Skip to main content

Blog number 1876. ಪ್ಲಾಸ್ಟಿಕ್ ಕೈ ಚೀಲಕ್ಕೆ ಪರ್ಯಾಯವಾಗಿ ಮೆಕ್ಕೆ ಜೋಳದ ಗಂಜಿಯಿಂದ ತಯಾರಾಗುತ್ತಿರುವ ಮಣ್ಣಿನಲ್ಲಿ ಕರಗುವ ಪರಿಸರ ಸ್ನೇಹಿ ಕೈ ಚೀಲ ನಮ್ಮ ಮಲ್ಲಿಕಾ ವೆಜ್ ಬಳಸುತ್ತಿದೆ.

https://youtu.be/EBI7L_t7PRU?feature=shared

#ಮೆಕ್ಕೆ_ಜೋಳದ_ಗಂಜಿಯಿಂದ_ಪ್ಲಾಸ್ಟಿಕ್_ಪಯಾ೯ಯ_ಕ್ಯಾರಿ_ಬ್ಯಾಗ್ 

#ಹೋಟೆಲ್_ಮಾಲಿಕರ_ಸಂಘಟನೆಗಳು_ಈ_ಕ್ಯಾರಿ_ಬ್ಯಾಗ್_ಗಳಿಗೆ_ಬೆಂಬಲಿಸಬೇಕು

#ಇವತ್ತು_ನಮ್ಮ_ಮಲ್ಲಿಕಾ_ವೆಜ್_ಗೆ_ತಲುಪಿದೆ.

#ಐ_ಆಮ್_ನಾಟ್_ಪ್ಲಾಸ್ಟಿಕ್

#ಬಯೋಡಿಗ್ರೇಡೇಬಲ್_ಕಾಂಪೋಸ್ಟೇಬಲ್

#ಮೇಡ್_ಪ್ರಮ್_ಕಾರ್ನ್_ಸ್ಟಾರ್ಚ್

#ಎನ್ನುವ_ವಾಕ್ಯದಲ್ಲಿ_ಉದ್ಯಮಿ_ಗಣೇಶ್_ಅಂಗಡಿ_ಹೊಸ_ಉದ್ಯಮ_ಪ್ರಾರಂಬಿಸಿದ್ದಾರೆ.
  ಮೊನ್ನೆ ಸಂಜೆ ನನ್ನ ಆಫೀಸಿನ ಟೇಬಲ್ ಮೇಲೆ ಹಸಿರು ಬಣ್ಣದ 16 x 20 ಸೈಜಿನ ಕ್ಯಾರಿ ಬ್ಯಾಗ್ ಇತ್ತು ಅದರ ಮೇಲೆ ಫೋನ್ ನಂಬರ್  98800 44040 ಬರೆದಿತ್ತು.
  ನಾನು ಯೋಚಿಸಿದ್ದು ಯಾರೋ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಮಾರಾಟಗಾರರು ಸ್ಯಾಂಪಲ್ ಇಟ್ಟಿದ್ದಾರೆ ಅಂತ ಭಾವಿಸಿ ಕೈಯ ಬೆರಳಿಂದ ಸ್ಪರ್ಶಿಸಿದರೆ ಪ್ಲಾಸ್ಟಿಕ್ ಅಲ್ಲ ಅನ್ನಿಸಿತು ಈ ಕ್ಯಾರಿ ಬ್ಯಾಗ್ ಮೇಲೆ ಐ ಆಮ್ ನಾಟ್ ಪ್ಲಾಸ್ಟಿಕ್ - ಬಯೋಡಿಗ್ರೇಡೇಬಲ್- ಕಾಂಪೋಸ್ಟೇಬಲ್ - ಮೇಡ್ ಪ್ರಮ್ ಕಾರ್ನ್ ಸ್ಟಾರ್ಚ್ ಅನ್ನುವ ವಾಕ್ಯಗಳು ಅಚ್ಚಾಗಿತ್ತು.
   ಮೇಲಿನ ಸಂಖ್ಯೆಗೆ ಸಂದೇಶ ಕಳಿಸಿ ವಿವರ ಕೇಳಿದೆ ಸ್ವಲ್ಪ ಸಮಯದ ನಂತರ ಅವರಿಂದ ಫೋನ್ ಬಂತು ಅವರು ಗಣೇಶ್ ಅಂಗಡಿ ಅಂತ ಶಿವಮೊಗ್ಗ ಸಮೀಪದಲ್ಲಿನ ಗಾಜನೂರಿನಲ್ಲಿ ಅಡಿಕೆ ತೋಟ ಇದೆ, ಔಷಧಿಗಳ ಸಗಟು ವ್ಯಾಪಾರವಿದೆ, ಬೆಂಗಳೂರಲ್ಲಿ ಈ ಹೊಸ ಪರಿಸರ ಸ್ನೇಹಿ ಉದ್ಯಮ ಪ್ರಾರಂಬಿಸಿದ್ದಾರೆ ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೊದಲು ಸಾಗರದ ವರದಳಿಯ ಶ್ರೀಧರಾಶ್ರಮಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿ ವಾಪಾಸಾಗುವಾಗ ನಮ್ಮ #ಮಲ್ಲಿಕಾ_ವೆಜ್ ನಲ್ಲಿ ಉಪಹಾರ ಸೇವಿಸಲು ನಿಲ್ಲಿಸಿದ್ದಾರೆ (ಈ ಮಾರ್ಗದಲ್ಲಿ ಯಾವಾಗಲು ನಮ್ಮ ಮಲ್ಲಿಕಾ ವೆಜ್ ಕಾಫಿ ಅವರಿಗೆ ಇಷ್ಟವಂತೆ) ನನ್ನ ಆಫೀಸಿನಲ್ಲಿ ಈ ಪರಿಸರ ಸ್ನೇಹಿ ಕ್ಯಾರಿ ಬ್ಯಾಗ್ ಸ್ಯಾಂಪಲ್ ಇಟ್ಟು ಹೋಗಿದ್ದಾರೆ.
  ಅವರಿಗೆ ನಾನು ಸಂಪರ್ಕ ಮಾಡಿದ್ದು ಖುಷಿ ತಂದಿದೆ ಅಂದರು ನನಗೂ ಅವರ ಉತ್ಪನ್ನ ತುಂಬಾ ಖುಷಿ ತಂದಿದೆ ಪ್ಲಾಸ್ಟಿಕ್ ಬದಲಿ ಮಣ್ಣಿನಲ್ಲಿ ಕರಗುವ ಕ್ಯಾರಿ ಬ್ಯಾಗ್ ಬೇಕಾಗಿದೆ ಅದರಲ್ಲೂ ಯಥೇಚ್ಛವಾಗಿ ಬೆಳೆಯುವ ಮೆಕ್ಕೆ ಜೋಳದಿಂದ ಈ ಕ್ಯಾರಿ ಬ್ಯಾಗ್ ತಯಾರಾಗುತ್ತಿದೆ ಎಂದರೆ ರೈತರ ಮೆಕ್ಕೆಜೋಳಕ್ಕೆ ಇದು ಮೌಲ್ಯವರ್ಧನೆ ಮಾಡಿದಂತೆ.
   20 ವರ್ಷದ ಹಿಂದೆ ಡಿಸ್ಕವರಿ ಚಾನಲ್ ಇಂತಹ ಹೊಸ ಅವಿಷ್ಕಾರದ ಸಂಶೋದನೆಯ ಸೂಚನೆಯ ತಿಳಿಸಿತ್ತು ಅದು ನನಸಾಗಿದೆ.
   ಒಂದು ಕೇಜಿಗೆ ರೂ 230 ರಂತೆ ಕ್ಯಾರಿ ಬ್ಯಾಗ್ ಮಾರಾಟ ಮಾಡುತ್ತಿದ್ದಾರೆ ನಾನು 13X16 ( ಒಂದು ಕೇಜಿಯಲ್ಲಿ 102 ಕ್ಯಾರಿ ಬ್ಯಾಗ್ ಬರುತ್ತದೆ ಒಂದು ಕ್ಯಾರಿ ಬ್ಯಾಗ್ ಬೆಲೆ ರೂ 2.30) ಮತ್ತು 16 x 20 (53 ಕ್ಯಾರಿ ಬ್ಯಾಗ್ ಒಂದಕ್ಕೆ ರೂ 4.60) ತಲಾ 5 ಕೇಜಿ ಖರೀದಿಸಿದ್ದೇನೆ.
  ಈ ಮೂಲಕ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಸಬಾರದೆಂಬ ತೀರ್ಮಾನಕ್ಕೆ ಬಂದಿದ್ದೇನೆ ಆಸಕ್ತರು ಉದ್ಯಮಿ ಗಣೇಶ್ ಅಂಗಡಿ ಅವರ ಸೆಲ್ ನಂಬರ್  98800 44040 ಮೂಲಕ ಸಂಪರ್ಕಿಸಬಹುದು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...