Skip to main content

Blog number 1855. ಮತ್ತೆ ಮತ್ತೆ ಓದಬೇಕೆನ್ನಿಸುವ ಲಾರಾ ಇಂಗೆಲ್ಸ್ ವೈಲ್ಡರ್ ಬರೆದ 9 ಸರಣಿ ಕಥಾ ಪುಸ್ತಕಗಳು ಲಿಟಲ್ ಹೌಸ್ ಸಿರೀಸ್

#ಮತ್ತೆ_ಮತ್ತೆ_ಓದ_ಬೇಕೆನ್ನಿಸುವ

#ಲಾರಾ_ಇಂಗೆಲ್ಸ್_ವೈಲ್ಡರ್_ಬರೆದ

#ಲಿಟಲ್_ಹೌಸ್_ಸೀರೀಸ್

#ಪ್ರೊಪೆಸರ್_ಎಸ್_ಅನಂತನಾರಾಯಣರು_ಅನುವಾದಿಸಿದ

#ಪೂರ್ಣಚಂದ್ರ_ತೇಜಸ್ವಿ_ಪುಸ್ತಕ_ಪ್ರಕಾಶನ_ಪ್ರಕಟಿಸಿದ_ಸರಣಿ_ಪುಸ್ತಕಗಳು

#ಒಮ್ಮೆ_ಓದಲು_ಪುಟ_ತೆರೆದರೆ_ಕೊನೆಯ_ಪುಟದವರೆಗೆ_ಓದಿಸು_ಕೊಂಡು_ಹೋಗುವ_ಪುಸ್ತಕ.

   ಲಾರಾ ಎಲಿಜಬೆತ್ ಇಂಗೆಲ್ಸ್ ವೈಲ್ಡರ್ ಅಮೆರಿಕಾದ ಪ್ರಖ್ಯಾತ ಸಾಹಿತಿ ಅವರ ಮನೆ ಸ್ಮಾರಕವಾಗಿ ಮಾಡಲಾಗಿದೆ.
  1867ರಲ್ಲಿ ಜನಿಸಿದ ಇವರು ಚಿಕ್ಕವರಿದ್ದಾಗ ಇವರ ಕುಟುಂಬ ಸೂಕ್ತ ನೆಲೆಗಾಗಿ ಸೂಕ್ತ ಪರಿಸರ ಹುಡುಕಿ ವಲಸೆ ಹೋಗುವ ಆ ಸಂದರ್ಭದ ಪರಿಸರ ವಿಕೋಪಗಳು, ಅನುಭವಿಸಿದ ಕಷ್ಟ, ದೈರ್ಯಶಾಲಿ ತಂದೆಯ ಪರಿಶ್ರಮ, ಬುದ್ದಿವಂತ ತಾಯಿ ಕುಟುಂಬ ಸಲಹುತ್ತಾ ಮಕ್ಕಳಿಗೆ ಸಂಸ್ಕಾರವಂತರಾಗಿ ವಿದ್ಯಾವಂತರಾಗಿ ಮಾಡುವ ಆದಿನಗಳನ್ನು ಸ್ವತಃ ನೋಡಿದ ಬಾಲಕಿ ಲಾರಾ ಬರೆದ ಈ ಸರಣಿ 9 ಪುಸ್ತಕ ಪ್ರಸಿದ್ದವಾಗಿದೆ.

   ವಿಶ್ವದಾದ್ಯಂತ ಎಲ್ಲಾ ಭಾಷೆಗೂ ಅನುವಾದವಾಗಿದೆ ಇದನ್ನು 1965 ರಲ್ಲಿ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಲು ಪ್ರಾರಂಬಿಸಿದವರು ಪ್ರೋಪೆಸರ್ ಎಸ್. ಅನಂತನಾರಾಯಣರು ಇದು ಕನ್ನಡದ ಓದುಗರ ಮನಸೆಳೆದಿತ್ತು ಮತ್ತು ಪ್ರಸಿದ್ದಿ ಪಡೆಯುತ್ತಿದ್ದಂತೆ ಅನಂತನಾರಾಯಣರ ಆಕಾಲ ನಿರ್ಗಮನದಿಂದಾಗಿ ಲಾರಾ ಅವರ ಕೃತಿ ಪೂರ್ತಿ ಪ್ರಕಟವಾಗಲಿಲ್ಲ, ಕೆಲಸ ಅರ್ಧಕ್ಕೆ ನಿಂತಿತ್ತು.
  ಅವರ ಶ್ರೀಮತಿಯವರ ಸಹಕಾರದಿಂದ ಪೂರ್ತಿ ಸರಣಿ 2000ದಲ್ಲಿ ತೇಜಸ್ವಿಯವರು ಅವರ ಪುಸ್ತಕ ಪ್ರಕಾಶನದಿಂದ ಪ್ರಕಟಿಸಿದರು.
  2006 ರಲ್ಲಿ ಬೆಂಗಳೂರಿನ ಗಾಂಧಿನಗರದ ಸ್ವಫ್ನಾ ಬುಕ್ ಹೌಸ್ ನಲ್ಲಿ ಈ ಸರಣಿಯ 9 ಪುಸ್ತಕಗಳನ್ನು ಖರೀದಿಸಿ ತಂದಿದ್ದೆ.
 ಭಾಗ 1. ದೊಡ್ಡ ಕಾಡಿನ ಪುಟ್ಟ ಮನೆ.
ಭಾಗ 2. ಹುಲ್ಲುಗಾವಲಿನ ಪುಟ್ಟ ಮನೆ.
ಭಾಗ 3 ರೈತರ ಹುಡುಗ.
ಭಾಗ 4. ಪ್ಲಮ್ ನದಿಯ ತೀರದಲ್ಲಿ.
ಭಾಗ 5. ಸಿಲ್ವರ್ ಲೇಖ್ ದಡದಲ್ಲಿ,
ಭಾಗ 6. ಚಳಿಯ ಸುಳಿಯಲ್ಲಿ.
ಭಾಗ 7. ಹುಲ್ಲುಗಾವಲಿನಲ್ಲಿ ಪುಟ್ಟ ಮನೆ.
ಭಾಗ 8. ಆ ಸೊಗಸಿನ ಬಂಗಾರದ ದಿನಗಳು.
ಭಾಗ 9. ಮೊದಲ ನಾಲ್ಕು ವರ್ಷಗಳು.
  1932-1943 ರಲ್ಲಿ ಈ ಪುಸ್ತಕಗಳು ಇಂಗ್ಲೀಷ್ ಬಾಷೆಯಲ್ಲಿ ಪ್ರಕಟವಾಗಿ ಸಾಹಿತ್ಯ ಲೋಕದಲ್ಲಿ ದೊಡ್ಡ ಅಲೆ ಸೃಷ್ಟಿಸಿತ್ತಂತೆ ಅದರ ಕನ್ನಡ ಅನುವಾದ ಕೂಡ ಅದ್ಬುತವಾಗಿದೆ.
  ಲಿಟಲ್ ಹೌಸ್ ಸೀರಿಸ್ ಟೀವಿ ಸೀರಿಯಲ್ ಆಗಿಯೂ ಪ್ರಸಿದ್ಧಿ ಪಡೆದಿದೆ.
  ಲಾರಾ ಇಂಗಲ್ಸ್ ವೈಲ್ಡರ್ ಬರಹಗಾರ್ತಿ - ಶಿಕ್ಷಕಿ - ಪತ್ರಕರ್ತೆ - ಕೃಷಿಕಳಾಗಿ 1957 ರಲ್ಲಿ ತಮ್ಮ 90ನೆ ವಯಸ್ಸಿನಲ್ಲಿ ಇಹಲೋಕ ತ್ಯಜಿಸುತ್ತಾರೆ.
  ಯುರೋಪಿನಿಂದ ಅಮೇರಿಕಾಗೆ ವಲಸೆ ಬಂದವರು ತಮ್ಮ ನೆಲೆಗಾಗಿ ಹೋರಾಡುವ, ಇವರಿಂದ ಮೂಲ ನಿವಾಸಿಗಳಾದ ರೆಡ್ ಇಂಡಿಯನ್ನರ ಅಸಹಕಾರ, ಪರಿಸರದಲ್ಲಿ ಸಂಪೂರ್ಣ ಬರ್ಪ ಆಗಿ ಪರಿಸರ ವಿಕೋಪ, ಸ್ಥಳಿಯ ಆಡಳಿತಗಳ ರೀತಿ ನೀತಿಗಳು, ಸಮುದಾಯದಲ್ಲಿ ಸ್ಥಳಿಯ ಶಾಲೆ, ಚರ್ಚ್ ಗಳು ಹೀಗೆ ರಸವತ್ತಾದ ಈ ಕುಟುಂಬದ ನಿಜ ಕಥೆಯ ಜೊತೆ 18ನೆ ಶತಮಾನದ ಅಮೇರಿಕಾದ ಇತಿಹಾಸ ಈ ಒಂಬತ್ತು ಪುಸ್ತಕದಲ್ಲಿ ಓದುತ್ತಾ ಓದುತ್ತಾ ಅನುಭವಿಸುವ ಈ ಸರಣಿ ಪುಸ್ತಕ ನೀವು ಓದಲೇ ಬೇಕು.
   ಇದನ್ನು ನೀವು ಈ ಕೆಳಕಂಡ ಲಿಂಕ್ ಮೂಲಕ ಖರೀದಿಸಬಹುದು.
https://www.sapnaonline.com/books/dodda-kadinalli-putta-mane-putta-ananthanarayana-s-1234009757-5551234009750

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ