Skip to main content

Blog number 2084. ನೂರಾ ಹದಿನಾರು ಬಾರಿ ರಕ್ತದಾನ ಮಾಡಿರುವ ತಮ್ಮ ಜೀವಮಾನವನ್ನೇ ಸೇವೆಗೆ ಮುಡಿಪಾಗಿಟ್ಟಿರುವ ಶಿವಮೊಗ್ಗದ ರೆಡ್ ಕ್ರಾಸ್ ಸಂಸ್ಥೆಯ ಸಂಜೀವಿನಿ ಬ್ಲಡ್ ಬ್ಯಾಂಕ್ ಮುಖ್ಯಸ್ಥ ಧರಣೇಂದ್ರ ದಿನಕರ್

#ನನ್ನ_ಇವತ್ತಿನ_ಅತಿಥಿ_ಶಿವಮೊಗ್ಗದ_ದರಣೇಂದ್ರ_ದಿನಕರ್

#ಶಿವಮೊಗ್ಗ_ಜಿಲ್ಲೆಯ_ರಕ್ತದಾನದ_ಶತಕ_ವೀರರು

#ಶಿವಮೊಗ್ಗದ_ರೆಡ್_ಕ್ರಾಸ್_ಸಂಸ್ಥೆಯ_ಸಂಜೀವಿನಿ_ಬ್ಲಡ್_ಬ್ಯಾಂಕ್_ಉಸ್ತುವಾರಿ

#ಇವತ್ತಿಗೆ_116_ಬಾರಿ_ರಕ್ತದಾನ_ಮಾಡಿ_ಜಿಲ್ಲೆಯ_ಮೊದಲ_ಸ್ಥಾನದಲ್ಲಿದ್ದಾರೆ

#ನಮ್ಮ_ಊರಲ್ಲಿರುವ_ಕೃಷಿ_ವಿಶ್ವವಿದ್ಯಾಲಯದಲ್ಲಿ_9_ಮೇ_2024ರ_ರಕ್ತದಾನ_ಶಿಬಿರದ_ತಯಾರಿಗೆ_ಬಂದಿದ್ದರು.

#ಎಂಟು_ನೂರಾ_ತೊಂಬತ್ತೆರುಡು_ಯುನಿಟ್_ರಕ್ತ_ಸಂಗ್ರಹಿಸಿದ_ನಮ್ಮ_ಕಲ್ಯಾಣ_ಮಂಟಪದಲ್ಲಿ

#ನಡೆದ_2016ರ_ರಕ್ತದಾನ_ಶಿಬಿರದ_ದಾಖಲೆ_ಇವತ್ತಿಗೂ_ಯಾರೂ_ಮುರಿದಿಲ್ಲ

#ಇದು_ನಮ್ಮ_ರಾಜ್ಯದಲ್ಲಿಯೇ_ಎರಡನೆ_ಸ್ಥಾನ_ನಮ್ಮದು_ಎಂದು_ಅವರು_ನೀಡಿದ_ಮಾಹಿತಿ

#ನನಗೇ_ಆಶ್ಚಯ೯.

  ಶಿವಮೊಗ್ಗದ ಗಾಂಧಿ ಬಜಾರಿನ ಬಸವಣ್ಣ ದೇವಸ್ಥಾನದ ಎದುರಿನ ದಿನಕರ್ ಮೆಟಲ್ ಸ್ಟೋರ್ ಎಂಬ ಪಾತ್ರೆ ಅಂಗಡಿ ಸ್ವಾತಂತ್ರ್ಯ ಪೂರ್ವದ್ದು ಅದು ದರಣೇಂದ್ರ ದಿನಕರ್ ಅವರ ಮೂರನೇ ತಲೆಮಾರಿನ ಅಂಗಡಿ.
  ಇವರ ದೊಡ್ಡಪ್ಪ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಶಿವಮೊಗ್ಗದಲ್ಲಿ ನಾಗಪ್ಪ ಶೆಟ್ಟರ ಸಾರಥ್ಯದಲ್ಲಿ ಪ್ರತಿಷ್ಠಿತ NES ವಿದ್ಯಾಸಂಸ್ಥೆ ಸ್ಥಾಪಕರಲ್ಲಿ ಒಬ್ಬರು.
  ಶಿವಮೊಗ್ಗದ ಜೈನ ಸಮಾಜದ ಗೌರವಾನ್ವಿತ ಕುಟುಂಬ ಇವರ ಹಿನ್ನೆಲೆ.
  1985 ರಲ್ಲಿ ಇವರ ತಾಯಿಯ ಅನಾರೋಗ್ಯದ ಸಂದರ್ಭದಲ್ಲಿ ಐದಾರು ಯುನಿಟ್ ರಕ್ತ ಬೇಕಾದಾಗ ಆಗಿನ ಕಾಲದಲ್ಲಿ ಗೋಪಿ ಸರ್ಕಲ್ಲಿನ ಶ್ರೀನಿಧಿ ಬಟ್ಟೆ ಅಂಗಡಿಗೆ ಎಲ್ಲರೂ ಹೋಗಿ ಅವರು ಅಲ್ಲಿಟ್ಟಿದ್ದ ರಕ್ತದಾನಿಗಳ ರಿಜಿಸ್ಟರ್ ನಲ್ಲಿ ರಕ್ತದಾನಿಗಳ ಮಾಹಿತಿ ಪಡೆಯುವ ಸಂಪ್ರದಾಯದಂತೆ ಹೋಗುತ್ತಾರೆ ಮಾಲಿಕರ ಪ್ರೇರಣೆಯಿಂದ ದಿನಕರ್ ರಕ್ತದಾನಿಗಳಾಗುತ್ತಾರೆ.
  ಅವತ್ತಿನಿಂದ ಇವತ್ತಿನವರೆಗೆ ರಕ್ತ ಬೇಕಾದವರಿಗಾಗಿ ಜೀವನ ಮುಡುಪಾಗಿಟ್ಟಿದ್ದಾರೆ ಸ್ವತಃ 116 ಬಾರಿ ರಕ್ತದಾನ ಮಾಡಿದ್ದಾರೆ ಈ ದಾಖಲೆ ಇವರೊಬ್ಬರದೇ.
   ಬರುವ ಮೇ ತಿಂಗಳ 9 ರಂದು ನಮ್ಮ ಊರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ರಕ್ತದಾನ ಶಿಬಿರ ನಡೆಯಲಿದೆ ಅದಕ್ಕಾಗಿ ರೆಡ್ ಕ್ರಾಸ್ ಸಂಸ್ಥೆವತಿಯಿಂದ ತಯಾರಿಗಾಗಿ ಬಂದವರು ನನ್ನಲ್ಲಿಗೆ ಬಂದಿದ್ದರು.
   ಎಂಟು ವರ್ಷಗಳ ನಂತರದ ಬೇಟಿ "ನಾನ್ಯಾರು ಗೊತ್ತಾಯಿತಾ" ಎನ್ನುತ್ತಾ ನನ್ನ ಕಛೇರಿ ಒಳಬಂದರು ನನ್ನ ತಟಸ್ಥವಾಗಿದ್ದ ಮೆದುಳಿನಿ ಮೆಮೋರಿ ಕಾರ್ಡ್ ಆಕ್ಟೀವ್ ಆಗಿ #ದಿನಕರ್_ರಕ್ತದಾನದ_ಶತಕ_ವೀರರು ಅಂದಾಗ ಅವರಿಗೇ ಆಶ್ಚರ್ಯ ಆಯಿತಂತೆ.
  ನಮ್ಮ ಸಂಸ್ಥೆ ನಿಯಮದಂತೆ ರಕ್ತದಾನದ ಶತಕ ವೀರರಿಗೆ ಶಾಲು ಹೊದಿಸಿ ಗೌರವಿಸಿದೆ.
  2016ರಲ್ಲಿ ನಮ್ಮ ಕಲ್ಯಾಣ ಮಂಟಪದಲ್ಲಿ ನಡೆಸಿದ ರಕ್ತದಾನ ಶಿಬಿರದಲ್ಲಿ ಒಂದೇ ಸ್ಥಳದಲ್ಲಿ 892 ಯುನಿಟ್ ರಕ್ತ ಸಂಗ್ರಹಿದ ದಾಖಲೆ ಈವರೆಗೆ ಯಾರೂ ಮುರಿದಿಲ್ಲವಂತೆ.... ಮಂಗಳೂರಿನಲ್ಲಿ ಒಂದು ಸಾವಿರ ರಕ್ತ ಸಂಗ್ರಹ ಮೊದಲ ಸ್ಥಾನವಾದರೆ ನಮ್ಮದು ಎರಡನೆ ಸ್ಥಾನ ರಾಜ್ಯಮಟ್ಟದ ದಾಖಲೆ ಅಂತೆ ಇದೆಲ್ಲ ಅವರ ಜೊತೆ ಮಾತುಕತೆ ಆಯಿತು.
  ಅವರ ಸಂದರ್ಶನ ಕೂಡ ಮಾಡಿದ್ದೇನೆ ಅದನ್ನು ಮುಂದಿನ ದಿನಗಳಲ್ಲಿ ಫೋಸ್ಟ್ ಮಾಡುತ್ತೇನೆ.
   
#ದಿನಾಂಕ_14_ಜೂನ್_2020_ರಂದು_ಬರೆದ_ಲೇಖನ
ರಕ್ತದಾನಕ್ಕೆ ಜನರನ್ನ ಸಂಘ ಸಂಸ್ಥೆಯನ್ನ ಪ್ರೇರೇಪಿಸಿ ರಕ್ತ ಸಂಗ್ರಹಿಸಿ ದಿನದ 24 ಗಂಟೆ ರಕ್ತ ಬೇಕಾದವರಿಗೆ ಆಪತ್ಕಾಲಕ್ಕೆ ಜೀವ ಉಳಿಸುವ ಸಾಥ೯ಕ ಸೇವೆ ಸುಮಾರು 35 ವಷ೯ದಿಂದ ನಡೆಸಿಕೊಂಡು ಬಂದಿರುವ ಸ್ಟತಃ ರಕ್ತದಾನಿ ಆಗಿರುವ ಜೈನ ಸಮುದಾಯದ ಶ್ರೀ ದರಣೇOದ್ರ ದಿನಕರ್ ಜಿಲ್ಲೆಯಲ್ಲಿ ಒಂದು ದಾಖಲೆ ಮಾಡಿದ್ದಾರೆ.
    ಅದು ದಿನಾಂಕ 14 ಜೂನ್ 2020 ರ ರಕ್ತದಾನಿಗಳ ದಿನಾಚಾರಣೆಯ೦ದು ಮತ್ತು ರೆಡ್ ಕ್ರಾಸ್ ಸಂಸ್ಥೆಯ ಶತಮಾನೋತ್ಸವದ ದಿನ ಇವರು ಮಾಡಿದ ರಕ್ತದಾನ 100 ನೇ ರಕ್ತದಾನ.
   ಶಿವಮೊಗ್ಗ ಜಿಲ್ಲೆಯ ರೆಡ್ ಕ್ರಾಸ್‌ ಸಂಸ್ಥೆ ನಿದೇ೯ಶಕರಾಗಿರುವ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಸಂಜೀವಿನಿ ಬ್ಲಡ್ ಬ್ಯಾಂಕ್ ನ ಉಸ್ತುವಾರಿ ಹೊಂದಿರುವ ದಿನಕರ್ ಪರಿಚಯ ಇಲ್ಲದವರೆ ಇಲ್ಲ.
  ಮಧ್ಯರಾತ್ರಿಗೂ ಆಸ್ಪತ್ರೆಯಲ್ಲಿರುವವರ ರಕ್ತ ಬೇಕಾದವರ ಅಂದು ಬಂದುಗಳು ಇವರಿಗೆ ಪೋನಾಯಿಸಿ ಬೇಕಾದ ಗ್ರೂಪಿನ ರಕ್ತ ಪಡೆಯುತ್ತಾರೆ.
  ಸಂಜೀವಿನಿ ಬ್ಲಡ್ ಬ್ಯಾಂಕ್ ಗೋಪಿ ಸಕ೯ಲ್ ನಿಂದ ಜ್ಯೂವೆಲ್ ರಾಕ್ ಹೋಟೆಲ್ ರಸ್ತೆಯಲ್ಲಿರುವ ಆಭರಣ ಜ್ಯೂವೆಲ್ಸ್ ನ ಕೆಳ ಅಂತಸ್ತಿನಲ್ಲಿದೆ ಅಲ್ಲಿ ದಿನದ ಹೆಚ್ಚು ಹೊತ್ತು ದಿನಕರ್ ಇರುತ್ತಾರೆ.
  ದಿನಕರ್ ರಕ್ತದ ಗುಂಪು AB+ , ಇವರ ಸೆಲ್ ನಂಬರ್9844101866.
ಜಿಲ್ಲೆಯ ಜನರ ಜೀವ ಕಾಪಾಡುವ ರಕ್ತದಾನಕ್ಕೆ ಪ್ರೇರೇಪಿಸುವ ದರಣೇ೦ದ್ರ ದಿನಕರ್ ರ 100 ನೇ ವೈಯಕ್ತಿಕ ರಕ್ತದಾನದ ಸಂದರ್ಭದಲ್ಲಿ ಅವರನ್ನ ಅಭಿನಂದಿಸುತ್ತೇನೆ ಮತ್ತು ದೇವರು ಅವರಿಗೆ ಆಯುರಾರೋಗ್ಯ - ಆಯಸ್ಸು- ಯಶಸ್ಸು ದಯಪಾಲಿಸಲಿ ಎಂದು ಹಾರೈಸುತ್ತೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ