Skip to main content

2065. ಸಾಗರ ತಾಲೂಕಿನ ಬೀಮೇಶ್ವರದ ಇತಿಹಾಸ ನೋಡಿ

#ಶಿವಮೊಗ್ಗ_ಜಿಲ್ಲೆ_ಮತ್ತು_ಭಟ್ಕಳ_ಅಂಚಿನ_ದಟ್ಟ_ಅರಣ್ಯದ_ಕಲ್ಲು_ಬೆಟ್ಟದ_ಮೇಲಿನ

#ಬೀಮೇಶ್ವರ_ದೇವಸ್ಥಾನದ_ಇತಿಹಾಸ_ನಮಗೆ_ಗೊತ್ತಿಲ್ಲ

#ನಾಗವಳ್ಳಿಯ_ದೇವಗಾರು_ಎಂಬ_ಹಳ್ಳಿಗೆ_1998ರಲ್ಲಿ_ಹೋಗುವಾಗ

#ಕೋಗಾರಿನಲ್ಲಿ_ಬಂಡುಮನೆ_ಚಿದಂಬರ_ರಾಯರು_ಬೀಮೇಶ್ವರ_ಜಾತ್ರೆ_ಆಹ್ವಾನ_ಪತ್ರಿಕೆ_ನೀಡಿದ್ದರು

#ಶಿವರಾತ್ರಿ_ಜಾತ್ರೆಗೆ_ಕೆಲವು_ದಿನದ_ಮೊದಲೇ_ಈ_ಮಾಗ೯ರಲ್ಲಿದ್ದರಿಂದ_ಮರುದಿನ

#ಬೀಮೇಶ್ವರ_ದರ್ಶನ_ಮಾಡಿ_ತುಮರಿಗೆ_ಹೋಗುವುದೆಂದು_ತೀರ್ಮಾನಿಸಿದ್ದೆ.

https://youtu.be/UG0WD0492Tw?feature=shared


   ಈ ಮಾರ್ಗದಲ್ಲಿ 1985 ರಿಂದ ಸಂಚರಿಸುತ್ತಿದ್ದರೂ ಬೀಮೇಶ್ವರ ದೇವಾಲಯದ ಬಗ್ಗೆ ಅಲ್ಪ ಸ್ವಲ್ಪ ಮಾಹಿತಿ ಇದ್ದರೂ 1998ರವರೆಗೆ ಅಲ್ಲಿಗೆ ನಾನು ಹೋಗಿರಲಿಲ್ಲ ಕಾರಣ ದಟ್ಟ ಅರಣ್ಯ ವಿಪರೀತ ಮಳೆ ಮತ್ತು ರಸ್ತೆ ಸರಿ ಇಲ್ಲ ಎಂಬ ಕಾರಣ ಹಾಗೂ ಸಮಯ.
   1998ರಲ್ಲಿ ಸಾಗರ ತಾಲೂಕಿನ ಕೊನೆಯ ಊರಾದ ನಾಗವಳ್ಳಿಗೆ ಹೋಗಿ ಅಲ್ಲಿಂದ ಬಲಕ್ಕೆ ತಿರುಗಿ ದೇವಗಾರು ಎಂಬ ಹಳ್ಳಿಗೆ ಹೋಗುವ ಮಾರ್ಗದಲ್ಲಿ ಕೋಗಾರು ವೃತ್ತದಲ್ಲಿ ಬೀಮೇಶ್ವರ ದೇವಾಲಯದ ದರ್ಮದರ್ಶಿಗಳಾದ ಬಂಡು ಮನೆ ಚಿದಂಬರ ರಾಯರು ಮತ್ತು ಸಮಿತಿಯವರ ಭೇಟಿ ಆಗಿತ್ತು.
  ಅವರು ಆ ವರ್ಷದ ಶಿವರಾತ್ರಿಯಂದು ಭೀಮೇಶ್ವರ ಜಾತ್ರೆಯ ಆಹ್ವಾನ ಪತ್ರಿಕೆ ನೀಡಿದ್ದರು ಬಹುಶಃ ಅದು ಜಾತ್ರೆ ಪ್ರಾರಂಬಿಸಿದ ಮೊದಲ ವರ್ಷವೊ ಏನೊ ಮರೆತಿದ್ದೇನೆ ಅವರು ಅಲ್ಲಿಗೆ ರಸ್ತೆ ಸರಿ ಮಾಡಿಸಿದ ವಿಚಾರ ತಿಳಿಸಿ ಸಾಧ್ಯವಾದರೆ ಭೀಮೇಶ್ವರ ದೇವಾಲಯಕ್ಕೆ ಹೋಗಿ ಬನ್ನಿ ಅಂದಿದ್ದರು.
   ಅವರ ಆಹ್ವಾನದಂತೆ ಮರುದಿನ ಬೆಳಿಗ್ಗೆ ಉಪಹಾರವನ್ನು ತುಮರಿಯಲ್ಲಿ ಮಾಡುವ ತೀಮಾ೯ನದಿಂದ ಭೀಮೇಶ್ವರಕ್ಕೆ ನಮ್ಮ ವಾಹನ ತಿರುಗಿಸಿ ಅರ್ದ ಕಿಲೋ ಮೀಟರ್ ಸಾಗಿದಾಗ ಹೊಸದಾಗಿ ಹಾಕಿದ ಮಣ್ಣಿನ ರಸ್ತೆಯಲ್ಲಿ ನಮ್ಮ ವಾಹನ ಜಾರಿ ಚರಂಡಿಯಲ್ಲಿ ಚಕ್ರಗಳು ಹುಗಿದು ನಿಂತಿತು.
  ನಂತರ ಸತತ ಎರಡು ಗಂಟೆ ದೂಡಿ ಎಳೆದು ವಾಹನ ಕೋಗಾರ್ ನಾಗುವಳ್ಳಿ ರಸ್ತೆಗೆ ತಂದು ನಿಲ್ಲಿಸುವಾಗ ನಾವೆಲ್ಲ ಬೆವರು ದೂಳಿನಿಂದ ಕಾಡು ಮನುಷ್ಯರಾಗಿದ್ದೆವು.
  ಹಿಡಿದ ಕೆಲಸ ಬಿಡದ ತ್ರಿವಿಕ್ರಮರಂತೆ ಬಾಯಾರಿಕೆ ಹಸಿವಿನಿಂದ ಬಳಲುತ್ತಿದ್ದರೂ ಭೀಮೇಶ್ವರ ತಲುಪಿ ಅಲ್ಲಿನ ಜಲಪಾತದಲ್ಲಿ ಮತ್ತೊಮ್ಮೆ ಮನಸಾ ಇಚ್ಚೆಯಿಂದ ಜಲಕ್ರೀಡೆ ಆಡಿ ಹೊಟ್ಟೆ ತುಂಬಾ ನೀರು ಕುಡಿದು ದೇವರ ದರ್ಶನ ಮಾಡಿದ್ದೆವು ಅಲ್ಲಿ ಇದ್ದ ಏಕೈಕ ಅರ್ಚಕರು ನಮ್ಮ ಕಷ್ಟ ನೋಡಿ ಅವರಿಗಾಗಿ ತಂದಿಟ್ಟುಕೊಂಡ ಅವಲಕ್ಕಿ ಬೆಲ್ಲ ನಮಗೆ ಅವತ್ತು ಪರಮಾನ್ನ ಆಗಿತ್ತು.
   ಇವತ್ತಿನವರೆಗೆ ಮಹಾಭಾರತದಲ್ಲಿ ವನವಾಸದಲ್ಲಿ ಭೀಮ ಕಟ್ಟಿದ ದೇವಸ್ಥಾನ #ಭೀಮೇಶ್ವರ ಅಂತನೇ ಭಾವಿಸಿದ್ದೆ....
   ಇವತ್ತು #ಡಿಜಿಟಲ್_ಮಾಧ್ಯಮ_ಕನ್ನಡ_ಯೂಟ್ಯೂಬ್ ನಲ್ಲಿ ನಮ್ಮ ತಾಲ್ಲೂಕಿನ ಇತಿಹಾಸ ಸಂಶೋದಕ #ಲೋಕರಾಜ್_ಜೈನರು ಈ ದೇವಾಲಯದ ಬಗ್ಗೆ ಅದರ ನಿರ್ಮಾಣದ ಬಗ್ಗೆ ಮತ್ತು ಅಲ್ಲಿನ ನಂದಿಯ ಕಾಲಬುಡದಲ್ಲಿರುವ ಮೈಸೂರು ಅರಸರ ಶಾಸನದ ಬಗ್ಗೆ ಮಾಹಿತಿ ನೀಡಿದ್ದಾರೆ ನೋಡಿ.
.   ನನ್ನ ಭೀಮೇಶ್ವರದ ದೇವರ ಮೊದಲ ಯಾತ್ರೆಯ ಆ ದಿನ ಪಟ್ಟ ಕಷ್ಟ ನನ್ನ ನೆನಪಿನಲ್ಲಿ ಅಚ್ಚಳಿಯದೇ ಉಳಿದಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ