Skip to main content

Blog number 2064. ಹುರುಳಿ ಕಾಳಿನಲ್ಲಿರುವ ಶಕ್ತಿ ಇದರ ರಸ ಹುರುಳಿ ಕಟ್ಟಿನ ರಸ ಕಟ್ಟು ಈಗ ದಿಡೀರ್ ತಯಾರಿಯ ಪೇಸ್ಟ್ ಆಗಿ ಲಭ್ಯವಿದೆ.

#ಒಂದು_ಕಾಲದ_ರೈತರ_ಮನೆಯ_ಎತ್ತಿನ_ಪೌಷ್ಟಿಕ_ಆಹಾರ_ಹುರುಳಿ

#ಬೇಯಿಸಿದ_ಹುರುಳಿಕಾಳು_ನೆನಸಿದ_ಹುರುಳಿ_ನುಚ್ಚು_ಎತ್ತುಗಳಿಗೆ

#ಹುರುಳಿ_ಬೇಯಿಸಿದ_ನೀರು_ಹುಳ್ಳಿ_ಕಟ್ಟು_ನಮ್ಮಂತ_ಹುಳ್ಳಿಕಟ್ಟು_ಪ್ರಿಯರಿಗೆ

#ಹಿಂಗಾರಿನ_ನಂತರದ_ಇಬ್ಬನಿಯಲ್ಲಿ_ಹುರುಳಿ_ಪಸಲು

#ಹುರುಳಿ_ಕಾಳು_ಸಿಪ್ಪೆ_ಬೂಸ_ಹುರುಳಿ_ಗಿಡ_ಕೂಡ_ಜಾನುವಾರು_ಆಹಾರ

#ಈಗ_ಕೃಷಿಯಲ್ಲಿ_ಎತ್ತುಗಳಿಲ್ಲ_ಹುಳ್ಳಿ_ಬೆಳೆಯುವ_ರೈತರೂ_ಇಲ್ಲ

https://youtube.com/shorts/3fcf-CgaHwg?feature=shared

    ಎತ್ತು ಮತ್ತು ಕೋಣಗಳನ್ನು ಅವಲಂಬಿಸಿ ಕೃಷಿ ಮಾಡುವ ಕಾಲ ಹೆಚ್ಚು ಕಡಿಮೆ ಮುಗಿದೇ ಹೋಗಿದೆ, ಯಂತ್ರ ಆದಾರಿತ ಕೃಷಿಯಿಂದ ಎತ್ತು ಕೋಣ ಕೊಟ್ಟಿಗೆ ಮತ್ತು ಹುರುಳಿ ಕೂಡ ಇಲ್ಲವಾಗಿದೆ.
     ಬಿದನೂರು ನಗರದ ದೇವಗಂಗೆಯಲ್ಲಿ ನಮ್ಮ ದೊಡ್ಡಪ್ಪನ ಮನೆಯಲ್ಲಿ ಎರೆಡು ಜೊತೆ ಹಾಸನದ ಬಿಳಿ ಅಮೃತ ಮಹಲ್ ಜೋಡಿ ಎತ್ತುಗಳಿದ್ದವು ಅದಕ್ಕೆ ಪ್ರತ್ಯೇಕ ಕೊಟ್ಟಿಗೆ ಹೆಚ್ಚು ಬೆಲೆಯ ದೊಡ್ಡ ಎತ್ತುಗಳು ಪೇಟೆಗೆ ಅಕ್ಕಿ ಮಾಡಿಸಲು ದೊಡ್ಡ ಎತ್ತಿನಗಾಡಿಗೆ ಮಾತ್ರ ಸೀಮಿತವಾಗಿತ್ತು ಅದೊಂದು ತರ ಆ ಕಾಲದ ರೈತರಿಗೆ ಅವರ ಅಂತಸ್ತಿನ ಪ್ರದರ್ಶನದ ಬಾಗವೂ ಆಗಿರಬಹುದು.
   ಇದರ ಜೊತೆ ಇನ್ನೆರೆಡು ಜೋಡಿ ಸಾದಾರಣ ಎತ್ತುಗಳು ಆದರೆ ಅವು ಹೆಚ್ಚು ಶ್ರಮದ ಕೆಲಸದ ಕೃಷಿ ಮಾಡುವಂತವು ಅವುಗಳಿಗೆ ಕೂಡ ಕೊಟ್ಟಿಗೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಆಗಿರುತ್ತಿತ್ತು.
   ಅವುಗಳಿಗೆ ನಿತ್ಯ ಸಂಜೆ ಬೇಯಿಸಿದ ಹುರುಳಿ ಕಾಳು ನೀಡಲೇ ಬೇಕು ಕಾರಣ ಹುರುಳಿಯಲ್ಲಿ ಇರುವ ಪೌಷ್ಟಿಕಾಂಶಗಳು ಮತ್ತು ಶೀಥ ವಾತಾವರಣದಲ್ಲಿ ದೇಹದ ಉಷ್ಣಾಂಶ ಹೆಚ್ಚು ಮಾಡುವ ಗುಣ ಇರುವುದು.
   ಆದ್ದರಿಂದ ಎತ್ತುಗಳನ್ನು ಕೃಷಿಗಾಗಿ ಪೋಷಿಸಲು ರೈತರು ಸುಗ್ಗಿ ಕೊಯಿಲು ಮುಗಿಯುವ ಮೊದಲು ಹಿಂಗಾರು ಮಳೆ ಸಮಯದಲ್ಲಿ ತಮ್ಮ ಖುಷ್ಕಿ ಭೂಮಿ ಉಳುಮೆ ಮಾಡಿ ಹುರುಳಿ ಬೀಜ ಬಿತ್ತುತ್ತಾರೆ ಹುರುಳಿ ಇಬ್ಬನಿಯಲ್ಲೇ ಪಸಲು ಬರುವ ಬೆಳೆ ಇದಕ್ಕೆ ಆಡು ಭಾಷೆಯಲ್ಲಿ ಹುಳ್ಳಿ ಅನ್ನುತ್ತಾರೆ ಮತ್ತು Horse gram ಅಂತ ಇಂಗ್ಲೀಷ್ ನಲ್ಲಿ.
    ಹುರುಳಿ ಕಾಳು ಕಟ್ಟಿದ ಮೇಲೆ ಹುರುಳಿ ಗಿಡ ಬೇರು ಸಮೇತ ಕೈಯಲ್ಲೇ ಕೀಳಬೇಕು ನಂತರ ಬಿಸಿಲಲ್ಲಿ ಒಣಗಿಸಿ ಹುರುಳಿ ಬೀಜ ಬೇರೆ ಮಾಡಿ, ಹುರುಳಿ ಸಿಪ್ಪೆ ಹುರುಳಿ ಗಿಡಗಳ ಬೂಸ ಕೂಡ ಜಾನುವಾರ ಆಹಾರವಾಗಿ ಬಳಸುತ್ತಾರೆ, ಹುರುಳಿ ಕಾಳು ಸಂಗ್ರಹಿಸಿ ವರ್ಷ ಪೂರ್ತಿ ಎತ್ತುಗಳಿಗೆ ಬೇಯಿಸಿದ ಹುರುಳಿ ಕಾಳು ನೀಡುತ್ತಾರೆ, ಬಸಿದ ಹುಳ್ಳಿ ಕಟ್ಟು (ನೀರು) ಅದಕ್ಕೆ ರುಚಿಗೆ ತಕ್ಕ ಮೆಣಸು - ಹುಳಿ - ಉಪ್ಪು ಸೇರಿಸಿ ಬೇಯಿಸಿದರೆ ಅನ್ನದ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.
  ಹುಳಿಯಾಗಿ ಹುಣಸೆ - ಅಮಟೆಕಾಯಿ - ಮಾವಿನಕಾಯಿ - ಹುಳಿಮಾವಿನ ಹಣ್ಣು ಕೂಡ ಆಯಾ ಕಾಲಕ್ಕೆ ತಕ್ಕಂತೆ ಬಳಸುತ್ತಾರೆ.
  ಆದ್ದರಿಂದ ಹುರುಳಿ ಬೇಯಿಸುವರ ಮನೆಗೆ ಸುತ್ತಮುತ್ತಲಿನ ಮನೆಯವರು ಪಾತ್ರೆ ಜೊತೆಗೆ ಹುರುಳಿ ಕಟ್ಟಿಗಾಗಿ ಕಾಯುತ್ತಿದ್ದರು.
  ಹುರುಳಿ ಕೊಯಿಲು ಕಷ್ಟದ ಕೆಲಸ ಇದಕ್ಕೆ ಕೃಷಿ ಕಾರ್ಮಿಕರ ಬಳಸಿದರೆ ಅವರಿಗೆ ದುಬಾರಿ ವೇತನ ನೀಡಿದರೆ ಹುರುಳಿ ಬೇಸಾಯ ದುಬಾರಿ ಆದ್ದರಿಂದ ಆಗೆಲ್ಲ ಹುರುಳಿ ಕೊಯಿಲು ಮಾಡಲು ಶಾಲಾ ವಿದ್ಯಾರ್ಥಿಗಳನ್ನು ಕಡಿಮೆ ಸಂಬಳದಲ್ಲಿ ಪ್ರತಿ ಬೆಳಿಗ್ಗೆ ಶಾಲೆಗೆ ಹೋಗುವ ಮೊದಲು ಬಳಸುತ್ತಿದ್ದರು ಇದರಿಂದ ಕಡಿಮೆ ಕೃಷಿ ವೆಚ್ಚದಲ್ಲಿ ಹುರುಳಿ ಸುಗ್ಗಿ ಆಗುತ್ತಿತ್ತು.
    ಆದರೆ ಈಗ ಬದಲಾದ ಕಾಲದಲ್ಲಿ ಕೃಷಿಗಾಗಿ ಎತ್ತುಗಳಿಲ್ಲ ಮತ್ತು ಅವುಗಳ ಪೋಷಣೆಗೆ ಬೇಕಾದ ಹುರುಳಿಯೂ ಬೆಳೆಯುವುದಿಲ್ಲ.
  ಆದರೆ ಹುಳ್ಳಿಕಟ್ಟು ಪ್ರಿಯರಿಗಾಗಿ ದಿಡೀರ್ ಹುರುಳಿ ಕಟ್ಟಿನ ಪೇಸ್ಟ್ ಮಾರುಕಟ್ಟೆಯಲ್ಲಿದೆ ಮೊನ್ನೆ ಮಣಿಪಾಲಿಂದ ಬರುವಾಗ ಸೀತಾಕಟ್ಟೆಯ ಹೋಟೆಲ್ ನಿಂದ ತಂದ #ಕುಲ್ತಾ_ಕಡಿ ಬ್ರಾಂಡಿನ ಹುಳ್ಳಿ ಕಟ್ಟು ಅತ್ಯುತ್ತಮ ಉತ್ಪನ್ನವಾಗಿದೆ.
   ಇವತ್ತು ನಾವು ಬಳಸಿದ ಹುಳಿ ಮಾವಿನ ಕಾಯಿ ಗೊರಟು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ