Skip to main content

Blog number 1868. ಸಿಹಿ ತಿಂಡಿ,ಡ್ರೈಫ್ರೂಟ್ ಉದ್ಯಮದಲ್ಲಿ ನೂತನ ಪ್ಯಾಕಿಂಗ್ ತಂತ್ರಜ್ಞಾನ MAP ಬಳಸಿ ಆಕರ್ಷಕವಾದ ರಾಮಾಯಣದ ಚಿತ್ರಗಳ ಮುದ್ರಿಸಿ ಕರ್ನಾಟಕ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಪ್ಯಾಕ್ಟರಿ ಔಟ್ ಲೆಟ್ ಸರಣಿ ಪ್ರಾರಂಬಿಸಿ ಗ್ರಾಹಕರಿಂದ ಪ್ರಶಂಸೆ ಪಡೆಯುತ್ತಿರುವ 1600 ಕೋಟಿ ವಾರ್ಷಿಕ ವಹಿವಾಟಿನ ಬೋಳಾಸ್

#ಸಿಹಿ_ತಿನಿಸು_ಡ್ರೈಫ್ರೂಟ್_ಉದ್ಯಮದಲ್ಲಿ_ರುಚಿ_ಶುಚಿ_ಆಕರ್ಷಕ_ಪ್ಯಾಕಿಂಗ್

#ಸಾಗರದದಲ್ಲಿ_ಪ್ರಾರಂಭ_ಆಗಿದೆ_ಬೊಳಾಸ್_ಪ್ಯಾಕ್ಟರಿ_ಔಟ್_ಲೆಟ್ 

#ಇಲ್ಲಿ_ಮಾರಾಟ_ಮಾಡುವ_ಸಿಹಿತಿನಿಸು_ಡ್ರೈಫ್ರೂಟ್ಸ್_MAP_ತಂತ್ರಜ್ಞಾನದ_ಪ್ಯಾಕಿಂಗ್

#ಕಾರ್ಕಳ_ಮೂಲದ_ಬೋಳಾ_ರಾಘವೇಂದ್ರ_ಕಾಮತರ_ಉದ್ಯಮಶೀಲತೆಯ_ಕನಸು

#ಸ್ವಾತಂತ್ರ್ಯಪೂರ್ವ_1940ರಲ್ಲಿ_ಗೇರುಬೀಜ_ಉದ್ಯಮದಿಂದ_ಪ್ರಾರಂಭ

#ಮೂರನೆ_ತಲೆಮಾರಿನ_ಬೋಳಾ_ಸುರೇಂದ್ರಕಾಮತ್_ಸನ್ಸ್_ಹೆಸರಿನಲ್ಲಿ.

#ಒಂದುಸಾವಿರದ_ಆರು_ನೂರು_ಕೋಟಿ_ವಹಿವಾಟಿನ_ಡ್ರೈಪ್ರೂಟ್ಸ್_ಖಾದ್ಯತೈಲ_ಕಾಫಿ_ಜೀನು_ಸಿಹಿತಿಂಡಿ_ಸಾಫ್ಟ್_ವೇರ್_ಉದ್ಯಮ.

   ನಮ್ಮ ಊರಿನ ಶುಂಠಿ ಉದ್ಯಮಿ #ಪ್ರಮೋದ್_ಶೇಟ್ ಕೆಲವು ದಿನಗಳ ಹಿಂದೆ ಬೋಳಾಸ್ ನವರ ಶಬರಿ ಸ್ವೀಟ್ ಬಾಕ್ಸ್ ದೀಪಾವಳಿ ಹಬ್ಬದ ಸಿಹಿ ಉಡುಗೊರೆಯಾಗಿ ನೀಡಿದ್ದರು ಅದರಲ್ಲಿ ತಾಜಾ ಕಾಜು ಕಟ್ಲಿ ಇತ್ತು ಮತ್ತು ಈ ಬಾಕ್ಸ್ ಆಧುನಿಕ ಪ್ಯಾಕಿಂಗ್ ತಂತ್ರಜ್ಞಾನವಾದ MAP (Modified Atmosphere Package) ಆದ್ದರಿಂದ ಈ ಬಗ್ಗೆ ಕುತೂಹಲವಾಗಿ ಅವರಲ್ಲಿ ಕೇಳಿದಾಗ ಬೋಳಾಸ್ ಪ್ಯಾಕ್ಟರಿ ಔಟ್ ಲೆಟ್ ಶೋ ರೂಂ ಸಾಗರದ ಮಾರ್ಕೆಟ್ ರಸ್ತೆಯಲ್ಲಿ ಮೈಸೂರು ಕಾಫಿ ಹೌಸ್ ಹತ್ತಿರ ತೆರೆದಿದ್ದಾರೆಂದಾಗ ಅಲ್ಲಿಂದ ಅವರ ಪ್ರಸಿದ್ಧವಾದ ಬಾದಾಮಿ ಹಲ್ವಾ, ಮೈಸೂರು ಪಾಕ್ ಇತ್ಯಾದಿ ನಿನ್ನೆ ಅವರಿಂದ ತರಿಸಿದ್ದೆ.
   ಅನೇಕ ಉದ್ಯಮಿಗಳಿಗೆ ನಾನು ಅವರು ತಯಾರಿಸಿ ಮಾರಾಟ ಮಾಡುವ ತಿನಿಸುಗಳಿಗೆ ಆಕರ್ಷಕ - ಆರೋಗ್ಯಕರ  ಪ್ಯಾಕಿಂಗ್ ಅಳವಡಿಸುವ ಬಗ್ಗೆ ಹೇಳುತ್ತಿರುತ್ತೇನೆ ಕೆಲವರು ಕೇಳುತ್ತಾರೆ ಕೆಲವರು ಗೇಲಿ ಮಾಡುತ್ತಾರೆ.
ಗುಣಮಟ್ಟ ಮಾತ್ರ ಅಲ್ಲ ಅದರ ಶೆಲ್ಪ್ ಲೈಫ್, ಮಾರಾಟದ ತಂತ್ರಜ್ಞಾನಗಳು ಹೆಚ್ಚು ಮಾಡುವ ಪ್ಯಾಕಿಂಗ್ ನಾವು ತಯಾರಿಸುವ ಉತ್ಪನ್ನಗಳಿಗೆ ರಾಕೇಟ್ ವೇಗದ ಚಾಲನೆ ನೀಡುತ್ತದೆ ಎಂಬುದು ನಿರಾಕರಿಸಲಾಗದ ವಾಸ್ತವ ಸತ್ಯ. 
 1940 ರಲ್ಲಿ ಕಾರ್ಕಳದ ಬೋಳಾಸ್ ರಾಘವೇಂದ್ರ ಕಾಮತ್ ಪ್ರಾರಂಬಿಸಿದ ಗೇರುಬೀಜ ಉದ್ಯಮ 1952 ರಲ್ಲಿ ಒಂದು ಕೋಟಿ ವಹಿವಾಟಿನಿಂದ ಅವರ ಮೂರನೆ ತಲೆಮಾರು ಈಗ ಡ್ರೈ ಪ್ರೂಟ್ - ಜೇನು - ಖಾದ್ಯ ತೈಲ_ ಸಾಫ್ಟ್ ವೇರ್ - ಸಿಹಿ ತಿಂಡಿ - ಕಾಫಿ ಉದ್ಯಮದಲ್ಲಿ ವಾರ್ಷಿಕ 1600 ಕೋಟಿ ವಹಿವಾಟು ಮಾಡುತ್ತಾ ನಮ್ಮ ಕರ್ನಾಟಕ - ಗೋವಾ ಮತ್ತು ಮಹಾರಾಷ್ಟ್ರದಲ್ಲಿ ತನ್ನ ಉತ್ಪನ್ನಗಳ ಮಾರಾಟದ ಪ್ಯಾಕ್ಟರಿ ಔಟ್ ಲೆಟ್ ಗಳ ಸರಣಿಯನ್ನು ತೆರೆಯುತ್ತಿದೆ ಅಂತಹ ಒಂದು ಔಟ್ ಲೆಟ್ ಸಾಗರದಲ್ಲಿ ತೆರೆದಿದ್ದಾರೆ ಮತ್ತು ಭರಪೂರ ವ್ಯಾಪಾರವೂ ಆಗುತ್ತಿದೆ.
   ಹೊಸ ತಂತ್ರಜ್ಞಾನದ ಪ್ಯಾಕಿಂಗ್ ಎಂ- ಎ - ಪಿ ಪ್ಯಾಕ್ ಒಳಗಿನ ವಾತಾವರಣ ಮಾರ್ಪಾಡು ಮಾಡುತ್ತದೆ ಇದರಲ್ಲಿ ನೈಟ್ರೋಜನ್ ಮತ್ತು ಕಾರ್ಬನ್ ಡೈ ಆಕ್ಸೈಡ್ ಗಳ ಸಂಯೋಜಿತ ಅನಿಲ ತುಂಬಿರುತ್ತಾರೆ ಇದರಿಂದ ಇಂತಹ ಪ್ಯಾಕ್ ಒಳಗಿನ ತಿನುಸುಗಳ ಶೆಲ್ಫ್ ಲೈಫ್ ವಿಸ್ತರಿಸುತ್ತದೆ ಕಾರಣ ಒಳಗಿನ ತಿನಿಸು ವಾತಾವರಣದಲ್ಲಿನ ಆಮ್ಲಜನಕಕ್ಕೆ ತೆರೆಯದಿರುವುದರಿಂದ ಹೆಚ್ಚು ದಿನಗಳ ಕಾಲ ಅದರ ಒಳಗಿನ ತಿನಿಸಿನ ತಾಜಾ ತನ ಉಳಿಯುತ್ತದೆ.
 ಬೋಳಾಸ್ ಸಂಸ್ಥೆಯ ಮೂರನೆ ತಲೆಮಾರಿನವರು ನೂತನ ತಂತ್ರಜ್ಞಾನದ MAP ಪ್ಯಾಕಿಂಗ್ ಮೇಲೆ ಆಕರ್ಷಕವಾಗಿ ಡಿಸೈನ್ ಮಾಡಿದ್ದಾರೆ, ರಾಮಾಯಣದ ಕಥೆಗಳು ಚಿತ್ರಗಳು ಅಳವಡಿಸಿ ಅದರಲ್ಲಿ ನೂತನ ತಂತ್ರಜ್ಞಾನದಲ್ಲಿ ಶುದ್ಧ ತುಪ್ಪದಿಂದ ಆಮದು ಮಾಡಿಕೊಂಡ ಉತ್ಕೃಷ್ಟ ಬಾದಾಮಿ - ಪಿಸ್ಟಾ - ಗೇರು ಬೀಜ ಇತ್ಯಾದಿ ಬಳಸಿ ಸಿಹಿ ತಿಂಡಿ ಉದ್ಯಮ ವಿಸ್ತರಿಸಿದ್ದಾರೆ.
 ಹಬ್ಬ ಹರಿದಿನಗಳಲ್ಲಿ, ಹುಟ್ಟುಹಬ್ಬ, ವಿವಾಹ, ವಾರ್ಷಿಕೊತ್ಸವಗಳಲ್ಲಿ ನಮ್ಮ ಬಜೆಟ್ ನಲ್ಲಿ ಸಿಹಿ ತಿಂಡಿ, ಡ್ರೈ ಫ್ರೂಟ್ಸ್ ಕೊಡುಗೆ ಆಗಿ ಕೊಡಲು ಅತ್ಯುತ್ತಮ ಆಯ್ಕೆ ಆಗಿದೆ.
  ಈ ಯಶಸ್ವಿ ಉದ್ಯಮದ ಹಿಂದಿನ ಬೋಳಾಸ್ ಕಾಮತ್ ಕುಟುಂಬದ ಪರಿಶ್ರಮ ಉದ್ಯಮಿಗಳಿಗೆ ಮಾರ್ಗದರ್ಶಕ ಮತ್ತು ಪ್ರೇರಕವಾಗಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ