Skip to main content

Blog number 2077. ನಿನ್ನೆ ನನ್ನ ಅತಿಥಿಗಳು ಹೊಸ ತಲೆಮಾರಿನ ಯುವ ರಾಜಕಾರಣಿಗಳು

#ನಿನ್ನೆ_ನನ್ನ_ಅತಿಥಿಗಳು_ಹೊಸತಲೆಮಾರಿನ_ಯುವ_ರಾಜಕಾರಣಿಗಳು

#ನಗರನಿತಿನ್_ಗರ್ತಿಕೆರೆ_ಗ್ರಾಮಪಂಚಾಯತ್_ಅಧ್ಯಕ್ಷ_ಕೃಷ್ಣಮೂರ್ತಿ_ಮಂಡ್ರಿಸಂತೋಷ್_ಮತ್ತು_ಗೆಳೆಯರು

#ರಾಜಕೀಯ_ಪಕ್ಷಗಳು_ಇಂತವರನ್ನು_ಬೆಳೆಸಬೇಕು.


   ನನ್ನ ಪೇಸ್ ಬುಕ್ ಪ್ರೆಂಡ್ ಆಗಿರುವ ಬಿದನೂರು ನಗರದ ನಿತಿನ್ ಅವರನ್ನ ಕರೆತಂದು ಮುಖತಃ ಪರಿಚಯ ಮಾಡಿಸಿದವರು ಆಲಗೇರಿ ಮಂಡ್ರಿಯ ವಿದ್ಯುತ್ ಮೋಟಾರ್ ಮಾರಾಟಗಾರರಾದ ಮಂಡ್ರಿ ಸಂತೋಷ್.
  ಬಿದನೂರು ನಗರದ ದೇವಗಂಗೆ ನನ್ನ ದೊಡ್ಡಮ್ಮನ ಮನೆ ಇರುವ ಊರು, ಅಲ್ಲಿನ ಐತಿಹಾಸಿಕ ಕೆಳದಿ ಅರಸರ ನೈಸರ್ಗಿಕ ಈಜುಕೊಳದಲ್ಲಿಯೇ ನಾನು ಈಜು ಕಲಿತದ್ದು.
  ದೇವಗಂಗೆ ಸಮೀಪದ ಬಸವನಬ್ಯಾಣ ನಗರ ನಿತೀನ್ ಅವರ ಊರು ಈಗಲೂ ಮಳೆಗಾಲದಲ್ಲಿ ಶರಾವತಿ ಹಿನ್ನಿರಿನಿಂದ ದೇವಗಂಗೆ, ಬಸವನಬ್ಯಾಣದ ನಿವಾಸಿಗಳು ವಿದ್ಯಾರ್ಥಿಗಳು ದೋಣಿಯಲ್ಲೇ ನಗರದ ಆಸ್ಪತ್ರೆ ರಸ್ತೆಗೆ ತಲುಪಬೇಕು ಈಗ ಯಾಂತ್ರಿಕೃತ ದೋಣಿಗಳಿದೆ ಆಗ 70 ರ ದಶಕದಲ್ಲಿ ಮರದ ದೋಣಿಗಳು ಹುಟ್ಟು ಹಾಕಿ ದಡ ಮುಟ್ಟಿಸುವ ಅಂಬಿಗರು ಇದ್ದರು.
   ನಿತಿನ್ ತೀರ್ಥಹಳ್ಳಿಯಲ್ಲಿ ವಿದ್ಯಾಬ್ಯಾಸ ಮಾಡುವಾಗ ಸ್ಥಳಿಯ ಪತ್ರಿಕೆಗಳಲ್ಲಿ ವರದಿಗಾರಿಕೆ ಮಾಡಿದ ಬಗ್ಗೆ ನಂತರ ಲೇಖಕರಾದ ಬಗ್ಗೆ ವಿವರಿಸಿದರು.
   ಇವರ ಜೊತೆ ಹೊಸನಗರ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪರ ಷಡಕರಾಗಿದ್ದ ಗಂದರಳ್ಳಿ ಡಾಕ್ಟರ್ ನಾರಾಯಣಪ್ಪರ ಸಹೋದರರ ಪುತ್ರ ಗರ್ತಿಕೆರೆಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಮೂರ್ತಿ ಮತ್ತು ಅವರ ಇಬ್ಬರು ಗೆಳೆಯರು ಬಂದಿದ್ದರು.
   ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ರಾಘವೇಂದ್ರರ ಪರವಾಗಿ ಪ್ರಚಾರದಲ್ಲಿದ್ದಾರೆ ಲಂಚ್ ಬ್ರೇಕ್ ನಲ್ಲಿ ಊಟಕ್ಕಾಗಿ ನಮ್ಮ #ಮಲ್ಲಿಕಾ_ವೆಜ್ ಗೆ ಬಂದವರು ನನ್ನ ಬೇಟಿಗೆ ನನ್ನ ಕಛೇರಿಗೆ ಬಂದಿದ್ದರು.
   ನಾನು ಸುಮ್ಮನೆ ಮಾತಿನ ಮಧ್ಯೆ ಅವರನ್ನ ಪ್ರಸ್ತುತ ಚುನಾವಣಾ ವಿಚಾರವಾಗಿ ಮಾತಿಗೆಳೆದೆ, ಸಾಮಾನ್ಯವಾಗಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಜಾತಿ ಪಕ್ಷದ ಹುಚ್ಚು ಅಮಲಿನಲ್ಲಿರುತ್ತಾರೆ ಆದರೆ ಇವರಿಬ್ಬರೂ ಚುನಾವಣೆಯ ವಾಸ್ತವ ಅರಿತಿದ್ದಾರೆ.
   ಇವರಿಬ್ಬರು ಈಡಿಗ ಸಮುದಾಯದ ಯುವ ನಾಯಕರು ಇವರ ಬೆಂಬಲ ಬಿಜೆಪಿಯ ಅಭ್ಯರ್ಥಿಗೆ, ಇವರಿಗೆ ಕಾಂಗ್ರೇಸ್ ಪಕ್ಷದ ಗೃಹಲಕ್ಷ್ಮಿ ಯೋಜನೆಯ ಮಾಸಿಕ 2000 ರೂಪಾಯಿ ಮತ್ತು ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಕಳೆದ ಲೋಕಸಭಾ ಚುನಾವಣೆಯ ಲೀಡ್ ಕಡಿಮೆ ಮಾಡುತ್ತದೆ ಎಂಬ ಆತಂಕವಿದೆ ಮತ್ತು ತಮ್ಮ ಪಕ್ಷ ಗೆಲ್ಲುತ್ತದೆಂಬ ಹುಮ್ಮಸ್ಸು ಅವರಲ್ಲಿದೆ.
   ಇವರೆಲ್ಲ ರಾಜಕೀಯ ಮಾತ್ರ ನಂಬಿದವರಲ್ಲ ಸ್ವಂತ ಕೃಷಿ ಮತ್ತು ವ್ಯಾಪಾರ ವ್ಯವಹಾರ ಕೂಡ ಹೊಂದಿದ್ದಾರೆ ಈ ರೀತಿ ವಿಧ್ಯೆ ತಿಳುವಳಿಕೆ ಜ್ಞಾನದ ಇಂತಹ ಯುವಕರನ್ನು ನಾನು ಮೆಚ್ಚುತ್ತೇನೆ.
   ನಾನು ಕಳೆದ 10 ವರ್ಷದಿಂದ ರಾಜಕೀಯ ನಿವೃತ್ತಿ ಹೊಂದಿರುವುದರಿಂದ ಯಾವುದೇ ರಾಜಕೀಯ ಪಕ್ಷಕ್ಕೆ ಸೇರದಿರುವುದರಿಂದ ನನ್ನ ಬೇಟಿಗೆ ಬರುವವರಿಗೆ ಯಾವುದೇ ರಾಜಕಾರಣದ ಚರ್ಚೆಗೆ ಲಘು ಬಿಗು ಇರುವುದಿಲ್ಲವಾದ್ದರಿಂದ ಇಂತಹ ಯುವಕರು ಹೆಚ್ಚು ಮಾತಾಡುತ್ತಾರೆ ಇದರಿಂದ ಚುನಾವಣೆಯ ಒಂದು ರೀತಿ ಸಮೀಕ್ಷೆ ಆಗುತ್ತದೆ.
  ಇವರ ರಾಜಕೀಯ ಭವಿಷ್ಯ ಕೂಡ ಉಜ್ವಲವಾಗಲಿ ಎಂದು ಹಾರೈಸಿ ಚಹಾದೊಂದಿಗೆ ಬೀಳ್ಕೊಟ್ಟೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...