Skip to main content

Blog number 1885. ಪೆಬ್ರುವರಿ 16 ಶನಿವಾರ 1980ರಂದು ಭಾರತದಲ್ಲಿ ನಡೆದ ಪೂರ್ಣ ಸೂಯ೯ಗ್ರಹಣ ಬರಿಗಣ್ಣಿನಲ್ಲಿ ನೋಡಬಾರದೆಂದರೂ ನೋಡಿ ನನ್ನ ಬಲಗಣ್ಣಿನ ಅಕ್ಷಿಪಟಲ ಹರಿದು ಹೋದದ್ದು.

#1980ರ_ಪೆಬ್ರವರಿ_16ರಲ್ಲಿ_ನಡೆದ_ಪೂಣ೯_ಸೂಯ೯_ಗ್ರಹಣ 

#ನಾನು_ಜೀವಮಾನದಲ್ಲಿ_ಮರೆಯುವುದಿಲ್ಲ.

#ಗ್ರಹಣದಲ್ಲಿ_ಸೂರ್ಯನ_ಡೈಮಂಡ್_ರಿಂಗ್_ಬರಿಗಣ್ಣಲ್ಲಿ_ನೋಡಿದ್ದೆ

#ಬರಿಗಣ್ಣಲ್ಲಿ_ಸೂಯ೯_ಗ್ರಹಣ_ನೋಡಿ_ನನ್ನ_ಬಲಗಣ್ಣ_ಅಕ್ಷಿ_ಪಟಲ_ಹರಿದು_ಹೋಗಿತ್ತು.

#ಅವತ್ತು .....
 #ಬೆಳಕು_ಮಬ್ಬಾಯಿತು_ಗಾಳಿ_ತಂಪಾಯಿತು_ಆಕಾಶದಲ್ಲಿ_ನಕ್ಷತ್ರ_ಗೋಚರಿಸಿತು.

#ಪಕ್ಷಿಗಳು_ವಿಚಲಿತ_ನಡುವಳಿಕೆಗಳು

#ಗೋವುಗಳು_ಮಧ್ಯಾಹ್ನಕ್ಕೆ_ಕೊಟ್ಟಿಗೆಗೆ_ಬಂದವು.

   ಸೂಯ೯ ಗ್ರಹಣದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಭಯ ಹೆಚ್ಚಾಗುತ್ತಿದೆ, ಟಿವಿ, ಮೊಬೈಲ್ಗಳ ಈ ಮುಂದುವರಿದ ಆದುನಿಕ ಭಾರತದಲ್ಲಿ ವಿಜ್ಞಾನದ ಹೆಚ್ಚಿನ ತಿಳುವಳಿಕೆ ಉ೦ಟಾಗುತ್ತದೆ ಮತ್ತು ಮೂಡನಂಬಿಕೆಗಳು ನಶಿಸುತ್ತದೆ ಎಂಬ ಭರವಸೆ ಸುಳ್ಳಾಗಿದೆ.
   ಟಿವಿಗಳ ಚಾನಲ್ ಗಳ ಜೋತಿಷಿಗಳು ಹುಟ್ಟು ಹಾಕುವ ವಿವಿದ ಆಚರಣೆಯ ಹೆಸರಲ್ಲಿ ಜನ ಸಾಮಾನ್ಯರ ಜೀವನ ಕ್ರಮದಲ್ಲಿ ಭಯ ಬೀತಿ ಬಿತ್ತುವುದರಿಂದ ಅನೇಕ ಮೌಡ್ಯಕ್ಕೆ ಕಾರಣವಾಗಿದೆ.
   1980ರ ಪೆಬ್ರುವರಿ 16ರOದು ನಡೆದ ಖಗ್ರಾಸ ಸೂಯ೯ಗ್ರಹಣದ ದಿನ ನೆನಪಿಗೆ ಬಂತು ಅವತ್ತು ಶನಿವಾರ ಆದರೂ ಖುಗ್ರಾಸ ಸೂರ್ಯಗ್ರಹಣದ ಕಾರಣದಿಂದ ಶಾಲಾ ಕಾಲೇಜುಗಳಿಗೆ ರಜಾ ನೀಡಿದ್ದರು.
   ದಕ್ಷಿಣ ಭಾರತದಲ್ಲಿ ಸಂಪೂಣ೯ ಗ್ರಹಣ ಗೋಚರ ಆಗುವುದರಿಂದ ದೇಶ ವಿದೇಶದ ಖಗೋಳ ವಿಜ್ಞಾನಿಗಳು ಬಂದಿದ್ದರು ಅವತ್ತಿನ ನಿತ್ಯ ಪತ್ರಿಕೆ ಮತ್ತು ರೇಡಿಯೋಗಳಲ್ಲಿ ಸೂಯ೯ ಗ್ರಹಣದ ಬಗ್ಗೆ ವೈಜ್ಞಾನಿಕ ಸಲಹೆ ಸಂವಾದಗಳು ಸುದ್ದಿ ಆಗುತ್ತಿತ್ತು.
  ಬರಿಗಣ್ಣಲ್ಲಿ ನೋಡಿದರೆ ಅನಾಹುತ ಎಂಬ ಎಚ್ಚರಿಕೆ ನೀಡಲಾಗಿತ್ತು, ಅವತ್ತು ಮಧ್ಯಾಹ್ನ ಸುಮಾರು 12 ಗಂಟೆಯಿ೦ದ ಸ೦ಜೆ 5ರ ತನಕ ನಡೆದ ಗ್ರಹಣದಲ್ಲಿ ಬೆಳಕು ಮಬ್ಬಾಯಿತು ... ಗಾಳಿ ತಂಪಾಯಿತು ..... ಆಕಾಶದಲ್ಲಿ ನಕ್ಷತ್ರ ಗೋಚರಿಸಿತು .... ಪಕ್ಷಿಗಳ ವಿಚಲಿತ ನಡುವಳಿಕೆಗಳು.... ಮೇಯಲು ಕಾಡಿಗೆ ಹೋಗಿದ್ದ ಗೋವುಗಳು ಮಧ್ಯಾಹ್ನವೇ ಬೆಳಕು ಮಬ್ಬಾಗುವುದು ನೋಡಿ ಕೊಟ್ಟಿಗೆಗಳಿಗೆ ದೌಡಾಯಿಸಿದವು.
 ಮಧ್ಯಾಹ್ನ 2.23ರಿಂದ 2.30 ಸಂಪೂಣ೯ ಕತ್ತಲಾಯಿತು,
ಅದೇ ಸಂದಭ೯ದಲ್ಲಿ ಅಲೆಗಳ ಉಪಾದಿಯಲ್ಲಿ ನೆರಳು ಭೂಮಿಯ ಮೇಲೆ ವೇಗವಾಗಿ ಸಾಗಿದ್ದು ಎಲ್ಲಾ 15 -16 ವಷ೯ ಪ್ರಾಯದ ನಮಗೆ ಕುತೂಹಲ ಮತ್ತು ರೋಮಾಂಚನ ದ ಘಟನೆ ಆಗಿತ್ತು.
    6 ತಿಂಗಳಿಂದ ಸುದ್ದಿ ಮಾಧ್ಯಮಗಳು, ವಿಜ್ಞಾನಿಗಳು ಖಗ್ರಾಸ ಸೂರ್ಯಗ್ರಹಣದಈ ಅಪೂವ೯ ಘಟನೆಗಾಗಿ ಕಾದಿದ್ದರು.
  ನಮ್ಮ ತಂದೆ ನಮ್ಮ ಕಣ್ಣುಗಳ ರಕ್ಷಣೆ ಬಗ್ಗೆ   ವಿಶೇಷ ಕಾಳಜಿವಹಿಸಿದ್ದರು, ಕಪ್ಪು ಎಕ್ಸ್ ರೇ ಶೀಟುಗಳ ಅನೇಕ ಹೊದಿಕೆ ಮಾಡಿ ಅದರ  ಮೂಲಕ ಸೂಯ೯ ಗ್ರಹಣದ ಸೂರ್ಯನನ್ನು ನೋಡಲು ಅನುಮತಿ ನೀಡಿದ್ದರು ಆದರೂ ನಾನು ಎಡಗಣ್ಣು ಕೈಯಲ್ಲಿ ಮುಚ್ಚಿ ಬರಿ ಬಲಗಣ್ಣಿ೦ದ ಸೂಯ೯ಗ್ರಹಣ ನೋಡಿದ್ದೆ, ಆಗ ಗ್ರಹಣದ ಸೂರ್ಯ ಡೈಮಂಡ್ ರಿಂಗ್ ನಂತೆ ಕಂಗೋಳಿಸುತ್ತಿದ್ದ.
  ನೋಡಬಾರದು ಮಾಡಬಾರದು ಎಂಬುದನ್ನ ಮಕ್ಕಳಾಟಿಕೆ ಆಗಿ ಉಲ್ಲಂಘನೆ ಮಾಡಿದ್ದೆ, ಏನೂ ಆಗಿಲ್ಲವಲ್ಲ ಅಂತ ಸಂಭ್ರಮ ಪಟ್ಟಿದ್ದೆ.
    10 ವಷ೯ದ ನಂತರ ದೃಷ್ಟಿ ದೋಷಕ್ಕೆ ಪರೀಕ್ಷೆ ಮಾಡಿಸಿಕೊಂಡಾಗ,ಕಣ್ಣಿನ ವೈದ್ಯರು ನಿಮ್ಮ ಕಣ್ಣಿನ ಅಕ್ಷಿ ಪಟಲ ಹರಿದಿದೆ,ಬರಿಗಣ್ಣಲ್ಲಿ ಸೂಯ೯ ಗ್ರಹಣ ನೋಡಿದೀರಾ?  ಅಂದಾಗ.... 1980ರ ಖಗ್ರಾಸ ಸೂಯ೯ ಗ್ರಹಣ ನೆನಪಾಯಿತು ಮತ್ತು ನಮ್ಮ ತಂದೆಯು ನಮ್ಮ ಕಣ್ಣುಗಳನ್ನು ರಕ್ಷಿಸಲು ಎಕ್ಸ್ ರೇ ಶೀಟ್ ಗಳನ್ನು ಬಳಸಿದ್ದು ಎಲ್ಲಾ ನೆನಪು ಎಲ್ಲಾ ಆಯಿತು.
  ಸೂಯ೯ ಗ್ರಹಣದ ಬಗ್ಗೆ ಅವತ್ತು ಜನರಲ್ಲಿ ಇವತ್ತಿನ ರೀತಿಯ ಭಯ ಇರಲಿಲ್ಲ,ಅವತ್ತಿನ ಸುದ್ದಿ ಮಾಧ್ಯಮಗಳಾದ ಪತ್ರಿಕೆಗಳು, ರೇಡಿಯೋಗಳು ಜನರಿಗೆ ಬೇಕಾದ ಮಾಹಿತಿ ವೈಜ್ಞಾನಿಕ ದೃಷ್ಟಿಕೊನದಲ್ಲಿ ನೀಡುತ್ತಿತ್ತು, ಖಗೋಳ ವಿಜ್ಞಾನಿಗಳ ಸಂಶೋದನ ವರದಿ ಮತ್ತು ಸಂದಶ೯ನಕ್ಕೆ ಅವತ್ತಿನ ಪತ್ರಿಕೋದ್ಯಮ ಮೊದಲ ಪ್ರಾಶಸ್ತ್ಯ ನೀಡುತ್ತಿತ್ತು ಈಗ ಆ ಸ್ಥಾನಗಳು ಜ್ಯೋತಿಷಿಗಳಿಗೆ ಮೀಸಲಾಗಿದೆ.
   ಆದರೆ ಇವತ್ತಿನ ಸುದ್ದಿ ಮಾಧ್ಯಮ ಟೀವಿ ಚಾನಲ್ ಗಳಿ೦ದ ಏನೇನು ಮಾಹಿತಿ ಪಡೆದವೆಂದು ತಮಗೆಲ್ಲ ತಿಳಿದಿದೆ ಇವರಿಗೆಲ್ಲ ಖಗೋಳ ವಿಜ್ಞಾನಿಗಳು ಸಿಗಲಿಲ್ಲ ಸಿಕ್ಕವರೆಲ್ಲ ಅರೆ ಬರೆ ಕಲಿತ ಜೊತಿಷಿಗಳು ಸುದ್ದಿ ಪ್ರಸಾರಕ್ಕೆ ಹುಲುಸಾದ ಟೀವಿ ಮಾಧ್ಯಮ!
   ನನ್ನ ಬಲಗಣ್ಣಿನ ಅಕ್ಷಿಪಟಲ 43 ವಷ೯ದ ಹಿಂದೆ ಈ ರೀತಿ ಡ್ಯಾಮೇಜ್ ಆಗಿದ್ದರಿಂದ ನಾನು 1980 ಪ್ರೆಬ್ರುವರಿ 16ರ ಶನಿವಾರ ಮಧ್ಯಾಹ್ನ ನಡೆದ ಖಗ್ರಾಸ ಸೂರ್ಯಗ್ರಹಣ ನನ್ನ ಜೀವಿತಾವಧಿ ಪೂರ್ತಿ ಮರೆಯಲಾರೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ