Skip to main content

Blog number 1859. ಸಂಪ್ರದಾಯಿಕ ದೇಸಿ ಗೃಹ ಬಳಕೆಯ ಕೋಳಿ ಸಾಕಾಣಿಕೆ ಈಗಿಲ್ಲ ಇದು ಹಳ್ಳಿಯ ಪ್ರತಿ ಕುಟುಂಬದ ಆಹಾರ ಸ್ವಾವಲಂಬನೆ ಮತ್ತು ಆರ್ಥಿಕ ಸಬಲತೆಗೆ ಪೂರಕವಾಗಿತ್ತು.

#ಕುಟುಂಬದ_ಆರ್ಥಿಕ_ಸಬಲತೆಗೆ_ಕಾರಣವಾಗಿದ್ದ

#ಗೃಹಬಳಕೆಯ_ಕೋಳಿ_ಸಾಕಾಣಿಕೆ.

#ಒಂದು_ಕಾಲದಲ್ಲಿ_ಕುಟುಂಬದ_ಆರ್ಥಿಕ_ಬದ್ರತೆಗೆ_ಉರುಗೋಲಾಗಿತ್ತು.

#ಅದುನಿಕ_ಡೈರಿ_ಪೌಲ್ಟ್ರಿ_ಕೈಗಾರಿಕೆಗಳಾದ್ದರಿಂದ_ಗೃಹ_ಕೋಳಿ_ಸಾಕಾಣಿಕೆ_ನಶಿಸಿದೆ.

#ಸಮ_ಪಾಲಿನ_ಕೋಳಿ_ಹಾವಿನ_ವಿಷ_ನಿವಾರಣೆಯ_ಕಪ್ಪು_ಕೋಳಿ

#ಮಂತ್ರವಾದಿಗಳು_ಕೇಳುವ_ಕೆಂಪು_ಕೋಳಿ_ಹಳ್ಳಿಯ_ದೈವಕ್ಕೆ_ಹರಕೆಯ_ಕೋಳಿ

#ಆಗೆಲ್ಲ_ಹಳ್ಳಿಯ_ದೈವ_ಬೂತಗಳು_ಪಾರಂ_ಕೋಳಿ_ಬಲಿ_ಒಪ್ಪಿಕೊಂಡಿರದ_ಕಾಲ

#ಇದು_ಸೋಷಿಯಲ್_ಸೈನ್ಸ್_ಸಂಶೋದನೆ_ವಿಷಯವೇ_ಆಗಿದೆ.

  ಆಗೆಲ್ಲ ಅಂದರೆ ಬಹಳ ದಿನ ಆಗಿಲ್ಲ, 30 ವರ್ಷದ ಹಿಂದೆ ಈ ಪಾಟಿ ಕೋಳಿ ಮಾಂಸದ ಪೋಲ್ಟ್ರಿ ಉದ್ಯಮ ಬೆಳೆದಿರಲಿಲ್ಲ, ಹಳ್ಳಿಗಳ ದೈವಗಳು ಬೂತಗಳು ಪಾರಂ ಕೋಳಿ ಬಲಿ ಒಪ್ಪಿಕೊಂಡಿರದ ಕಾಲದಲ್ಲಿ ಹಳ್ಳಿಯ ಪ್ರತಿ ಮನೆಯಲ್ಲೂ ಕೋಳಿ ಗೂಡು ಇರುತ್ತಿತ್ತು ಅದರಲ್ಲಿ ಕನಿಷ್ಟ ಹತ್ತಿಪ್ಪತ್ತು ಕೋಳಿಗಳು ಇರುತ್ತಿದ್ದವು.
  ಮನೆಯ ಅತ್ಯಂತ ಕಿರಿಯ ವಯಸ್ಸಿನ ಸದಸ್ಯನಿಗೆ ಬೆಳಿಗ್ಗೆ ಕೋಳಿ ಗೂಡಿನ ಬಾಗಿಲು ತೆಗದು ಕೋಳಿ ಹೊರಬಿಡುವುದು ಅವು ಸೂರ್ಯ ಮುಳುಗುವ ಸಮಯದಲ್ಲಿ ಹೊಟ್ಟೆ ತುಂಬಿಸಿಕೊಂಡು ಗೂಡಿಗೆ ಮರಳುವಾಗ ಗೂಡಿಗೆ ಕೂಡಿ ಬಾಗಿಲು ಭದ್ರ ಮಾಡುವ ಕೆಲಸ.
  ಕೋಳಿ ಗೂಡಿನಲ್ಲಿ ಮೊಟ್ಟೆ ಸಂಗ್ರಹಿಸುವುದು, ಮೊಟ್ಟಿ ಮರಿ ಮಾಡಲು ಕಾವು ನೀಡಲು ಕುಳಿತ ಕೋಳಿ ಆರೈಕೆಗಳು ಮಾಡ ಬೇಕಿತ್ತು.
 ಹತ್ತಾರು ಹೆಣ್ಣು ಕೋಳಿಗೆ ಒಂದೆರೆಡು ಗಂಡು ಹುಂಜಾ ಇರುತ್ತಿತ್ತು, ಇದರ ಮಧ್ಯದಲ್ಲಿ ದೈವಗಳಿಗೆ, ಬೂತಗಳಿಗೆ ಮೀಸಲಿಟ್ಟ ಹರಕೆ ಕೋಳಿ ಹುಂಜಗಳು ಇರುತ್ತಿದ್ದವು.
  ಕೋಳಿ ಮೊಟ್ಟೆ ತಿನ್ನಲು ಬರುವ ನಾಗರ ಹಾವು, ಕೋಳಿ ಮರಿ ಎತ್ತಿಕೊಂಡು ಹೋಗುವ ಗಿಡುಗಗಳು, ಇಡೀ ದೊಡ್ಡ ಕೋಳಿಯನ್ನೆ ಕಬಳಿಸುವ ಕಾಡಿನ ನರಿಗಳು ಮತ್ತು ಕೋಳಿ ಮಾಂಸ ಪ್ರಿಯ ಕೋಳಿ ಕಳ್ಳರ ಕಾಟವೂ ಇರುತ್ತಿತ್ತು.
  ಅವಿಭಕ್ತ ಕುಟುಂಬದಲ್ಲಿ ಆಯಾ ಸೊಸೆಯಿಂದರ ಕೋಳಿಗಳು ಅವಿಭಕ್ತ ಕೋಳಿ ಗೂಡಿನಲ್ಲಿ ಇರುತ್ತಿದ್ದವು ಮತ್ತು ಅವರವರ ಅಂದು ಬಂದುಗಳು ಬಂದಾಗ ಅವರ ಕೋಳಿ ಪಲ್ಯ ಆಗುತ್ತಿತ್ತು. ಸಾಕು ಕೋಳಿಗಳಿಂದ ಕುಟುಂಬದಲ್ಲಿ ವ್ಯಾಜ್ಯಗಳು, ಇರುಸು ಮುರುಸುಗಳಾಗಿ ಕುಟುಂಬಗಳಲ್ಲಿ ಹಿಸ್ಸೆಗಳಾಗಿದ ಉಧಾಹರಣೆಗಳಿದೆ.
   ಹಾವು ಕಚ್ಚಿದರೆ ವಿಷ ತೆಗೆಯಲು ಬೇಕಾದ ಕಪ್ಪು ಬಣ್ಣದ ಒಂದೆರೆಡು ಕೋಳಿಗಳು, ಮಾಟ ಮಂತ್ರ ತೆಗೆಯಲು ಮಂತ್ರವಾದಿಗಳಿಗೆ ಬೇಕಾದ ಕೆಂಪು ಬಣ್ಣದ ಹುಂಜಾಗಳಿಗೂ ಗೂಡಿನಲ್ಲಿ ಸ್ಥಾನವಿರುತ್ತಿತ್ತು.
  ಸಮ ಪಾಲಿನ ಕೋಳಿಗಳದ್ದೆ ಬೇರೆ ಕಥೆ, ವೀಳ್ಯದ ಎಲೆ ಮತ್ತು ಮೀನು ವರ್ಷ ಪೂರ್ತಿ ವಾರ ವಾರ ನೀಡಿ ಅದರ ಬೆಲೆಯ ಬತ್ತ ವರ್ತನೆಗೆ ಪಡೆಯುತ್ತಿದ್ದ ಬಾಯಮ್ಮಗಳು ಹಾಗೂ ಬೂಬಮ್ಮಗಳು ಎಲ್ಲಿಂದಲೋ ಕೋಳಿ ಮರಿ (ವಿಶಿಷ್ಟ ಬಣ್ಣ ಮತ್ತು ಜಾತಿಯದ್ದು ) ಸಾಕಲು ತಂದು ಕೊಡುತ್ತಿದ್ದರು ಅದರ ಮೊಟ್ಟೆಯಿಂದ ಬಂದ ಮರಿಗಳು ಅರ್ಧ ಸಾಕಿದವರಿಗೆ ಉಳಿದ ಅದ೯ ಸಂಖ್ಯೆ ಮರಿ ಬಾಯಮ್ಮ ಅಥವ ಬೂಬಮ್ಮರದ್ದು.
  ಆಗಾಗ ಕಾಡುವ ಕೋಳಿ ಕಾಯಿಲೆಯಿಂದ ಕೋಳಿ ಗೂಡು ಗೂಡೇ ಖಾಲಿ ಆಗುತ್ತಿದ್ದಾಗ ಮನೆಯ ಗೃಹಿಣಿಯರ ಪರದಾಟ ನೋಡುವಂತಿಲ್ಲ, ಆಗಾಗ್ಗೆ ಕೋಳಿ ಹೇನು ಆಗಿ ಅದರಿಂದ ಆಗುತ್ತಿದ್ದ ಪೀಡನೆಗಳು ಹೀಗೆ ಒಂದೇ ಎರಡೇ? ಸಮಸ್ಯೆಗಳು.
  ಮೊದಲೆಲ್ಲ ಬತ್ತ ಒನಕೆಯ ಒರಳಲ್ಲಿ ಕುಟ್ಟಿ ಅಕ್ಕಿ ಮಾಡಿ ಹಸನು ಮಾಡಿದಾಗ ಉಳಿಯುತ್ತಿದ್ದ ನುಚ್ಚು, ನೆಲ್ಲಕ್ಕಿ ಕೋಳಿ ಮತ್ತು ಎಮ್ಮೆ ದನಗಳಿಗೆ ಆಹಾರ ಆಗುತ್ತಿತ್ತು ಕಾಲ ಬದಲಾದಂತೆ ಅಕ್ಕಿ ಗಿರಣಿಯ ನುಚ್ಚು, ನೆಲ್ಲಕ್ಕಿ ಜೊತೆಗೆ ತೌಡು  ಇವುಗಳಿಗೆ ಬಳಕೆ ಆಗಲು ಪ್ರಾರಂಬಿಸಿತು.
  ಕೆಲ ವರ್ಷದ ಹಿಂದೆ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಪಶು ಸಂಗೋಪನಾ ಅಧಿಕಾರಿಯೋರ್ವರು ಎಷ್ಟೋ ಲಕ್ಷ ಕೋಳಿಗಳಿಗೆ ಲಸಿಕೆ ನೀಡಿದ್ದಾಗಿ ನೀಡಿದ ಹೇಳಿಕೆ ಸಭೆಯಲ್ಲಿ ಅಲ್ಲೋಲ ಕಲ್ಲೋಲ ಆಗಿತ್ತು (ಸುಳ್ಳು ಲೆಕ್ಕ) .
  ಈಗ ಪೌಲ್ಟ್ರಿ ಉದ್ದಿಮೆ ಆಗಿದೆ, ಹಳ್ಳಿಯ ಗಲ್ಲಿಗಲ್ಲಿಗಳಲ್ಲಿ ಕೋಳಿ ಮಾಂಸದ ಅಂಗಡಿ ಬಂದಿದೆ, ಕೋಳಿ ಸಾಕುವ ನಾಜೂಕಿನ ಗೃಹಿಣಿಯರು ಈಗಿಲ್ಲ, ತಂದೂರಿ ಕೋಳಿ ಗ್ರಿಲ್ ಕೋಳಿ ಅಂತ ನವೀನ ಕೋಳಿ ಪದಾರ್ಥಗಳು ಸೇರಿಕೊಂಡಿದೆ.
  ಮಲೆನಾಡಿನ ಕೋಳಿ ಕಜ್ಜಾಯ, ಕರಾವಳಿಯ ಕೋರಿ ರೊಟ್ಟಿ, ಕೋಳಿ ತಾಳ್ ಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಹಂತ ತಲುಪಿದೆ.
  ಬತ್ತ ಬೆಳೆದರೆ ನಷ್ಟ ಅಂತಾಗಿದೆ, ಊಟಕ್ಕೆ ತರಹಾವಾರಿ ಅಕ್ಕಿ ಖರೀದಿ ನಡೆದಿದೆ,ಒ0ದು ಕಾಲದ ನೆಲ್ಲಕ್ಕಿ, ನುಚ್ಚು ಮತ್ತು ತೌಡು ಹೊಸ ತಲೆಮಾರಿಗೆ ಗೊತ್ತೂ ಇಲ್ಲ.
  ಹಳ್ಳಿಗಳಲ್ಲಿ ಎಲ್ಲೆಂದರಲ್ಲಿ ಕೋಳಿ ಅಂಗಡಿ ತ್ಯಾಜ್ಯ ಎಸೆಯುತ್ತಾರೆ ಅದನ್ನು ತಿಂದು ಬೀದಿಯಲ್ಲಿ ಹೋಗುವವರನ್ನು ಗುರಾಯಿಸುವ ಬೀದಿ ನಾಯಿಗಳು ತಂಡ ತಂಡವಾಗಿ ಬಲಿಷ್ಟವಾಗಿ ಮಕ್ಕಳ ಮೇಲೆ ಎರಗುತ್ತಿದೆ.
  ಹೀಗೆ ಸಮಾಜದಲ್ಲಿ ಕೋಳಿ ಸಾಕಾಣಿಕೆ ಉದ್ಯಮದ ರೂಪ ಪಡೆಯುವ ಮೊದಲು ಗೃಹ ಬಳಕೆಗಾಗಿ ಕೋಳಿ ಸಾಕಾಣಿಕೆ ಹಳ್ಳಿಯ ಪ್ರತಿ ಮನೆಯ ಆಹಾರ ನಿರ್ವಹಣೆಗೆ, ಹಬ್ಬ ಹರಿದಿನಗಳಲ್ಲಿ ಸಮಾರಾಧನೆಗೆ ಬಳಕೆ ಆಗಿ ಆರ್ಥಿಕ ಸಬಲತೆ ಮತ್ತು  ಆಹಾರ ಸ್ವಾವಲಂಬನೆ ನೀಡಿತ್ತು ಎಂಬುದು ಈಗ ನೆನಪು ಮಾತ್ರ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ