Skip to main content

Blog number 1845. ಜೀ ಕನ್ನಡದ ಸರಿಗಮಪ 20 ರ ಸರಣಿಯಲ್ಲಿ ಕನ್ನಡಿಗರ ಕಣ್ಮಣಿ ಆಗಿರುವ ನಮ್ಮ ಊರಿನ ಕಿನ್ನರ ಜೋಗಿ ನಾಗರಾಜ್ ತೊಂಬ್ರಿ

https://youtu.be/j4u10ayz7MU?feature=shared

#ಕುವೆ೦ಪು_ಬರೆದ_ಬೊಮ್ಮನ_ಹಳ್ಳಿ_ಕಿಂದರ_ಜೋಗಿ_ಇವರೇನಾ ?
 
#ಆನಂದಪುರ೦ನ_ನಾಗರಾಜ_ತೊಂಬ್ರಿ_ಸರಿಗಮಪದ_ಸ್ಟಾರ್

#ಜೀ_ಟೀವಿಯ_ಸರಿಗಮಪ_ಸರಣಿ_20ರಿಂದ_ರಾಜ್ಯದಾದ್ಯಂತ_ಪ್ರಸಿದ್ಧರಾಗಿದ್ದಾರೆ.

#ನಾಗರಾಜ_ತೊಂಬ್ರಿಯ_ಕಲಾ_ಜೀವನದಲ್ಲಿ_ಇದು_ದೊಡ್ಡ_ಸಾಧನೆ.

#ನನಗೆ_ಸ್ವತಃ_ಕಿನ್ನರಿ_ಒಂದು_ತಯಾರಿಸಿ_ಉಡುಗೊರೆಯಾಗಿ_ನೀಡಿದ್ದಾರೆ.

#ನಾನು_ಬರೆದಿದ್ದ_ಲಾವಣಿಗೆ_ರಾಗ_ಸಂಯೋಜಿಸಿ_ಎರೆಡು_ಭಾಗಗಳಲ್ಲಿ_ಹಾಡಿದ್ದಾರೆ.

#ಜೀ_ಟೀವಿಯ_ಈ_ಸಾಲಿನ_ಸರಿಗಮಪ_20_ರಲ್ಲಿ_ಗೆದ್ದು_ಬರಲಿ

#ನಮ್ಮ_ಊರಿನ_ಹೆಮ್ಮೆಯ_ಕಲಾವಿದ_ಎ೦ದು_ಹಾರೈಸುತ್ತೇನೆ.


  ಆನಂದಪುರOನಲ್ಲಿ ನೆಲೆಸಿರುವ ಉತ್ತರ ಕನಾ೯ಟಕದ ಜೋಗಿಗಳು ತಮ್ಮನ್ನ ಕಿನ್ನರ ಜೋಗಿ ಎಂದು ಕರೆದು ಕೊಳ್ಳುತ್ತಾರೆ ಅವರನ್ನ ಕಿಂದರ ಜೋಗಿ ಅಂತಾನು ಕರೆಯುತ್ತಾರೆ.
  ಇವರ ಸಂಗೀತ ಸಾದನ ಕಿನ್ನರಿ, ಇದನ್ನ ಇವರೇ ಸ್ವತಃ ತಯಾರಿಸುತ್ತಾರೆ, ಸ್ಥಳಿಯವಾಗಿ ಸಿಗುವ ಒಣ ಸೋರೆಕಾಯಿ ಬುರುಡೆ, ಬಿದಿರು ಕೋಲು ಮತ್ತು ಕಿನ್ನರಿ ತಂತಿಯಿಂದ ತಯಾರಿಸುತ್ತಾರೆ, ತಯಾರಿ ಸುಲಭ ಮತ್ತು ಉಚಿತ ಆದರೆ ಅದನ್ನ ಅವರ ಲಯದಲ್ಲಿ ನುಡಿಸಲು ತರಬೇತಿ ಬೇಕು.
 ಅವತ್ತು ನನ್ನ ಕಚೇರಿಗೆ ಬಂದಿದ್ದ ಕಿನ್ನರ ಜೋಗಿ, ಜನಪದ ಹಾಡುಗಾರ ತೊಂಬ್ರಿ ನಾಗರಾಜರು ಅವರ ಜೊತೆಯಲ್ಲಿ ತಂದಿದ್ದ ಕಿನ್ನರಿ ಬಗ್ಗೆ ವಿವರಿಸಿದರು ಕೆಲ ಜೋಗಿ ಪದ, ವಿವಿದ ಪ್ರಕಾರದ ಹಾಡುಗಳನ್ನ ಅವರ ಸಂಗೀತ ಸಾದನ ಕಿನ್ನರಿಯೊಂದಿಗೆ ಹಾಡಿ ರಂಜಿಸಿದರು.
   ಆನ೦ದಪುರದ ಚಂಪಕ ಸರಸ್ಸು ಬಗ್ಗೆ ನಾನು ಸಂಗ್ರಹಿಸಿ ಬರೆದ ಕೆಳದಿ ಅರಸ ರಾಜ ವೆಂಕಟಪ್ಪ ನಾಯಕ ಮತ್ತು ರಾಣಿ ಚಂಪಕಾರ ದುರಂತ ಪ್ರೇಮಕಥೆಯನ್ನೂ ಹಾಡಿದರು.
  ನನಗಾಗಿ ಕಿನ್ನರಿ ಒಂದನ್ನ ತಯಾರಿಸಿ ತಂದು ಕೊಡುವ ಅಶ್ವಾಸನೆ ನೀಡಿದಂತೆ,ಕಿನ್ನರಿಯನ್ನು ಅವರೇ ಕೈಯಾರೆ ತಯಾರಿಸಿ ನನಗೆ ಉಡುಗೊರೆಯಾಗಿ ನೀಡಿ ಅದಕ್ಕೊಂದು ದ್ರಡೀಕರಣ ಕೂಡ ನೀಡಿದ್ದಾರೆ.
    ಇವರು ನೀಡಿದ ಸ್ವದೇಶಿ ಸಂಗೀತ ಸಾದನ ಸರಳ ಮತ್ತು ಸುಂದರವಾಗಿದೆ ಅದನ್ನು ಅವರ ನೆನಪಿನೊಂದಿಗೆ ಇಟ್ಟಿದ್ದೇನೆ.
    ಕಲೆಯನ್ನೆ ತನ್ನ ಉಸಿರಾಗಿಸಿಕೊಂಡಿರುವ ಯುವ ಕಲಾವಿದ ನಾಗರಾಜ್ ತೊಂಬ್ರಿಗೆ ತನ್ನ ಕಲಾ ಪ್ರತಿಭೆ ಅನಾವರಣಗೊಳ್ಳಲು ರಾಜದಾನಿ ಬೆಂಗಳೂರು ಸರಿಯಾದ ವೇದಿಕೆ ಆಗಿದೆ.
  ಈ ಹಿಂದೆ ಪುನೀತ್ ರಾಜಕುಮಾರರ ಸಮಾದಿ ಎದರು ಇವರು ಸ್ವಯ೦ ಹಾಡುತ್ತಾ ಇದ್ದಿದ್ದನ್ನು ಅನೇಕ ಟೀವಿ ಚಾನಲ್ ಬಿತ್ತರಿಸಿತ್ತು.
  ಎಲ್ಲೇ ಸಭೆ ಸಮಾರಂಭ ಸಮಾವೇಷ ನಡೆದರೆ ಅಲ್ಲಿ ಭಾಗವಹಿಸಿ ಹಾಡಿ ಜನರನ್ನು ರಂಜಿಸುವ ನಾಗರಾಜ ತೊಂಬ್ರಿ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸಿದ್ದರಾಗಿದ್ದಾರೆ.
    ಇವರ ಮಹದಾಸೆಯಂತೆ ಜೀ ಟೀವಿಯ ಈ ಭಾರಿಯ ಸರಿಗಮಪ - 20 ಅಡಿಷನಲ್ಲಿ ಆಯ್ಕೆ ಆಗಿ ಈಗ ಅಲ್ಲಿ ರಾಜ್ಯದಾದ್ಯಂತ ಜನರ ಗಮನ ಸೆಳೆಯುತ್ತಿದ್ದಾರೆ, ಶಿವಮೊಗ್ಗದಲ್ಲಿ ಸರಿಗಮಪ ಅಡಿಷನ್ ಹೋಗುವಾಗ ಬಂದಿದ್ದರು ಅವತ್ತು ಅವರು ಹೇಳಿದ್ದು "ಅವರ ವೃತ್ತಿ ಜೀವನಕ್ಕೆ ಸರಿಗಮಪ ಸ್ಪರ್ಧಿ ಆಗಿ ಆಯ್ಕೆ ಆದರೂ ಸಾಕು ತಮ್ಮ ಕಲೆಯ ಪ್ರದರ್ಶನಕ್ಕೆ ಹೆಚ್ಚು ಅವಕಾಶ ಮತ್ತು ಹೆಚ್ಚು ಸಂಭಾವನೆ ಸಿಗುತ್ತದೆ" ಎಂಬ ಆಶಾ ಭಾವನೆ ವ್ಯಕ್ತಪಡಿಸಿದ್ದರು.
  ಅವರ ಪ್ರಯತ್ನ ಫಲಿಸಿ ಕಿನ್ನರ ಜೋಗಿ ಕಲಾವಿದ ನಾಗರಾಜ್ ತೊಂಬ್ರಿ ಆಯ್ಕೆ ಆಗಿದ್ದಾರೆ, ಸರಿಗಮಪ 20 ನಡೆಸಿಕೊಡುವ ಸ್ಟಾರ್ ನಿರೂಪಕಿ ಅನೂಶ್ರೀ, ಜಡ್ಜ್ ಗಳಾದ ಹಂಸಲೇಖ, ಅರ್ಜುನ್ ಜನ್ಯ, ವಿಜಯ ಪ್ರಕಾಶ್ ಇವರುಗಳೇ ಹುಬ್ಬೇರಿಸುವಂತೆ ನಾಗರಾಜ್ ತೊಂಬ್ರಿಯ ಹಾಡುಗಾರಿಕೆ, ಸ್ವತಃ ಇವರೇ ರಚಿಸುವ ರಾಗ ಸಂಯೋಜನೆ ಮಾಡುವ ಜೊತೆಗೆ ಇವರೇ ತಯಾರಿಸಿದ ಸಂಗೀತ ಉಪಕರಣಗಳ ಜೊತೆ ಹಾಡುತ್ತಾ ರಾಜ್ಯದಾದ್ಯಂತ ಕನ್ನಡಿಗರು ಇವರ ನಡೆ- ನುಡಿ - ಹಾಡಿಗೆ ಫಿದಾ ಆಗುವಂತೆ ಆಗಿದೆ.
   ಸರಿಗಮಪ 20 ಯೋಗ್ಯ ಕಲಾವಿದರನ್ನೆ ಆಯ್ಕೆ ಮಾಡಿದೆ ಎನ್ನುವುದಕ್ಕೆ ನಾಗರಾಜ್ ತೊಂಬ್ರಿ ಸಾಕ್ಷಿ ಆಗಿದ್ದಾರೆ.
   ಈ ಹಿಂದೆ ನನ್ನ ಬ್ಲಾಗ್ ನಲ್ಲಿ ಬೇರೆ ಬೇರೆ ಕಾರಣದಿಂದ ನಾಗರಾಜ್ ತೊಂಬ್ರಿ ಬಗ್ಗೆ ಬರೆದ ಲೇಖನಗಳು ಇಲ್ಲಿ ಕ್ಲಿಕ್ ಮಾಡಿ ಓದಬಹುದು.
1.https://arunprasadhombuja.blogspot.com/2019/11/o_21.html.

2.https://arunprasadhombuja.blogspot.com/2022/10/blog-number-1000-2016.html.

3.https://arunprasadhombuja.blogspot.com/2019/12/blog-post.html.

4.https://arunprasadhombuja.blogspot.com/2022/04/blog-number-847_30.html.

  ಕೆಳದಿ ರಾಜ ವೆಂಕಟಪ್ಪ ನಾಯಕರು ಮತ್ತು ಬೆಸ್ತರ ರಾಣಿ ಚಂಪಕಾಳ ದುರಂತ ಪ್ರೇಮ ಕಥೆಯ ಕಾದಂಬರಿ #ಬೆಸ್ತರ_ರಾಣಿ_ಚಂಪಕಾ ಬರೆದಿದ್ದನ್ನು ಓದಿದ್ದ ನಾಗರಾಜ್ ತೊಂಬ್ರಿ ಈ ಪ್ರೇಮ ಕಥೆಯ ಆದರಿಸಿ ಸ್ಥಳಿಯರು ಹಾಡುತ್ತಿದ್ದ ಈಗ ಜನ ಮನದಲ್ಲಿ ಮರೆತು ಹೋಗಿರುವ ಲಾವಣಿ ಒಂದನ್ನು ನಾನು ಬರೆದದ್ದನ್ನು ಓದಿ ಅದಕ್ಕೆ ಅವರದೇ ರಾಗ ಸಂಯೋಜನೆ ಮಾಡಿ ಅವರ ಕಿನ್ನರಿ ಸ್ವರದ ಜೊತೆ ಎರೆಡು ಭಾಗದಲ್ಲಿ ಹಾಡಿದ್ದಾರೆ ಆದನ್ನು Youtube ಲ್ಲಿ ದಾಖಲಿಸಿದ್ದೇನೆ ಅದನ್ನೂ ಇಲ್ಲಿ ಕ್ಲಿಕ್ ಮಾಡಿ ಕೇಳಿ.

#ಚಂಪಕ_ಲಾವಣೆ_ಭಾಗ_1.
https://youtu.be/6yaHWd2IxxM?feature=shared 

#ಚಂಪಕ_ಲಾವಣಿ_ಭಾಗ_2
https://youtu.be/j4u10ayz7MU?feature=shared.

  ನಮ್ಮ ಊರಿನ ಹೆಮ್ಮೆಯ ಕಲಾವಿದ #ನಾಗರಾಜತೊಂಬ್ರಿ ಪ್ರತಿಷ್ಠಿತ ಜೀ ಟೀವಿ ಕನ್ನಡದ ಸರಿಗಮಪದಲ್ಲಿ ವಿಜೇತರಾಗಿ ಬರಲಿ ಮುಂದಿನ ಅವರ ಕಲಾ ಜೀವನ ಸುಖದ ಸುಪ್ಪತ್ತಲ್ಲಿ ನಡೆಸುವಂತಾಗಿ ರಾಜ್ಯದ ಶ್ರೇಷ್ಟ ಕಲಾವಿದನಾಗಿ ಕನ್ನಡಿಗರ ಮನೆಮನೆಯಲ್ಲಿ ಜನರ ಹೃದಯದಲ್ಲಿ ಸ್ಥಾನ ಪಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ಶುಭ ಹಾರೈಸುತ್ತೇನೆ, ನಮ್ಮ ಊರಿನಲ್ಲಿ ಎಲ್ಲರೂ ಇವರ ಮೇಲೆ ಇದೇ ಹಾರೈಸುತ್ತಿದ್ದಾರೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ