ಯಾವುದೇ ಯೋಜನೆ ಇರಲಿಲ್ಲ ಮತ್ತು ಅನುದಾನ ಇರಲಿಲ್ಲ.
 ನಾನು ಶೇಕಡಾ 18 ರ ನಿಧಿ ಮತ್ತು ಬೇರೆ ಯಾವುದೊ ಅನುದಾನದ ಸಹಾಯದಿಂದ ಪಿಳ್ಳೆ ಕಾಲೋನಿಯಲ್ಲಿ ಎಲ್ಲಾ ಮನೆಗೆ ಶೌಚಾಲಯ ನಿಮಿ೯ಸಿ ಕೊಟ್ಟರು ಯಾರೂ ಶೌಚಾಲಯ ಬಳಸಲಿಲ್ಲ!!? ... ಕಾರಣ ಕೇಳಿದರೆ ಎಲ್ಲರೂ ನಿರುತ್ತರ ....ಆದರೆ ಆಗ ಪಿಳ್ಳೆ ಹೇಳಿದ್ದು "ಶೌಚಾಲಯದ ಒಳಗೆ ಹೋದರೆ ವಿಸಜ೯ನೆ ಬರುವದಿಲ್ಲ" ಎಂಬ ಉತ್ತರ ಅನೇಕ ಚಚೆ೯ಗೆ ಕಾರಣ ಆಗಿತ್ತು.
  ದೇಹಾಕೃತಿಯಿಂದ ಪಿಳ್ಳೆ ನಾಮಾಂಕಿತ ಮಂಜಪ್ಪ 60 ವಷ೯ ದಾಟಿದರೂ ಮನಸ್ಸು ದೇಹ ಆರೋಗ್ಯಕರವಾಗಿದ್ದು ಮೋಸ- ದಗಾ ಗೊತ್ತಿರದ ಪ್ರಾಮಾಣಿಕ ಜೀವನ ಸಾಗುಸುತ್ತಿರುವುದು ಸೋಜಿಗವಲ್ಲವೇ?

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...