Skip to main content

Blog number 1886. ತಾಯಿ ಕಾಡಾನೆಯಿಂದ ಬೇರೆ ಆಗಿರುವ ಮರಿಯಾನೆ ಕಾಪಾಡುತ್ತಿರುವ ಎರೆಡು ಗಂಡಾನೆಗಳು.

#ಆನಂದಪುರಂ_ಸಮೀಪದಿಂದ_ಕಾಡಾನೆಗೆ_ಅವುಗಳ_ಮೂಲ_ನೆಲೆಗೆ_ದಾರಿ_ಏರ್ಪಡಿಸಿದಾಗ

#ಎರೆಡು_ಗಂಡಾನೆ_ಮತ್ತು_ಒಂದು_ಮರಿಯಾನೆ_ಮಾತ್ರ_ಇತ್ತು.

#ಮರಿಯಾನೆಯ_ತಾಯಿ_ಎಲ್ಲಿದೆ?

#ದೀರ್ಘ_ಕಾಲ_ಮರಿಯಾನೆ_ರಕ್ಷಿಸುತ್ತಾ_ತಮ್ಮ_ಜೊತೆ_ಕಾಪಾಡಿದ_ಎರೆಡು_ಗಂಡು_ಕಾಡಾನೆಗಳು.

#ಮಲೆಶಂಕರ_ಭಾಗದಲ್ಲಿ_ಸುತ್ತಾಡುತ್ತಿರುವುದು_ಈ_ಮರಿಯಾನೆಯ_ತಾಯಿಯಾ?

#ಕಾಡಾನೆಗಳು_ಸುರಕ್ಷಿತವಾಗಿ_ತಮ್ಮ_ಮೂಲ_ಸ್ಥಾನ_ಸೇರಲಿ

#ಮರಿಯಾನೆಗೆ_ತಾಯಿಯಾನೆ_ಸಿಗಲಿ

#ಈ_ಬಾಗದ_ಜನ_ಜಾನುವಾರು_ಕಾಡಾನೆಗಳಿಗೆ_ಯಾವುದೇ_ಜೀವಹಾನಿ_ಆಗದಿರಲಿ

#ಎಂದು_ನಮ್ಮ_ಊರಿನ_ವರಸಿದ್ಧಿ_ವಿನಾಯಕ_ದೇವರಿಗೆ_ಹರಕೆ_ಮಾಡಿದ್ದೇನೆ.


  ಶಿವಮೊಗ್ಗ ಸಾಗರ ಮಾರ್ಗದ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ನಿನ್ನೆ (25- ಡಿಸೆಂಬರ್ - 2023) ಎಲ್ಲಾ ವಾಹನ ಸಂಚಾರ ನಿಲ್ಲಿಸಿ ಕಳೆದ 80 ದಿನಗಳಿಂದ ತನ್ನ ಮೂಲ ಸ್ಥಾನಕ್ಕೆ ವಾಪಾಸಾಗಲು ಬಂದ ದಾರಿಯಲ್ಲೇ ವಾಪಾಸು ಹೋಗಲು ಪ್ರಯತ್ನಿಸಿದಾಗೆಲ್ಲ ಈ ಭಾಗದ ರೈತರು ತಮ್ಮ ಜಮೀನು ತೋಟ ಸಂರಕ್ಷಣೆಗಾಗಿ ಸಿಡಿಸುವ ಆನೆ ಪಟಾಕಿಗಳಿಂದ (ಅರಣ್ಯ ಇಲಾಖೆ ಕೂಡ ಈ ಪಟಾಕಿ ತನ್ನ ಸಿಬ್ಬಂದಿಯಿಂದ ಸಿಡಿಸಿದೆ) ಬೆದರಿ ಪುನಃ ವಾಪಾಸು ಹೋಗುತ್ತಿದ್ದ ಕಾಡಾನೆಗಳನ್ನು ಅರಣ್ಯ ಇಲಾಖೆ ಶ್ರಮದಿಂದ ರಾಷ್ಟ್ರೀಯ ಹೆದ್ದಾರಿ ಕ್ರಾಸ್ ಮಾಡಿಸಿದೆ.
  ಈ ಸಂದರ್ಭದಲ್ಲಿನ ವಿಡಿಯೋ ವೈರಲ್ ಆಗಿದೆ ಆದರೆ ರಾಷ್ಟ್ರೀಯ ಹೆದ್ದಾರಿ ದಾಟಿದ್ದು ಬಲಿಷ್ಟವಾದ ದಂತಗಳನ್ನು ಹೊಂದಿರುವ ಎರೆಡು ಗಂಡು ಸಲಗಗಳು ಅವುಗಳು ತಮ್ಮ ಜೊತೆಗೆ ಮರಿಯಾನೆಯನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ರಾಷ್ಟ್ರೀಯ ಹೆದ್ದಾರಿ ದಾಟಿದ್ದಾವೆ.
  16 - ಅಕ್ಟೋಬರ್ -2023ರಂದು ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಕೈರದ ಮನೆಯಲ್ಲಿ ಸಂಜೆ 6.47 PM ಗೆ ಕ್ಯಾಮೆರಾದಲ್ಲಿ ತಾಯಿ ಆನೆ ಜೊತೆ ಮರಿಯಾನೆ ಇತ್ತು.
   ಹಾಗಾದರೆ ತಾಯಿ ಆನೆಯಿಂದ ಮರಿಯಾನೆ ಬೇರೆ ಆಗಿದ್ದು ಹೇಗೆ? ತಾಯಿ ಆನೆ ಈಗ ಎಲ್ಲಿದೆ? ಗುಂಪಿನ ಗಂಡಾನೆಗಳು ಅನಾಥವಾದ ಮರಿಯಾನೆ ಕಾಪಾಡುವ ಸ್ವಭಾವ ಆನೆಗಳಲ್ಲಿದೆಯಾ? ಎಂಬ ಪ್ರಶ್ನೆಗಳು ಸಹಜ.
  ಕಾಡಾನೆಗಳು ತಮ್ಮ ಗುಂಪಿನ ಮರಿಯಾನೆಯ ತಾಯಿ ಮೃತ ಪಟ್ಟರೆ ಉಳಿದ ಹೆಣ್ಣು ಆನೆಗಳು ಅವುಗಳನ್ನು ರಕ್ಷಿಸುತ್ತದೆ, ಅದೇ ರೀತಿ ಗುಂಪಿನ ಗಂಡಾನೆಗಳು ಅಂತಹ ಮರಿಯಾನೆ ಪ್ರಾಯಕ್ಕೆ ಬರುವ ತನಕ ಜೊತೆಯಲ್ಲಿರುತ್ತದೆಂಬ ಮಾಹಿತಿ ಇದೆ.
   ಭದ್ರಾ ಅಭಯಾರಣ್ಯದಿಂದ ಒಂದು ಮರಿಯಾನೆ ಮತ್ತು ಅದರ ತಾಯಿ ಆನೆ ಹಾಗು ಎರೆಡು ಗಂಡಾನೆ ಈ ಭಾಗಕ್ಕೆ ಬಂದಿದ್ದು ಒಂದು ಆನೆ ಮಲೆಶಂಕರ ಭಾಗದಲ್ಲಿ ಸಂಚರಿಸುತ್ತಿದೆ ಎಂಬ ಮಾಹಿತಿ ಇದೆ ಹಾಗಾಗಿದ್ದಲ್ಲಿ ಈ ಮರಿ ಆನೆಯ ತಾಯಿ ಅದೇ ಆಗಿರಬೇಕು.
   ನಮ್ಮ ಭಾಗದಲ್ಲಿ ಇಷ್ಟು ದಿನ ಸಂಚರಿಸುತ್ತಿರುವ ಕಾಡಾನೆಗಳು 16 ಬಾರಿ ವಾಪಾಸು ಹೋಗುವ ವಿಪಲ ಪ್ರಯತ್ನ ಮಾಡಿದ್ದಾವೆ ಎಂದು ಈ ಭಾಗದ ರೈತ ವಾಸಿಗಳು ಹೇಳುತ್ತಾರೆ.
   ಅವುಗಳು ಬಂದ ನಿರ್ಧಿಷ್ಟ ಮಾರ್ಗದಲ್ಲೇ ವಾಪಾಸು ಆಗುವಾಗ ಅಲ್ಲಿನ ರೈತರು ತಮ್ಮ ತೋಟ ಆನೆಗಳು ನಾಶ ಮಾಡಿತೆಂಬ ಭಯದಿಂದ ಸಿಡಿಸುತ್ತಿದ್ದ ಆನೆ ಪಟಾಕಿ ಇತ್ಯಾದಿ ಶಬ್ದಗಳಿಂದ ಪುನಃ ದಿಕ್ಕಾಪಾಲಾಗಿ ದಾರಿ ತಪ್ಪಿದೆ, ಇಂತಹ ಸಂದರ್ಭದಲ್ಲಿ ತಾಯಿ ಆನೆ ಹೇಗೋ ವಾಪಾಸಾಗಿದೆ ಆದರೆ ದಾರಿ ತಪ್ಪಿದ ಮರಿ ಆನೆಗೆ ಎರೆಡು ಗಂಡಾನೆಗಳು ರಕ್ಷಿಸಿ ಕಾಪಾಡಿಕೊಂಡು ಇಷ್ಟು ದಿನ ಎಲ್ಲೆಲ್ಲೋ ತಿರುಗುತ್ತಿದ್ದವು.
   ಕಾಡಾನೆಗಳು ತನ್ನ ಪರಿವಾರದ ಸಂರಕ್ಷಣೆ ಮಾಡುವ ಈ ಪರಿಯ ಪ್ರೀತಿಗೆ ನಿಜಕ್ಕೂ ನಮ್ಮ ಹೃದಯಗಳು ಕರಗುವುದು ಸುಳ್ಳಲ್ಲ.
    ಈ ಕಾಡಾನೆಗಳು ಸುರಕ್ಷಿತವಾಗಿ ತಮ್ಮ ಮೂಲ ನೆಲೆಗೆ ಆದಷ್ಟು ಬೇಗ ಸೇರಲಿ, ಮರಿಯಾನೆಗೆ ತಾಯಿ ಆನೆ ಸಿಕ್ಕು ತಾಯಿಯ ಬೆಚ್ಚನೆ ಮಡಿಲು ಸೇರಲಿ, ಈ ಭಾಗದ ಜನ ಜಾನುವಾರುಗಳ ಮತ್ತು ಈ ಕಾಡಾನೆಗಳ ಜೀವಕ್ಕೆ ಯಾವುದೇ ಹಾನಿ ಆಗದಿರಲಿ ಎಂದು ನಮ್ಮ ಊರಿನ #ಶ್ರೀ_ವರಸಿದ್ಧಿ_ವಿನಾಯಕ_ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ 2024ರ ಫೆಬ್ರುವರಿ 13ರ ಮಂಗಳವಾರ ನಡೆಯುವ ಶ್ರೀ ವರಸಿದ್ಧಿ ವಿನಾಯಕ ದೇವರ ರಥೋತ್ಸವದಂದು 101 ಕಾಯಿ ದೇವರಿಗೆ ಸಮರ್ಪಿಸುವ ಹರಕೆ ಮಾಡಿದ್ದೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...