Skip to main content

Blog number 2078. ಶಿವಮೊಗ್ಗ ಜಿಲ್ಲೆಯ ಉದಯೋನ್ಮುಖ ಇತಿಹಾಸ ಸಂಶೋದಕರುಗಳ ಸರಣಿ ಭಾಗ -1.

#ಭಾಗ_1.

#ಶಿವಮೊಗ್ಗ_ಜಿಲ್ಲೆಯ_ಉದಯೋನ್ಮುಖ_ಇತಿಹಾಸ_ಸಂಶೋದಕರು.

#ನವೀನ್_ಕುಮಾರ್_ಪ್ರಜಾವಾಣಿ_ವರದಿಗಾರರು_ಶಿರಾಳಕೊಪ್ಪ.

   ನವೀನ್ ಕುಮಾರ್ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪದ ಪ್ರಜಾವಾಣಿ ವರದಿಗಾರರು.

https://youtu.be/61OtTebaWCI?feature=shared

   ಸಾಮಾನ್ಯ ಯುವಕ ತನ್ನ ಊರಿನ ಇತಿಹಾಸ ಓದಿ ಸ್ಥಳಿಯ ಮಾಹಿತಿ ಪಡೆದು ಅಲ್ಲಿನ ಸ್ಮಾರಕಗಳ ಸಂರಕ್ಷಣೆಗಾಗಿ ಮತ್ತು ಪುರಾತತ್ವ ಇಲಾಖೆಯ ಹೆಚ್ಚಿನ ಸಂಶೋದನೆ, ಉತ್ಕನನ ಆಗಲಿ ಎಂಬ ಆಶಾ ಬಾವನೆಯಿಂದ ಸ್ಥಳಿಯ ಸಮಾನ ಮನಸ್ಕ ಗೆಳೆಯರ ಜೊತೆ #ತಾಳಗುಂದ_ಉತ್ಸವ  ಆಚರಿಸಿ ಅಲ್ಲಿನ ಸುದ್ದಿಗಳನ್ನು ರಾಜ್ಯದ ಪ್ರಜಾವಾಣಿ ಪತ್ರಿಕೆಗಳಲ್ಲಿ ಸರಣಿ ಲೇಖನವಾಗಿ ಬರೆದು ಆರ್ಕಾಲಾಜಿಕಲ್ ಸರ್ವೆ ಇಲಾಖೆಯಿಂದ ಉತ್ಕನನ ಮಾಡುವಂತೆ ಮಾಡಿದ್ದು ಸಾಮಾನ್ಯ ಕೆಲಸವಲ್ಲ.
  ಇದರಿಂದ ಬಂದ ಪಲಿತಾಂಶ ಕನ್ನಡದ ಮೊದಲ ಶಾಸನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಸಮೀಪದ ತಾಳಗುಂದ ಶಾಸನ ಎಂಬುದು ಜಗಜ್ಜಾಹೀರ ಆಯಿತು.
  ಕದಂಬ ಸಾಮ್ರಾಜ್ಯ ಕಟ್ಟಿದ ಕನ್ನಡದ ರಾಜ ಈ ಭಾಗದ ಹವ್ಯಕ ಬ್ರಾಹ್ಮಣರ ರಾಜ ಮಯೂರ ವರ್ಮ ಕೇವಲ ರಾಜ್ಯಬಾರ ಮಾತ್ರ ಮಾಡಲಿಲ್ಲ ಇಲ್ಲಿ ನಾಲಂದ ವಿಶ್ವವಿದ್ಯಾಲಯಕ್ಕೆ ಸರಿಸಮನಾದ ಕದಂಬ ವಿಶ್ವವಿಧ್ಯಾಲಯ ಕೂಡ ಸ್ಥಾಪಿಸಿದ್ದ.
 ನಾಲಂದ ವಿಶ್ವವಿದ್ಯಾಲಯ ನವೀಕರಣ ಮಾಡಿದ ರಾಜನ ಪತ್ನಿ ಕದಂಬರ ಪುತ್ರಿ ಹಾಗಾದರೆ ನಾಲಂದ ವಿಶ್ವವಿದ್ಯಾಲಯಕ್ಕೂ ಮತ್ತು ಕದಂಬ ವಿಶ್ವವಿದ್ಯಾಲಯಕ್ಕೆ ಸಂಬಂದ ಇತ್ತೆ?, ...
  ಶಿಕಾರಿಪುರದ ಇತಿಹಾಸ ಉತ್ಕನನ ಮಾಡಿದರೆ ಇಡೀ ಭಾರತದ ಇತಿಹಾಸ ಅನಾವರಣ ಆಗಲಿದೆ ಎಂದು ಬರೆದ ಶಿಲಾಶಾಸನಗಳ ಪಿತಾಮಹಾ ಹಾಗೂ ಶಿಲಾಶಾಸನಗಳ ಅಶ್ವಿನಿ ದೇವತೇ ಎಂದೇ ಗೌರವಿಸಿ ಕರೆಯುವ ಮ್ಮೆಸೂರು ಸರ್ಕಾರದ ಪುರಾತತ್ವ ಇಲಾಖೆ ನಿರ್ದೇಶಕ #ಎಡ್ವರ್ಡ್_ಲೂಯಿಸ್_ರೈಸ್ ಅವರ ಮಾತು ಇತಿಹಾಸ ಸಂಶೋದಕರು ಗಮನಿಸಬೇಕು.
  ನನ್ನ ಘೋಷಣೆ ಆಗಿರುವ "ಪ್ರತಿ ಊರಿಗೂ ಒಂದು ಇತಿಹಾಸ ಇದೆ ಆ ಊರುಗಳಲ್ಲಿ ಗುಡಿ ಗುಂಡಾರಗಳು - ಕೊಟೆ - ಕೊತ್ತಳಗಳು ಇರುತ್ತದೆ ಊರಲ್ಲಿ ಬಿದ್ದು ಮಣ್ಣಾಗಿರುವ, ಚರಂಡಿ ಕಲ್ಲಾಗಿರುವ ಬಟ್ಟೆ ತೊಳೆಯುವ ಕಲ್ಲಾಗಿರುವ ಶಿಲಾಶಾಸನಗಳು ಇರುತ್ತದೆ ಅದನ್ನು ಸ್ಥಳಿಯರೇ ಸಂರಕ್ಷಿಸಬೇಕು ಅದರ ಇತಿಹಾಸ ಓದಿ ಊರಿನ ಜನಪದದ ಮಾಹಿತಿ ಕೆದಕಿ ದಾಖಲಿಸಿ ಮುಂದಿನ ತಲೆಮಾರಿಗೆ ತಿಳಿಸಬೇಕು" ಎಂಬುದಕ್ಕೆ ಶಿರಾಳಕೊಪ್ಪದ ಪ್ರಜಾವಾಣಿ ದಿನ ಪತ್ರಿಕೆ ಯುವ ವರದಿಗಾರ ನವೀನ್ ಕುಮಾರ್  ಸಾದಕರಾಗಿ ನಮ್ಮೆದರು ಇದ್ದಾರೆ.
  ಅವರನ್ನ ಬೇಟಿ ಮಾಡಬೇಕೆಂದಿದ್ದೆ ಆದರೆ ನಿನ್ನೆ ಅವರ ವೈಯಕ್ತಿಕ ಕೆಲಸದ ಮೇಲೆ ಆನಂದಪುರಂಗೆ ಬಂದಾಗ ನಮ್ಮಿಬ್ಬರ ಬೇಟಿ ಸಾಧ್ಯವಾಯಿತು.
  ಅವರು 20 ವರ್ಷದ ಹಿಂದೆಯೇ ನನ್ನ ಬೇಟಿ ಮಾಡುವ ಅಭಿಲಾಷೆ ಹೊಂದಿದ್ದರಂತೆ ಮತ್ತು ನನ್ನ ಎಲ್ಲಾ ಲೇಖನಗಳ ಓದುವವರು ಎಂದು ತಿಳಿಸಿದಾಗ ಆಶ್ಚರ್ಯವಾಯಿತು.
 ನಾನು ದಾಖಲಿಸಿದ ಅವರ ಯೂಟ್ಯೂಬ್ ಸಂದರ್ಶನದ ಕೆಲ ಕಂತುಗಳು ಇತಿಹಾಸ ಆಸಕ್ತರಿಗಾಗಿ ಪ್ರಕಟವಾಗಲಿದೆ.
  ಶಿವಮೊಗ್ಗ ಜಿಲ್ಲೆಯ ಇಂತಹ ಎಲೆ ಮರೆಯ ಕಾಯಿಯಂತ ಇತಿಹಾಸ ಸಂಶೋದಕರಿಗೆ ಶಿವಮೊಗ್ಗ ಜಿಲ್ಲೆಯ ನಾಡು-ನುಡಿ-ಜಲದ ಬಗ್ಗೆ ಅಭಿಮಾನ ಹೊಂದಿದಂತವರು ಹೆಚ್ಚು ಹೆಚ್ಚು ಬೆಂಬಲಿಸಬೇಕೆಂದು ವಿನಂತಿಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...