Skip to main content

Blog number 2064. ಹುರುಳಿ ಕಾಳಿನಲ್ಲಿರುವ ಶಕ್ತಿ ಇದರ ರಸ ಹುರುಳಿ ಕಟ್ಟಿನ ರಸ ಕಟ್ಟು ಈಗ ದಿಡೀರ್ ತಯಾರಿಯ ಪೇಸ್ಟ್ ಆಗಿ ಲಭ್ಯವಿದೆ.

#ಒಂದು_ಕಾಲದ_ರೈತರ_ಮನೆಯ_ಎತ್ತಿನ_ಪೌಷ್ಟಿಕ_ಆಹಾರ_ಹುರುಳಿ

#ಬೇಯಿಸಿದ_ಹುರುಳಿಕಾಳು_ನೆನಸಿದ_ಹುರುಳಿ_ನುಚ್ಚು_ಎತ್ತುಗಳಿಗೆ

#ಹುರುಳಿ_ಬೇಯಿಸಿದ_ನೀರು_ಹುಳ್ಳಿ_ಕಟ್ಟು_ನಮ್ಮಂತ_ಹುಳ್ಳಿಕಟ್ಟು_ಪ್ರಿಯರಿಗೆ

#ಹಿಂಗಾರಿನ_ನಂತರದ_ಇಬ್ಬನಿಯಲ್ಲಿ_ಹುರುಳಿ_ಪಸಲು

#ಹುರುಳಿ_ಕಾಳು_ಸಿಪ್ಪೆ_ಬೂಸ_ಹುರುಳಿ_ಗಿಡ_ಕೂಡ_ಜಾನುವಾರು_ಆಹಾರ

#ಈಗ_ಕೃಷಿಯಲ್ಲಿ_ಎತ್ತುಗಳಿಲ್ಲ_ಹುಳ್ಳಿ_ಬೆಳೆಯುವ_ರೈತರೂ_ಇಲ್ಲ

https://youtube.com/shorts/3fcf-CgaHwg?feature=shared

    ಎತ್ತು ಮತ್ತು ಕೋಣಗಳನ್ನು ಅವಲಂಬಿಸಿ ಕೃಷಿ ಮಾಡುವ ಕಾಲ ಹೆಚ್ಚು ಕಡಿಮೆ ಮುಗಿದೇ ಹೋಗಿದೆ, ಯಂತ್ರ ಆದಾರಿತ ಕೃಷಿಯಿಂದ ಎತ್ತು ಕೋಣ ಕೊಟ್ಟಿಗೆ ಮತ್ತು ಹುರುಳಿ ಕೂಡ ಇಲ್ಲವಾಗಿದೆ.
     ಬಿದನೂರು ನಗರದ ದೇವಗಂಗೆಯಲ್ಲಿ ನಮ್ಮ ದೊಡ್ಡಪ್ಪನ ಮನೆಯಲ್ಲಿ ಎರೆಡು ಜೊತೆ ಹಾಸನದ ಬಿಳಿ ಅಮೃತ ಮಹಲ್ ಜೋಡಿ ಎತ್ತುಗಳಿದ್ದವು ಅದಕ್ಕೆ ಪ್ರತ್ಯೇಕ ಕೊಟ್ಟಿಗೆ ಹೆಚ್ಚು ಬೆಲೆಯ ದೊಡ್ಡ ಎತ್ತುಗಳು ಪೇಟೆಗೆ ಅಕ್ಕಿ ಮಾಡಿಸಲು ದೊಡ್ಡ ಎತ್ತಿನಗಾಡಿಗೆ ಮಾತ್ರ ಸೀಮಿತವಾಗಿತ್ತು ಅದೊಂದು ತರ ಆ ಕಾಲದ ರೈತರಿಗೆ ಅವರ ಅಂತಸ್ತಿನ ಪ್ರದರ್ಶನದ ಬಾಗವೂ ಆಗಿರಬಹುದು.
   ಇದರ ಜೊತೆ ಇನ್ನೆರೆಡು ಜೋಡಿ ಸಾದಾರಣ ಎತ್ತುಗಳು ಆದರೆ ಅವು ಹೆಚ್ಚು ಶ್ರಮದ ಕೆಲಸದ ಕೃಷಿ ಮಾಡುವಂತವು ಅವುಗಳಿಗೆ ಕೂಡ ಕೊಟ್ಟಿಗೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಆಗಿರುತ್ತಿತ್ತು.
   ಅವುಗಳಿಗೆ ನಿತ್ಯ ಸಂಜೆ ಬೇಯಿಸಿದ ಹುರುಳಿ ಕಾಳು ನೀಡಲೇ ಬೇಕು ಕಾರಣ ಹುರುಳಿಯಲ್ಲಿ ಇರುವ ಪೌಷ್ಟಿಕಾಂಶಗಳು ಮತ್ತು ಶೀಥ ವಾತಾವರಣದಲ್ಲಿ ದೇಹದ ಉಷ್ಣಾಂಶ ಹೆಚ್ಚು ಮಾಡುವ ಗುಣ ಇರುವುದು.
   ಆದ್ದರಿಂದ ಎತ್ತುಗಳನ್ನು ಕೃಷಿಗಾಗಿ ಪೋಷಿಸಲು ರೈತರು ಸುಗ್ಗಿ ಕೊಯಿಲು ಮುಗಿಯುವ ಮೊದಲು ಹಿಂಗಾರು ಮಳೆ ಸಮಯದಲ್ಲಿ ತಮ್ಮ ಖುಷ್ಕಿ ಭೂಮಿ ಉಳುಮೆ ಮಾಡಿ ಹುರುಳಿ ಬೀಜ ಬಿತ್ತುತ್ತಾರೆ ಹುರುಳಿ ಇಬ್ಬನಿಯಲ್ಲೇ ಪಸಲು ಬರುವ ಬೆಳೆ ಇದಕ್ಕೆ ಆಡು ಭಾಷೆಯಲ್ಲಿ ಹುಳ್ಳಿ ಅನ್ನುತ್ತಾರೆ ಮತ್ತು Horse gram ಅಂತ ಇಂಗ್ಲೀಷ್ ನಲ್ಲಿ.
    ಹುರುಳಿ ಕಾಳು ಕಟ್ಟಿದ ಮೇಲೆ ಹುರುಳಿ ಗಿಡ ಬೇರು ಸಮೇತ ಕೈಯಲ್ಲೇ ಕೀಳಬೇಕು ನಂತರ ಬಿಸಿಲಲ್ಲಿ ಒಣಗಿಸಿ ಹುರುಳಿ ಬೀಜ ಬೇರೆ ಮಾಡಿ, ಹುರುಳಿ ಸಿಪ್ಪೆ ಹುರುಳಿ ಗಿಡಗಳ ಬೂಸ ಕೂಡ ಜಾನುವಾರ ಆಹಾರವಾಗಿ ಬಳಸುತ್ತಾರೆ, ಹುರುಳಿ ಕಾಳು ಸಂಗ್ರಹಿಸಿ ವರ್ಷ ಪೂರ್ತಿ ಎತ್ತುಗಳಿಗೆ ಬೇಯಿಸಿದ ಹುರುಳಿ ಕಾಳು ನೀಡುತ್ತಾರೆ, ಬಸಿದ ಹುಳ್ಳಿ ಕಟ್ಟು (ನೀರು) ಅದಕ್ಕೆ ರುಚಿಗೆ ತಕ್ಕ ಮೆಣಸು - ಹುಳಿ - ಉಪ್ಪು ಸೇರಿಸಿ ಬೇಯಿಸಿದರೆ ಅನ್ನದ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.
  ಹುಳಿಯಾಗಿ ಹುಣಸೆ - ಅಮಟೆಕಾಯಿ - ಮಾವಿನಕಾಯಿ - ಹುಳಿಮಾವಿನ ಹಣ್ಣು ಕೂಡ ಆಯಾ ಕಾಲಕ್ಕೆ ತಕ್ಕಂತೆ ಬಳಸುತ್ತಾರೆ.
  ಆದ್ದರಿಂದ ಹುರುಳಿ ಬೇಯಿಸುವರ ಮನೆಗೆ ಸುತ್ತಮುತ್ತಲಿನ ಮನೆಯವರು ಪಾತ್ರೆ ಜೊತೆಗೆ ಹುರುಳಿ ಕಟ್ಟಿಗಾಗಿ ಕಾಯುತ್ತಿದ್ದರು.
  ಹುರುಳಿ ಕೊಯಿಲು ಕಷ್ಟದ ಕೆಲಸ ಇದಕ್ಕೆ ಕೃಷಿ ಕಾರ್ಮಿಕರ ಬಳಸಿದರೆ ಅವರಿಗೆ ದುಬಾರಿ ವೇತನ ನೀಡಿದರೆ ಹುರುಳಿ ಬೇಸಾಯ ದುಬಾರಿ ಆದ್ದರಿಂದ ಆಗೆಲ್ಲ ಹುರುಳಿ ಕೊಯಿಲು ಮಾಡಲು ಶಾಲಾ ವಿದ್ಯಾರ್ಥಿಗಳನ್ನು ಕಡಿಮೆ ಸಂಬಳದಲ್ಲಿ ಪ್ರತಿ ಬೆಳಿಗ್ಗೆ ಶಾಲೆಗೆ ಹೋಗುವ ಮೊದಲು ಬಳಸುತ್ತಿದ್ದರು ಇದರಿಂದ ಕಡಿಮೆ ಕೃಷಿ ವೆಚ್ಚದಲ್ಲಿ ಹುರುಳಿ ಸುಗ್ಗಿ ಆಗುತ್ತಿತ್ತು.
    ಆದರೆ ಈಗ ಬದಲಾದ ಕಾಲದಲ್ಲಿ ಕೃಷಿಗಾಗಿ ಎತ್ತುಗಳಿಲ್ಲ ಮತ್ತು ಅವುಗಳ ಪೋಷಣೆಗೆ ಬೇಕಾದ ಹುರುಳಿಯೂ ಬೆಳೆಯುವುದಿಲ್ಲ.
  ಆದರೆ ಹುಳ್ಳಿಕಟ್ಟು ಪ್ರಿಯರಿಗಾಗಿ ದಿಡೀರ್ ಹುರುಳಿ ಕಟ್ಟಿನ ಪೇಸ್ಟ್ ಮಾರುಕಟ್ಟೆಯಲ್ಲಿದೆ ಮೊನ್ನೆ ಮಣಿಪಾಲಿಂದ ಬರುವಾಗ ಸೀತಾಕಟ್ಟೆಯ ಹೋಟೆಲ್ ನಿಂದ ತಂದ #ಕುಲ್ತಾ_ಕಡಿ ಬ್ರಾಂಡಿನ ಹುಳ್ಳಿ ಕಟ್ಟು ಅತ್ಯುತ್ತಮ ಉತ್ಪನ್ನವಾಗಿದೆ.
   ಇವತ್ತು ನಾವು ಬಳಸಿದ ಹುಳಿ ಮಾವಿನ ಕಾಯಿ ಗೊರಟು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...