Skip to main content

Blog number 2043. ಕಾಳು ಮೆಣಸಿನ ರಾಣಿ ಚೆನ್ನಬೈರಾದೇವಿ ಅಷ್ಟೆಲ್ಲ ಬೆಳ್ಳಿ ಸಂಗ್ರಹಿಸಿದ್ದು ಹೇಗೆ? ಗೇರುಸೊಪ್ಪೆ ಹೆಸರು ಬರಲು ಕಾರಣ? ಡಿಜಿಟಲ್ ಮಾಧ್ಯಮದ ಸೀರಿಲ್ ನಲ್ಲಿ ನಮ್ಮ ತಾಲ್ಲೂಕಿನ ಸಂಶೋದಕ ಚೆನ್ನಬೈರಾದೇವಿ ವಂಶಸ್ಥರಾದ ಲೋಕರಾಜ್ ಜೈನರು ಸ್ವಾರಸ್ಯಕರವಾದ ಇತಿಹಾಸದ ಕಥೆ ವಿವರಿಸಿದ್ದಾರೆ.https://www.facebook.com/share/v/wCDTCNJxGnQF9CKj/?mibextid=qi2Omg

#ನಮ್ಮ_ಸಾಗರ_ತಾಲ್ಲೂಕಿನ_ಕಾನೂರು_ಕೋಟೆ_ಒಡತಿ

#ಗೇರುಸೊಪ್ಪೆಯ_ಜೈನ_ರಾಣಿ

#ರಾಣಿ_ಚೆನ್ನಾಬೈರಾದೇವಿ

#ಹದಿನಾರು_ದೇಶಗಳೊಂದಿಗೆ_ನೇರವಾಗಿ

#ಮುವತ್ತು_ದೇಶಗಳೊಡನೆ_ಪರೋಕ್ಷ_ಕಾಳುಮೆಣಸಿನ_ರಪ್ತು_ವ್ಯಾಪಾರ

#ಯುರೋಪಿನಿಂದ_ಬೆಳ್ಳಿ_ತಂದು_ಕಾಳುಮೆಣಸು_ವಿನಿಮಯ

#ಕಾಳುಮೆಣಸು_ಒಂದು_ಕಾಲದ_ಬಂಗಾರ .

   ಗೇರು ಬೆಳೆ ಪೋರ್ಚುಗೀಸ್ ರಿಂದ ಭಾರತಕ್ಕೆ ಪರಿಚಯವಾಯಿತು ಅದಕ್ಕಿಂತ ಮೊದಲು ಭಾರತದ ಪಶ್ಚಿಮ ಘಟ್ಟದ ಗುಡ್ಡೇ ಗೇರು ಪ್ರಸಿದ್ಧಿ ಪಡೆದಿತ್ತು ಆ ಗುಡ್ಡೇ ಗೇರು ಸಮೃದ್ಧವಾಗಿದ್ದರಿಂದಲೇ ಈ ಪ್ರದೇಶಕ್ಕೆ #ಗೇರುಸೊಪ್ಪೆ ಎಂಬ ಹೆಸರಾಗಲು ಕಾರಣ.
    ಶಿವಮೊಗ್ಗ ಜಿಲ್ಲೆಯ ಹೊಂಬುಜದಿಂದ ಬಂದ ಇಬ್ಬರು ಅಪ್ರತಿಮ ಸಾಹಸಿಗಳಿಂದ ಗೇರುಸೊಪ್ಪೆ ಸಾಮ್ರಾಜ್ಯವಾಯಿತು.
  ಕಾಳುಮೆಣಸಿಗೆ ಬ್ರಾಂಡ್ ವ್ಯಾಲ್ಯೂ ತಂದು 16 ದೇಶಗಳಿಗೆ ನೇರವಾಗಿ ರಪ್ತು ಮಾಡಿದ ಪರೋಕ್ಷವಾಗಿ 30 ಕ್ಕೂ ಹೆಚ್ಚು ರಾಷ್ಟಗಳೊಂದಿಗೆ ಕಾಳು ಮೆಣಸು ವ್ಯವಹಾರ ಮಾಡಿದ ರಾಣಿ ಚೆನ್ನಬೈರಾದೇವಿ ಭಾರತದ ಮೊದಲ EXPORTER ಎನ್ನಬಹುದು.
  ವೈಟ್ ಪೆಪ್ಪರ್ (ಬೋಳು ಮೆಣಸು) ಗೆ ಬೇಡಿಕೆ ಬಂದಾಗ ಗೇರುಸೊಪ್ಪೆಯ ಪ್ರದೇಶದಲ್ಲಿ ಕಾಳುಮೆಣಸು ನೀರಲ್ಲಿ ನೆನಸಿ ಸಂಸ್ಕರಣೆ ಮಾಡಲು ಸಾವಿರಾರು ಬಾವಿಗಳನ್ನು ನಿರ್ಮಿಸಿದ್ದರು ...
  ಎಸ್.ಎಸ್.ಗೇರುಸೊಪ್ಪೆ ಎಂಬ ಬ್ರಿಟೀಶರ ಹಡಗು ಬೆಳ್ಳಿ ತುಂಬಿಕೊಂಡು ಹೋಗುವಾಗ ಜರ್ಮನ್ ದೇಶದ ಸಬ್ ಮೆರೀನ್ ಉಡಾಯಿಸಿದ ಕ್ಷಿಪಣಿಯಿಂದ ಮುಳುಗಿತು ಅದರಿಂದ ನೂರಾರು ಟನ್ ಬೆಳ್ಳಿಯ ಬಾರುಗಳನ್ನು ಸಮುದ್ರದ ನಿಧಿ ಶೋದಕ ಸಂಸ್ಥೆ ತೆಗೆದ ಸುದ್ದಿಯಿಂದ ಕಾಳುಮೆಣಸಿನ ರಾಣಿ ಅಷ್ಟೆಲ್ಲಾ ಬೆಳ್ಳಿಗಟ್ಟಿ ಪಡೆದಿದ್ದು ಎಲ್ಲಿಂದ ಅಂದರೆ...
  ಯುರೋಪಿನ ಬೆಳ್ಳಿ ಪಡೆದು ಕಾಳು ಮೆಣಸು ವಿನಿಮಯ ಮಾಡುತ್ತಿದ್ದದ್ದೇ ಕಾರಣ.
  ನಮ್ಮ ತಾಲ್ಲೂಕಿನ ಇತಿಹಾಸ ಸಂಶೋದಕ ಲೋಕರಾಜ ಜೈನರು #ಡಿಜಿಟಲ್_ಮಾಧ್ಯಮ ಕಂತು - ಕಂತುಗಳಾಗಿ ತೋರಿಸುತ್ತಿರುವ ಕಾಳುಮೆಣಸಿನ ರಾಣಿ ಚೆನ್ನಬೈರಾದೇವಿ ಇತಿಹಾಸದಲ್ಲಿ ವಿವರಿಸಿದ್ದಾರೆ.
   ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ
https://www.facebook.com/share/v/wCDTCNJxGnQF9CKj/?mibextid=qi2Omg

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...