Skip to main content

Blog number 2074. ಮಹಾಕವಿ ಮುದ್ದಣ್ಣ ಮತ್ತು ಅವರ ಸಂಗಾತಿ ಮನೋರಮ ಸ್ಮರಣೆ, ಮನೋರಮರ ನಿಜ ನಾಮ ಕಮಲಾ ಬಾಯಿ ಅವರ ತವರು ಶಿವಮೊಗ್ಗ ಜಿಲ್ಲೆಯ ಕಾಗೆ ಕೊಡಮಗ್ಗಿ ಗ್ರಾಮ

#ಅರವಿಂದ_ಚೊಕ್ಕಾಡಿ_ಮಗ_ಪ್ರಣಯನ_ಉಪನಯನ

#ಮೂಡಬಿದರೆ_ಸಮಾಜ_ಮಂದಿರದಲ್ಲಿ

#ಅಲ್ಲಿಂದ_ಮಹಾಕವಿ_ಮುದ್ದಣ್ಣರ_ನಂದಳಿಕೆ_ಮನೆಗೆ_25_ಕಿಲೋ_ಮೀಟರ್

#ಮುದ್ದಣ್ಣರ_ಮೂಲ_ಹೆಸರು_ನಂದಳಿಕೆ_ಲಕ್ಷ್ಮೀನಾರಾಯಣ

#ಮನೋರಮ_ಮೂಲ_ಹೆಸರು_ಕಮಲಾ_ಬಾಯಿ

#ಶಿವಮೊಗ್ಗ_ಜಿಲ್ಲೆಯ_ಕಾಗೆ_ಕೊಡ_ಮಗ್ಗಿ_ಗ್ರಾಮ

#ಮುದ್ದಣ್ಣ_ಮನೋರಮರ_ಮಗ_ರಾದಾಕೃಷ್ಣ_ಶಿವಮೊಗ್ಗದ_A_V_ಗರ್ಲ್ಸ್_ಸ್ಕೂಲ್_ಅಧ್ಯಾಪಕರಾಗಿದ್ದರು.


  ಬರುವ ಮೇ 2 ನೇ ತಾರೀಖು ಬೆಳಿಗ್ಗೆ ಆತ್ಮೀಯರಾದ ಅರವಿಂದ ಚೊಕ್ಕಾಡಿ ಅವರ ಪುತ್ರ ಪ್ರಣಯನ ಉಪನಯನ ಕಾರ್ಯಕ್ರಮಕ್ಕೆ ಮೂಡಬಿದರೆಯ ಸಮಾಜ ಮಂದಿರ ತಲುಪುವುದು ಅಲ್ಲಿನ ಕಾರ್ಯಕ್ರಮ ಮುಗಿಸಿ ಅಲ್ಲಿಂದ 25 ಕಿ.ಮಿ. ದೂರದ ನಂದಳಿಕೆಗೆ ಹೋಗಿ ಮಹಾ ಕವಿ ಮುದ್ದಣ್ಣರ ಮೂಲ ಮನೆ ಮತ್ತು ಸ್ಮಾರಕ ನೋಡಿ ಕಾರ್ಕಳ ಮಾಗ೯ವಾಗಿ ಆಗುಂಬೆ ಘಾಟಿ ಹತ್ತಿ ಊರು ಸೇರುವ ತೀಮಾ೯ನ ನನ್ನದು.
   ನನ್ನ ಮನೆಯಲ್ಲಿ ನಾನು ಒಂದನೆ ತರಗತಿ ಶಾಲೆಗೆ ಸೇರಿದಾಗ ನನ್ನಣ್ಣ 10 ನೇ ತರಗತಿ, ದೊಡ್ಡಕ್ಕ 8ನೇ ತರಗತಿ ಮತ್ತು ಸಣ್ಣಕ್ಕ 4ನೇ ತರಗತಿ ಆಗ ಮನೆಯಲ್ಲಿ ಮುದ್ದಣ್ಣ ಮನೋರಮೆಯರ ಸಲ್ಲಾಪ ಆಗಾಗೆ ಅವರ ಪಠ್ಯ ಓದುವಾಗ ಕೇಳುತ್ತಿದ್ದೆ, ಅದು ಅವರಲ್ಲಿ ಯಾರದೋ ತರಗತಿಯ ಕನ್ನಡ ವಿಷಯದ ಪಠ್ಯ ಆಗಿತ್ತು.
    ಅವರು ಓದಿ ಕೊಳ್ಳುತ್ತಿದ್ದ "ಕುಡಿಯಲು ಕೆನೆಹಾಲು".... "ನೀರಿಳಿಯದ ಗಂಟಲಲ್ಲಿ ಕಡಬು ತುರುಕಿದಂತೆ" ಎಂಬ ವಾಕ್ಯ (ಆಗ ಇದರ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ) ನಿತ್ಯ ವೂ ನನಗೆ ಕಾಡುತ್ತಿತ್ತು.
   ಈಗಲೂ ರಾತ್ರಿ ಕೆನೆ ಹಾಲು ಕುಡಿಯುವಾಗ ಮತ್ತು ಮನೆಯಲ್ಲಿ ಕಡಬು ಮಾಡಿದಾಗ ಮುದ್ದಣ್ಣ ಮನೋರಮ ಸಲ್ಲಾಪ ನೆನಪಾಗುತ್ತಿರುತ್ತದೆ.
   ಬುದ್ಧಿ ಬಂದ ಮೇಲೆ ಇದು ನಂದಳಿಕೆ ಲಕ್ಷ್ಮೀನಾರಾಯಣಪ್ಪ ಎಂಬ ದೈಹಿಕ ಶಿಕ್ಷಕರು ತಮ್ಮ #ರಾಮಾಶ್ವಮೇದ ಎಂಬ ಹಳೆಗನ್ನಡದ ಗದ್ಯದಲ್ಲಿ ಮುದ್ದಣ್ಣ ಮತ್ತು ಅವರ ಪತ್ನಿ ಮನೋರಮೆ ಎಂಬ ಕಾವ್ಯ ಪಾತ್ರ ಸೂತ್ರದಾರರಾಗಿ ಬಂದು ಭಾಗವಹಿಸುವಂತೆ ಸೃಷ್ಟಿಸಿದ್ದರು ಎಂದು ಗೊತ್ತಾಯಿತು.
   ಮುದ್ದಣ್ಣ ಹಳೆಗನ್ನಡದಲ್ಲಿ ಗದ್ಯ ಅದ್ಬುತ ರಾಮಾಯಣ, ರಾಮಪಟ್ಟಾಭಿಶೇಕ ಮತ್ತು ರಾಮಾಶ್ವಮೇದ ಮತ್ತು ರತ್ನಾವಳಿ ಕಲ್ಯಾಣ ಮತ್ತು ಕುಮಾರ ವಿಜಯ ಎಂಬ ಎರಡು ಯಕ್ಷಗಾನ ಬರೆದಿದ್ದಾರೆ ಆದರೆ ನಂದಳಿಕೆ ಲಕ್ಷ್ಮೀನಾರಾಯಣ ಎಂಬ ದೈಹಿಕ ಶಿಕ್ಷಕ ಬರೆದಿದ್ದಾರೆಂದರೆ ಆ ಕಾಲದ ಸಮಾಜ ಒಪ್ಪಲಾರದೆಂದು ಮುದ್ದಣ್ಣ ಎಂಬ ಕಾವ್ಯನಾಮದಿಂದ ಗುರುತಿಸಿ ಕೊಳ್ಳುತ್ತಾರೆ ಎಲ್ಲೂ ತಮ್ಮ ಮೂಲ ಹೆಸರು ಬಾರದಂತೆ ಜಾಗೃತಿ ವಹಿಸುತ್ತಾರೆ.
  1870 ಜನವರಿ 24 ರಂದು ನಂದಳಿಕೆಯ ವಡಾಲ ತಿಮ್ಮಪ್ಪ ಮತ್ತು ಮಹಾಲಕ್ಷ್ಮಮ್ಮ ದಂಪತಿಗಳಿಗೆ ಜನಿಸಿದ ನಂದಳಿಕೆ ಲಕ್ಷ್ಮೀನಾರಾಯಣರು ದೈಹಿಕ ಶಿಕ್ಷಕರಾಗಿ ಕುಂದಾಪುರದಲ್ಲಿ ಕಾಯ೯ನಿರ್ವಹಿಸುವಾಗಲೇ ಕ್ಷಯರೋಗ ಪೀಡಿತರಾಗಿ 15 ಪೆಬ್ರುವರಿ 1901ರಂದು ತಮ್ಮ 31ನೆ ವಯಸ್ಸಿನಲ್ಲಿ ತಮ್ಮ ಇಹಲೋಕ ಯಾತ್ರೆ ಮುಗಿಸುತ್ತಾರೆ  ಮನೋರಮ ಪಾತ್ರ ದಾರಿ ಇವರ ಪತ್ನಿ ನಿಜ ನಾಮ ಕಮಲ ಬಾಯಿ ಅವರ ತವರು ಮನೆ ಶಿವಮೊಗ್ಗ ಜಿಲ್ಲೆಯ ಕಾಗೆ ಕೊಡ ಮಗ್ಗಿ ಗ್ರಾಮದವರು ಪತಿಯ ಅಕಾಲಿಕ ಮರಣದಿಂದ ನಂದಳಿಕೆಯ ಪತಿ ಮನೆ ತೊರೆದು ತವರು ಮನೆ ಸೇರುತ್ತಾರೆ.
  ಮಗ ರಾದಾಕೃಷ್ಣ (ಅವರನ್ನ ಬಾಬೂರಾವ್ ಎಂದೂ ಕರೆಯುತ್ತಿದ್ದರಂತೆ) ಶಿವಮೊಗ್ಗದ ಆಂಗ್ಲ ಬಾಲಿಕಾ AV ಗರ್ಲ್ ಸ್ಕೂಲ್ ಅಧ್ಯಾಪಕರಾಗಿದ್ದರು ನಂತರ ಭದ್ರಾವತಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು ಇವರ ಮಗ ಶ್ರೀನಿವಾಸ ಮೂರ್ತಿ ಅವರ ಮಕ್ಕಳು ಬೆಂಗಳೂರು ಮತ್ತು ಮೈಸೂರಿನಲ್ಲಿ ನೆಲೆಸಿದ್ದಾರೆ, ನಂದಳಿಕೆಯ ಮೂಲ ಮನೆಯಲ್ಲಿ ಮುದ್ದಣನ ಸಂಬಂದಿಕರಲ್ಲದ ಅವರ ಸಮುದಾಯದವರು ವಾಸವಾಗಿದ್ದಾರೆ.
   ಮುದ್ದಣ್ಣರ ಜೀವನ ಮತ್ತು ಇಂಗ್ಲೀಷಿನ ಪ್ರಸಿದ್ಧ ಕವಿ ಕೀಟ್ಸ್ ಜೀವನಕ್ಕೆ ತುಂಬಾ ಸಾಮ್ಯತೆ ಇದೆ, ಕೀಟ್ಸ್ ಅನೇಕ ಶ್ರೇಷ್ಟ ಕವಿತೆ ಬರೆದಿದ್ದರೂ ಅದು ಜಗತ್ತಿಗೆ ತಿಳಿಯಲೇ ಇಲ್ಲ ಆ ಕಾಲದ ವಿಮರ್ಶಕರು ಕೀಟ್ಸ್ ಕವಿಯನ್ನು ಕೆಟ್ಟ ಕವಿ ಎಂದು ಹೀಗಳೆಯುತ್ತಾರೆ, ಸಣ್ಣ ವಯಸ್ಸಲ್ಲೇ ಕೀಟ್ಸ್ ಕ್ಷಯ ರೋಗದಿಂದ ಮರಣಿಸುತ್ತಾರೆ ಅನಂತರ ಕೀಟ್ಸ್ ಇಂಗ್ಲೀಷಿನ ಉತ್ತೊಮೊತ್ತಮ ಕವಿ ಎಂದು ಪ್ರಸಿದ್ದರಾಗುತ್ತಾರೆ.
   ಕೀಟ್ಸ್ ಇನ್ನಷ್ಟು ಕಾಲ ಬದುಕಿದ್ದರೆ ಷೇಕ್ಸ್ ಪೀಯರ್ ರ ಕಾವ್ಯದ ಘನತೆಯನ್ನು ಸಾದಿಸುತ್ತಿದ್ದರೆಂದು ಜಗತ್ತು ಹೊಗಳಿತ್ತು.
   ಮುದ್ದಣ್ಣ ಕೂಡ ಕೀಟ್ಸ್ ಕವಿಯಂತೆ ಸಣ್ಣ ವಯಸ್ಸಿನಲ್ಲೇ ಕ್ಷಯ ರೋಗದಿಂದ ಇಹಲೋಕ ತ್ಯಜಿಸುತ್ತಾರೆ ಅವರು ಬದುಕಿದ್ದಾಗ ಅವರು ಬರೆದ ಸಾಹಿತ್ಯ ಅವರದ್ದೆಂದು ಎಲ್ಲೂ ಹೇಳಿಕೊಂಡಿರಲಿಲ್ಲ, ಅವರ ಮರಣಿಸಿದ 28 ವರ್ಷದ ನಂತರ 1929 ರಲ್ಲಿ ಬೆಂಗಳೂರು ಸೆಂಟ್ರಲ್ ಕಾಲೇಜಿನ ಕರ್ನಾಟಕ ಅಸೋಸಿಯೇಷನ್ ಮುದ್ದಣ್ಣ ಸ್ಮರಣಾರ್ಥ ಪುಸ್ತಕ ಪ್ರಕಟಿಸಿ ಮುದ್ದಣ್ಣ ಕಾವ್ಯ ನಾಮದ ನಂದಳಿಕೆ ಲಕ್ಷ್ಮೀನಾರಾಯಣರ ಕೃತಿಗಳನ್ನು ದೃಡೀಕರಿಸಿದರು.
    ನಂದಳಿಕೆಯಲ್ಲಿ 1987ರಲ್ಲಿ ಸ್ಮಾರಕ ಮಹಾಕವಿ ಮುದ್ದಣ್ಣ ಸ್ಮಾರಕ ಭವನ ನಿರ್ಮಿಸಿದ್ದಾರೆ, 2017 ರಲ್ಲಿ ಘನ ಸರ್ಕಾರ ಮುದ್ದಣರ ಸ್ಮರಣೆಗಾಗಿ ಅಂಚೆ ಚೀಟಿ ಬಿಡುಗಡೆ ಮಾಡಿದೆ,ಮುದ್ದಣ್ಣರ ಮೂಲಕೃತಿ ಉಡುಪಿ ಮಂಜೇಶ್ವರದ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ