Skip to main content

Blog number 2038.ಲೋಕರಾಜ ಜೈನ್ ಸಾಳ್ವ ಕುಲಜ ನಗಿರೆಸುತ ಕಾಳುಮೆಣಸಿನ ರಾಣಿ ಚೆನ್ನಾ ಬೈರಾದೇವಿ ಇತಿಹಾಸ ಸಂಶೋದಕರು ಇವರು ಚೆನ್ನಾ ಬೈರಾದೇವಿ ವಂಶಸ್ಥರೂ ಆಗಿದ್ದಾರೆ.

#ಲೋಕರಾಜ_ಜೈನ್_ಸಾಳ್ವಕುಲಜ_ನಗಿರೆಸುತ.

#ಜೋಗ_ಜಲಪಾತದ_ತಟದ_ಹೆನ್ನೆ_ಊರಿನವರು

#ಶರಾವತಿ_ಮುಳುಗಡೆಯ_ಬ್ಯಾಕೋಡಿನಲ್ಲಿ_ಉಪನ್ಯಾಸಕರು

#ಕಾಳು_ಮೆಣಸಿನ_ರಾಣಿ_ಚೆನ್ನಬೈರಾದೇವಿ_ವಂಶಸ್ಥರು_ಇತಿಹಾಸ_ಸಂಶೋದಕರು

#ಜೈನ_ಮಠಗಳಾದ_ಹುಂಚಾ_ಶ್ರವಣಬೆಳಗೋಲದ_ಸ್ವಾಮಿಗಳು

#ಧರ್ಮಸ್ಥಳದ_ವೀರೇಂದ್ರ_ಹೆಗ್ಗಡೆ_ಇವರ_ಜ್ಞಾನ_ಬಳಸಿಕೊಳ್ಳಬೇಕು

#ಶಿವಮೊಗ್ಗ_ಜಿಲ್ಲೆಯ_ಇತಿಹಾಸದ_ಮಾಹಿತಿ_ನೀಡುತ್ತಿರುವ_ಡಿಜಿಟಲ್_ಮಾಧ್ಯಮದ_ಕೆಲಸ_ಅಭಿನಂದನೀಯ



  ಶಿವಮೊಗ್ಗ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಕದಂಬರ - ಜೈನ ಕಾಳುಮೆಣಸಿನ ರಾಣಿ ಚೆನ್ನ ಬೈರಾದೇವಿ-ಕೆಳದಿ ಅರಸರ ಆಳ್ವಿಕೆಯ ನೆಲ.
   ಇಲ್ಲಿನ ನದಿಗಳು - ಜಲಪಾತಗಳು - ದೇವಾಲಯಗಳು -ಕೋಟೆಗಳು - ಸ್ಮಾರಕಗಳು ಕೂಡ ವಿಶೇಷವೇ ಆಗಿದೆ.
   ಆದರೆ ಇವುಗಳ ಸಂರಕ್ಷಣೆ ಮತ್ತು ಸಂಶೋದನೆಗಳು ಮಾತ್ರ ತೃಪ್ತಿದಾಯಕವಾಗಿಲ್ಲ ಈಗಿನ ತಲೆಮಾರಿನ ಸಂಶೋದಕರಾದ ಕದಂಬರ ಇತಿಹಾಸದ ಬಗ್ಗೆ ಹೆಚ್ಚು ಕೆಲಸ ಮಾಡುತ್ತಿರುವ #ರಮೇಶ್_ಹಿರೇಜಂಬೂರು, ಪತ್ರಕರ್ತರಾದ #ನವೀನ್, ಕೆಳದಿ ಅರಸರ ಬಗ್ಗೆ ಪುಸ್ತಕ ಬರೆದಿರುವ ಬಿದನೂರು ನಗರದ ಕೆಳದಿ ಸಂಸ್ಥಾನದ ಭಂಡಾರ ನಿರ್ವಹಿಸಿದ ವಂಶಜರಾದ ನಗರದ #ಸುದೀಂದ್ರ_ಭಂಡಾರ್ಕರ್, ಜೈನ ರಾಣಿ ಚೆನ್ನಬೈರಾದೇವಿ ಆಡಳಿತ ಪ್ರದೇಶದಲ್ಲಿ ಅನೇಕ ಸಂಶೋದನಾ ಮಾಹಿತಿ ಹೊಂದಿರುವ ಜೋಗ್ ಜಲಪಾತದ ಬುಡದ ಹೆನ್ನೆಯ #ಲೋಕರಾಜ್_ಜೈನ್ ಸಾಳ್ವ ಕುಲಜ ನಗಿರೆಸುತ, ತೀರ್ಥಹಳ್ಳಿ ತಾಲ್ಲೂಕಿನ #ಆದರ್ಶ_ಹುಂಚದಕಟ್ಟೆ ಮತ್ತು #ಪ್ರಬಂದ್_ಅಂಬುತೀರ್ಥ ಗಮನ ಸೆಳೆಯುತ್ತಾರೆ.
  ನರಹಂತಕ ವೀರಪ್ಪನ್, ಸಂಗೊಳ್ಳಿ ರಾಯಣ್ಣ, ಕನಕದಾಸರು, ಸರ್ವಜ್ಞರ ಬಗ್ಗೆ ಅಭೂತಪೂರ್ವ ದೃಶ್ಯ ಮಾಧ್ಯಮದಲ್ಲಿ ನಾಡಿನ ಜನತೆಗೆ ನೀಡಿ ಪ್ರಖ್ಯಾತವಾದ ಡಿಜಿಟಲ್ ಮಾಧ್ಯಮ ಸಂಸ್ಥೆ ಈಗ ಶಿವಮೊಗ್ಗ ಜಿಲ್ಲೆಯ ಪ್ರವಾಸ ಮಾಡಿ ಕದಂಬರ ಇತಿಹಾಸದ ಬಗ್ಗೆ, ಕನ್ನಡದ ಮೊದಲ ಶಾಸನದ ಬಗ್ಗೆ, ಈಸೂರು ಸ್ವಾತಂತ್ರ್ಯ ಹೋರಾಟದ ಬಗ್ಗೆ ಅನೇಕ ಕಂತುಗಳಲ್ಲಿ ಅತ್ಯುತ್ತಮ ಮಾಹಿತಿ ನೀಡಿದ್ದಾರೆ.
  ಈಗ ಗೇರುಸೊಪ್ಪೆಯ ರಾಣಿ - ಕಾಳು ಮೆಣಸಿನ ರಾಣಿ ಎಂದೇ ಪ್ರಖ್ಯಾತಳಾಗಿದ್ದ ಜೈನ ರಾಣಿ ಚೆನ್ನಬೈರಾದೇವಿಯ ಎಪಿಸೋಡುಗಳನ್ನು ಇವತ್ತಿನಿಂದ ಪ್ರಕಟಿಸುತ್ತಾರೆ.
  ಇಲ್ಲಿ ಕ್ಲಿಕ್ ಮಾಡಿ #ಡಿಜಿಟಲ್_ಮಾಧ್ಯಮದ ಎಪಿಸೋಡುಗಳನ್ನು ನೋಡ ಬಹುದು 
https://www.facebook.com/share/v/h7wG9M7sT6vVPQbq/?mibextid=xfxF2i
  ಇವರಿಗೆ ಈ ಭಾಗದ ರಾಣಿ ಚೆನ್ನಬೈರಾದೇವಿಯ ಇತಿಹಾಸದ ಹೆಜ್ಜೆಗಳು ಅದಕ್ಕೆ ಸಂಬಂಧಿಸಿದ ವಿಚಾರಗಳನ್ನು ಆ ಸ್ಥಳಗಳಿಗೆ ಕರೆದೊಯ್ದು ವಿವರಿಸುತ್ತಿರುವ ಲೋಕರಾಜ ಜೈನರ ಕೆಲಸ ಪ್ರಶಂಸನೀಯವಾಗಿದೆ.
  ಮೊದಲ ಭಾಗದಲ್ಲಿ ಜೋಗ ಜಲಪಾತದ ಸಮೀಪದ ಸೀತಾಕಟ್ಟೆ ಸೇತುವೆ ನಿರ್ಮಾಣದ ಮೊದಲು ಕಟ್ಟಿಗೆ ಸೇತುವೆಯನ್ನು ಸ್ಥಳೀಯ ಕುಣುಬಿ ಜನರು, ಮರಾಠಿ ಜನರು ಮತ್ತು ಗೊಂಡ ಜನರು ಕಟ್ಟುತ್ತಿದ್ದರು ಅವರೆಲ್ಲ ಆಗ ಬ್ರಿಟೀಶ್ ಬಂಗಲೆಯ ಉಸ್ತುವಾರಿಯ ಹೊಂದಿದ್ದ ವಟ್ಟಕ್ಕಿ ಮನೆತನದ ಆಳುಗಳಾಗಿದ್ದರು.
  ರಾಣಿ ಚೆನ್ನಾ ಬೈರಾದೇವಿಯ ದಂಡನಾಯಕರಾಗಿದ್ದ ಈ ಮನೆತನಕ್ಕೆ ಮೈಸೂರು ಮಹಾರಾಜರ ಕಾಲದಲ್ಲಿ ಕೊತ್ವಾಲ್ ಎಂಬ ಬಿರುದು ಮತ್ತು ಚಿನ್ನದ ನೇಗಿಲು ಕಾಣಿಕೆಯಾಗಿ ನೀಡಿದ್ದರು ಎಂದು ಲೋಕರಾಜ ಜೈನರು ನೀಡಿದ ಮಾಹಿತಿ ಯಾವ ಇತಿಹಾಸ ಪುಸ್ತಕವೂ ನೀಡದ ಅಪೂರ್ವ ಮಾಹಿತಿ.
  ಕಾಳುಮೆಣಸಿನ ರಾಣಿ ಚೆನ್ನಬೈರಾದೇವಿ ಬಗ್ಗೆ ಗಜಾನನ ಶರ್ಮರ ಪುಸ್ತಕ, ಗಣೇಶಯ್ಯರು ಬರೆದ ಬೆಳ್ಳಿಕಾಳು ಎಂಬ ಪಿಕ್ಷನ್ ಪುಸ್ತಕಗಳ ಜೊತೆ ಡಿಜಿಟಲ್ ಮಾಧ್ಯಮದಲ್ಲಿ ಮಾಹಿತಿ ನೀಡುತ್ತಿರುವ ಬ್ಯಾಕೋಡಿನ ಉಪನ್ಯಾಸಕರು ಸಂಶೋದಕರಾದ ಲೋಕರಾಜ ಜೈನರು ಪ್ರಮುಖರು.
  ಬ್ರಿಟಿಶರ SS ಗೇರುಸೊಪ್ಪೆ ಎಂಬ ಹಡಗಿನಲ್ಲಿ ಬೆಳ್ಳಿಯ ಬಾರ್ ಗಳನ್ನು ತುಂಬಿಕೊಂಡು ಹೋಗುವಾಗ ಜಮ೯ನ್ ದೇಶದ ಸಬ್ ಮೆರಿನ್ ಅದನ್ನು ಹೊಡೆದುರುಳಿಸಿತ್ತು ಆ ಬೆಳ್ಳಿಗಳು ಗೇರುಸೊಪ್ಪೆಯ ರಾಣಿಗೆ ಸೇರಿದ ನಿದಿ ಎಂಬ ವದಂತಿ ಇದೆ.
  ಸಾಗರ ತಾಲೂಕಿನ ಕಾರ್ಗಲ್ ಸಮೀಪದ ಅರಣ್ಯದಲ್ಲಿರುವ ಕಾನೂರು ಕೋಟೆ, ಆವಿನಳ್ಳಿಯಲ್ಲಿರುವ ಚೆನ್ನಾ ಬೈರಾದೇವಿ ಸಮಾದಿ, ರಾಜ ವೆಂಕಟಪ್ಪ ನಾಯಕ ಚೆನ್ನಾ ಬೈರಾದೇವಿ ಬಂದಿಸಿಟ್ಟಿದ್ದ ಇಕ್ಕೇರಿ ಕೋಟೆಯ ಸೆರಮನೆ ಇವೆಲ್ಲ ವಿಶೇಷ ಸ್ಥಳಗಳಾಗಿದೆ.
  ರಾಜ ಮನೆತನದ ಇತಿಹಾಸ ಆ ಕಾಲದಲ್ಲಿ ಬರೆದವರು ರಾಜರ ಅಂತಃಪುರದ ರಾಜಾಶ್ರಯ ಹೊಂದಿದ್ದ ಇತಿಹಾಸ ಕಾರರು ಅವರು ತಮ್ಮ ರಾಜರಿಗೆ ಪ್ರಿಯವಾದದ್ದೆ ಬರೆಯ ಬೇಕಾಗಿದ್ದ ಮಿತಿ ಇತ್ತು.
  ಆ ಕಾಲದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿದ್ದ ವಿದೇಶಿ ಪ್ರವಾಸಿಗರ ಡೈರಿ ಸ್ಥಳೀಯವಾದ ಕೆಲ ವಾಸ್ತವ ಸನ್ನಿವೇಶಗಳ ದಾಖಲೆ ಆಗಿದೆ.
  ಆದರೆ ಜನಪದದಲ್ಲಿ ಅಳಿಸದೇ ಉಳಿದ ಅನೇಕ ವಿಷಯಗಳು ಎಲ್ಲೂ ದಾಖಲಾಗಿಲ್ಲ ಇದಕ್ಕೆ ಉದಾಹರಣೆ ಚಿತ್ರದುರ್ಗದ ಕೋಟೆಯ ಓಬವ್ವನ ಕಿಂಡಿ ಆದರೆ ಇದು ಇತಿಹಾಸದ ಪುಟಗಳಲ್ಲಿ ದಾಖಲಾಗಿಲ್ಲ ಆದರೆ ಜನಮಾನಸದಲ್ಲಿ ಅಚ್ಚಳಿಯದೇ ಉಳಿದ ಸತ್ಯಕಥೆ ಇದನ್ನು ಖ್ಯಾತ ಸಾಹಿತಿ ತ.ರಾ.ಸು. ತಮ್ಮ ಕಾದಂಬರಿಯಲ್ಲಿ ಮೊದಲಿಗೆ ಬರೆದರು, ಖ್ಯಾತ ಚಲನ ಚಿತ್ರ ನಿರ್ಧೇಶಕ ಪುಟ್ಟಣ್ಣ ಕಣಗಾಲ್ ತಮ್ಮ ನಾಗರ ಹಾವು ಚಿತ್ರದಲ್ಲಿ ಈ ಕಥೆಯನ್ನೇ ಒಂದು ಹಾಡಿನಲ್ಲಿ ಚಿತ್ರಿಸಿ ಪ್ರಖ್ಯಾತಿ ಮಾಡಿದ್ದರು.
  ರಾಜ ಮನೆತನದ ಇತಿಹಾಸ ಆ ಕಾಲದಲ್ಲಿ ಬರೆದವರು ರಾಜರ ಅಂತಃಪುರದ ರಾಜಾಶ್ರಯ ಹೊಂದಿದ್ದ ಇತಿಹಾಸ ಕಾರರು ಅವರು ತಮ್ಮ ರಾಜರಿಗೆ ಪ್ರಿಯವಾದದ್ದೆ ಬರೆಯ ಬೇಕಾಗಿದ್ದ ಮಿತಿ ಇತ್ತು.
  ಆ ಕಾಲದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿದ್ದ ವಿದೇಶಿ ಪ್ರವಾಸಿಗರ ಡೈರಿ ಸ್ಥಳೀಯವಾದ ಕೆಲ ವಾಸ್ತವ ಸನ್ನಿವೇಶಗಳ ದಾಖಲೆ ಆಗಿದೆ.
  ಆದರೆ ಜನಪದದಲ್ಲಿ ಅಳಿಸದೇ ಉಳಿದ ಅನೇಕ ವಿಷಯಗಳು ಎಲ್ಲೂ ದಾಖಲಾಗಿಲ್ಲ ಇದಕ್ಕೆ ಉದಾಹರಣೆ ಚಿತ್ರದುರ್ಗದ ಕೋಟೆಯ ಓಬವ್ವನ ಕಿಂಡಿ ಆದರೆ ಇತಿಹಾಸದ ಪುಟಗಳಲ್ಲಿ ದಾಖಲಾಗಿಲ್ಲ ಆದರೆ ಜನಮಾನಸದಲ್ಲಿ ಅಚ್ಚಳಿಯದೇ ಉಳಿದ ಸತ್ಯಕಥೆ ಇದನ್ನು ಖ್ಯಾತ ಸಾಹಿತಿ ತ.ರಾ.ಸು. ತಮ್ಮ ಕಾದಂಬರಿಯಲ್ಲಿ ಮೊದಲಿಗೆ ಬರೆದರು, ಖ್ಯಾತ ಚಲನ ಚಿತ್ರ ನಿರ್ಧೇಶಕ ಪುಟ್ಟಣ್ಣ ಕಣಗಾಲ್ ತಮ್ಮ ನಾಗರ ಹಾವು ಚಿತ್ರದಲ್ಲಿ ಈ ಕಥೆಯನ್ನೇ ಒಂದು ಹಾಡಿನಲ್ಲಿ ಚಿತ್ರಿಸಿ ಪ್ರಖ್ಯಾತಿ ಮಾಡಿದ್ದರು.
  ಶಿವಮೊಗ್ಗ ಜಿಲ್ಲೆಯಲ್ಲಿ ಇಂತಹ ನೂರಾರು ಇತಿಹಾಸದ ಸತ್ಯಕಥೆ ಕುರುಹುಗಳು ಇದೆ ಅದನ್ನು ಹಿಂದಿನವರು ದಾಖಲಿಸಿಲ್ಲ ಈಗಿನವರು ದಾಖಲಿಸಲು ಹೋದರೆ ಒಂದು ಕಾಲದ ನಮ್ಮ ಶಾಲೆಗಳ ಇಂಗ್ಲೀಷ್ ಮೇಷ್ಟರುಗಳಂತೆ ಗ್ರಾಮರ್/ಉಚ್ಚಾರಣೆಗಳ ತಪ್ಪುಗಳನ್ನೆ ದೊಡ್ಡ ಅಪರಾದ ಎಂಬಂತೆ ಗೇಲಿ ಮಾಡಿ ಆ ಕಾಲದ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಅಂದರೆ ಕಬ್ಬಿಣದ ಕಡಲೆ ಮಾಡಿಟ್ಟಂತೆ ಮಾಡುವ ಮೂಲಕ ಹೊಸಬರು ಇತಿಹಾಸದ ಬಗ್ಗೆ ಬರೆಯದಂತೆ ಮಾಡುವ ಅನೇಕ ಉದಾಹರಣೆ ಇದೆ.
  ಹೊಸಬರಿಗೆ ಪ್ರೋತ್ಸಾಹಿಸ ಬೇಕು ಅವರ ತಪ್ಪುಗಳನ್ನ ನಯವಾಗಿ ತಿದ್ದಿ ಅವರಿಗೆ ಹೆಚ್ಚು ಸಕ್ರಿಯರಾಗಿಸುವ ಕೆಲಸ ಮಾಡ ಬೇಕು ಅದನ್ನ ಬಿಟ್ಟು ತಾವೊಬ್ಬರೆ ವಿದ್ಯಾವಂತರು, ಸಂಶೋದಕರು, ಡಾಕ್ಟರ್ ಗಳು ಅನ್ನುವ ಅಹಂ ಮತ್ತು ಹೊಸಬರಿಗೆ ನೀವೇನಾಗಿದ್ದೀರಿ... ಎ0ದು ಪ್ರಶ್ನಿಸುವವರು ಇದ್ದಾರೆ.
   ಕೆಲವು ಗಾದೆಗಳು ಇದೆ "ವಿದ್ಯೆ ಇಲ್ಲದವನಿಗೂ ಗೌರವ ಕೊಟ್ಟು ಮಾತಾಡುವವನೆ ವಿದ್ಯಾವಂತ " ಅಂತ,ಇನ್ನೊಂದು "ಮಾನವೀಯ ಅರ್ಹತೆಗಳು ಶೈಕ್ಷಣಿಕ ಅರ್ಹತೆಗಿಂತ ಶ್ರೇಷ್ಟ" (Humaterian qualification is greater than Academic qualification).
  ಲೋಕರಾಜ್ ಜೈನರ ಸಂಪರ್ಕ ಸಂಖ್ಯೆ +91 73378 54916

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ