Skip to main content

Blog number 2087. ರೈತ ನಾಯಕ ದಿನೇಶ್ ಶಿರವಾಳರು ನಿರ್ಮಿಸಿರುವ ಅವರ ಕನಸಿನ ಮನೆ "ಪರಿಶ್ರಮ" ದಿನಾಂಕ 28- ಏಪ್ರಿಲ್-2024 ಬಾನುವಾರ ಗೃಹ ಪ್ರವೇಶ.

#ಕಾಗೋಡು_ಹೋರಾಟದ_ನೇತಾರ_ಗಣಪತಿಯಪ್ಪ_ಸ್ಥಾಪಿತ_ರೈತಸಂಘ

#ಮರುಸ್ಥಾಪನೆ_ಮಾಡಿದ_ಶ್ರಮಜೀವಿ_ಕೃಷಿಕ_ವಾಘ್ಮಿ_ಸಂಘಟನ_ಚತುರ_ದಿನೇಶ್_ಶಿರವಾಳರ

#ಸಾಗರದ_ಶಿರವಾಳದಲ್ಲಿ_ನಿರ್ಮಿಸಿರುವ_ಪರಿಶ್ರಮ_ಎಂದು_ನಾಮಕರಣಗೊಂಡಿರುವ

#ಮನೆ_ಗೃಹ_ಪ್ರವೇಶ_ದಿನಾಂಕ_28_ಏಪ್ರಿಲ್_2024_ಭಾನುವಾರ.


  1- ಜನವರಿ-1948ರಲ್ಲಿ ಕಾಗೋಡು ಹೋರಾಟದ ರೂವಾರಿ ಹೆಚ್.ಗಣಪತಿಯಪ್ಪ ಸ್ಥಾಪಿಸಿದ್ದ ರೈತ ಸಂಘಕ್ಕೆ ಅಂದಿನ ಅಧ್ಯಕ್ಷರು ಮೂಕಪ್ಪನವರು 1957ರಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾಗುತ್ತಾರೆ, ಕಾರ್ಯದರ್ಶಿಗಳಾಗಿದ್ದ ಗಣಪತಿಯಪ್ಪನವರು ಶಾಂತವೇರಿ ಗೋಪಾಲಗೌಡರು ಸೇರಿ 1952 ರಲ್ಲಿ ಪ್ರಾರಂಬಿಸಿದ ಊಳುವವನೇ ಹೊಲದೊಡೆಯ ಘೋಷಣೆಯ ಕಾಗೋಡು ರೈತ ಹೋರಾಟ ವಿಶ್ವ ವಿಖ್ಯಾತವಾಗಿದ್ದು ಇತಿಹಾಸ.
  ಈ ರೈತ ಸಂಘದ ಮರು ಹುಟ್ಟು ಹಾಕಿರುವ ದಿನೇಶ್ ಶಿರವಾಳ ನ್ಯಾಯಕ್ಕಾಗಿ ಗಾಂಧೀ ಮಾರ್ಗದಲ್ಲಿ ವಿನೂತನ ಹೋರಾಟಗಳ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ, ಅಧ್ಯಕ್ಷ ದಿನೇಶ್ ಶಿರವಾಳರ ಕಂಚಿನ ಕಂಠದ ಕರಾರುವಕ್ಕಾದ ಮಾತುಗಳು ಹಾಗೂ ಅವರ ಬಾಡಿ ಲಾಂಗ್ವೇಜ್ ನನಗೆ ಇಷ್ಟ.
  40 ವಷ೯ದ ದಿನೇಶ್ ಶಿರವಾಳರು ಚಿಕ್ಕ೦ದಿನಿ೦ದ ತಾಯಿ ಜೊತೆ ತಾವು ಬೆಳೆದ ತರಕಾರಿ ತಲೆ ಮೇಲೆ ಹೊತ್ತು ನಿತ್ಯ ಸಾಗರದ ಪೇಟೆಯಲ್ಲಿ ಮಾರಾಟ ಮಾಡುತ್ತಿದ್ದವರು, ಸುಖ ಸಾಗರ ಹೋಟೆಲ್ ನಲ್ಲಿ ಕೆಲಸ ಮಾಡುತ್ತಾ ನಂತರ ಬೆಂಗಳೂರಲ್ಲಿ ಕರ್ನಾಟಕ ಬ್ರಿವರಿಸ್ ನಲ್ಲಿ ದಿನಗೂಲಿ ವೃತ್ತಿ ಮಾಡಿದವರು ನಂತರ ಟ್ರಾಕ್ಟರ್ ಖರೀದಿಸಿ ಬಾಡಿಗೆ ಮಾಡಿದವರು.
  ಒಂದು ಕಾಲದಲ್ಲಿ ಶಿರವಾಳ ಅತ್ಯಂತ ಬಡತನದ ಸಾಗರದ ಹಳ್ಳಿ ಇಲ್ಲಿನ ಕುಟುಂಬಗಳು ತರಕಾರಿ ಹಾಲು ಸಾಗರ ಪೇಟೆಗೆ ತಂದು ಮಾರಾಟ ಮಾಡಿ ಜೀವನ ಮಾಡುತ್ತಿದ್ದರು ಅದರಲ್ಲಿ ಕೆಲ ಸಾಹಸಿಗಳು ಬೆಲ್ಲದಿಂದ ದೇಶಿ ಸರಾಯಿ ತಯಾರಿಸಿ ಮಾರಾಟ ಮಾಡುತ್ತಿದ್ದರಿಂದ ಶಿರವಾಳ ಕುಖ್ಯಾತಿಯೂ ಪಡೆದಿತ್ತು ಈಗ ಶಿರವಾಳ ಸಾಗರ ಪಟ್ಟಣದಲ್ಲಿ ಸೇರಿ ಹೋಗಿದೆ ಅಲ್ಲಿನ ಭೂಮಿಗೆ ಚಿನ್ನದ ಬೆಲೆ ಮತ್ತು ಈಗಿನ ತಲೆಮಾರಿನ ಬುದ್ಧಿವಂತ ಯುವ ರೈತರು ವಾಣಿಜ್ಯ ಬೆಳೆಗಳಾದ ಅಡಿಕೆ - ಶುಂಠಿ ಬೆಳೆದು ಆರ್ಥಿಕವಾಗಿ ಸದೃಡವಾಗುತ್ತಿದ್ದಾರೆ 50 ವರ್ಷದಲ್ಲಿ ಶಿರವಾಳ ಬದಲಾಗಿದೆ.
  ರೈತ ಸಂಘದ ಅಧ್ಯಕ್ಷರಾದ #ದಿನೇಶ್_ಶಿರವಾಳರು ಇವರ ತಂದೆ ನಾರಾಯಣಪ್ಪ ಮತ್ತು ತಾಯಿ ಚೌಡಮ್ಮರ ಪಿತ್ರಾರ್ಜಿತ ಆಸ್ತಿಯಾದ ನಾಲ್ಕು ಎಕರೆಯಲ್ಲಿ ಸ್ಟತಃ ಕೃಷಿ ಮಾಡುತ್ತಾ ಒಂಬತ್ತು ವರ್ಷದಿಂದ ತಮ್ಮ ಕನಸಿನ ಮನೆಯ ಗೋಡೆಗಳನ್ನು ಸ್ವತಃ ಇವರು ಮತ್ತು ಇವರ ಪತ್ನಿ ಇಬ್ಬರೇ ಕಟ್ಟಿದ್ದಾರೆ.

  ಈ ಮನೆಗೆ #ಪರಿಶ್ರಮ ಎಂಬ ಹೆಸರು ಇಟ್ಟಿದ್ದಾರೆ ಇದು ಅನ್ವರ್ಥನಾಮ ಇವರ ಪರಿಶ್ರಮದಲ್ಲಿ ಅರಳಿದ ಇವರ ಗೃಹ ಪ್ರವೇಶ 28- ಏಪ್ರಿಲ್- 2024 ಭಾನುವಾರ ನಡೆಯಲಿದೆ ಅದರ ಆಹ್ವಾನ ಪತ್ರಿಕೆ ನನಗೆ ನೀಡಲು ಬಂದಿದ್ದರು.
  ಇವರ ಕನಸಿನ ಮನೆ ಪರಿಶ್ರಮದ ಗೃಹ ಪ್ರವೇಶದ ಆಹ್ವಾನ ಪತ್ರಿಕೆ ಕೂಡ ವಿಶೇಷವಾಗಿ ಇವರ ಪರಿಕಲ್ಪನೆಯಲ್ಲಿ ವಿನ್ಯಾಸ ಮಾಡಿದ್ದಾರೆ.
  ಅವರಿಗೆ ನಮ್ಮ ಊರಿನ ಪುರ ದೈವ ಶ್ರೀ ವರಸಿದ್ದಿ ವಿನಾಯಕ ದೇವರ 3D ವಿಗ್ರಹ ನೀಡಿ ಗೃಹ ಪ್ರವೇಶ ಮಾಡುತ್ತಿರುವ ದಿನೇಶ್ ಶಿರವಾಳ ದಂಪತಿಗಳಿಗೆ ಮತ್ತು ಕುಟುಂಬ ವರ್ಗದವರಿಗೆ ಆಯುರಾರೋಗ್ಯ- ಆಯಸ್ಸು - ಐಶ್ವರ್ಯ ಮತ್ತು ಯಶಸ್ಸು ದಯಪಾಲಿಸಲಿ ಎಂದು ಹಾರೈಸಿದ್ದೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...