Skip to main content

Blog number 1860.ಆನಂದಪುರಂನ ಮೂಲ ನಿವಾಸಿಗಳಾದ ಬಾರೂದ್ (ಸಿಡಿಮದ್ದು ತಯಾರಿಸುವ) ಮನೆತನದ ಖಾಸೀಮಣ್ಣರ ಮುವ್ವತ್ತು ವರ್ಷದ ನಂತರದ ನಿನ್ನೆಯ ಬೇಟಿ

#ಮುವ್ವತ್ತು_ವರ್ಷದ_ನಂತರದ_ಮುಖಃತಃ_ಬೇಟಿ

#ಆನಂದಪುರಂನ_ಬಾರೂದ್_ಮನೆತನದ_ಖಾಸಿಮಣ್ಣ

#ಮಗನ_ಮದುವೆಗೆ_ಆಹ್ವಾನಿಸಲು_ಬಂದಿದ್ದರು.

#ಮೋಣು_ಸಾಹೇಬರ_ದ್ವಿತಿಯ_ಪುತ್ರ

#ಆನಂದಪುರಂನ_ಕನ್ನಡ_ಸಂಘದ_ಹಾಮೋ_ಭಾಷಾರ_ಅಣ್ಣ.


   ಆನಂದಪುರಂನ ಗರ್ನಾಲ್ ಮೋಣು ಸಾಹೇಬರು ಆ ಕಾಲದ ಸಿಡಿಮದ್ದು - ಕೋವಿ ಮಸಿ ತಯಾರಿಸಿ ಮಾರಾಟ ಮಾಡುವ ಬಾರೂದ್ ಮನೆತನದವರು ಇವರು ನಮ್ಮ ಊರಿನ ಮೂಲ ನಿವಾಸಿಗಳು ಇವರ ಪುತ್ರ ಹಾ.ಮೊ. ಭಾಷಾ ಕನ್ನಡದ ಕಟ್ಟಾಳು ಅವರು ನಡೆಸಿದ ಸಾಂಸ್ಕೃೃತಿಕ ಚಟುವಟಿಕೆಗಳು ಆನಂದಪುರ೦ಗೆ ಹೆಚ್ಚಿನ ಪ್ರಾಮುಖ್ಯತೆ ತಂದು ಕೊಟ್ಟಿತ್ತು.
  ಇಂತಹ ಕಲಾವಿದ ಸಂಘಟಕ ಹಾ.ಮೊ. ಭಾಷಾ ನಾಗರ ಹಾವು ಹಿಡಿಯಲು ಹೋಗಿ ಮೃತರಾದರು, ಇವರ ತಮ್ಮ ಶಂಷು KMF ಹಾಲಿನ ಸಾಗಾಣಿಕೆ ವಾಹನದ ಉದ್ಯೋಗದಲ್ಲಿ ಅಪಘಾತದಲ್ಲಿ ಮೃತಪಟ್ಟರು, ಕೆಲವು ವರ್ಷದ ಹಿಂದೆ ಇವರ ಕುಟುಂಬದ ವಿವಾಹ ಕಾರ್ಯಕ್ರಮಕ್ಕೆ ಮದ್ಯಾಹ್ನ ಆನಂದಪುರಂ ಬಿಟ್ಟು ರಾತ್ರಿ ಗೋವಾದಲ್ಲಿ ವಿವಾಹ ಮುಗಿಸಿ ಅವತ್ತೇ ವಾಪಾಸು ಬರುವಾಗ ಮಧ್ಯರಾತ್ರಿ ಹೊನ್ನಾವರದಿಂದ ಗೇರುಸೊಪ್ಪೆ ಮಾರ್ಗಕ್ಕೆ ತಿರುಗಿ ಮುಂದಿನ  ತಿರುವಿನಲ್ಲಿ ಇವರ ಸ್ಕಾರ್ಪಿಯೋ ವಾಹನ ಅಪಘಾತಕ್ಕೆ ಈಡಾಗಿ ಹಾ.ಮೊ. ಭಾಷಾರ ಮಡದಿ, ಹಾ.ಮೋ. ಭಾಷಾರ ಸಹೋದರಿ, ಇವರ ಬಾವಾ ಟೈಲರ್ ಚಾಬು ಸಾಹೇಬರು ಸ್ಥಳದಲ್ಲೇ ಸಾವನ್ನಪ್ಪಿದರು ಉಳಿದವರು ವರ್ಷಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬದುಕಿ ಬಂದವರಲ್ಲಿ ಖಾಸಿಮಣ್ಣರೂ ಒಬ್ಬರು ಇವರ ಎಡಗೈ ಈಗಲೂ ಸರಿ ಆಗಿಲ್ಲ.
   " ಅರುಣಾ... ದೇವರು ನಮ್ಮ ಮನೆತನಕ್ಕೆ ಇದೆಂತಾ ಶಿಕ್ಷೆ ವಿಧಿಸಿದ್ದಾನೆ...." ಈ ಪ್ರಶ್ನೆಗೆ ನಾನೂ ಕಣ್ಣೀರಾದೆ ಇವರೆಲ್ಲ ನನ್ನ ಕುಟುಂಬದ ಸ್ನೇಹಿತರು, ಖಾಸಿಮಣ್ಣ ನನ್ನ ದೊಡ್ಡಕ್ಕ ಮತ್ತು ಭಾವನ ಪ್ರೌಢ ಶಾಲಾ ಸಹಪಾಟಿ ಅನೇಕ ವರ್ಷಗಳಿಂದ ಸೌದಿಯಲ್ಲಿ ಉದ್ಯೋಗ ಮಾಡಿ ಬಂದವರು ಈಗ ಸಾಗರದಲ್ಲಿ ನೆಲೆಸಿದ್ದಾರೆ ಪುತ್ರಿ ವಿವಾಹ ಮಾಡಿದ್ದಾರೆ ಈಗ ಸೌದಿಯಲ್ಲಿ ಉದ್ಯೋಗದಲ್ಲಿರುವ ಮಗನಿಗೆ ದಾಂಡೇಲಿಯಲ್ಲಿರುವ ಹಾ.ಮೊ. ಭಾಷನ ಪತ್ನಿ ಅಕ್ಕನ ಮಗಳೊಂದಿಗೆ ವಿವಾಹ ಮಾಡುವ ಮೂಲಕ ಹಾ.ಮೋ ಬಾಷಾರ ಕುಟುಂಬದ ಸಂಬಂದ ಮುಂದುವರಿಸಿದ್ದಾರೆ
   ನನ್ನ ಎಲ್ಲಾ ಬ್ಲಾಗ್ ಗಳನ್ನು ಓದುತ್ತಾರೆ ನನ್ನ ಪ್ರಕಟವಾದ ಎರೆಡು ಪುಸ್ತಕ ಕೇಳಿ ಪಡೆದರು ಹೋಗುವಾಗ ನನ್ನ ಮುಂದಿನ ಪ್ರಕಟವಾಗಲಿರುವ  #ಆನಂದಪುರಂ_ಇತಿಹಾಸ ಪುಸ್ತಕಕ್ಕೆ ಕಾಯುತ್ತಿರುವುದಾಗಿ ನೆನಪಿಸಿದರು.

#ಈ_ಕುಟುಂಬದ_ಬಗ್ಗೆ_ಈ_ಹಿಂದೆ_ನಾನು_ಬರೆದ_ಲೇಖನದ_ಆಯ್ದ_ಭಾಗ_ಇಲ್ಲಿದೆ
   ಒಂದು ಕಾಲದಲ್ಲಿ ಮಲೆನಾಡಿನಲ್ಲಿ ಸುತ್ತ ನೂರಾರು ಹಳ್ಳಿಗಳ ಮಧ್ಯೆ ಒಂದು ಪೇಟೆ ಸೃಷ್ಟಿ ಆಗುತ್ತಿತ್ತು, ಆ ಪೇಟೆಯಲ್ಲಿ ಸುತ್ತ ಹಳ್ಳಿಯ ಜನರ ಕೃಷಿ ಉಪಕರಣ ತಯಾರಿಸುವ, ದುರಸ್ತಿ ಮಾಡುವ ವಿಶ್ವಕರ್ಮಿಯರ ಕುಲುಮೆಗಳು, ಕ್ಷೌರಿಕರ ಅಂಗಡಿಗಳು, ಪಂಡಿತರುಗಳು, ನಿತ್ಯ ಉಪಯೋಗಿ ಹಿತ್ತಾಳೆ ಪಾತ್ರೆಗಳಿಗೆ ಕಲಾಯಿ ಹಾಕುವವರು, ಜೋಡು ಹೊಲೆದು ಕೊಡುವವರು, ದಿನಸಿ ಮಾರಾಟ ಮಾಡುವವರು, ಕಂಬಳಿ ಮಾರುವವರು, ಕುಂಬಾರರ ಮನೆಗಳು, ಪುರೋಹಿತರು, ಡಬ್ಬ - ಛತ್ರಿ- ಟಾರ್ಚ್ ದುರಸ್ತಿಗಾರರ ಮತ್ತು ಪಸಲು ರಕ್ಷಣೆಗಾಗಿ - ಶಿಕಾರಿಗಾಗಿ ಬಳಸುವ ಬಂದೂಕುಗಳಿಗೆ ಮದ್ದು ತಯಾರಿಸುವ ಬಾರೂದ್ ಮನೆತನಗಳು ಇದ್ದರೆ ಮಾತ್ರ ಅದು ಪೇಟೆಯ ಅರ್ಹತೆ ಪಡೆಯುತ್ತಿತ್ತು.
  ಇಂತಹ ಪೇಟೆಗಳಲ್ಲೆ ಬ್ರಿಟೀಷ್ ಆಡಳಿತದ ಪೋಲಿಸ್ ಠಾಣೆ ಇತ್ಯಾದಿಗಳು ಬಂದವು.
   ಆನಂದಪುರಂ ಇಂತಹ ಪೇಟೆ ಆಗಿ ಹೋಬಳಿ ಆಗಿ ನಂತರ ತಾಲ್ಲೂಕ್ ಕೂಡ ಕೆಲ ದಶಕ ಕಾಲ ಆಗಿದ್ದು ಇತಿಹಾಸ.
  ಆನಂದಪುರಂ ಸುತ್ತಮುತ್ತ ದಟ್ಟ ಅರಣ್ಯದಿಂದ ರೈತರ ಪಸಲು ರಕ್ಷಣೆಗಾಗಿ ಮದ್ದುಗುಂಡುಗಳನ್ನು ತಯಾರಿಸಿ ಕೊಡುವ ಉದ್ಯೋಗ ಮಾಡಲು ದೂರದ ಹೊನ್ನಾವರದಿಂದ ಬಂದ ಬಾರೂದ್ ಮೊಯಿದ್ದೀನ್ ಸಾಹೇಬರ ಕುಟುಂಬವೇ ಮೂಲವೋ ಅಥವ ಅದಕ್ಕಿಂತ ಮೊದಲೇ ಅವರ ಕುಟುಂಬದವರು ಬಂದಿದ್ದರಾ ಎಂಬ ನಿಖರ ಮಾಹಿತಿ ಈ ಕುಟುಂಬದ ಈಗಿನ ತಲೆಮಾರಿನವರಿಗೆ ಇಲ್ಲ.
  ಮದ್ದು ಗುಂಡು ತಯಾರಿಸಿ ಮಾರಾಟ ಮಾಡಲು ಬ್ರಿಟಿಷರ ಕಾಲದಲ್ಲಿ ಲೈಸೆನ್ಸ್ ಪಡೆದು ಈ ಕುಟು೦ಬ ಆನಂದಪುರಂನ ಆ ಕಾಲದ ಸರ್ ಮಿರ್ಜಾ ಇಸ್ಮಾಯಿಲ್ ತಂಗುದಾಣದ (ನಂತರ ಇದು ದೊಡ್ಡಿ ಆಯಿತು) ಪಕ್ಕದಲ್ಲಿ ಆಗಿನ ಪುರ ಪ್ರಮುಖರಾದ ಅಯ್ಯಂಗಾರ್ ಕುಟುಂಬದ ಅನುಮತಿಯಿಂದ ಈ ಕುಟುಂಬ ಆನಂದಪುರಂ ಕೆರೆ ಪಕ್ಕದಲ್ಲಿ ನೆಲೆಸಿತ್ತು.
  ಮದ್ದುಗುಂಡು ಮಾರಾಟ ಮಾಡುವವರಿಗೆ ಬಾರೂದ್ ಮನೆತನ ಎಂಬ ಅಡ್ಡಹೆಸರು ಇರುತ್ತಿತ್ತು, ವರ್ಷ ಪೂರ್ತಿ ಮದ್ದುಗುಂಡು ಅರೆದು ತಯಾರಿಸಿ ಮಾರಾಟ, ಹಬ್ಬ ಹರಿದಿನದಲ್ಲಿ ಆ ಕಾಲದ ದೇಸಿ ಸಿಡಿ ಮದ್ದು ಗರ್ನಾಲು ಇತ್ಯಾದಿ ಮಾರಾಟದಿಂದ ಅವರದ್ದು ಶ್ರೀಮಂತ ಜೀವನವೇ ಆಗಿತ್ತು.
  ಹೊನ್ನಾವರದ ಬಾರೂದ್ ಮೊಯಿದೀನ್ ಸಾಬ್ ರಿಗೆ ಐವರು ಮಕ್ಕಳು ಹಸನಾರ್, ಅಮೀನಾಬಿ, ಹಮೀದ್ ಸಾಬ್, ಆಹ್ಮದ್ ಖುನ್ನಿ, ಮತ್ತು ಇಬ್ರಾಹಿಂ.
   ಮನೆತನದ ಉದ್ಯೋಗವನ್ನು ಹಸನಾರ್ ಸಾಬ್ ಮತ್ತು ಹಮೀದ್ ಸಾಹೇಬರು ಮುಂದುವರೆಸುತ್ತಾರೆ, ಉಳಿದವರು ಸಾಗರ ಮತ್ತು ಗೋವಾದಲ್ಲಿ ಉದ್ಯೋಗ ಮಾಡುತ್ತಾರೆ, ಅಮೀನಾಬಿಯವರನ್ನು ಚಾಬು ಸಾಹೇಬರಿಗೆ ವಿವಾಹ ಮಾಡುತ್ತಾರೆ.
    ಹಸನಾರ್ ಸಾಬ್ ಮತ್ತು ಶ್ರೀಮತಿ ಖತಿಜಾಬಿ ದಂಪತಿಗಳಿಗೆ ಬಾಬು (ಅಬ್ದುಲ್ ಖಾದರ್ ), ಖಾಸಿಂ, ಹಾ. ಮೊ. ಬಾಷಾ ಮತ್ತು ಷ೦ಷು ಎಂಬ ನಾಲ್ಕು ಗಂಡು ಮಕ್ಕಳು. ಜಾಯಿರಾಬಿ, ಆಲೀಮಾ, ಪಾತೀಮಾ ಮತ್ತು ನೇಬಾನು ಎಂಬ ನಾಲ್ಕು ಹೆಣ್ಣು ಮಕ್ಕಳು.
  ಇವರಲ್ಲಿ ಹಾ.ಮೊ. ಬಾಷಾ ಕನ್ನಡದ ಕಟ್ಟಾ ಅಭಿಮಾನಿ, ಸಂಘಟನಾ ಚತುರ, ಪ್ರಖರ ವಾಗ್ಮಿ, ಕಲಾವಿದರೂ ಆಗಿದ್ದರು.
  ವಿಷದ ಹಾವು ಹಿಡಿದು ಕಾಡಿಗೆ ಬಿಡುತ್ತಿದ್ದರು ಈ ಹವ್ಯಾಸವೇ ಇವರ ಅಕಾಲಿಕ ಮೃತ್ಯುವಿಗೆ ಕಾರಣವಾಯಿತು ಎಂಬುದು ವಿಷಾದನೀಯ ಸಂಗತಿ.
 ಇವರ ಪತ್ನಿ ಕೂಡ ಇತ್ತೀಚಿಗೆ ಅಪಘಾತದಲ್ಲಿ ಮೃತರಾಗಿದ್ದಾರೆ ಇವರ ಮಗಳು ಮತ್ತು ಮಗ ಸಂಬಂದಿಕರ ನೆರವಿನಿಂದ ವಿದ್ಯಾಬ್ಯಾಸ ಮುಂದುವರಿಸಿದ್ದಾರೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...