Skip to main content

Blog number 1892. ಕವನಗಳನ್ನು ಬರೆದು ಭದ್ರಾವತಿ ಆಕಾಶವಾಣಿಯಲ್ಲಿ ಅನೇಕ ಬಾರಿ ವಾಚನ ಮಾಡಿರುವ ಆನಂದಪುರಂ ಡೆಪ್ಯೂಟಿ ರೇಂಜ್ ಪಾರೆಸ್ಟ್ ಆಫೀಸರ್ ಭದ್ರೇಶ್ ಆನಂದಪುರಂ ಹೋಬಳಿಯಲ್ಲಿ ಸಂಚರಿಸುತ್ತಿದ್ದ ಕಾಡಾನೆ ಸ್ಥಳಾಂತರದ ತಂಡದಲ್ಲೂ ಕಾರ್ಯನಿರ್ವಹಿಸಿದ್ದರು.

#ಇವತ್ತು_ಬೆಳಿಗ್ಗೆ_ಡೆಪ್ಯುಟಿ_ರೇಂಜ್_ಪಾರೆಸ್ಟ್_ಆಫೀಸರ್_ಭದ್ರೇಶ್_ಬಂದಿದ್ದರು.

#ಇವರು_ಸಾಹಿತಿಗಳೂ_ಆಗಿದ್ದಾರೆ_ಆಕಾಶವಾಣಿಯಲ್ಲಿ_ಅನೇಕ_ಬಾರಿ_ಕವನ_ವಾಚನ_ಮಾಡಿದ್ದಾರೆ.

#ಇವರೆಲ್ಲ_ಕಳೆದ_ಹದಿನೈದು_ದಿನಗಳಿಂದ_ಆನಂದಪುರಂ_ಹೋಬಳಿಯ_ಸುತ್ತ_ಮುತ್ತ_ಇದ್ದ

#ಕಾಡಾನೆಗಳನ್ನು_ಶೆಟ್ಟಿಹಳ್ಳಿ_ಅಭಿಯಾರಣ್ಯಕ್ಕೆ_ಸ್ಥಳಾಂತರಿಸುವ_ಕೆಲಸದಲ್ಲಿದ್ದರು.

#ಕಾಡಾನೆಗಳು_ಸುಗಮವಾಗಿ_ದಿನಾಂಕ_28_ಡಿಸೆಂಬರ್_2023ರ_ಬೆಳಗಿನ_ಜಾವ

#ರಿಪ್ಪನಪೇಟೆ_ಅಯನೂರು_ರಾಜ್ಯಹೆದ್ದಾರಿ_9ನೇ_ಮೈಲಿಕಲ್ಲಿನಲ್ಲಿ_ದಾಟಿದ_ಶುಭ_ಸುದ್ದಿ_ತಿಳಿಸಿದರು.

#ಯಾರಿಗೂ_ಹಾನಿ_ಮಾಡದೆ_ಕಾಡಾನೆಗಳೂ_ಸುರಕ್ಷಿತವಾಗಿ_ಹಿಂದುರಿಗಿದೆ.

   
    ನನ್ನ ತಾವರೇಹಳ್ಳಿಯ ರಬ್ಬರ್ ಪ್ಲಾಂಟೇಶನ್ ನ ರಬ್ಬರ್ ಮರಗಳನ್ನು ಕಠಾವು ಮಾಡಿದ್ದು ಉಪಗ್ರಹದ ಮೂಲಕ ಅರಣ್ಯ ಇಲಾಖೆ ಗ್ರಹಿಸಿದ್ದು ಈ ಬಗ್ಗೆ ಸೂಕ್ತ ಮಾಹಿತಿಗಾಗಿ ಈ ಪ್ರದೇಶದ ಡೆಪ್ಯೂಟಿ ರೇಂಜ್ ಪಾರೆಸ್ಟರ್ ಆಫೀಸರ್ ಭದ್ರೇಶ್ ಅವರಿಗೆ ಅರಣ್ಯಇಲಾಖೆ ಮಾಹಿತಿ ಕೇಳಿದ್ದರಿಂದ ನನ್ನ ಜಮೀನಿನ ಪಹಣಿ ಇತ್ಯಾದಿ ಮಾಹಿತಿ ಪಡೆಯಲು ಅವರು ಮತ್ತು ಅವರ ಸಿಬ್ಬಂದಿ ಬಂದಿದ್ದರು.
  ನೂತನ ತಂತ್ರಜ್ಞಾನದಲ್ಲಿ ದೊಡ್ಡ ಅರಳಿ ಮರ ಬಿದ್ದರೆ, ಬಿದಿರು ಮಟ್ಟಿ ಬೆಂಕಿಗೆ ಆಹುತಿ ಆದರೂ ಅರಣ್ಯ ಇಲಾಖೆಗೆ ತಕ್ಷಣ ತಿಳಿಯುವಂತ ಸ್ಯಾಟಲೈಟ್ ವ್ಯವಸ್ಥೆ ಇರುವುದು ತಿಳಿದು ಖುಷಿ ಆಯಿತು.
   ಇವರೆಲ್ಲರೂ ಕಳೆದ 15 ದಿನದಿಂದ ಅಂಬ್ಲಿಗೊಳ ಜಲಾಶಯದ ಹಿನ್ನೀರು ಪ್ರದೇಶದಿಂದ ಎರೆಡು ದೊಡ್ಡ ಗಂಡಾನೆ ಮತ್ತು ಒಂದು ಮರಿ ಗಂಡಾನೆಗಳನ್ನು ಸ್ಥಳಾಂತರಿಸಲು ತುಂಬಾ ಶ್ರಮ ಪಟ್ಟಿದವರು.
   ಅವರ ಜೊತೆ ಮಾತಾಡಿದಾಗ .....
  ಕಾಡಾನೆಗಳು ಸಂಚರಿಸುವ ಮಾರ್ಗ ಅದರ ನಂತರದ ಮೂರು ತಲೆಮಾರುಗಳಲ್ಲಿ ದಾಖಲಾಗುವಂತ ಜೀನ್ಸ್ ಆನೆಗಳದ್ದಂತೆ.
  ಅಂಬ್ಲಿಗೊಳ ಸಮೀಪದ ಎರೆಕೊಪ್ಪದಲ್ಲಿ ಆನೆ ಬಯಲು ಎಂಬ ಪ್ರದೇಶ ಇದೆ ಅಲ್ಲಿ ನೂರು ವರ್ಷದ ಹಿಂದೆ ಕಾಡಾನೆ ಬರುತ್ತಿದ್ದುದು ಆ ಪ್ರದೇಶದವರ ಅಜ್ಜ0ದಿರು ಹೇಳುತ್ತಿದ್ದರೆಂದು ಸ್ಥಳಿಯರು ನೆನಪಿಸಿಕೊಂಡರಂತೆ.
   ಸ್ಥಳಿಯರು, ರೈತರು ಈ ಕಾಡಾನೆಗಳನ್ನು ಸ್ಥಳಾಂತರಿಸಲು ಅರಣ್ಯ ಇಲಾಖಾ ಸಿಬ್ಬಂದಿಗೆ ತುಂಬಾ ಸಹಕಾರ ನೀಡಿದರಂತೆ.
   ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಪತ್ರೆ ಹೊಂಡ ಭಾಗಕ್ಕೆ ದಾಟಿದ ಆನೆ ಪುನಃ ಮೂರು ಬಾರಿ ವಾಪಾಸು ಬಂದಿತಂತೆ ನಂತರ ಕೊಲ್ಲಿ ಬಚ್ಚಲು ಡ್ಯಾಂ ಹಿನ್ನೀರಿನ ಪ್ರದೇಶದದಿಂದ ಪುನಃ ಅಂಬ್ಲಿಗೋಳ ಅರಣ್ಯ ಪ್ರದೇಶಕ್ಕೆ ದಾಟದಂತೆ ಅರಣ್ಯ ಇಲಾಖೆ ತಮಟೆ ಪಟಾಕಿ ಇತ್ಯಾದಿ ಶಬ್ದದಿಂದ ತಡೆದಿದ್ದರಂತೆ.
  ನಂತರ ಈ ಮೂರು ಕಾಡಾನೆಗಳು ರಿಪ್ಪನ್ ಪೇಟೆ ಅಯನೂರು ರಾಜ್ಯ ಹೆದ್ದಾರಿಯ 9 ಮೈಲಿಗಲ್ಲುವಿನಲ್ಲಿ 28- ಡಿಸೆಂಬರ್- 2023 ರ ಬೆಳಗಿನ ಜಾವ 4ಕ್ಕೆ ರಸ್ತೆ ದಾಟಿ ಮೂಗುಡ್ತಿ ಅರಣ್ಯ ಪ್ರದೇಶಕ್ಕೆ ತಲುಪಿ ಅಲ್ಲಿಂದ ಶೆಟ್ಟಿಹಳ್ಳ ಅಭಿಯಾರಣ್ಯ ತಲುಪಿದೆ ಎಂಬ ಶುಭ ಸುದ್ದಿ ತಿಳಿಸಿದರು.
  ಇವರೆಲ್ಲ ನನ್ನ ಸಾಮಾಜಿಕ ಜಾಲ ತಾಣ ವೀಕ್ಷಿಸುವರೆಂದು ತಿಳಿಸಿದರು ಆದ್ದರಿಂದ ಒಂದು ಸೃಷ್ಟಿಕರಣ ಏನೆಂದರೆ ನಾನು ಬರೆದ ಲೇಖನದ ತಾಯಿ ಮತ್ತು ಮರಿ ಆನೆಗಳ ಒಂದು ಕಾಡಾನೆ ತಂಡ ದಸರಾ ಸಮಯದಲ್ಲಿ ಈ ಭಾಗದಲ್ಲಿ ಸಂಚರಿಸಿ ವಾಪಾಸು ಹೋಗಿತ್ತಂತೆ.
   ನಂತರ ಆರು ಕಾಡಾನೆಗಳ ಹೊಸ ಗುಂಪು ಈ ಭಾಗಕ್ಕೆ ಬಂದಿದ್ದರಲ್ಲಿ ಮೂರು ಕಾಡಾನೆ ವಾಪಾಸು ಹೋಗಿತ್ತಂತೆ, ಈ ಭಾಗದಲ್ಲಿ ದಾರಿ ತಪ್ಪಿ ಸಂಚರಿಸುತ್ತಿದ್ದ ಎರೆಡು ದೊಡ್ಡ ಕಾಡಾನೆ ಜೊತೆ ಇದ್ದ ಗಂಡು ಮರಿಯಾನೆ ಅಡಲ್ಟ್ ಆಗಿದ್ದು ಈ ಭಾಗಕ್ಕೆ ಮೊದಲಿಗೆ ಬಂದಿದ್ದ ತಾಯಿ ಕಾಡಾನೆಯ ಮರಿ ಇದಲ್ಲ ಎಂದು ಅವರು ಉಪಯುಕ್ತ ಮಾಹಿತಿ ತಿಳಿಸಿದರು.
  ಭದ್ರೇಶ್ ಸಾಹಿತಿಗಳೂ ಹೌದು, ಭದ್ರಾವತಿ ಆಲ್ ಇಂಡಿಯಾ ರೇಡಿಯೋದಲ್ಲಿ ಅನೇಕ ಬಾರಿ ಇವರು ಕವನ ವಾಚನ ಮಾಡಿದ್ದಾರೆ, ಇವರ ಕವನ ಸಂಕಲನ ಬಿಡುಗಡೆ ಮಾಡಿ ಅಂತ ಅವರಿಗೆ ಒತ್ತಾಯಿಸಿ ನನ್ನ ಪುಸ್ತಕಗಳನ್ನು ಇವರಿಗೆ ನೀಡಿ ಬೀಳ್ಕೊಟ್ಟೆ.
   ಈ ಕಾಡಾನೆಗಳು ಸುರಕ್ಷಿತವಾಗಿ ಮೂಲ ನೆಲೆಗೆ ವಾಪಾಸಾಗಲಿ ಈ ಭಾಗದ ರೈತರ ಪಸಲು ಮತ್ತು ಜೀವ ಹಾನಿ ಆಗಿದಿರಲಿ ಎಂಬ ನನ್ನ ಹರಕೆ 2024 ಅಂದರೆ ಮುಂದಿನ ಫೆಬ್ರುವರಿ 13 ರಂದು ನಮ್ಮ ಊರಿನ ವರಸಿದ್ಧಿ ವಿನಾಯಕ ದೇವರ ಜಾತ್ರೆ ಮತ್ತು ರಥೋತ್ಸವದಂದು 108 ತೆಂಗಿನ ಕಾಯಿ ದೇವರಿಗೆ ಸಮರ್ಪಿಸಲಿದ್ದೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ