Skip to main content

Blog number 1886. ತಾಯಿ ಕಾಡಾನೆಯಿಂದ ಬೇರೆ ಆಗಿರುವ ಮರಿಯಾನೆ ಕಾಪಾಡುತ್ತಿರುವ ಎರೆಡು ಗಂಡಾನೆಗಳು.

#ಆನಂದಪುರಂ_ಸಮೀಪದಿಂದ_ಕಾಡಾನೆಗೆ_ಅವುಗಳ_ಮೂಲ_ನೆಲೆಗೆ_ದಾರಿ_ಏರ್ಪಡಿಸಿದಾಗ

#ಎರೆಡು_ಗಂಡಾನೆ_ಮತ್ತು_ಒಂದು_ಮರಿಯಾನೆ_ಮಾತ್ರ_ಇತ್ತು.

#ಮರಿಯಾನೆಯ_ತಾಯಿ_ಎಲ್ಲಿದೆ?

#ದೀರ್ಘ_ಕಾಲ_ಮರಿಯಾನೆ_ರಕ್ಷಿಸುತ್ತಾ_ತಮ್ಮ_ಜೊತೆ_ಕಾಪಾಡಿದ_ಎರೆಡು_ಗಂಡು_ಕಾಡಾನೆಗಳು.

#ಮಲೆಶಂಕರ_ಭಾಗದಲ್ಲಿ_ಸುತ್ತಾಡುತ್ತಿರುವುದು_ಈ_ಮರಿಯಾನೆಯ_ತಾಯಿಯಾ?

#ಕಾಡಾನೆಗಳು_ಸುರಕ್ಷಿತವಾಗಿ_ತಮ್ಮ_ಮೂಲ_ಸ್ಥಾನ_ಸೇರಲಿ

#ಮರಿಯಾನೆಗೆ_ತಾಯಿಯಾನೆ_ಸಿಗಲಿ

#ಈ_ಬಾಗದ_ಜನ_ಜಾನುವಾರು_ಕಾಡಾನೆಗಳಿಗೆ_ಯಾವುದೇ_ಜೀವಹಾನಿ_ಆಗದಿರಲಿ

#ಎಂದು_ನಮ್ಮ_ಊರಿನ_ವರಸಿದ್ಧಿ_ವಿನಾಯಕ_ದೇವರಿಗೆ_ಹರಕೆ_ಮಾಡಿದ್ದೇನೆ.


  ಶಿವಮೊಗ್ಗ ಸಾಗರ ಮಾರ್ಗದ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ನಿನ್ನೆ (25- ಡಿಸೆಂಬರ್ - 2023) ಎಲ್ಲಾ ವಾಹನ ಸಂಚಾರ ನಿಲ್ಲಿಸಿ ಕಳೆದ 80 ದಿನಗಳಿಂದ ತನ್ನ ಮೂಲ ಸ್ಥಾನಕ್ಕೆ ವಾಪಾಸಾಗಲು ಬಂದ ದಾರಿಯಲ್ಲೇ ವಾಪಾಸು ಹೋಗಲು ಪ್ರಯತ್ನಿಸಿದಾಗೆಲ್ಲ ಈ ಭಾಗದ ರೈತರು ತಮ್ಮ ಜಮೀನು ತೋಟ ಸಂರಕ್ಷಣೆಗಾಗಿ ಸಿಡಿಸುವ ಆನೆ ಪಟಾಕಿಗಳಿಂದ (ಅರಣ್ಯ ಇಲಾಖೆ ಕೂಡ ಈ ಪಟಾಕಿ ತನ್ನ ಸಿಬ್ಬಂದಿಯಿಂದ ಸಿಡಿಸಿದೆ) ಬೆದರಿ ಪುನಃ ವಾಪಾಸು ಹೋಗುತ್ತಿದ್ದ ಕಾಡಾನೆಗಳನ್ನು ಅರಣ್ಯ ಇಲಾಖೆ ಶ್ರಮದಿಂದ ರಾಷ್ಟ್ರೀಯ ಹೆದ್ದಾರಿ ಕ್ರಾಸ್ ಮಾಡಿಸಿದೆ.
  ಈ ಸಂದರ್ಭದಲ್ಲಿನ ವಿಡಿಯೋ ವೈರಲ್ ಆಗಿದೆ ಆದರೆ ರಾಷ್ಟ್ರೀಯ ಹೆದ್ದಾರಿ ದಾಟಿದ್ದು ಬಲಿಷ್ಟವಾದ ದಂತಗಳನ್ನು ಹೊಂದಿರುವ ಎರೆಡು ಗಂಡು ಸಲಗಗಳು ಅವುಗಳು ತಮ್ಮ ಜೊತೆಗೆ ಮರಿಯಾನೆಯನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ರಾಷ್ಟ್ರೀಯ ಹೆದ್ದಾರಿ ದಾಟಿದ್ದಾವೆ.
  16 - ಅಕ್ಟೋಬರ್ -2023ರಂದು ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಕೈರದ ಮನೆಯಲ್ಲಿ ಸಂಜೆ 6.47 PM ಗೆ ಕ್ಯಾಮೆರಾದಲ್ಲಿ ತಾಯಿ ಆನೆ ಜೊತೆ ಮರಿಯಾನೆ ಇತ್ತು.
   ಹಾಗಾದರೆ ತಾಯಿ ಆನೆಯಿಂದ ಮರಿಯಾನೆ ಬೇರೆ ಆಗಿದ್ದು ಹೇಗೆ? ತಾಯಿ ಆನೆ ಈಗ ಎಲ್ಲಿದೆ? ಗುಂಪಿನ ಗಂಡಾನೆಗಳು ಅನಾಥವಾದ ಮರಿಯಾನೆ ಕಾಪಾಡುವ ಸ್ವಭಾವ ಆನೆಗಳಲ್ಲಿದೆಯಾ? ಎಂಬ ಪ್ರಶ್ನೆಗಳು ಸಹಜ.
  ಕಾಡಾನೆಗಳು ತಮ್ಮ ಗುಂಪಿನ ಮರಿಯಾನೆಯ ತಾಯಿ ಮೃತ ಪಟ್ಟರೆ ಉಳಿದ ಹೆಣ್ಣು ಆನೆಗಳು ಅವುಗಳನ್ನು ರಕ್ಷಿಸುತ್ತದೆ, ಅದೇ ರೀತಿ ಗುಂಪಿನ ಗಂಡಾನೆಗಳು ಅಂತಹ ಮರಿಯಾನೆ ಪ್ರಾಯಕ್ಕೆ ಬರುವ ತನಕ ಜೊತೆಯಲ್ಲಿರುತ್ತದೆಂಬ ಮಾಹಿತಿ ಇದೆ.
   ಭದ್ರಾ ಅಭಯಾರಣ್ಯದಿಂದ ಒಂದು ಮರಿಯಾನೆ ಮತ್ತು ಅದರ ತಾಯಿ ಆನೆ ಹಾಗು ಎರೆಡು ಗಂಡಾನೆ ಈ ಭಾಗಕ್ಕೆ ಬಂದಿದ್ದು ಒಂದು ಆನೆ ಮಲೆಶಂಕರ ಭಾಗದಲ್ಲಿ ಸಂಚರಿಸುತ್ತಿದೆ ಎಂಬ ಮಾಹಿತಿ ಇದೆ ಹಾಗಾಗಿದ್ದಲ್ಲಿ ಈ ಮರಿ ಆನೆಯ ತಾಯಿ ಅದೇ ಆಗಿರಬೇಕು.
   ನಮ್ಮ ಭಾಗದಲ್ಲಿ ಇಷ್ಟು ದಿನ ಸಂಚರಿಸುತ್ತಿರುವ ಕಾಡಾನೆಗಳು 16 ಬಾರಿ ವಾಪಾಸು ಹೋಗುವ ವಿಪಲ ಪ್ರಯತ್ನ ಮಾಡಿದ್ದಾವೆ ಎಂದು ಈ ಭಾಗದ ರೈತ ವಾಸಿಗಳು ಹೇಳುತ್ತಾರೆ.
   ಅವುಗಳು ಬಂದ ನಿರ್ಧಿಷ್ಟ ಮಾರ್ಗದಲ್ಲೇ ವಾಪಾಸು ಆಗುವಾಗ ಅಲ್ಲಿನ ರೈತರು ತಮ್ಮ ತೋಟ ಆನೆಗಳು ನಾಶ ಮಾಡಿತೆಂಬ ಭಯದಿಂದ ಸಿಡಿಸುತ್ತಿದ್ದ ಆನೆ ಪಟಾಕಿ ಇತ್ಯಾದಿ ಶಬ್ದಗಳಿಂದ ಪುನಃ ದಿಕ್ಕಾಪಾಲಾಗಿ ದಾರಿ ತಪ್ಪಿದೆ, ಇಂತಹ ಸಂದರ್ಭದಲ್ಲಿ ತಾಯಿ ಆನೆ ಹೇಗೋ ವಾಪಾಸಾಗಿದೆ ಆದರೆ ದಾರಿ ತಪ್ಪಿದ ಮರಿ ಆನೆಗೆ ಎರೆಡು ಗಂಡಾನೆಗಳು ರಕ್ಷಿಸಿ ಕಾಪಾಡಿಕೊಂಡು ಇಷ್ಟು ದಿನ ಎಲ್ಲೆಲ್ಲೋ ತಿರುಗುತ್ತಿದ್ದವು.
   ಕಾಡಾನೆಗಳು ತನ್ನ ಪರಿವಾರದ ಸಂರಕ್ಷಣೆ ಮಾಡುವ ಈ ಪರಿಯ ಪ್ರೀತಿಗೆ ನಿಜಕ್ಕೂ ನಮ್ಮ ಹೃದಯಗಳು ಕರಗುವುದು ಸುಳ್ಳಲ್ಲ.
    ಈ ಕಾಡಾನೆಗಳು ಸುರಕ್ಷಿತವಾಗಿ ತಮ್ಮ ಮೂಲ ನೆಲೆಗೆ ಆದಷ್ಟು ಬೇಗ ಸೇರಲಿ, ಮರಿಯಾನೆಗೆ ತಾಯಿ ಆನೆ ಸಿಕ್ಕು ತಾಯಿಯ ಬೆಚ್ಚನೆ ಮಡಿಲು ಸೇರಲಿ, ಈ ಭಾಗದ ಜನ ಜಾನುವಾರುಗಳ ಮತ್ತು ಈ ಕಾಡಾನೆಗಳ ಜೀವಕ್ಕೆ ಯಾವುದೇ ಹಾನಿ ಆಗದಿರಲಿ ಎಂದು ನಮ್ಮ ಊರಿನ #ಶ್ರೀ_ವರಸಿದ್ಧಿ_ವಿನಾಯಕ_ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ 2024ರ ಫೆಬ್ರುವರಿ 13ರ ಮಂಗಳವಾರ ನಡೆಯುವ ಶ್ರೀ ವರಸಿದ್ಧಿ ವಿನಾಯಕ ದೇವರ ರಥೋತ್ಸವದಂದು 101 ಕಾಯಿ ದೇವರಿಗೆ ಸಮರ್ಪಿಸುವ ಹರಕೆ ಮಾಡಿದ್ದೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ