Skip to main content

Blog number 2042.ತೇಜಸ್ವಿ ಸ್ಕೂಟರ್ ಕಥೆ... ಒಂದು ಕಾಲದಲ್ಲಿ ಸ್ಕೂಟರ್ ಶ್ರೀಮಂತ ವರ್ಗದವರಿಗೆ ಮಾತ್ರ ವಾಹನ ಆಗಿತ್ತು.

#ಒಂದು_ಕಾಲದಲ್ಲಿ_ಶ್ರೀಮಂತರ_ವಾಹನ

#ಸ್ಕೂಟರ್_ಕಥೆಗಳು_ಅದರ_ಘನತೆ_ಇತ್ಯಾದಿ.

#ತೇಜಸ್ವಿ_ಅವರ_ಸ್ಕೂಟರ್_ಕಥೆಗಳು

#ಮೂಡಿಗೆರೆಯ_ತೇಜಸ್ವಿ_ಸ್ಕೂಟರ್_ಮೇಲೆ_ನಮ್ಮ_ಡಾಕ್ಟರ್_ಪ್ರೀತಮ್

   50 ವರ್ಷದ ಹಿಂದೆ ಭಾರತದಲ್ಲಿ ಶ್ರೀಮಂತರಿಗೆ ಮಾತ್ರ ಸ್ಕೂಟರ್ ಹೊಂದುವ ಸಾಮರ್ಥ್ಯ ಮತ್ತು ಸ್ಕೂಟರ್ ಲಕ್ಸುರಿ & ಕಂಪರ್ಟ್ ಎಂಬ ಮನಸ್ಥಿತಿ ಆಗಿತ್ತು ಈಗ . . .
 . . . 
    1970 ರ ದಶಕದಲ್ಲಿ ನಮ್ಮ ಊರಲ್ಲಿ ಸ್ಕೂಟರ್ ಹೊಂದಿದವರು ಮತ್ತು ಓಡಿಸುವವರು ಮೂರು ಮನೆಯವರು ಮಾತ್ರ ಒಬ್ಬರು ಆನಂದಪುರಂ ವಿಲೇಜ್ ಪಂಚಾಯತ್ ಅಧ್ಯಕ್ಷರಾಗಿದ್ದ ಬಾಲ ಗಂಗಾದರ ಗೌಡರು, ಇನ್ನೊಬ್ಬರು ಟಿಪ್ ಟಾಪ್ ಇಬ್ರಾಹಿಂ ಸಾಹೇಬರ ಕುಟುಂಬ ಮತ್ತು ಎಸ್.ಆರ್.ಎಸ್ ರೈಸ್ ಮಿಲ್ ಮಾಲಿಕರು ಮಾತ್ರ.
  ಜನ ಸಂಚಾರ ಮತ್ತು ವಾಹನ ಸಂಚಾರವೇ ಇಲ್ಲದ ಆ ಕಾಲದ ರಸ್ತೆಯ ಮೇಲೆ ಈ ಸ್ಕೂಟರ್ ಬಂದರೆ ನಿಂತು ತಿರುಗಿ ನೋಡದ ವ್ಯಕ್ತಿಯೇ ಇರುತ್ತಿರಲಿಲ್ಲ.
  ಸ್ಕೂಟರ್ ಆಡ೯ರ್ ಮಾಡಿ ಆರೇಳು ವರ್ಷ ಕಾಯಬೇಕು ಮತ್ತು ಸ್ಕೂಟರ್ ತಂದವರು ಹಾಗೇ ಮಾರಿದರೆ ಅರ್ಧಕ್ಕೂ ಹೆಚ್ಚು ಲಾಭಕ್ಕೆ ಖರೀದಿಸುವವರು ಇದ್ದಾರೆ, ಪಾರ್ಲಿಮೆಂಟ್ ಮೆಂಬರ್ ಅಥವ ಮಂತ್ರಿ ಮಹೋದಯರ ಶಿಪಾರಸ್ಸು ಇದ್ದರೆ ಬೇಗ ಸಿಗುವ ಸಾಧ್ಯತೆ ಬಗ್ಗೆ ಬಹು ಚಚೆ೯ ಆಗುತ್ತಿತ್ತು.
  ನಂತರ ಡಾಲರ್ ನಲ್ಲಿ (ವಿದೇಶದಲ್ಲಿ ಕೆಲಸದಲ್ಲಿದ್ದವರು) ಬುಕ್ ಮಾಡಿದರೆ ತಕ್ಷಣ ಸಿಗುವ ಕಾಲವೂ ಬಂತು.
  ನಂತರ ದೇಶದಲ್ಲಿ ಆಟೋ ಮೊಬೈಲ್ ನ ಮಾರಾಟ ಉತ್ಪಾದನೆಗಳು ಶೀಘ್ರ ಬದಲಾವಣೆಯಿಂದ ಇವತ್ತು ವಾರದ ಸಂತೆಯಲ್ಲೂ ರೈತರು ಬೆಳೆದು ಮಾರಾಟ ಮಾಡುವ ಕೊತ್ತುಂಬರಿ ಸೊಪ್ಪಿನಂತೆ ತರಹಾವಾರಿ ಸ್ಕೂಟರ್ ಬೈಕ್ ಗಳ ಪ್ರದರ್ಶನ - ಮಾರಾಟ ಮತ್ತು ಸ್ಥಳದಲ್ಲೇ ನಿಮ್ಮ ಹಳೇ ವಾಹನ ಬದಲಿಸಿ ಸಾಲದ ಕರಾರು ಮಾಡಿ ಹೊಸ ವಾಹನ ನೀಡುವ ಪದ್ಧತಿ ಬಂದಿದೆ.
  50 ವರ್ಷದ ಹಿಂದಿನ ಈ ಕಥೆ ಈಗಿನ ಜಮಾನದವರಿಗೆ ಹಾಸ್ಯಾಸ್ಪದ ಸಂಗತಿಯೇ.
  ಪೂಣ೯ ಚಂದ್ರ ತೇಜಸ್ವಿಯವರ ಸ್ಕೂಟರ್ ಕಥೆ ಇನ್ನೂ ರೋಚಕ, ಅದರ ದುರಸ್ತಿ ಅದರ ಹಿಂದಿನ ಸೀಟಿಲ್ಲದ ಕಥೆ ಹೀಗೆ ಸ್ಕೂಟರ್ ಗಳು ಈ ಸ್ಕೂಟಿಯ ರೂಪಾಂತರವಾಗಿ ರಸ್ತೆಯಲ್ಲಿ ನೋಡಿದಾಗೆಲ್ಲ 50 ವರ್ಷ ಹಿಂದಿನ ಬಜಾಜ್,ವೆಸ್ಪಾ ಮತ್ತು ಲ್ಯಾ೦ಬಲೆಟಾ ಸ್ಕೂಟರ್ ನ ಹವಾ ನೆನಪಾಗುತ್ತದೆ.
  ತೇಜಸ್ವಿ ಸ್ಕೂಟರ್ ಪಡೆದಷ್ಟು ಪ್ರಸಿದ್ಧಿ ಬೇರಾವ ಸ್ಕೂಟರ್ ಕೂಡ ಪಡೆದಿಲ್ಲ,  ತೇಜಸ್ವಿ ಸಾಹಿತ್ಯ ಓದಿದವರಿಗೆ ಅದೆಷ್ಟು ಕ್ರೇಜ್ ಅಂದರೆ ನಮ್ಮ ಪ್ರೀತಿಯ ಶಿವಮೊಗ್ಗದ ಡಯಾಬಿಟಿಕ್ ರಿವರ್ಸಲ್ ಖ್ಯಾತಿಯ ಡಾಕ್ಟರ್ ಪ್ರೀತಂ ತೇಜಸ್ವಿ ಸಾಹಿತ್ಯ ಆಸಕ್ತರು ಅವರು ಮುಡಿಗೆರೆಗೆ ಹೋಗಿ ತೇಜಸ್ವಿ ಸ್ಕೂಟರ್ ಮೇಲೆ ಕುಳಿತು ಪೋಟೊ ತೆಗಿಸಿ ಕೊಂಡಿದ್ದಾರೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...