Skip to main content

Blog number 2067.ಪೂರ್ವ ಮುಂಗಾರು ಮಳೆಗೆ ಹೂವಾಗಿ ಅರಳಿ ನಗು ಸೂಸುವ ಮಳೆ ಪುಷ್ಪಾ ರೈನ್ ಲಿಲ್ಲಿ.

https://youtu.be/VlkPSmYo9AE?feature=shared

#ಪೂರ್ವ_ಮುಂಗಾರಿನ_ಮಳೆಯಲ್ಲಿದೆ

#ಭೂಮಿ_ಹಸಿರು_ಮಾಡುವ_ನೈಟ್ರೋಜನ್

#ಕಳೆದ_ನವೆಂಬರ್_ತಿಂಗಳಿಂದ_ನನ್ನ_ಕೈತೋಟದ_ಗಿಡಗಳಿಗೆ_ನಿತ್ಯ_ನಾನುಣಿಸುತ್ತಿದ್ದ_ಕೈತಂಬಿಗೆ_ನೀರು

#ಈ_ತಿಂಗಳ_ಒಂದು_ಹೂಮಳೆ_ಮತ್ತೆರೆಡು_ದೊಡ್ಡ_ಮಳೆಯಿಂದ_ಹುವಾಗಿ_ನಗು_ಬೀರುತ್ತಿದೆ
   ಪ್ರಕೃತಿಯಲ್ಲಿರುವ ಹೂವುಗಳ ವಿದ-ಬಣ್ಣ-ಸುವಾಸನೆ_ಆಕೃತಿಗಳನ್ನು ಲೆಖ್ಖವಿಡಲು ಸಾಧ್ಯವೇ? ಲೆಖ್ಬ ಮಾಡಿಟ್ಟರೂ ಪ್ರಕೃತಿಯಲ್ಲಿ ಹೊಸ ರೂಪದ ಹೊಸ ಹೂವುಗಳು ಬರುತ್ತಲೇ ಇರುತ್ತದೆ.
  ನನ್ನ ಕಳೆದ 5 ವರ್ಷದ ತೂಕ ಇಳಿಸುವ ವಾಕಿಂಗ್ ನಿತ್ಯವೂ ನವನವೀನ ಉಂಟು ಮಾಡಲು ನನ್ನ ಪ್ರೀತಿಯ ಶಂಭೂರಾಮ ಜೊತೆಯಾದಂತೆ ಈ ಕೈ ತೋಟದ ಹೂವಿನ ಗಿಡಗಳ ಆರೈಕೆ - ಆಯ್ಕೆ ಕೂಡ ಜೊತೆ ಜೊತೆ ಆಗಿ ಸಾಗಿದೆ.
ಒಂದು ದಿನ ನೀರು ಉಣಿಸದೆ ಇರಲು ಸಾಧ್ಯವಿಲ್ಲ ಆ ಗಿಡಗಳು ನನ್ನ ಜೊತೆ ಮಾತಾಡಿದಂತ ಅನುಭೂತಿಯ ಅನುಭವ ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು.
  ಕಳೆದ ಅಕ್ಟೋಬರ್ ನವೆಂಬರ್ ತಿಂಗಳಿಂದಲೇ ನಿತ್ಯ ಬೆಳಿಗ್ಗೆ ವಾಕಿಂಗ್ ನಂತರ ಈ ಗಿಡಗಳಿಗೆ ನೀರುಣಿಸುತ್ತಿದ್ದೆ ಸರಿ ಸುಮಾರು ಏಳು ತಿಂಗಳ ಕಾಲ, ಬಿರು ಬೇಸಿಗೆ,ಮಧ್ಯದಲ್ಲಿ ಬರಬೇಕಾದ ಸಂಪ್ರದಾಯಿಕ ಮಳೆ ಬಾರದೇ ಹೋದದ್ದು ಹಾಗು ಅತಿ ಹೆಚ್ಚು ಉಷ್ಣಾಂಶ 43 ಡಿಗ್ರಿ ದಾಟಿದ್ದು ಸೂಕ್ಷ್ಮವಾಗಿರುವ ಹೂವಿನ ಗಿಡಗಳಿಗೆ ಕಷ್ಟವಾಗಿತ್ತು.
ಈ ತಿಂಗಳ ಮೊದಲ ವಾರದ ಹೂಮಳೆ ಅದರ ಎರಡನೇ ವಾರದ ಬಿರುಗಾಳಿ ಮಳೆ ನಂತರ ಎರಡು ದಿನದಲ್ಲಿ ಗಾಳಿಯ ಸೋಂಕು ಇಲ್ಲದೆ ನಿರಂತರ ಒಂದು ಗಂಟೆ ಸುರಿದ ಪೂರ್ವ ಮುಂಗಾರು ಮಳೆ ಇಳೆಯನ್ನು ತಂಪಾಗಿಸಿತ್ತು.
   ಪೂರ್ವ ಮುಂಗಾರು ಮಳೆ ನೀರ ಜೊತೆ ತರುವ ನೈಸರ್ಗಿಕ ನೈಟ್ರೊಜನ್ ಗಳು ತಂಪಾದ ಇಳೆಯನ್ನು ಹಸಿರು ಮಾಡುವ ವಿಶೇಷ ಶಕ್ತಿ ತುಂಬಿದೆ.
  ಆದ್ದರಿಂದ ಕಳೆದ ಎರೆಡು ದಿನದಿಂದ ನನ್ನ ಕೈತೋಟದ ಹೂವಿನ ಗಿಡಗಳನ್ನು ನಿರೀಕ್ಷೆಯಿಂದ ಕಾಯುತ್ತಿದ್ದೆ ಇವತ್ತಿನ ಬೆಳಿಗ್ಗೆ ನನ್ನ ನಿರೀಕ್ಷೆ ಹುಸಿ ಆಗಲಿಲ್ಲ ನನ್ನ #ರೈನ್_ಲಿಲ್ಲಿ (ಹೆಸರಿನ ಅನ್ವರ್ಥದಂತೆ ಮೊದಲ ಮಳೆಗೆ ಹೂವು ಬಿಡುವ ಮಳೆ ಪುಷ್ಪ) ಗಿಡಗಳು ಹೂವು ಅರಳಿಸಿ ನಗು ಬೀರಿದೆ.
  ಕೆಂಪು ಬಿಳಿ ರೈನ್ ಲಿಲ್ಲಿ ಅರಳಿದೆ ಹಳದಿ ರೈನ್ ಲಿಲ್ಲಿ ಇನ್ನೂ ಹೂವು ಅರಳಿಸಿಲ್ಲ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...