Skip to main content

Blog number 2085. ಇನ್ಪೋಸಿಸ್ ಸಂಸ್ಥಾಪಕರಾದ ಶ್ರೀಮತಿ ಸುಧಾ ಮೂರ್ತಿ ಶಿಕಾರಿಪುರ ತಾಲ್ಲೂಕಿನ ತಾಳಗುಂದ ಮತ್ತು ಸುತ್ತ ಮುತ್ತಲಿನ ಕದಂಬರ ಇತಿಹಾಸಕ್ಕೆ ಸಂಬಂಧಿಸಿದ ಸ್ಥಳಗಳ ಮಾಹಿತಿ ವೀಕ್ಷಣೆ ಸ್ಥಳಿಯ ಇತಿಹಾಸ ಸಂಶೋಧಕ ಶಿರಾಳಕೊಪ್ಪದ ಪ್ರಜಾವಾಣಿ ವರದಿಗಾರ ನವೀನ್ ಕುಮಾರ್ ಜೊತೆ ಪಡೆದಿದ್ದರು.

#ತಾಳಗುಂದದ_ಉತ್ಕನನ_ಸಮಯದಲ್ಲಿ_ತಾಳಗುಂದ_ವೀಕ್ಷಿಸಲು_ಆಗಮಿಸಿದ್ದ_ಇನ್ಪೋಸಿಸ್_ಸುದಾಮೂರ್ತಿ

#ಅವರಿಗೆ_ಸ್ಥಳಿಯ_ಮಾಹಿತಿ_ನೀಡಿದ_ನವೀನ್_ಕುಮಾರ್

#ಸುದಾಮೂರ್ತಿ_ಸ್ವತಃ_ತಯಾರಿಸಿ_ಡಬ್ಬಿಯಲ್ಲಿ_ತಂದಿದ್ದ_ಅವರ_ಮಧ್ಯಾಹ್ನದ_ಊಟ_ಚಿತ್ರಾನ್ನ

#ತಾಳಗುಂದ_ಶಾಸನ_ಕನ್ನಡದ_ಮೊದಲ_ಶಾಸನ

#ಕದಂಬರು_ಸ್ಥಾಪಿಸಿದ್ಧ_ತಾಳಗುಂದ_ವಿಶ್ವವಿದ್ಯಾಲಯ

#ಹವ್ಯಕ_ಬ್ರಾಹ್ಮಣ_ಮಯೂರ_ವರ್ಮ

#ಮುಂತಾದ_ಶಾಸನಗಳು_ಪುರಾತತ್ವ_ಇಲಾಖೆ_ಸಂಶೋದನೆ_ಮತ್ತು_ಉತ್ಕನಗಳಲ್ಲಿ_ದೊರೆತಿದೆ

#ಈ_ಬಗ್ಗೆ_ಶ್ರಮಿಸುತ್ತಿರುವ_ಶಿರಾಳಕೊಪ್ಪದ_ಪ್ರಜಾವಾಣಿ_ವರದಿಗಾರ_ನವೀನ್_ಕುಮಾರ್

#ಸಂದರ್ಶನದಲ್ಲಿ_ಹೇಳಿದ_ಸುದಾಮಾರ್ತಿ_ತಾಳಗುಂದ_ಬೇಟಿಯ_ಮಾಹಿತಿ

  ನಮ್ಮ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ತಾಳಗುಂದದ ಕದಂಬ ವಂಶದ ಮಾಹಿತಿಗಾಗಿ ಉತ್ಕನನಗಳು ನಡೆಯುವ ಸಂದರ್ಭದಲ್ಲೇ ವಿಶ್ವ ವಿಖ್ಯಾತ #ಇನ್ಪೋಸಿಸ್ ಸಂಸ್ಥೆ ಸಂಸ್ಥಾಪಕಿ ಶ್ರೀಮತಿ ಸುಧಾ ಮೂರ್ತಿ ತಾಳಗುಂದ ವೀಕ್ಷಣೆಗೆ ಬಂದಿದ್ದರು. 
ಅವರು ಬರುವ ವಿಚಾರ ಯಾರಿಗೂ ಬಹಿರಂಗ ಪಡಿಸದಂತೆ ತಿಳಿಸಿದ್ದರಂತೆ, ತಾಳಗುಂದದ ಬಗ್ಗೆ ಮತ್ತು ಕದಂಬರ ಬಗ್ಗೆ ಹೆಚ್ಚಿನ ಮಾಹಿತಿ ಮೊದಲೇ ತಮ್ಮ ಕಿರು ಡೈರಿಯಲ್ಲಿ ನೋಟ್ ಮಾಡಿಕೊಂಡು ಬಂದಿದ್ದರಂತೆ.
ಇವರ ಜೊತೆ ಶಿರಾಳಕೊಪ್ಪದ ಪ್ರಜಾವಾಣಿ ವರದಿಗಾರ ಮತ್ತು ಇತಿಹಾಸ ಸಂಶೋಧಕ ನವೀನ್ ಕುಮಾರ್ ಎಲ್ಲಾ ಸ್ಥಳಗಳಿಗೆ ಅವರನ್ನ ಕರೆದೊಯ್ದು ಮಾಹಿತಿ ನೀಡಿದ್ದರು.
 ನಾನು ನವೀನ್ ಕುಮಾರ್ ಅವರ ಸಂದರ್ಶನದಲ್ಲಿ ಈ ವಿಚಾರ ತಿಳಿದು ಕುತೂಹಲ ಹಾಗೂ ಆಸಕ್ತಿಯಿಂದ ಹೆಚ್ಚಿನ ಮಾಹಿತಿ ಅವರಿಂದ ಪಡೆದಿದ್ದೆ.
ಇನ್ನೊಂದು ವಿಶೇಷ ಸುದಾಮೂರ್ತಿ ಸರಳತೆಗೆ ಇನ್ನೊಂದು ಸಾಕ್ಷಿ ಅವತ್ತು ಮಧ್ಯಾಹ್ನದ ಊಟ #ಸುಧಾಮೂರ್ತಿ ತಾವೇ ಸ್ವತಃ ತಯಾರಿಸಿ ತಂದು ತಿಂದಿದ್ದು ಚಿತ್ರಾನ್ನ, ಸುದಾ ಮೂರ್ತಿ ಎಲ್ಲೇ ಪ್ರವಾಸ ಹೋದರು ಹೊರಗಿನ ಹೋಟೆಲ್ ಆಹಾರ ಸೇವಿಸುವುದಿಲ್ಲ ಈ ಮೂಲಕ ತಮ್ಮ ಆರೋಗ್ಯ ಕಾಳಜಿ ಮಾಡುತ್ತಾರೆ ಎಂದು ಓದಿದ್ದೆ.
ಅವತ್ತಿಗೆ ಅವರು ಬಂದಾಗ ತಾಳಗುಂದದ ಕನ್ನಡ ಶಾಸನವೇ ಕನ್ನಡದ ಮೊದಲ ಶಾಸನ ಎಂಬುದು ಇನ್ನೂ ಉತ್ಕನದಲ್ಲಿ ಕಂಡುಬಂದಿರಲಿಲ್ಲ.
 ನವೀನ್ ಕುಮಾರ್ ಕದಂಬರ ಶಾಸನಗಳ ಸಂರಕ್ಷಣೆ ಬಗ್ಗೆ ಇನ್ಪೋಸಿಸ್ ಸಂಸ್ಥೆ ಮತ್ತು ಸುದಾಮಾರ್ತಿ ವಹಿಸಿಕೊಳ್ಳಲು ವಿನಂತಿಸಿದಾಗ ಅವರು ನೀಡಿದ ಪ್ರತಿಕ್ರಿಯೆ " ನಿಮ್ಮ ಜಿಲ್ಲೆಯಲ್ಲಿ ಎಂತೆಂತಹ ದೊಡ್ಡವರಿದ್ದಾರೆ ಅವರು ಮಾಡಲಿ ನಮ್ಮ ಸಂಸ್ಥೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂತಹ ನೂರಾರು ಕೆಲಸ ಮಾಡುತ್ತಿದೆ" ಎಂದು ಮಾಮಿ೯ಕ ಉತ್ತರ ನೀಡಿದ್ದರಂತೆ, ಆರ್ಥಿಕವಾಗಿಯೊ ಅಥವ ಸಾಂಸ್ಕೃತಿಕವಾಗಿಯೋ ನಮ್ಮ ಜಿಲ್ಲೆಯ ರಾಜಕಾರಣಿಗಳ ಬಗ್ಗೆ ಅವರು ಪ್ರಸ್ತಾವಿಸಿದ್ದು ನವೀನ್ ಕುಮಾರ್ ತಮಗೆ ಅರ್ಥವಾಗಿಲ್ಲ ಎಂದರು.
ಎನೇ ಆಗಲಿ ಇನ್ಪೋಸಿಸ್ ಸುದಾ ಮೂರ್ತಿ ತಾಳಗಂದಕ್ಕೆ ಆಗಮಿಸಿದ್ದರು ಮತ್ತು ಕದಂಬರ ಕುರುಹುಗಳ ವೀಕ್ಷಿಸಿದ್ದರು ಎಂಬುದೇ ವಿಶೇಷ ಅವರಿಗೆ ಜೊತೆಯಾಗಿ ನಮ್ಮ ಜಿಲ್ಲೆಯ ಉದಯೊನ್ಮುಖ ಇತಿಹಾಸ ಸಂಶೋಧಕ ನವೀನ್ ಕುಮಾರ್ ಮಾಹಿತಿ ನೀಡಿದರು ಎಂಬುದು ಹೆಮ್ಮೆಯ ಸಂಗತಿ.
 ( ನಾಳೆ  ಸುದಾ ಮೂರ್ತಿ ತಾಳಗುಂದದ ಬೇಟಿಯ ಬಗ್ಗೆ ನಾನು ಮಾಡಿದ ನವೀನ್ ಕುಮಾರ ವಿಡಿಯೋ ಸಂದರ್ಶನ ನಿರೀಕ್ಷಿಸಿ)

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...