Skip to main content

Blog number 2060. ಎಪ್ಪತ್ತರ ದಶಕದಲ್ಲಿ ಆಗುಂಬೆ ಘಾಟಿ ಪ್ರಯಾಣದ ಅನುಭವಗಳು

#ಆಗುಂಬೆ_ಘಾಟಿ_ಪ್ರಯಾಣ

#ಎಪ್ಪತ್ತರ_ದಶಕದಲ್ಲಿ

#ನನ್ನ_ಅನುಭವ.

#ಪ್ರತಿಷ್ಟಿತರಿಗೆ_ಜಾತಿ_ಅಂತಸ್ತು_ಇದ್ದವರಿಗೆ_ಏಜೆಂಟರ_ಮರ್ಜಿಯವರಿಗೆ_ಪ್ರಥಮ_ಪ್ರಾಶಸ್ತ್ಯ_ಇತ್ತು

#ಆಗಿನ_ಆಗುಂಬೆ_ಘಾಟಿ_ಏಜೆಂಟರು_ಗ್ರಾಹಕ_ಸ್ನೇಹಿ_ಆಗಿರಲಿಲ್ಲ.

#ಆಗುಂಬೆ_ಘಾಟಿ_ಪ್ರಯಾಣ_ಕೆಟ್ಟ_ಅನುಭವ_ಆಗಿರುತ್ತಿತ್ತು_ಕೂಲಿ_ಕಾರ್ಮಿಕರಿಗೆ

#ಐವತ್ತು_ವರ್ಷದಲ್ಲಿ_ಸಂಪೂರ್ಣ_ಬದಲಾಗಿದೆ

#ಇದನ್ನು_ಈಗ_ಓದಿದವರಿಗೆ_ನಂಬಲು_ಸಾಧ್ಯವಿಲ್ಲ.

#ರಾಷ್ಟ್ರ_ಪ್ರಶಸ್ತಿ_ವಿಜೇತ_ಚೋಮನದುಡಿ_ಚಿತ್ರದಲ್ಲಿ_ಆ_ಕಾಲದ 

#ಆಗುಂಬೆ_ಘಾಟಿಯ__ಆಗಿನ_ಕಾಲದ_ಬಸ್_ಪ್ರಯಾಣದ_ದೃಶ್ಯವಿದೆ.


  1968-69 ರಲ್ಲಿ ನಮ್ಮ ಊರಿಂದ ನನ್ನ ತಂದೆ ತಾಯಿ ಜೊತೆ  ಬಿದನೂರು ನಗರದ ದೇವಗಂಗೆಗೆ ನನ್ನ ದೊಡ್ಡಮ್ಮನ ಮನೆಗೆ ಹೋಗಿ ಮರುದಿನ ಬೆಳಿಗ್ಗೆ ದೋಣಿಯಲ್ಲಿ ವಾಪಾಸು ನಗರ ಬಸ್ ನಿಲ್ದಾಣಕ್ಕೆ ತಲುಪಿ ಅಲ್ಲಿಂದ ಬಸ್ಸಿನಲ್ಲಿ ತೀರ್ಥಳ್ಳಿ ತಲುಪಿ ಅಲ್ಲಿಂದ ಇನ್ನೊಂದು ಬಸ್ಸಿನಲ್ಲಿ ಆಗುಂಬೆ ತಲುಪಿದ್ದೆವು ಅಲ್ಲಿಂದ ಆಗುಂಬೆ ಘಾಟಿಗೆ ಮೀಸಲಿಟ್ಟ ವಿಶೇಷ ವಿನ್ಯಾಸದ ಬಸ್ಸು ಅಲ್ಲ ವ್ಯಾನು ಅಲ್ಲ ಎಂಬಂತ ಆ ಕಾಲದ ವಾಹನದಲ್ಲಿ ಆಗುಂಬೆ ಘಾಟಿ ಇಳಿದು ಧರ್ಮಸ್ಥಳ ಹೋಗಿದ್ದು ನೆನಪು ಆಗ ನನ್ನ ವಯಸ್ಸು 4 ಮತ್ತು 5 ರ ಮಧ್ಯದ್ದು.
    ಆಗ ಶಿವಮೊಗ್ಗ ಜಿಲ್ಲೆಯವರು ಧರ್ಮಸ್ಥಳ ಸುಬ್ರಮಣ್ಯ ಹೋಗಲು ಈ ಮಾರ್ಗವನ್ನೆ ಅವಲಂಬಿಸಿದ್ದರು.
  ಆಗುಂಬೆ ಮೇಲೆ ಮತ್ತು ಕೆಳಗಿನ ಸೋಮೇಶ್ವರದಲ್ಲಿ ಕೊಂಕಣಿ ಮತ್ತು ತುಳು ಮಾತಾಡುವ ಗೌಡ ಸಾರಸ್ವತ ಬಸ್ ಏಜೆಂಟರದ್ದೇ ಮಾನಾಪಲ್ಲಿ ಆಗಿತ್ತು.
  ಚಾರ್ ಕೋಲ್ ಇಂಜಿನ್ ಕಾಲ ಮುಗಿದು ಪೆಟ್ರೋಲ್ ಡಿಸೇಲ್ ಇಂಜಿನ್ ಪ್ರಾರಂಭವಾಗಿತ್ತು ಆಗಿನ CKMS (ಸೆಂಟ್ರಲ್ ಕನಾ೯ಟಕ ಮೋಟಾರ್ ಸರ್ವಿಸ್) ಬಸ್ಸಿನ ಪೋಟೋ ಲಗತ್ತಿಸಿದೆ ಇಂತಹ ಬಸ್ಸುಗಳು ನಾಕಾರು ಆಗುಂಬೆ ಘಾಟಿಯ ಮೇಲಿಂದ ಪ್ರಯಾಣಿಕರನ್ನು ಘಾಟಿ ಕೆಳಗಿನ ಸೋಮೇಶ್ವರದಲ್ಲಿ ಇಳಿಸಿ ಅಲ್ಲಿಂದ ಘಟ್ಟ ಹತ್ತುವವರನ್ನ ಆಗುಂಬೆಗೆ ತಂದು ಬಿಡುವ ಕೆಲಸ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾಡುತ್ತಿದ್ದವು.
   ಮೊದಲೇ ಏಜೆಂಟರಿಂದ ಟಿಕೆಟ್ ಖರೀದಿಸಿ ಪ್ರಯಾಣದ ಸರತಿಗೆ ಕಾಯಬೇಕಾಗಿತ್ತು, ಆಗಿನ ಬಸ್ ಏಜೆಂಟರ ವರ್ತನೆ ಗ್ರಾಹಕ ಸ್ನೇಹಿ ಆಗಿರಲಿಲ್ಲ, ಒರಟು ಮಾತು ಮತ್ತು ನಡತೆ ಮುಗ್ದ ಪ್ರಯಾಣಿಕರಿಗೆ ಹಿಂಸೆ ಮತ್ತು ಅವಮಾನಗೊಳಿಸುತ್ತಿದ್ದರೂ ಅನಿವಾರ್ಯವಾಗಿ ಪ್ರಯಾಣಿಕರು ಅನುಭವಿಸಬೇಕಾಗಿತ್ತು.
  ಅರ್ದ ದಿನ ಆಗುಂಬೆ ಘಾಟಿ ಇಳಿಯಲು ಪ್ರಯಾಣಿಕರು ಕಾಯ ಬೇಕಾಗಿತ್ತು ಅದೇ ರೀತಿ ಘಾಟಿ ಹತ್ತುವವರು ಕೂಡ.    
    ಆ ದಿನಗಳಲ್ಲಿ ಘಟ್ಟ ಹತ್ತುವವರು ಇಳಿಯುವವರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಿದ್ದರು ಆದರೆ ಅವರನ್ನು ಸಾಗಾಣಿಕೆ ಮಾಡುವ ಬಸ್ಸುಗಳ ಸಂಖ್ಯೆ ಕಡಿಮೆ ಮತ್ತು ಏಕ ಮುಖ ಸಂಚಾರ ಒಂದು ಬಸ್ಸು ಆಗುಂಬೆಯಿಂದ ಘಾಟಿ ಇಳಿದ ಮೇಲೆ ಅಲ್ಲಿನ ಬಸ್ಸು ಆಗುಂಬೆ ಘಾಟಿ ಎರಬೇಕು ಆಗಿನ ರಸ್ತೆ ಅಷ್ಟು ಸಣ್ಣದು ಆಗಿತ್ತು.
   ಚೋಮನ ದುಡಿ ಸಿನಿಮಾದಲ್ಲಿ ಚೋಮನ ಮಕ್ಕಳು ಆಗುಂಬೆ ಘಾಟಿ ಇಂತಹ ಬಸ್ಸಿನಲ್ಲಿ ಹತ್ತುವ ದೃಶ್ಯವು ಇದೆ, ಕೂಲಿ ಕಾರ್ಮಿಕರ ಜೊತೆ ಇತರ ಪ್ರಯಾಣಿಕರು ಪ್ರಯಾಣಿಸಲು ಇಷ್ಟ ಪಡದ ಕಾಲ ಅಂದಿನದ್ದು.
   ಇದರ ಮಧ್ಯದಲ್ಲಿ ಪ್ರತಿಷ್ಟಿತರಿಗೆ - ಏಜೆಂಟರ ಮರ್ಜಿಗೆ ಸರತಿಗಾಗಿ ಕಾಯುವವರನ್ನ ಕಡೆಗಾಣಿಸಲಾಗುತ್ತಿತ್ತು ಅಲ್ಲಿ ಮೇಲ್ಜಾತಿ ಕೆಳಜಾತಿಗಳ ತಾರತಮ್ಯ, ಶ್ರೀಮಂತರು ಮತ್ತು ಬಡವರೆಂಬ ಅಂತಸ್ತುಗಳ ತಾರತಮ್ಯವೂ ಇತ್ತು.
   ಲಗೇಜುಗಳ ಜೊತೆ ಆಗುಂಬೆ ಪ್ರಯಾಣ ಪ್ರಾಯಾಸದ ಜಂಜಾಟದ ಪ್ರಯಾಣ ಆಗಿರುತ್ತಿತ್ತು.
  ಈಗ ಆದುನಿಕ ವಾಹನಗಳು ಮತ್ತು ವಿಸ್ತಾರವಾದ ಆಗುಂಬೆ ಘಾಟಿಯಲ್ಲಿ ಕೇವಲ 10 ನಿಮಿಷದಲ್ಲಿ ಆಗುಂಬೆ ಘಾಟಿ ಪ್ರಯಾಣ ಮುಗಿಯುತ್ತದೆ.
   ಕೇವಲ 50 ವರ್ಷದಲ್ಲಿ ಎಷ್ಟೆಲ್ಲ ಬದಲಾವಣೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ