Skip to main content

Blog number 1879. ಶಿವಮೊಗ್ಗ ಜಿಲ್ಲೆಯಲ್ಲಿ ಸುರಕ್ಷಿತ ವಾಪಾಸು ಮಾರ್ಗ ಮುಚ್ಚಿರುವ ಕಾಡಾನೆಗಳು 68 ದಿನಗಳಿಂದ ಹತಾಶೆಯಿಂದ ನಿದ್ದೆ ಆಹಾರ ಇಲ್ಲದೆ ಸಂಚರಿಸುತ್ತಿದೆ ಇವುಗಳು ತಾಳ್ಮೆ ಕಳೆದುಕೊಂಡರೆ ಜನರ ಜೊತೆ ಸಂಘರ್ಷಕ್ಕೆ ಮುಂದಾಗುವುದು ಶತಃಸಿದ್ಧ ಅಷ್ಟರಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು.

#ನಮ್ಮ_ಊರ_ಸುತ್ತಮುತ್ತ_ದಾರಿತಪ್ಪಿದ_ಕಾಡಾನೆಗಳು

#ನಿನ್ನೆ_ರಾತ್ರಿ_ಸಾಗರ_ಶಿಕಾರಿಪುರ_ಗಡಿ_ಅಂಬ್ಲಿಗೋಳ_ಡ್ಯಾಂ_ಹಿನ್ನೀರು_ಪ್ರದೇಶದಲ್ಲಿತ್ತು

#ಮುಂದಿನ_ದಿನದಲ್ಲಿ_ಅನಾಹುತ_ಸಂಭವಿಸುವ_ಮೊದಲು

#ಅರಣ್ಯ_ಇಲಾಖೆ_ಇವುಗಳ_ಸುಗಮ_ವಾಪಾಸಾತಿ_ಮಾರ್ಗ_ತೋರಿಸಬೇಕು

#ಕಾಡಾನೆ_ವಾಪಾಸು_ತನ್ನ_ಸ್ಥಳಕ್ಕೆ_ಹೋಗುವ_ಮಾರ್ಗದಲ್ಲಿ_ರೈತರು_ಅರಣ್ಯ_ಇಲಾಖೆಗೆ_ಸಹಕರಿಸ_ಬೇಕು

#ಅಕ್ಟೋಬರ್_16ರಿಂದ_ಅಂದರೆ_68_ದಿನಗಳಿಂದ_ದಿಕ್ಕು_ಕಾಣದೆ_ಆತಂತ್ರವಾಗಿದೆ.

#ರೈತರ_ಪಟಾಕಿ_ಸಾಕು_ನಾಯಿಗಳ_ಅಡೆತಡೆ_ಕಾಡಾನೆ_ಮಾರ್ಗ_ತಡೆ_ಆಗಿದೆ.

#ಶಿವಮೊಗ್ಗ_ಜಿಲ್ಲೆಯ_ಜಿಲ್ಲಾಧಿಕಾರಿಗಳು_ಈ_ಬಗ್ಗೆ_ಸೂಕ್ತ_ಕ್ರಮ_ಕೈಗೊಳ್ಳುವಂತೆ_ವಿನಂತಿಸುತ್ತೇನೆ.


   16 ಅಕ್ಟೋಬರ್ 2023 ಅಂದರೆ ಇವತ್ತಿಗೆ 68 ದಿನದ ಹಿಂದೆ ಈ ಕಾಡಾನೆಗಳು ಸಾಗರ ತಾಲೂಕಿನ ಗಡಿ ಭಾಗದ ಹೊಸನಗರ ತಾಲೂಕಿನ ಅರಸಾಳು ಕೆಂಚನಾಲ ಭಾಗದಲ್ಲಿ ಮೊದಲ ಬಾರಿಗೆ ಕಾಣಿಸಿತ್ತು ಆಗ ಕೈರದಮನೆಯಲ್ಲಿ ಸಂಜೆ 6.47 ಕ್ಕೆ ಕಾಡಾನೆ ಮತ್ತು ಅದರ ಮರಿಯ ಪೋಟೋ ಸ್ಥಳಿಯರು ತೆಗೆದಿದ್ದರು ಅದರ ಲೇಖನ ಇಲ್ಲಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಓದಬಹುದು.
https://arunprasadhombuja.blogspot.com/2023/10/blog-number-1792.html
   ನಂತರ ಚೊರಡಿ - ಕುಂಸಿ - ಅಯನೂರು ಮುಂತಾದ ಭಾಗದಲ್ಲಿ ಸಂಚರಿಸುತ್ತಿತ್ತು ಮೊನ್ನೆ ನಮ್ಮ ಆನಂದಪುರಂದ ಸಮೀಪದ ರಾಷ್ಟ್ರೀಯ ಹೆದ್ದಾರಿ ಪಕ್ಕದ  ಪತ್ರೆ ಹೊಂಡ, ಕೆರೆಹಿತ್ತಲು ಭಾಗದಲ್ಲಿ ರಾತ್ರಿ 9 ರಿಂದ ಮಧ್ಯ ರಾತ್ರಿ 2 ರ ತನಕ ಈ ಕಾಡಾನೆಗಳು ಸಂಚರಿಸಿದೆ ಇದರ ಬಗ್ಗೆ ನನ್ನ FB ಲೇಖನಕ್ಕೆ
https://arunprasadhombuja.blogspot.com/2023/12/blog-number-1873-19-2023.html
 #ಸತ್ಯನಾರಾಯಣ_ಶಿವಮೊಗ್ಗ (ಚಿಲುಮೆ ಜಡ್ಡು ರಾಮನಗದ್ದೆಯವರು) ತುಂಬಾ ಮಹತ್ವದ ವಿಷಯ ತಿಳಿಸಿದ್ದರು ಅದು ಇಲ್ಲಿ ದಾಖಲಿಸಿದ್ದೇನೆ,ಇವರು ಹೊಸ ದಿಗಂತ ಪತ್ರಿಕೆಯ ವರದಿಗಾರರು, ಭದ್ರ. ಅಭಯಾರಣ್ಯದ ಹಾಯ್ ಹೊಳೆ ಡ್ಯಾಂ ಸಮೀಪದವರು, ಕಾಡಾನೆಗಳ ಮದ್ಯ ಜೀವನ ಮಾಡುವವರು......
      ಹೌದು ಸರ್ ನಮ್ಮೂರಲ್ಲಿ‌‌ (ಚಿಲುಮೆಜಡ್ಡು-ಗಾಮನಗದ್ದೆ) ನಾಲ್ಕು ಬಂದಿದ್ದವು. ಅದರಲ್ಲಿ ಒಂದು ಮರಿ ಇದೆ. ಅವುಗಳಲ್ಲಿ ಒಂದು ಈ ಭಾಗದಲ್ಲಿದೆ. ಮೂರು ನಿಮ್ಮ ಕಡೆ ಹೋಗಿವೆ. ಅವು ದಿಕ್ಕು ತಪ್ಪಿದಂತಾಗಿವೆ. ಹೋದ ಕಡೆಯಲ್ಲೆಲ್ಲಾ ಪಟಾಕಿ, ಜಕಾತಿ ಶಬ್ದ ಹೀಗಾಗಿ ಪುನಃ ವಾಪಸ್ ಬರಲು ಗಡಿಬಿಡಿ ಆದಂತಿದೆ.
     ಇವು ಭದ್ರಾದಿಂದ ಬಂದ ಆನೆಗಳು ಕಳೆದ ಎರಡೂವರೆ ತಿಂಗಳಿಂದ ಮಲೇಶಂಕರ, ಂಮಜರಿಕೊಪ್ಪ, ಕೂಡಿ, ಯರೆಬೀಸು, ಸಂಪಿಗೆಹಳ್ಳ,  ಸೀಗೆಹಳ್ಳ‌ಡ್ಯಾಂ, ಚಿಲುಮೆಜಡ್ಡು, ಗಾಮನಗದ್ದೆ, ಹೊರಬೈಲು, ಮತ್ತಿಕೊಪ್ಪ ಮೊದಲಾದ ಕಡೆಗಳಲ್ಲಿ ಸುತ್ತಾಡಿ ಅಲ್ಲಲ್ಲಿ ಬೆಳೆ ಹಾನಿ ಮಾಡಿ ಅಡ್ಡೇರಿ, ಕೂರಂಬಳ್ಳಿ, ಸೂಡೂರು, ರೇಚಿಕೊಪ್ಪ ಮೂಲಕ ಬಸವಪುರ, ಕೆಂಚನಾಳ ಮೂಲಕ ತೆರಳಿವೆ. ಗುಂಪಿನಿಂದ ಒಂದು ಸಲಗ ಅಗ್ಚಿದ್ದು, ಅದು ಕೂಡಿ, ಯರೆಬೀಸು, ಮಲೇಶಂಕರ ಭಾಗದಲ್ಲಿ ಸುತ್ತಾಡುತ್ತಿದೆ. ನಿಮ್ಮ ಬದಿಗೆ ಬಂದಿರುವ ಆನೆಗಳು ಪುನಃ ಸೀಗೆಹಳ್ಳ ಡ್ಯಾಂ ಮೂಲಕವೇ ಶೆಟ್ಟಿಹಳ್ಳಿ ಕಾಡು ಸೇರಿ ಭದ್ರಾ ಕಡೆ ಹೋಗಬೇಕಿವೆ ಸರ್.
   ಶಂಕರ, ಸಿರಿಗೆರೆ, ಆಯನೂರು ಅರಸಾಳು, ಚೋರಡಿ, ಆನಂದಪುರ RFO ವ್ಯಾಪ್ತಿಯಲ್ಲಿ ಸಂಚರಿಸುತ್ತಿವೆ. ಸಿಬ್ಬಂದಿಗಳಿಗೂ ಗೊಂದಲವಾಗುತ್ತಿದೆ. ಪಾಪ ಆನೆ ಕಾಯಲೆಂದೇ ಹಂಗಾಮಿ‌ ವಾಚರ್ ನೇಮಕ‌‌ ಮಾಡಿಕೊಂಡಿದ್ದಾರೆ. ಅವರ ಕೈಯಲ್ಲಿ ೫ ಪಟಾಕಿ ಕೊಟ್ಟು ಕಳಿಸ್ತಾರೆ. ಆನೆ ಜಮೀನಿಗೆ ಬಂದಾಗ ಪಟಾಕಿ‌ ಹಚ್ಚೋದಿರಲಿ ಇವರು ಕೈಕಾಲು‌ ನಡುಗಿ ಪಾಟಾಕಿ ಬತ್ತಿ ಒಂದು ಕಡೆಯಾದರೆ ಬೆಂಕಿ ಕೊಳ್ಳಿ ಇನ್ನೊಂದು ಕಡೆ ನಡುಗುತ್ತೆ. ಅದನ್ನು‌ ನೋಡಿ ಗ್ರಾಮಸ್ಥರು ಒಂದು ತರ ಮನರಂಜನೆ ತೆಗೆದುಕೊಂಡು ಆಡಿಕೊಳ್ಳುತ್ತಾರೆ. ಹೊಟ್ಟೆ ಪಾಡಿಗೆ ಬಂದ ವಾಚರ್ ಕಥೆ ಮಾಗಿ ಚಳಿಯಲ್ಲಿ  ಮುಗಿದೆ ಹೋಗುತ್ತೆ. ಆನೆ ಕಂಡಾಗಲಂತೂ ಅವರ ಪಡೊಪಾಟಲು ಹೇಳತೀರದು. ಖಾಯಂ ಸಿಬ್ಬಂದಿ ಮನೆಯಲ್ಲಿ ಮಲಗಿರ್ತಾರೆ. ಇಂಥ ಕಡೆ ಆನೆ ಬಂದಿವೆ ಎಂದು ಫೋನ್ ಮಾಡಿ ಹೇಳಬೇಕು... ಇದು ಸತ್ಯನಾರಾಯಣ ಶಿವಮೊಗ್ಗ ಇವರ ಪ್ರತಿಕ್ರಿಯೆ ಇದು ಕಾಡಾನೆ ಸಂಚರಿಸುವ ನಮ್ಮ ಭಾಗದ ಜನರಿಗೆ ಮತ್ತು ಅರಣ್ಯ ಇಲಾಖೆಗೆ ಉತ್ತಮ ಮಾಹಿತಿ ಆಗಿದೆ.
   ಈಗ ಬೆಳಿಗ್ಗೆ ನನ್ನ ಕಿರಿಯ ಪತ್ರಕರ್ತ ಗೆಳೆಯ ನಮ್ಮ ಆನಂದಪುರಂ ಸಮೀಪದ ಅಂಬ್ಲಿಗೋಳ ಜಲಾಶಯದ ಹಿನ್ನೀರು ಪ್ರದೇಶದ ಬೈರಾಪುರದಲ್ಲಿ ರಾತ್ರಿ ಕಾಡಾನೆ ಪ್ರತ್ಯಕ್ಷ ಆದ ಮಾಹಿತಿ ತಿಳಿಸಿದ್ದಾರೆ.
  ಅಂಬ್ಲಿಗೋಳ ಜಲಾಶಯ ದಾಟಿದರೆ ಕುಡಿಗೆರೆ -ಬೆಳಂದೂರು- ತ್ಯಾಗರ್ತಿ ಕಡೆಗೆ ಅಥವ ನೇರವಾಗಿ ಪೂರ್ವಾಬಿಮುಖವಾಗಿ ಹೋದರೆ ಶಿಕಾರಿಪುರ ತಾಲ್ಲೂಕಿಗೆ ಅಥವ ಪಶ್ಚಿಮಾಭಿಮುಖವಾಗಿ ಬಂದರೆ ಆನಂದಪುರಂ ಕಡೆ ಬರಬಹುದು.
   ಅಡಿಕೆ ಕೊಯಲು - ಜೋಳ ಬತ್ತದ ಸುಗ್ಗಿ ಕಾಲ-ಶುಂಠಿ ಕೀಳವ ಸಮಯವಾದ್ದರಿಂದ ರೈತರು ತಮ್ಮ ಪಸಲು ರಕ್ಷಣೆಗೆ ತಮ್ಮ ಕೃಷಿ ಭೂಮಿಯಲ್ಲೇ ರಾತ್ರಿ ಕಳೆಯುತ್ತಾರೆ ಆದರೆ ಕಾಡಾನೆ ಸಂಚಾರ ಎಲ್ಲರಿಗೂ ಭಯ ಉಂಟು ಮಾಡಿದೆ, ತಮ್ಮ ಆದಾಯದ ಅಡಿಕೆ ತೋಟಕ್ಕೆ ನುಗ್ಗಿದರೆ ಎಂಬ ಚಿಂತೆ ಬೇರೆ ಇದಕ್ಕಾಗಿ ಬಾರಿ ಶಬ್ದ ಮಾಡುವ ದೊಡ್ಡ ದೊಡ್ಡ ಆನೆ ಗರ್ನಾಲುಗಳನ್ನು ಖರೀದಿಸಿ ಇಟ್ಟಿದ್ದಾರೆ ರಾತ್ರಿ ಸಾಕು ನಾಯಿಗಳು ಆನೆ ಆಗಮನ ಗುರುತಿಸಿ ಬೊಗಳಲು ಶುರು ಮಾಡಿದಾಗ ಅನೇ ಗರ್ನಾಲು ಸಿಡಿಸುತ್ತಾರೆ ಬಾರೀ ಶಬ್ದದಿಂದ ಕಾಡಾನೆ ವಾಪಾಸಾಗುತ್ತದೆ.
   ಆದರೆ ಇದು ಈ ದಾರಿ ತಪ್ಪಿದ ಕಾಡಾನೆ ಗುಂಪಿನಿಂದ ಪರಿಹಾರವಲ್ಲ, ಭಯದಿಂದ ದಾರಿ ತಪ್ಪಿ ಕಳೆದ 68 ದಿನಗಳಿಂದ ನಿದ್ದೆ ಆಹಾರ ತೊರೆದು ಅತಂತ್ರವಾಗಿರುವ ಈ ಕಾಡಾನೆಗಳನ್ನು ಭದ್ರಾ ಅಭಿಯಾರಣ್ಯಕ್ಕೆ ಸಾಗಿ ಹೋಗಲು ಸುರಕ್ಷಿತ ಮಾರ್ಗ ಕಲ್ಪಿಸಿಕೊಡ ಬೇಕಾಗಿದೆ ಈ ಮಾರ್ಗ ಅರಣ್ಯ ಇಲಾಖೆ ಮತ್ತು ವನ್ಯಜೀವಿ ಸಂರಕ್ಷಣಾ ಇಲಾಖೆಗೆ ಗೊತ್ತಿದೆ.
   ಈ ಮಾರ್ಗ ಗುರುತಿಸಿ ಈ ಪ್ರದೇಶದಲ್ಲಿರುವ ನಿವಾಸಿಗಳಿಗೆ ಪಟಾಕಿ ಇತ್ಯಾದಿ ಸಿಡಿಸಿ ಕಾಡಾನೆಗೆ ಭಯ ಪಡಿಸದೆ ಅವುಗಳು ಸುರಕ್ಷಿತವಾಗಿ ಹಿಂದಿರುಗಿ ಭದ್ರಾ ಅಭಯಾರಣ್ಯ ತಲುಪಲು ಸಹಾಯ ಮಾಡುವಂತೆ ಮಾಹಿತಿ ನೀಡ ಬೇಕು.
   ಈ ರೀತಿ ಕಾಡಾನೆಗಳ ಸುರಕ್ಷಿತ ಹಿಂದಿರುಗಲು ರೈತರು ಸಹಕರಿಸ ಬೇಕು ಇಲ್ಲದಿದ್ದರೆ ಇವುಗಳು ತಮ್ಮ ಸಹನೆ ಕಳೆದುಕೊಂಡರೆ ಯಾವ ಪಟಾಕಿ ಶಬ್ದಕ್ಕೂ ಹೆದರದೆ ಜನರ ಜೊತೆ ಸಂಘರ್ಷಕ್ಕೆ ಮುಂದಾದರೆ ದೊಡ್ಡ ಅನಾಹುತಗಳಾಗುವ ಸಂಭವ ಇದೆ.
  ಸರ್ಕಾರ ಅರಣ್ಯ ಇಲಾಖೆ ಸರಿಯಾದ ತೀರ್ಮಾನ ಮಾಡದಿದ್ದರೆ ಇನ್ನೂ ವಿಳಂಬ ಮಾಡಿದರೆ ಕಾಡಾನೆಗಳ ಜೀವಕ್ಕೂ ಆಪತ್ತು ಮತ್ತು ಜನರ ಜೀವಕ್ಕೂ ಅಪಾಯ.
   ಕಳೆದ 68 ದಿನಗಳಿಂದ ಸರ್ಕಾರದ ಪರವಾಗಿ ಯಾವುದೇ ಅಧಿಕಾರಿಗಳಾಗಲಿ,ಅರಣ್ಯ ಇಲಾಖೆಯಾಗಲಿ ಅಥವ ವನ್ಯ ಜೀವಿಗಳ ಸಂರಕ್ಷಣಾ ಅಧಿಕಾರಿಗಳಾಗಲಿ ಯಾವುದೇ ಬಹಿರಂಗ ಹೇಳಿಕೆ ನೀಡದಿರುವುದು ವಿಷಾದನೀಯ.
   ಕಾಡಾನೆಗಳು ಸಂಚರಿಸುತ್ತಿರುವ ಸ್ಥಳಗಳ ಬಗ್ಗೆ ಅವರಿಗೆ ಬಂದ ಮಾಹಿತಿ ಸಾಮಾಜಿಕ ಜಾಲ ತಾಣಗಳಲ್ಲಿ ಪತ್ರಿಕೆಗಳಲ್ಲಿ ಹಂಚಿ ಕೊಳ್ಳುವುದರಿಂದ ಮತ್ತು ಮುಂದೆ ಕಾಡಾನೆ ವಾಪಾಸಿಗೆ ಸೂಕ್ತ ಮಾಗ೯ ಕಲ್ಲಿಸುವ ಬಗ್ಗೆ ಸ್ಥಳಿಯ ಜನರ ಜೊತೆ ಗ್ರಾಮ ಪಂಚಾಯಿತಿಗಳಲ್ಲಿ ಚಚಿ೯ಸುವ ಮೂಲಕ ಪರಿಹಾರ ಕಂಡುಹಿಡಿಯ ಬೇಕು.
   ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ