Skip to main content

Blog number 2085. ಇನ್ಪೋಸಿಸ್ ಸಂಸ್ಥಾಪಕರಾದ ಶ್ರೀಮತಿ ಸುಧಾ ಮೂರ್ತಿ ಶಿಕಾರಿಪುರ ತಾಲ್ಲೂಕಿನ ತಾಳಗುಂದ ಮತ್ತು ಸುತ್ತ ಮುತ್ತಲಿನ ಕದಂಬರ ಇತಿಹಾಸಕ್ಕೆ ಸಂಬಂಧಿಸಿದ ಸ್ಥಳಗಳ ಮಾಹಿತಿ ವೀಕ್ಷಣೆ ಸ್ಥಳಿಯ ಇತಿಹಾಸ ಸಂಶೋಧಕ ಶಿರಾಳಕೊಪ್ಪದ ಪ್ರಜಾವಾಣಿ ವರದಿಗಾರ ನವೀನ್ ಕುಮಾರ್ ಜೊತೆ ಪಡೆದಿದ್ದರು.

#ತಾಳಗುಂದದ_ಉತ್ಕನನ_ಸಮಯದಲ್ಲಿ_ತಾಳಗುಂದ_ವೀಕ್ಷಿಸಲು_ಆಗಮಿಸಿದ್ದ_ಇನ್ಪೋಸಿಸ್_ಸುದಾಮೂರ್ತಿ

#ಅವರಿಗೆ_ಸ್ಥಳಿಯ_ಮಾಹಿತಿ_ನೀಡಿದ_ನವೀನ್_ಕುಮಾರ್

#ಸುದಾಮೂರ್ತಿ_ಸ್ವತಃ_ತಯಾರಿಸಿ_ಡಬ್ಬಿಯಲ್ಲಿ_ತಂದಿದ್ದ_ಅವರ_ಮಧ್ಯಾಹ್ನದ_ಊಟ_ಚಿತ್ರಾನ್ನ

#ತಾಳಗುಂದ_ಶಾಸನ_ಕನ್ನಡದ_ಮೊದಲ_ಶಾಸನ

#ಕದಂಬರು_ಸ್ಥಾಪಿಸಿದ್ಧ_ತಾಳಗುಂದ_ವಿಶ್ವವಿದ್ಯಾಲಯ

#ಹವ್ಯಕ_ಬ್ರಾಹ್ಮಣ_ಮಯೂರ_ವರ್ಮ

#ಮುಂತಾದ_ಶಾಸನಗಳು_ಪುರಾತತ್ವ_ಇಲಾಖೆ_ಸಂಶೋದನೆ_ಮತ್ತು_ಉತ್ಕನಗಳಲ್ಲಿ_ದೊರೆತಿದೆ

#ಈ_ಬಗ್ಗೆ_ಶ್ರಮಿಸುತ್ತಿರುವ_ಶಿರಾಳಕೊಪ್ಪದ_ಪ್ರಜಾವಾಣಿ_ವರದಿಗಾರ_ನವೀನ್_ಕುಮಾರ್

#ಸಂದರ್ಶನದಲ್ಲಿ_ಹೇಳಿದ_ಸುದಾಮಾರ್ತಿ_ತಾಳಗುಂದ_ಬೇಟಿಯ_ಮಾಹಿತಿ

  ನಮ್ಮ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ತಾಳಗುಂದದ ಕದಂಬ ವಂಶದ ಮಾಹಿತಿಗಾಗಿ ಉತ್ಕನನಗಳು ನಡೆಯುವ ಸಂದರ್ಭದಲ್ಲೇ ವಿಶ್ವ ವಿಖ್ಯಾತ #ಇನ್ಪೋಸಿಸ್ ಸಂಸ್ಥೆ ಸಂಸ್ಥಾಪಕಿ ಶ್ರೀಮತಿ ಸುಧಾ ಮೂರ್ತಿ ತಾಳಗುಂದ ವೀಕ್ಷಣೆಗೆ ಬಂದಿದ್ದರು. 
ಅವರು ಬರುವ ವಿಚಾರ ಯಾರಿಗೂ ಬಹಿರಂಗ ಪಡಿಸದಂತೆ ತಿಳಿಸಿದ್ದರಂತೆ, ತಾಳಗುಂದದ ಬಗ್ಗೆ ಮತ್ತು ಕದಂಬರ ಬಗ್ಗೆ ಹೆಚ್ಚಿನ ಮಾಹಿತಿ ಮೊದಲೇ ತಮ್ಮ ಕಿರು ಡೈರಿಯಲ್ಲಿ ನೋಟ್ ಮಾಡಿಕೊಂಡು ಬಂದಿದ್ದರಂತೆ.
ಇವರ ಜೊತೆ ಶಿರಾಳಕೊಪ್ಪದ ಪ್ರಜಾವಾಣಿ ವರದಿಗಾರ ಮತ್ತು ಇತಿಹಾಸ ಸಂಶೋಧಕ ನವೀನ್ ಕುಮಾರ್ ಎಲ್ಲಾ ಸ್ಥಳಗಳಿಗೆ ಅವರನ್ನ ಕರೆದೊಯ್ದು ಮಾಹಿತಿ ನೀಡಿದ್ದರು.
 ನಾನು ನವೀನ್ ಕುಮಾರ್ ಅವರ ಸಂದರ್ಶನದಲ್ಲಿ ಈ ವಿಚಾರ ತಿಳಿದು ಕುತೂಹಲ ಹಾಗೂ ಆಸಕ್ತಿಯಿಂದ ಹೆಚ್ಚಿನ ಮಾಹಿತಿ ಅವರಿಂದ ಪಡೆದಿದ್ದೆ.
ಇನ್ನೊಂದು ವಿಶೇಷ ಸುದಾಮೂರ್ತಿ ಸರಳತೆಗೆ ಇನ್ನೊಂದು ಸಾಕ್ಷಿ ಅವತ್ತು ಮಧ್ಯಾಹ್ನದ ಊಟ #ಸುಧಾಮೂರ್ತಿ ತಾವೇ ಸ್ವತಃ ತಯಾರಿಸಿ ತಂದು ತಿಂದಿದ್ದು ಚಿತ್ರಾನ್ನ, ಸುದಾ ಮೂರ್ತಿ ಎಲ್ಲೇ ಪ್ರವಾಸ ಹೋದರು ಹೊರಗಿನ ಹೋಟೆಲ್ ಆಹಾರ ಸೇವಿಸುವುದಿಲ್ಲ ಈ ಮೂಲಕ ತಮ್ಮ ಆರೋಗ್ಯ ಕಾಳಜಿ ಮಾಡುತ್ತಾರೆ ಎಂದು ಓದಿದ್ದೆ.
ಅವತ್ತಿಗೆ ಅವರು ಬಂದಾಗ ತಾಳಗುಂದದ ಕನ್ನಡ ಶಾಸನವೇ ಕನ್ನಡದ ಮೊದಲ ಶಾಸನ ಎಂಬುದು ಇನ್ನೂ ಉತ್ಕನದಲ್ಲಿ ಕಂಡುಬಂದಿರಲಿಲ್ಲ.
 ನವೀನ್ ಕುಮಾರ್ ಕದಂಬರ ಶಾಸನಗಳ ಸಂರಕ್ಷಣೆ ಬಗ್ಗೆ ಇನ್ಪೋಸಿಸ್ ಸಂಸ್ಥೆ ಮತ್ತು ಸುದಾಮಾರ್ತಿ ವಹಿಸಿಕೊಳ್ಳಲು ವಿನಂತಿಸಿದಾಗ ಅವರು ನೀಡಿದ ಪ್ರತಿಕ್ರಿಯೆ " ನಿಮ್ಮ ಜಿಲ್ಲೆಯಲ್ಲಿ ಎಂತೆಂತಹ ದೊಡ್ಡವರಿದ್ದಾರೆ ಅವರು ಮಾಡಲಿ ನಮ್ಮ ಸಂಸ್ಥೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂತಹ ನೂರಾರು ಕೆಲಸ ಮಾಡುತ್ತಿದೆ" ಎಂದು ಮಾಮಿ೯ಕ ಉತ್ತರ ನೀಡಿದ್ದರಂತೆ, ಆರ್ಥಿಕವಾಗಿಯೊ ಅಥವ ಸಾಂಸ್ಕೃತಿಕವಾಗಿಯೋ ನಮ್ಮ ಜಿಲ್ಲೆಯ ರಾಜಕಾರಣಿಗಳ ಬಗ್ಗೆ ಅವರು ಪ್ರಸ್ತಾವಿಸಿದ್ದು ನವೀನ್ ಕುಮಾರ್ ತಮಗೆ ಅರ್ಥವಾಗಿಲ್ಲ ಎಂದರು.
ಎನೇ ಆಗಲಿ ಇನ್ಪೋಸಿಸ್ ಸುದಾ ಮೂರ್ತಿ ತಾಳಗಂದಕ್ಕೆ ಆಗಮಿಸಿದ್ದರು ಮತ್ತು ಕದಂಬರ ಕುರುಹುಗಳ ವೀಕ್ಷಿಸಿದ್ದರು ಎಂಬುದೇ ವಿಶೇಷ ಅವರಿಗೆ ಜೊತೆಯಾಗಿ ನಮ್ಮ ಜಿಲ್ಲೆಯ ಉದಯೊನ್ಮುಖ ಇತಿಹಾಸ ಸಂಶೋಧಕ ನವೀನ್ ಕುಮಾರ್ ಮಾಹಿತಿ ನೀಡಿದರು ಎಂಬುದು ಹೆಮ್ಮೆಯ ಸಂಗತಿ.
 ( ನಾಳೆ  ಸುದಾ ಮೂರ್ತಿ ತಾಳಗುಂದದ ಬೇಟಿಯ ಬಗ್ಗೆ ನಾನು ಮಾಡಿದ ನವೀನ್ ಕುಮಾರ ವಿಡಿಯೋ ಸಂದರ್ಶನ ನಿರೀಕ್ಷಿಸಿ)

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ