Skip to main content

2065. ಸಾಗರ ತಾಲೂಕಿನ ಬೀಮೇಶ್ವರದ ಇತಿಹಾಸ ನೋಡಿ

#ಶಿವಮೊಗ್ಗ_ಜಿಲ್ಲೆ_ಮತ್ತು_ಭಟ್ಕಳ_ಅಂಚಿನ_ದಟ್ಟ_ಅರಣ್ಯದ_ಕಲ್ಲು_ಬೆಟ್ಟದ_ಮೇಲಿನ

#ಬೀಮೇಶ್ವರ_ದೇವಸ್ಥಾನದ_ಇತಿಹಾಸ_ನಮಗೆ_ಗೊತ್ತಿಲ್ಲ

#ನಾಗವಳ್ಳಿಯ_ದೇವಗಾರು_ಎಂಬ_ಹಳ್ಳಿಗೆ_1998ರಲ್ಲಿ_ಹೋಗುವಾಗ

#ಕೋಗಾರಿನಲ್ಲಿ_ಬಂಡುಮನೆ_ಚಿದಂಬರ_ರಾಯರು_ಬೀಮೇಶ್ವರ_ಜಾತ್ರೆ_ಆಹ್ವಾನ_ಪತ್ರಿಕೆ_ನೀಡಿದ್ದರು

#ಶಿವರಾತ್ರಿ_ಜಾತ್ರೆಗೆ_ಕೆಲವು_ದಿನದ_ಮೊದಲೇ_ಈ_ಮಾಗ೯ರಲ್ಲಿದ್ದರಿಂದ_ಮರುದಿನ

#ಬೀಮೇಶ್ವರ_ದರ್ಶನ_ಮಾಡಿ_ತುಮರಿಗೆ_ಹೋಗುವುದೆಂದು_ತೀರ್ಮಾನಿಸಿದ್ದೆ.

https://youtu.be/UG0WD0492Tw?feature=shared


   ಈ ಮಾರ್ಗದಲ್ಲಿ 1985 ರಿಂದ ಸಂಚರಿಸುತ್ತಿದ್ದರೂ ಬೀಮೇಶ್ವರ ದೇವಾಲಯದ ಬಗ್ಗೆ ಅಲ್ಪ ಸ್ವಲ್ಪ ಮಾಹಿತಿ ಇದ್ದರೂ 1998ರವರೆಗೆ ಅಲ್ಲಿಗೆ ನಾನು ಹೋಗಿರಲಿಲ್ಲ ಕಾರಣ ದಟ್ಟ ಅರಣ್ಯ ವಿಪರೀತ ಮಳೆ ಮತ್ತು ರಸ್ತೆ ಸರಿ ಇಲ್ಲ ಎಂಬ ಕಾರಣ ಹಾಗೂ ಸಮಯ.
   1998ರಲ್ಲಿ ಸಾಗರ ತಾಲೂಕಿನ ಕೊನೆಯ ಊರಾದ ನಾಗವಳ್ಳಿಗೆ ಹೋಗಿ ಅಲ್ಲಿಂದ ಬಲಕ್ಕೆ ತಿರುಗಿ ದೇವಗಾರು ಎಂಬ ಹಳ್ಳಿಗೆ ಹೋಗುವ ಮಾರ್ಗದಲ್ಲಿ ಕೋಗಾರು ವೃತ್ತದಲ್ಲಿ ಬೀಮೇಶ್ವರ ದೇವಾಲಯದ ದರ್ಮದರ್ಶಿಗಳಾದ ಬಂಡು ಮನೆ ಚಿದಂಬರ ರಾಯರು ಮತ್ತು ಸಮಿತಿಯವರ ಭೇಟಿ ಆಗಿತ್ತು.
  ಅವರು ಆ ವರ್ಷದ ಶಿವರಾತ್ರಿಯಂದು ಭೀಮೇಶ್ವರ ಜಾತ್ರೆಯ ಆಹ್ವಾನ ಪತ್ರಿಕೆ ನೀಡಿದ್ದರು ಬಹುಶಃ ಅದು ಜಾತ್ರೆ ಪ್ರಾರಂಬಿಸಿದ ಮೊದಲ ವರ್ಷವೊ ಏನೊ ಮರೆತಿದ್ದೇನೆ ಅವರು ಅಲ್ಲಿಗೆ ರಸ್ತೆ ಸರಿ ಮಾಡಿಸಿದ ವಿಚಾರ ತಿಳಿಸಿ ಸಾಧ್ಯವಾದರೆ ಭೀಮೇಶ್ವರ ದೇವಾಲಯಕ್ಕೆ ಹೋಗಿ ಬನ್ನಿ ಅಂದಿದ್ದರು.
   ಅವರ ಆಹ್ವಾನದಂತೆ ಮರುದಿನ ಬೆಳಿಗ್ಗೆ ಉಪಹಾರವನ್ನು ತುಮರಿಯಲ್ಲಿ ಮಾಡುವ ತೀಮಾ೯ನದಿಂದ ಭೀಮೇಶ್ವರಕ್ಕೆ ನಮ್ಮ ವಾಹನ ತಿರುಗಿಸಿ ಅರ್ದ ಕಿಲೋ ಮೀಟರ್ ಸಾಗಿದಾಗ ಹೊಸದಾಗಿ ಹಾಕಿದ ಮಣ್ಣಿನ ರಸ್ತೆಯಲ್ಲಿ ನಮ್ಮ ವಾಹನ ಜಾರಿ ಚರಂಡಿಯಲ್ಲಿ ಚಕ್ರಗಳು ಹುಗಿದು ನಿಂತಿತು.
  ನಂತರ ಸತತ ಎರಡು ಗಂಟೆ ದೂಡಿ ಎಳೆದು ವಾಹನ ಕೋಗಾರ್ ನಾಗುವಳ್ಳಿ ರಸ್ತೆಗೆ ತಂದು ನಿಲ್ಲಿಸುವಾಗ ನಾವೆಲ್ಲ ಬೆವರು ದೂಳಿನಿಂದ ಕಾಡು ಮನುಷ್ಯರಾಗಿದ್ದೆವು.
  ಹಿಡಿದ ಕೆಲಸ ಬಿಡದ ತ್ರಿವಿಕ್ರಮರಂತೆ ಬಾಯಾರಿಕೆ ಹಸಿವಿನಿಂದ ಬಳಲುತ್ತಿದ್ದರೂ ಭೀಮೇಶ್ವರ ತಲುಪಿ ಅಲ್ಲಿನ ಜಲಪಾತದಲ್ಲಿ ಮತ್ತೊಮ್ಮೆ ಮನಸಾ ಇಚ್ಚೆಯಿಂದ ಜಲಕ್ರೀಡೆ ಆಡಿ ಹೊಟ್ಟೆ ತುಂಬಾ ನೀರು ಕುಡಿದು ದೇವರ ದರ್ಶನ ಮಾಡಿದ್ದೆವು ಅಲ್ಲಿ ಇದ್ದ ಏಕೈಕ ಅರ್ಚಕರು ನಮ್ಮ ಕಷ್ಟ ನೋಡಿ ಅವರಿಗಾಗಿ ತಂದಿಟ್ಟುಕೊಂಡ ಅವಲಕ್ಕಿ ಬೆಲ್ಲ ನಮಗೆ ಅವತ್ತು ಪರಮಾನ್ನ ಆಗಿತ್ತು.
   ಇವತ್ತಿನವರೆಗೆ ಮಹಾಭಾರತದಲ್ಲಿ ವನವಾಸದಲ್ಲಿ ಭೀಮ ಕಟ್ಟಿದ ದೇವಸ್ಥಾನ #ಭೀಮೇಶ್ವರ ಅಂತನೇ ಭಾವಿಸಿದ್ದೆ....
   ಇವತ್ತು #ಡಿಜಿಟಲ್_ಮಾಧ್ಯಮ_ಕನ್ನಡ_ಯೂಟ್ಯೂಬ್ ನಲ್ಲಿ ನಮ್ಮ ತಾಲ್ಲೂಕಿನ ಇತಿಹಾಸ ಸಂಶೋದಕ #ಲೋಕರಾಜ್_ಜೈನರು ಈ ದೇವಾಲಯದ ಬಗ್ಗೆ ಅದರ ನಿರ್ಮಾಣದ ಬಗ್ಗೆ ಮತ್ತು ಅಲ್ಲಿನ ನಂದಿಯ ಕಾಲಬುಡದಲ್ಲಿರುವ ಮೈಸೂರು ಅರಸರ ಶಾಸನದ ಬಗ್ಗೆ ಮಾಹಿತಿ ನೀಡಿದ್ದಾರೆ ನೋಡಿ.
.   ನನ್ನ ಭೀಮೇಶ್ವರದ ದೇವರ ಮೊದಲ ಯಾತ್ರೆಯ ಆ ದಿನ ಪಟ್ಟ ಕಷ್ಟ ನನ್ನ ನೆನಪಿನಲ್ಲಿ ಅಚ್ಚಳಿಯದೇ ಉಳಿದಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...