Skip to main content

Blog number 2060. ಎಪ್ಪತ್ತರ ದಶಕದಲ್ಲಿ ಆಗುಂಬೆ ಘಾಟಿ ಪ್ರಯಾಣದ ಅನುಭವಗಳು

#ಆಗುಂಬೆ_ಘಾಟಿ_ಪ್ರಯಾಣ

#ಎಪ್ಪತ್ತರ_ದಶಕದಲ್ಲಿ

#ನನ್ನ_ಅನುಭವ.

#ಪ್ರತಿಷ್ಟಿತರಿಗೆ_ಜಾತಿ_ಅಂತಸ್ತು_ಇದ್ದವರಿಗೆ_ಏಜೆಂಟರ_ಮರ್ಜಿಯವರಿಗೆ_ಪ್ರಥಮ_ಪ್ರಾಶಸ್ತ್ಯ_ಇತ್ತು

#ಆಗಿನ_ಆಗುಂಬೆ_ಘಾಟಿ_ಏಜೆಂಟರು_ಗ್ರಾಹಕ_ಸ್ನೇಹಿ_ಆಗಿರಲಿಲ್ಲ.

#ಆಗುಂಬೆ_ಘಾಟಿ_ಪ್ರಯಾಣ_ಕೆಟ್ಟ_ಅನುಭವ_ಆಗಿರುತ್ತಿತ್ತು_ಕೂಲಿ_ಕಾರ್ಮಿಕರಿಗೆ

#ಐವತ್ತು_ವರ್ಷದಲ್ಲಿ_ಸಂಪೂರ್ಣ_ಬದಲಾಗಿದೆ

#ಇದನ್ನು_ಈಗ_ಓದಿದವರಿಗೆ_ನಂಬಲು_ಸಾಧ್ಯವಿಲ್ಲ.

#ರಾಷ್ಟ್ರ_ಪ್ರಶಸ್ತಿ_ವಿಜೇತ_ಚೋಮನದುಡಿ_ಚಿತ್ರದಲ್ಲಿ_ಆ_ಕಾಲದ 

#ಆಗುಂಬೆ_ಘಾಟಿಯ__ಆಗಿನ_ಕಾಲದ_ಬಸ್_ಪ್ರಯಾಣದ_ದೃಶ್ಯವಿದೆ.


  1968-69 ರಲ್ಲಿ ನಮ್ಮ ಊರಿಂದ ನನ್ನ ತಂದೆ ತಾಯಿ ಜೊತೆ  ಬಿದನೂರು ನಗರದ ದೇವಗಂಗೆಗೆ ನನ್ನ ದೊಡ್ಡಮ್ಮನ ಮನೆಗೆ ಹೋಗಿ ಮರುದಿನ ಬೆಳಿಗ್ಗೆ ದೋಣಿಯಲ್ಲಿ ವಾಪಾಸು ನಗರ ಬಸ್ ನಿಲ್ದಾಣಕ್ಕೆ ತಲುಪಿ ಅಲ್ಲಿಂದ ಬಸ್ಸಿನಲ್ಲಿ ತೀರ್ಥಳ್ಳಿ ತಲುಪಿ ಅಲ್ಲಿಂದ ಇನ್ನೊಂದು ಬಸ್ಸಿನಲ್ಲಿ ಆಗುಂಬೆ ತಲುಪಿದ್ದೆವು ಅಲ್ಲಿಂದ ಆಗುಂಬೆ ಘಾಟಿಗೆ ಮೀಸಲಿಟ್ಟ ವಿಶೇಷ ವಿನ್ಯಾಸದ ಬಸ್ಸು ಅಲ್ಲ ವ್ಯಾನು ಅಲ್ಲ ಎಂಬಂತ ಆ ಕಾಲದ ವಾಹನದಲ್ಲಿ ಆಗುಂಬೆ ಘಾಟಿ ಇಳಿದು ಧರ್ಮಸ್ಥಳ ಹೋಗಿದ್ದು ನೆನಪು ಆಗ ನನ್ನ ವಯಸ್ಸು 4 ಮತ್ತು 5 ರ ಮಧ್ಯದ್ದು.
    ಆಗ ಶಿವಮೊಗ್ಗ ಜಿಲ್ಲೆಯವರು ಧರ್ಮಸ್ಥಳ ಸುಬ್ರಮಣ್ಯ ಹೋಗಲು ಈ ಮಾರ್ಗವನ್ನೆ ಅವಲಂಬಿಸಿದ್ದರು.
  ಆಗುಂಬೆ ಮೇಲೆ ಮತ್ತು ಕೆಳಗಿನ ಸೋಮೇಶ್ವರದಲ್ಲಿ ಕೊಂಕಣಿ ಮತ್ತು ತುಳು ಮಾತಾಡುವ ಗೌಡ ಸಾರಸ್ವತ ಬಸ್ ಏಜೆಂಟರದ್ದೇ ಮಾನಾಪಲ್ಲಿ ಆಗಿತ್ತು.
  ಚಾರ್ ಕೋಲ್ ಇಂಜಿನ್ ಕಾಲ ಮುಗಿದು ಪೆಟ್ರೋಲ್ ಡಿಸೇಲ್ ಇಂಜಿನ್ ಪ್ರಾರಂಭವಾಗಿತ್ತು ಆಗಿನ CKMS (ಸೆಂಟ್ರಲ್ ಕನಾ೯ಟಕ ಮೋಟಾರ್ ಸರ್ವಿಸ್) ಬಸ್ಸಿನ ಪೋಟೋ ಲಗತ್ತಿಸಿದೆ ಇಂತಹ ಬಸ್ಸುಗಳು ನಾಕಾರು ಆಗುಂಬೆ ಘಾಟಿಯ ಮೇಲಿಂದ ಪ್ರಯಾಣಿಕರನ್ನು ಘಾಟಿ ಕೆಳಗಿನ ಸೋಮೇಶ್ವರದಲ್ಲಿ ಇಳಿಸಿ ಅಲ್ಲಿಂದ ಘಟ್ಟ ಹತ್ತುವವರನ್ನ ಆಗುಂಬೆಗೆ ತಂದು ಬಿಡುವ ಕೆಲಸ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾಡುತ್ತಿದ್ದವು.
   ಮೊದಲೇ ಏಜೆಂಟರಿಂದ ಟಿಕೆಟ್ ಖರೀದಿಸಿ ಪ್ರಯಾಣದ ಸರತಿಗೆ ಕಾಯಬೇಕಾಗಿತ್ತು, ಆಗಿನ ಬಸ್ ಏಜೆಂಟರ ವರ್ತನೆ ಗ್ರಾಹಕ ಸ್ನೇಹಿ ಆಗಿರಲಿಲ್ಲ, ಒರಟು ಮಾತು ಮತ್ತು ನಡತೆ ಮುಗ್ದ ಪ್ರಯಾಣಿಕರಿಗೆ ಹಿಂಸೆ ಮತ್ತು ಅವಮಾನಗೊಳಿಸುತ್ತಿದ್ದರೂ ಅನಿವಾರ್ಯವಾಗಿ ಪ್ರಯಾಣಿಕರು ಅನುಭವಿಸಬೇಕಾಗಿತ್ತು.
  ಅರ್ದ ದಿನ ಆಗುಂಬೆ ಘಾಟಿ ಇಳಿಯಲು ಪ್ರಯಾಣಿಕರು ಕಾಯ ಬೇಕಾಗಿತ್ತು ಅದೇ ರೀತಿ ಘಾಟಿ ಹತ್ತುವವರು ಕೂಡ.    
    ಆ ದಿನಗಳಲ್ಲಿ ಘಟ್ಟ ಹತ್ತುವವರು ಇಳಿಯುವವರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಿದ್ದರು ಆದರೆ ಅವರನ್ನು ಸಾಗಾಣಿಕೆ ಮಾಡುವ ಬಸ್ಸುಗಳ ಸಂಖ್ಯೆ ಕಡಿಮೆ ಮತ್ತು ಏಕ ಮುಖ ಸಂಚಾರ ಒಂದು ಬಸ್ಸು ಆಗುಂಬೆಯಿಂದ ಘಾಟಿ ಇಳಿದ ಮೇಲೆ ಅಲ್ಲಿನ ಬಸ್ಸು ಆಗುಂಬೆ ಘಾಟಿ ಎರಬೇಕು ಆಗಿನ ರಸ್ತೆ ಅಷ್ಟು ಸಣ್ಣದು ಆಗಿತ್ತು.
   ಚೋಮನ ದುಡಿ ಸಿನಿಮಾದಲ್ಲಿ ಚೋಮನ ಮಕ್ಕಳು ಆಗುಂಬೆ ಘಾಟಿ ಇಂತಹ ಬಸ್ಸಿನಲ್ಲಿ ಹತ್ತುವ ದೃಶ್ಯವು ಇದೆ, ಕೂಲಿ ಕಾರ್ಮಿಕರ ಜೊತೆ ಇತರ ಪ್ರಯಾಣಿಕರು ಪ್ರಯಾಣಿಸಲು ಇಷ್ಟ ಪಡದ ಕಾಲ ಅಂದಿನದ್ದು.
   ಇದರ ಮಧ್ಯದಲ್ಲಿ ಪ್ರತಿಷ್ಟಿತರಿಗೆ - ಏಜೆಂಟರ ಮರ್ಜಿಗೆ ಸರತಿಗಾಗಿ ಕಾಯುವವರನ್ನ ಕಡೆಗಾಣಿಸಲಾಗುತ್ತಿತ್ತು ಅಲ್ಲಿ ಮೇಲ್ಜಾತಿ ಕೆಳಜಾತಿಗಳ ತಾರತಮ್ಯ, ಶ್ರೀಮಂತರು ಮತ್ತು ಬಡವರೆಂಬ ಅಂತಸ್ತುಗಳ ತಾರತಮ್ಯವೂ ಇತ್ತು.
   ಲಗೇಜುಗಳ ಜೊತೆ ಆಗುಂಬೆ ಪ್ರಯಾಣ ಪ್ರಾಯಾಸದ ಜಂಜಾಟದ ಪ್ರಯಾಣ ಆಗಿರುತ್ತಿತ್ತು.
  ಈಗ ಆದುನಿಕ ವಾಹನಗಳು ಮತ್ತು ವಿಸ್ತಾರವಾದ ಆಗುಂಬೆ ಘಾಟಿಯಲ್ಲಿ ಕೇವಲ 10 ನಿಮಿಷದಲ್ಲಿ ಆಗುಂಬೆ ಘಾಟಿ ಪ್ರಯಾಣ ಮುಗಿಯುತ್ತದೆ.
   ಕೇವಲ 50 ವರ್ಷದಲ್ಲಿ ಎಷ್ಟೆಲ್ಲ ಬದಲಾವಣೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...