Skip to main content

Blog number 2071. ಅರವಿಂದ ಚೊಕ್ಕಾಡಿ ಪುತ್ರ ಪ್ರಣಯನ ಉಪನಯನದ ಆಹ್ವಾನ ಸ್ವೀಕರಿಸಿದ್ದೇನೆ.

#ನಾನು_ಹೆಚ್ಚು_ಇಷ್ಟ_ಪಡುವ_ಅರವಿಂದ_ಚೊಕ್ಕಾಡಿ

#ಇವರ_ಪುತ್ರ_ಪ್ರಣಯನ_ಉಪನಯನ

#ಇವರು_ಬರೆದ_ಪುಸ್ತಕ_ಇಲ್ಲದ_ತೀರದಲ್ಲಿ_ಓದಿ_ಇವರನ್ನ_ಅಥ೯_ಮಾಡಿಕೊಂಡವನು_ನಾನು

#ನನ್ನ_ಮೊದಲ_ಕಾದಂಬರಿ_ಬೆಸ್ತರ_ರಾಣಿ_ಚಂಪಕಾಗೆ_ವಿಮರ್ಷೆ_ಬರೆದು_ಬೆನ್ನು_ತಟ್ಟಿದವರು

#ನನ್ನ_ಎರಡನೆ_ಪುಸ್ತಕ_ಕಥಾ_ಸಂಕಲನಕ್ಕೆ_ಮುನ್ನುಡಿ_ಬರೆದವರು

#ಶಿವಮೊಗ್ಗ_ಜಿಲ್ಲಾ_ಸಾಹಿತ್ಯ_ಪರಿಷತ್_ನನ್ನ_ಎರೆಡೂ_ಪುಸ್ತಕದ_ಅವಲೋಕನ_ಕಾರ್ಯಕ್ರಮ_ಆಯೋಜಿಸಿದಾಗ

#ಅರವಿಂದ_ಚೊಕ್ಕಾಡಿ_ಆಗಮಿಸಿ_ಅವಲೋಕನ_ಮಾಡಿದವರು


   ಅರವಿಂದ ಚೊಕ್ಕಾಡಿ ಅಂಕಣಕಾರರು, ವಿಮರ್ಶಕರು, ಶಿಕ್ಷಣ ತಜ್ಞರು ವಿಶೇಷವಾಗಿ ಮಹಾತ್ಮಾ ಗಾಂಧಿ ಅನುಯಾಯಿಗಳು ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ವಿಶೇಷ ತರ್ಕ ಮಾಡುವ ಜ್ಞಾನಿಗಳು ಅಷ್ಟೇ ಅಲ್ಲ #ತಾ೦ಟಿದರೆ_ಬಿಡುವುದಿಲ್ಲ ಎಂಬ ಅವರದ್ದೇ ಘೋಷಣೆ ಅವರನ್ನು ಸುಖಾ ಸುಮ್ಮನೆ ಕೆರಳಿಸಿದರೆ ಬಿಡುವುದಿಲ್ಲ.
   ಹಾಗಂತ ಇವರ ಚರ್ಚೆ ಹೋರಾಟ ಯಾರ ವಿರುದ್ದವಾಗಿ ವೈಯಕ್ತಿಕವಾಗಿ ಇರುವುದಿಲ್ಲ ಅದು ವಿಷಯ ಆದಾರಿತ.
   ನಾನು ಪ್ರತಿ ನಿತ್ಯ ಇವರ ಪೋಸ್ಟ್ ನೋಡದೇ ಇರುವುದಿಲ್ಲ ಅನಿವಾಸಿ ಭಾರತೀಯರಾದ ವಿಚಾರವಾದಿ #ಶಾಂತರಾಮ_ಹೆಗಡೆ_ಕಟ್ಟಾ ಮತ್ತು #ಅರವಿಂದಚೊಕ್ಕಾಡಿ ಅವರ ಬಿಸಿ ಬಿಸಿ ಚರ್ಚೆಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುತ್ತದೆ ಒಮ್ಮೆ ಶಾಂತಾರಾಮ ಹೆಗಡೆ ಕಟ್ಟಾ ನನ್ನ ಅತಿಥಿ ಆದಾಗ ಅವರ ಸಂದರ್ಶನ ಮಾಡಿದ್ದಾಗ ಅವರಿಗೆ ನೀವು ಮತ್ತು ಅರವಿಂದ ಚೊಕ್ಕಾಡಿ ಅವರ ನಡುವೆ ಜಗಳವಾ? ಎಂದಿದ್ದಕ್ಕೆ ಅವರು ಉತ್ತರಿಸಿದ್ದು "ಗಂದದ ಕೊರಡಿನವರ ಜೊತೆಯ ವಿಚಾರದ ಗುದ್ದಾಟ " ಅಂದಿದ್ದರು.
   ಅರವಿಂದ ಚೊಕ್ಕಾಡಿ ಅವರು ಮಾರ್ಚ್ 20 ನೇ ತಾರೀಖು ವಾಟ್ಸಪ್ ಸಂದೇಶ ಕಳಿಸಿದ್ದರು ಮೇ 2 ನೇ ತಾರೀಖಿಗೆ ನನ್ನ ಮಗನ ಉಪನಯನ ನೀವು ಬರಬೇಕೆಂದು ಬಯಸುತ್ತೇನೆ ಅಂತ ಅವತ್ತೇ ನಾನು ನನ್ನ ದಿನಚರಿ ಪುಸ್ತಕದಲ್ಲಿ ಗುರುತು ಮಾಡಿಕೊಂಡಿದ್ದೇನೆ.
  ಇದೇ ಏಪ್ರಿಲ್ 4 ರ ಬೆಳಿಗ್ಗೆ ಅವರು ನಮ್ಮ ಊರಿನ ಮಾರ್ಗದಲ್ಲಿದ್ದಾಗ ಪೋನಾಯಿಸಿದಾಗ ನಾನು ಮಣಿಪಾಲಿನ ಆಸ್ಪತ್ರೆಯಲ್ಲಿ ನನ್ನ ಸಹೋದರನ ಚಿಕಿತ್ಸೆಗೆ ಹೋಗಿದ್ದೆ.
   ಯಾವುದನ್ನು ನಿರೀಕ್ಷೆ ಮಾಡದ, ಸುಳ್ಳು ಪ್ರತಿಷ್ಟೆಗೆ ಮಣೆ ಹಾಕದ, ಪ್ರಶಸ್ತಿ ಹಣದ ಹಿಂದೆ ಓಡದ #ಅಲಕ್_ನಿರಂಜನ್ ಎಂಬಂತೆ ಡೇರ್ ಡೆವಿಲ್ ಆಗಿ ಜೀವನ ಮಾಡುತ್ತಿರುವ ಅರವಿಂದರು ತನ್ನ ಅಜ್ಜಂದಿರು, ಅಪ್ಪ ಅಮ್ಮಂದಿರು, ಪತ್ನಿ ಮತ್ತು ಮಕ್ಕಳ ಬಗ್ಗೆ ಸಂಪೂರ್ಣವಾಗಿ ಕಪ್ಪು ಬಿಳುಪಿನ ಚಿತ್ರವಾಗಿ ಅವರೇ ಹೇಳಿ ಕೊಂಡಿದ್ದರಿಂದ ನನಗೆ ಅರವಿಂದ ಚೊಕ್ಕಾಡಿ ಒಂದು ರೀತಿ ವಿಸ್ಮಯವೂ ಹೌದು, ಇನ್ನೊಂದು ರೀತಿ ಅವರ ನೇರ ನಡೆ ನುಡಿ ನನಗೆ ಇಷ್ಟವೂ ಹೌದು.
   ಮೇ 2 ನೇ ತಾರೀಖು ಅವರ ಮಗ ಪ್ರಣಯನ ಉಪನಯನದಲ್ಲಿ ಭಾಗವಹಿಸಿ ಆಶ್ರೀವಾದ ಮಾಡಬೇಕು ಬ್ರಾಹ್ಮಣ ಅರವಿಂದ ಚೊಕ್ಕಾಡಿ ಮತ್ತು ಅರೆ ಭಾಷಾ ಗೌಡತಿ ಪತ್ನಿಯ ಪುತ್ರ ಪ್ರಣಯನಿಗೆ ಜಾತಿಯೇ ಇಲ್ಲದ ನನ್ನ ಆಶ್ರೀವಾದ ಇದು ನನ್ನ ಜೀವಮಾನದ ಮೊದಲ ಉಪನಯನ ಕಾಯ೯ಕ್ರಮ ಪ್ರತ್ಯಕ್ಷ ನೋಡುವ ಅವಕಾಶ.
  ಅರವಿಂದ ಚೊಕ್ಕಾಡಿ ಬರೆದ #ಇಲ್ಲದ_ತೀರದಲ್ಲಿ "ಅಪ್ಪನ ಬದುಕಿನೊಂದಿಗೆ ಸಂವಾದ" ಮಹಾತ್ಮ ಗಾಂಧಿ ಅವರ ನನ್ನ ಸತ್ಯಾನ್ವೇಷಣೆ ಆತ್ಮ ಚರಿತ್ರೆಯಂತೆ ನೇರಾ ನೇರವಾಗಿದೆ ಈ ಪ್ರಸ್ತಕದ ಕಥಾ ನಾಯಕಿ ಅರವಿಂದರ ತಾಯಿ ಶ್ರೀಮತಿ ಪಾರ್ವತಿ ಅವರು ತನ್ನ ಮೊಮ್ಮಗನ ಉಪನಯನ ಕಾರ್ಯಕ್ರಮದ ಅತಿಥೇಯರು ಅವರನ್ನು ಪ್ರತ್ಯಕ್ಷ ಬೇಟಿ ಮಾಡುವ ಮೂಲಕ ಮೇ 2 - 2024 ರಂದು ಮೂಡಬಿದರೆ ಬಸ್ ಸ್ಟಾಂಡ್ ಬಳಿಯ ಸಮಾಜ ಮಂದಿರ ತಲುಪಲಿದ್ದೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ