Skip to main content

Blog number 1851. ಕಾಗೋಡು ತಿಮ್ಮಪ್ಪರ ಬಗ್ಗೆ ನನ್ನ ಸದ್ಭಾವನೆಗಳು ಅವರು ಅವರ ಹಿಂಬಾಲಕರ ಮಾತು ಕೇಳಿ ನನ್ನ ಸಂಪೂರ್ಣ ನಿರ್ನಾಮ ಮಾಡಿದರೂ ಬದಲಾಗದ ಬಗ್ಗೆ.

#ಕಾಗೋಡು_ತಿಮ್ಮಪ್ಪನವರು_ನನ್ನನ್ನ_ವಿರೋದಿಸಿದರೂ

#ನಾನು_ಅವರನ್ನ_ಶ್ಲಾಘನೆ_ಮಾಡಲು_ಕಾರಣ_ಅವರ_ವ್ಯಕ್ತಿತ್ವ.

#ಮೂಡನಂಬಿಕೆ_ವಿರೋದಿ_ಹೊಗಳಿಕೆ_ಜನರಿಂದ_ದೂರ_ಸ್ವತಃ_ಕಾನೂನು_ತಿಳುವಳಿಕೆ_ಇವರದ್ದು

#ಅಧಿಕಾರಕ್ಕೆ_ಬರುವ_ರಾಜಕಾರಣಿಯ_ಸುತ್ತ_ಹಣ_ಪ್ರಭಾವಕ್ಕೆ_ಕೋಟೆ_ಕಟ್ಟುವ_ಶಿಷ್ಯವೃಂದ.

#ನಾಯಕರ_ಹಾದಿ_ತಪ್ಪಿಸುತ್ತಾರೆ.

#ಪ್ರಜಾಪ್ರಭುತ್ವ_ವ್ಯವಸ್ಥೆಯಲ್ಲಿ_ಇವರಂತವರು_ಇರಬೇಕು.

#ಆದರೆ_ಇವರೇ_ಕೊನೆಯವರು.

     ಕಾಗೋಡು ತಿಮ್ಮಪ್ಪನವರು ಲೋಹಿಯ ಚಿಂತನೆಯಲ್ಲಿ, ಶಾಂತವೇರಿ ಗೋಪಾಲಗೌಡರ ಮೂಸೆಯಲ್ಲಿ, ಸೋಷಲಿಸ್ಟ್ ಪಾರ್ಟಿ, ಜನತಾ ಪಾರ್ಟಿಯಿ೦ದ ನಂತರ ಗುಂಡೂರಾಯರ ಪ್ರೇರಣೆಯಿಂದ ಕಾಂಗ್ರೇಸ್ ಸೇರಿ ಸಾರೆಕೊಪ್ಪದ ಬಂಗಾರಪ್ಪನವರ ವಿರುದ್ಧ ರಾಜಕಾರಣ ಮಾಡಿದವರು.
  ಬಂಗಾರಪ್ಪನವರು ಇರುವಷ್ಟು ಕಾಲ ಸಾಗರ ತಾಲೂಕಿನಲ್ಲಿ ಬಂಗಾರಪ್ಪನವರ ಬಣ ಮತ್ತು ಕಾಗೋಡು ತಿಮ್ಮಪ್ಪನವರ ಬಣಗಳ ಮೇಲಾಟವಿತ್ತು.
   ನಾನು ದೀರ್ಘಕಾಲ ಕಾಗೋಡು ಬಣದಲ್ಲಿದ್ದೆ ನಂತರ ಅಲ್ಲಿಂದ ನನ್ನ ಆ ಗುಂಪಿನವರೇ ದೂರ ಮಾಡಿದ್ದರಿಂದ ಬಂಗಾರಪ್ಪರ ಗುಂಪಿಗೆ ಸೇರಿದೆ.
   ಇಲ್ಲಿ ಪೋಸ್ಟ್ ಮಾಡಿದ ಪೋಟೋ 19-8-1996ರಂದು ಆನಂದಪುರ೦ ಕನಕಮ್ಮಾಳ್ ಆಸ್ಪತ್ರೆಗೆ X-ರೇ ಮೆಷಿನ್ ಶಿವಮೊಗ್ಗ ಜಿಲ್ಲಾ ಪಂಚಾಯತ್ ನಿಂದ ಮಂಜೂರು ಮಾಡಿಸಿ ಉದ್ಘಾಟನೆ ಕಾಯ೯ರಂಭದ್ದು ಅವತ್ತು ಕಾಗೋಡು ಶಾಸಕರು, ಬಂಗಾರಪ್ಪನವರು ಲೋಕ ಸಭಾ ಸದಸ್ಯರು ನಾನು ಆನಂದಪುರಂ ಜಿಲ್ಲಾ ಪಂಚಾಯತ್ ಸದಸ್ಯ.
 ಕಾಗೋಡು ತಿಮ್ಮಪ್ಪನವರ ವಿರುದ್ಧ 1999ರ ವಿಧಾನ ಸಭಾ ಚುನಾವಣೆಯಲ್ಲಿ ನಾನು ಪಕ್ಷೇತರನಾಗಿ ಸ್ಪದಿ೯ಸಿ ಶೇಕಡ 10 ಮತ ಪಡೆದದ್ದರಿಂದ ನನ್ನ ಮೇಲೆ 22 ಕೇಸುಗಳು, ಗೂಂಡಾ ಕಾಯ್ದೆಯಲ್ಲಿ ಅವರು ನನ್ನನ್ನ ಸಿಲುಕಿಸಿದರೂ ಅವರ ಬಗ್ಗೆ ನನ್ನ ಅಭಿಪ್ರಾಯ ಬದಲಾಗಲಿಲ್ಲ.
  ನಾನು ಅವರನ್ನು ಎಲ್ಲೂ ಕೆಟ್ಟದಾಗಿ ಬಿಂಬಿಸಲಿಲ್ಲ, ಸಾರ್ವಜನಿಕ ಸಭೆಗಳಲ್ಲಿ ಕೂಡ ಅವರನ್ನು ಗೌರವಯುತವಾಗಿಯೇ ವಿರೋದಿಸಿದ್ದೇನೆ.
  ಅವರಿಗೆ ಬಡವರ, ರೈತರ ಬಗ್ಗೆ ನೈಜ ಕಾಳಜಿ ಇದೆ, ಮೂಗಿಗೆ ತುಪ್ಪ ಹಚ್ಚುವ ಈಗಿನ ರಾಜಕಾರಣದಂತೆ ಅವರ ರಾಜಕಾರಣ ಇರಲಿಲ್ಲ, ನಿತ್ಯ ಎಲ್ಲಾ ಪತ್ರಿಕೆ ಸ್ವತಃ ಓದುತ್ತಾರೆ, ಹೊಗಳಿದರೆ ಉಬ್ಬುವುದಿಲ್ಲ, ಮಲೆನಾಡಿನ ರೈತರ ಸಮಸ್ಯೆ ಇವರಿಗೆ ಅರ್ಥವಾದಂತೆ ಬೇರೆಯವರಿಗೆ ಅಥ೯ವಾಗುವುದಿಲ್ಲ.
    ಭ್ರಷ್ಟಾಚಾರಿ ಆಗಲಿಲ್ಲ,ಪರಿಸರ ವಿರೋದಿ ಅಲ್ಲ, ಲಂಚಕ್ಕೆ ಬೆಂಬಲ ಇಲ್ಲ, ರೈತನನ್ನ ಅವನು ಊಳುವ ಜಮೀನಿನಿಂದ ಒಕ್ಕಲೆಬ್ಬಿಸುವುದಕ್ಕೆ ಅವರ ವಿರೋದ ಯಾವತ್ತೂ ಇದೆ.
   ಬಂಗಾರಪ್ಪನವರು ರಾಜ್ಯದಲ್ಲಿ ಬಗರ್ ಹುಕುಂ ಜಾರಿಗೊಳಿಸಿದಾಗ ರಾಜ್ಯದ ಮೊದಲ ಬಗರ್‌ಹುಕುಂ ಜಮೀನು ಹಕ್ಕು ಪತ್ರ ನನ್ನ ಊರಲ್ಲಿ ನೀಡಲು ಕಾಗೋಡು ತಿಮ್ಮಪ್ಪನವರು ನೀಡಿದ ಪ್ರೋತ್ಸಾಹ ನಾನು ಯಾವತ್ತೂ ಮರೆಯಲಾರೆ.
    ಪರಿಶಿಷ್ಟ ಜಾತಿಯವರಿಗೆ, ಅಲೆಮಾರಿ ಕೊರಮರು, ಕುಂಬಾರರು, ಹಿಂದುಳಿದ ವರ್ಗದವರು, ಮುಸ್ಲಿಂ, ಕ್ರಿಶ್ಚಿಯನ್, ಲಿಂಗಾಯಿತರು, ಬ್ರಾಹ್ಮಣರು ಸೇರಿ ಎಲ್ಲಾ ಜಾತಿಯವರಿಗೆ ನಮ್ಮ ಯಡೇಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬಗರ್ ಹುಕುಂ ಹಕ್ಕು ಪತ್ರ ಪಡೆಯುವಂತಾಯಿತು ಆಗ ಹಕ್ಕು ಪತ್ರ ಈಗಿನಷ್ಟು ಸರಳ ಪ್ರಕ್ರಿಯೆಯಲ್ಲಿ ನೀಡುವಂತಿರಲಿಲ್ಲ ಮೊದಲೆ ನಿಗದಿತ ಶುಲ್ಕ ತಾಲೂಕು ಟ್ರಿಜರಿಯಲ್ಲಿ ಪಾವತಿ ಮಾಡಬೇಕು ಮುಂತಾದ ನಿಯಮಗಳು ಇದ್ದಿತ್ತು ಆದ್ದರಿಂದ ತಾಲ್ಲೂಕಿನ ಬೇರೆ ಭಾಗದಲ್ಲಿ ಬಗರ್ ಹುಕುಂ ಸಮಿತಿಗೆ ಇದೆಲ್ಲ ಸಾಧ್ಯವಾಗಿರಲಿಲ್ಲ.
  1984-85 ರಲ್ಲಿ ಬಗರ್ ಹುಕುಂ ಹಕ್ಕು ಪತ್ರಕ್ಕಾಗಿ ಸಾಗರ ತಾಲೂಕಿನ ದಲಿತ ಸಂಘರ್ಷ ಸಮಿತಿ, ರೈತ ಸಂಘರ್ಷ ಸಮಿತಿ ಮೂಲಕ 48 ದಿನ ನಿರಂತರ ಸಾಗರ AC ಕಛೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದಾಗ ನಮ್ಮ ಭಾಗದ ಬಗರ್ ಹುಕುಂ ರೈತರು ನನ್ನ ನೇತೃತ್ವದಲ್ಲಿ 13 ದಿನ ಧರಣಿ ಸತ್ಯಾಗ್ರಹ ನಡೆಸಿದ್ದರು ಆದ್ದರಿಂದ ಹೇಗಾದರೂ ಮಾಡಿ ಈ ಸದಾವಕಾಶ ಬಳಸಿಕೊಂಡು ನಮ್ಮ ಗ್ರಾಮ ಪಂಚಾಯಿತಿ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ಕೊಡಿಸಲೇ ಬೇಕೆಂಬುದು ನನ್ನ ನಿರ್ದಾರ ಆಗಿತ್ತು.
  ಈ ನನ್ನ ಕೆಲಸ ಅವರಿಗೆ ಖುಷಿ ತಂದಿತ್ತು ಆದ್ದರಿಂದ  ಕಾಗೋಡುತಿಮ್ಮಪ್ಪ ಸಭೆ ಸಮಾರಂಭಗಳಲ್ಲಿ ನನ್ನನ್ನು  ಹೊಗಳುತ್ತಿದ್ದರು ಇದು ಜನ ಸಾಮಾನ್ಯರಿಗೆ ನನ್ನ ಸಹಪಾಟಿ ಗೆಳೆಯರಿಗೆ ಹರುಷ ತರುತ್ತಿತ್ತು.
   ಆದರೆ ಕಾಗೋಡು ತಿಮ್ಮಪ್ಪರ ಸುತ್ತಲಿದ್ದ ಅವರ ಅಧಿಕಾರದ ಲಾಭ ಪಡೆಯುತ್ತಿದ್ದ ಗುಂಪಿಗೆ ಕಾಗೋಡು ತಿಮ್ಮಪ್ಪರ ಈ ಪ್ರಶಂಸೆಗಳು ಇಷ್ಟವಾಗಲಿಲ್ಲ ಆದ್ದರಿಂದ ಅವರುಗಳು ನಮ್ಮಿಬ್ಬರ ಮಧ್ಯ ಕಂದಕ ತೋಡಲು ಪ್ರಾರಂಬಿಸಿದರು.
 ಬಗಲಿಗಳು ಪಿಟ್ಟಿ೦ಗ್ ಇಟ್ಟು ನನ್ನ ದೂರ ಮಾಡಿದರು ಈ ಗುಂಪಿಗೆ ಕಾಗೋಡು ತಿಮ್ಮಪ್ಪರ ಸ್ವಂತ ಅಣ್ಣನ ಮಗ ಅಣ್ಣಾಜಿ ಅವರ ಬೆಂಬಲ ಮತ್ತು ಸಹಾಯವೂ ದೊರೆಯಿತು  ಇದರಿಂದ ಅವರ ಬದ್ಧ ದ್ವೇಷದ ರಾಜಕಾರಣದ ಫಲಾನುಭವಿ ನಾನು ಆಗ ಬೇಕಾಯಿತು.
  ಇದರಿಂದ ಪೋಲಿಸ್ ಕೇಸು, ಗೂಂಡಾ ಕಾಯ್ದೆ, 107 ಕೇಸುಗಳು, ಸುಳ್ಳು ಕೊಲೆ ಕೇಸಿಗೂ ಸೇರಿಸುವ ಪ್ರಯತ್ನಗಳು, ನಮ್ಮ ಸಂಘಟನೆ ಒಡೆಯಲಾಯಿತು, ಸಾಗರದ ನನ್ನ ಕಛೇರಿ ಪುಡಿ ಪುಡಿ ಮಾಡಿದರು, ನನಗೆ ಯಾರೂ ಬಾಡಿಗೆಗೆ ಕಛೇರಿ ನೀಡದಂತೆ ಮಾಡಲಾಯಿತು, ನನ್ನ ಸ್ವಂತ ವ್ಯವಹಾರಗಳಿಗೆ ಕಲ್ಲು ಹಾಕಲಾಯಿತು, ನನ್ನ ಅಡಿಕೆ ತೋಟ, ಗೇರು ತೋಟಗಳು ಬೆಂಕಿ ಹಾಕಿ ಸುಡಲಾಯಿತು ಇದೆಲ್ಲ ಕಾಗೋಡು ತಿಮ್ಮಪ್ಪನವರಿಗೆ ಗೊತ್ತಾಯಿತೋ ಅಥವ ಗೊತ್ತಾಗಲಿಲ್ಲವೋ ಗೊತ್ತಿಲ್ಲ.
      ಒಬ್ಬ ರಾಜಕಾರಣಿ ಎಷ್ಟೇ ಪ್ರಾಮಾಣಿಕರು ಆಗಿದ್ದರೂ ಹಣ, ಅಧಿಕಾರ ಮತ್ತು ಪ್ರಭಾವಗಳಿಗಾಗಿ ಜನಪ್ರತಿನಿದಿ ಸುತ್ತ ಕೋಟೆ ಕಟ್ಟುವ ಶಿಷ್ಯ ವ್ಯಂದ,ನಾಯಕನ ಹಾದಿ ತಪ್ಪಿಸುವ ನೈಜ ಘಟನೆಗಳಿಗೆ ಕಾಗೋಡು ಉಧಾಹರಣೆ ಆದರು.
 ಏನೇ ಆಗಲಿ ವಯೋವೃದ್ದ ಸಮಾಜವಾದಿ ಸಿದ್ದಾಂತದ ಕಾಗೋಡು ತಿಮ್ಮಪ್ಪರನ್ನ ಗೌರವಿಸಲು ಸಾವಿರಾರು ಕಾರಣ ಇದೆ, ಮೂಡನಂಬಿಕೆ ವಿರೋದಿ, ಹೊಗಳಿಕೆ ಜನರಿಂದ ದೂರ, ಸ್ವತಃ ಕಾನೂನು ತಿಳುವಳಿಕೆ ಇವರಿಗಿದೆ.
   ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾಗೋಡು ತಿಮ್ಮಪ್ಪರಂತಹ ವ್ಯಕ್ತಿತ್ವದವರು ಜನಪ್ರತಿನಿದಿಗಳಾಗಿ ಬರಬೇಕು ಆದರೆ ಪ್ರಸಕ್ತ ರಾಜಕಾರಣದ ವಾಸ್ತವದಲ್ಲಿ ಕಾಗೋಡು ತಿಮ್ಮಪ್ಪನವರೇ ಕೊನೆಯವರು ಅನ್ನಿಸುತ್ತದೆ.
   ರಾಜಕಾರಣಿಗಳಿಗೆ ತಮ್ಮ ಸುತ್ತ ಅವರಿಸುವ ವಿಷವರ್ತುಲದ ಅರಿವಿರಬೇಕು ಈ ಕ್ಯಾಕ್ಟಸ್ ನಿವಾರಿಸಿಕೊಳ್ಳದಿದ್ದರೆ ಅವರ ಹಿಂಬಾಲಕರು ತಮ್ಮ ದ್ವೇಷ ಸಾಧನೆಗೆ ಅವರ ನಾಯಕರನ್ನೆ ದುರ್ಬಳಕೆ ಮಾಡಿಕೊಳ್ಳುತ್ತಾರೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ