Skip to main content

Blog number 1882. ಸತ್ತಂತಿರುವ ವ್ಯವಸ್ಥೆಯನ್ನು ಬಡಿದೆಬ್ಬಿಸುವ ಶಕ್ತಿ ಪತ್ರಿಕೆ ಮತ್ತು ಪತ್ರಕರ್ತರಿಗೆ ಇದೆ.

#ಮಲೆನಾಡಿನ_ಪತ್ರಕರ್ತರಲ್ಲಿ_ಹೊಸತನದ_ಕೊರತೆ_ಆಗದಿರಲಿ.

#ಸುದ್ದಿ_ಆಗದ್ದನ್ನು_ಸುದ್ದಿ_ಮಾಡಲಿ

#ಸುದ್ದಿ_ಆಗದ_ಸುದ್ದಿ_ಎಂಬ_ಲೋಪವಾಗದಿರಲಿ

#ಸತ್ತಂತೆ_ಇರುವ_ವ್ಯವಸ್ಥೆ_ಬಡಿದೆಚ್ಚರಿಸುವ೦ತ_ಕೆಲಸ_ಪತ್ರಕರ್ತರಿಂದ_ಸಾದ್ಯವಿದೆ

#ಪತ್ರಿಕೆ_ಮತ್ತು_ಪತ್ರಕರ್ತರು_ಸ್ಥಳಿಯ_ಸುದ್ದಿ_ಮೂಲಗಳನ್ನು_ಕಡೆಗಾಣಿಸದಿರಲಿ.


   ನಾನು ಸಣ್ಣಿಂದನೇ ಪತ್ರಿಕೆಗಳನ್ನು ಓದುತ್ತಾ ಬಂದವನು ಆಗ ಪೇಪರ್ ಯಾವ ಕಾರಣಕ್ಕೂ ಕಾಲಿನಿಂದ ತುಳಿಯಬಾರದಂತ ಸರಸ್ವತಿ ದೇವಿಯಾಗಿದ್ದಳು,ಗೊತ್ತಿಲ್ಲದೆ ಕಾಲು ತಾಗಿಸಿದರೆ ಪಶ್ಚಾತ್ತಾಪದಿಂದ ಅದಕ್ಕೆ ನಮಸ್ಕರಿಸಿ ಕ್ಷಮೆ ಕೇಳುತ್ತಿದ್ದೆವು.
   ಆಗೆಲ್ಲ ಪತ್ರಕರ್ತರೆಂದರೆ ಬಡ ಬ್ರಾಹ್ಮಣ ಪುರೋಹಿತರಂತೆ ಸಮಾಜದ ಅಂಕು ಡೊಂಕು ತಿದ್ದ ಬೇಕು, ಸಂವಿಧಾನಕ್ಕೆ ಚ್ಯುತಿ ಬಂದರೆ ಎಚ್ಚರಿಸ ಬೇಕು, ಕಾನೂನು ಸುವ್ಯವಸ್ಥೆ ಕಾಪಾಡಲು ಅವೇಳೆಯಲ್ಲೂ ಎದ್ದು ಬರಬೇಕು ಆದರೆ ಅವನಿಗೆ ಸಂಭಾವನೆ ? ಸಮಾಜದಲ್ಲಿ ಗೌರವ? ಈಗಿನ ರೀತಿ ಇರಲಿಲ್ಲ.
  ಈಗ ಎಲ್ಲದೂ ಇದೆ, ಸಂಖ್ಯೆಯೂ ಬರಪೂರ ಆದರೆ ಸುದ್ದಿಯಾಗದ ಸುದ್ದಿಗಳು ಮತ್ತು ಸುದ್ದಿಯ ಬರಗಾಲ ಸೃಷ್ಟಿ ಆಗಿದೆ.
  ಈಗ ಪ್ರತಿ ನಿತ್ಯ ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ ಬರುವ ಸುದ್ದಿಗಳು ಪತ್ರಿಕಾ ಗೋಷ್ಟಿ - ಶಂಕುಸ್ಥಾಪನೆ - ಸನ್ಮಾನಗಳು ಆದ್ದರಿಂದ ಜನ ಸಾಮಾನ್ಯರಿಗೆ ಉಪಯೋಗ ಆಗುವಂತ ತನಿಖಾ ಲೇಖನಗಳು ಪ್ರಕಟವಾಗುವುದು ತುಂಬಾ ಅಪರೂಪ.
   ರಾಜ್ಯದಲ್ಲೇ ರಾಜಕೀಯ ಕ್ಷೇತ್ರದಲ್ಲಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೇಂದ್ರ ಸ್ಥಾನದಲ್ಲಿರುವ ಶಿವಮೊಗ್ಗದಲ್ಲಿ ಇರುವ ಪತ್ರಿಕೋದ್ಯಮ ಮತ್ತು ಮೈಸೂರಿನಲ್ಲಿ ಇರುವ ಪತ್ರಿಕೋದ್ಯಮ ಹೋಲಿಸಿ ನೋಡಿದರೆ ಅರ್ಥವಾದೀತು.
  ರಾಜಕೀಯ ಕ್ಷೇತ್ರದಂತೆ ಪತ್ರಿಕಾ ಕ್ಷೇತ್ರ ಕೂಡ ಕುಲಷಿತ ಆಗಿರುವುದರಿಂದ ರಾಜ್ಯ ಮಟ್ಟದ ಪತ್ರಿಕೆಗಳ ಪತ್ರಕರ್ತರಿಗೆ ಅನೇಕ ಮಿತಿಗಳಿದೆ, ಲಕ್ಷ್ಮಣ ರೇಖೆ ದಾಟಿದರೆ ಉದ್ಯೋಗಕ್ಕೆ ಕತ್ತರಿ ಬೀಳುವುದು ಸುಳ್ಳಲ್ಲ.
   ಪತ್ರಕರ್ತರ ಮೇಲೆ ಹಲ್ಲೆ, ಜಗಳಗಳೂ ಮಾಡುವ ಭಯ ಉಂಟು ಮಾಡುವ, ಮಾತು ಕೇಳದಿದ್ದರೆ ಪತ್ರಕರ್ತನನ್ನೇ ಬ್ಲಾಕ್ ಮೇಲ್ ಪತ್ರಕರ್ತ ಎಂದು ಹಣೆ ಪಟ್ಟಿ ಹಚ್ಚುವ ನಿತ್ಯದ ಸವಾಲುಗಳೂ ಎದುರಿಸ ಬೇಕಾಗಿದೆ.
   ಪತ್ರಿಕಾ ವಲಯದಲ್ಲಿ ಒಳ್ಳೆಯವರೂ ಕೆಟ್ಟವರೂ ಇರುವುದು ಸಹಜ, ಎಲ್ಲರೂ ಇರಲಿ ಪತ್ರಿಕಾ ಧರ್ಮ ಉಳಿಯಲಿ, ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜ ಸುಧಾರಣೆಗೆ, ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಸಂವಿದಾನದ ಚೌಕಟ್ಟಿನಲ್ಲಿ ಶಾಸಕಾಂಗ - ಕಾಯಾ೯ಂಗ - ನ್ಯಾಯಾಂಗ ಕಾರ್ಯ ನಿರ್ವಹಿಸಲು ಎಚ್ಚರಿಕೆಯ ಗಂಟೆ ಆದ್ದರಿಂದ ಪತ್ರಿಕೆ ಮತ್ತು ಪತ್ರಕರ್ತರನ್ನು ನಾವು ಗೌರವಿಸಿ ಪ್ರೋತ್ಸಾಹಿಸಬೇಕು.
   ಇವತ್ತೂ ಹಾಯ್ ಬೆಂಗಳೂರು ಪತ್ರಿಕೆ ಇರಬೇಕು ಅನ್ನಿಸುತ್ತದೆ, 1989 ರಲ್ಲಿ ಖ್ಯಾತ ಪತ್ರಕರ್ತರಾದ ವಿ.ಎನ್.ಸುಬ್ಬರಾವ್ ಸಾಗರ ವಿಧಾನಸಭಾ ಚುನಾವಣೆಯಲ್ಲಿ ಕಾಗೋಡು ತಿಮ್ಮಪ್ಪರ ಸಂದರ್ಶನ ವ್ಯವಸ್ಥೆ ಮಾಡಲು ಕೇಳಿದಾಗ ನನ್ನ ಶಿಷ್ಟ #ಶೇಖ್ಅಮೀರ್ ಹಳೇ ಮನೆಯಲ್ಲಿ ಕಾಗೋಡು ಮತ್ತು ಸುಬ್ಬರಾವ್ ಸಂದರ್ಶನದ ವ್ಯವಸ್ಥೆ ಮಾಡಿದ್ದೆ.
   ಇವತ್ತು ಉತ್ಸಾಹಿ ಯುವ ಪತ್ರಕರ್ತ #ದೇಶಾದ್ರಿ_ಹೊಸಮನೆ ಫೇಸ್ ಬುಕ್ ಪೋಸ್ಟ್ ಲ್ಲಿ ಲೋಕಲ್ ಪೇಪರ್ V/s ಸ್ಟೇಟ್ ಪೇಪರ್ ವರದಿಗಾರರ ವಿಚಾರದಲ್ಲಿ ಲೇಖನ ಒಂದನ್ನ ಬರೆದದ್ದು ಓದಿದಾಗ ಈ ಕೆಳಗಿನ ನನ್ನ ಅನುಭವದ ಪ್ರತಿಕ್ರಿಯೆ ಬರೆದಿದ್ದೆ .....
  
  ಮಲೆನಾಡಿನ ಪತ್ರಕರ್ತರಲ್ಲಿ ಹೊಸತನದ ಕೊರತೆ ಆಗದಿರಲಿ,ನಾನು ನನ್ನ ತಾಲ್ಲೂಕಿನ ಅಂಚಿನ ಹೆರಿಟೇಜ್ ಬ್ರಿಡ್ಜ್ ನಿರ್ನಾಮ ಮಾಡಿದ ಸರ್ಕಾರದ ಈಗಿನ ವ್ಯವಸ್ಥೆ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಬರೆದಿದ್ದೆ
https://arunprasadhombuja.blogspot.com/search?q=%E0%B2%B9%E0%B3%86%E0%B2%B0%E0%B2%BF%E0%B2%9F%E0%B3%87%E0%B2%9C%E0%B3%8D
 ಶಿರಸಿ ವಿಧಾನಸಭಾ ಕ್ಷೇತ್ರದ ಇದನ್ನು ನಾಡಿನ ಪತ್ರಿಕೆ ಟೀವಿ ಚಾನಲ್ ಈ ಕ್ಲೂ ಬಳಸಿಕೊಂಡು ವರದಿ ಮಾಡಿ ಸಂಬಂದಿಸಿದವರನ್ನು ಪ್ರಶ್ನಿಸುತ್ತಾರೆಂದು ನಿರೀಕ್ಷೆ ಮಾಡಿ ಎಲ್ಲಾ ಮೀಡಿಯ ಗ್ರೂಪಿಗೆ ಹಾಕಿದ್ದೆ ಯಾರೂ ಮುಂದುವರಿಸಲಿಲ್ಲ.
   ಈಗ ನಮ್ಮ ಭಾಗದಲ್ಲಿ 70 ದಿನಗಳಿಂದ ದಾರಿ ತಪ್ಪಿ ಸಂಚರಿಸುತ್ತಿರುವ ಕಾಡಾನೆಗೆ ಸುಲಭ ಮಾರ್ಗ ತೋರಿಸಿ ಭದ್ರಾ ಅರಣ್ಯಕ್ಕೆ ತಲುಪಿಸ ಬೇಕು ಎಂದು ನಾನು ಅನೇಕ ಲೇಖನ ಬರೆದಿದ್ದೇನೆ ಆದರೆ ಈ ಬಗ್ಗೆ ಸಂಬಂದ ಪಟ್ಟ ಇಲಾಖೆಗಳು ಕ್ರಿಯಾಶೀಲರಾದ ಬಗ್ಗೆ ಅನುಮಾನ ಇದೆ https://arunprasadhombuja.blogspot.com/2023/12/blog-number-1879-68.html
 ಇದು ಕೇವಲ ಸುದ್ದಿ ಆಗಬಾರದು, ಸಂಬಂದ ಪಟ್ಟವರನ್ನ ಈ ಬಗ್ಗೆ ಕ್ರಿಯಾಶೀಲರನ್ನಾಗಿ ಮಾಡುವ ಶಕ್ತಿ ಪತ್ರಿಕೋದ್ಯಮಕ್ಕೆ ಇದೆ ಆದರೆ ಅದನ್ನು ಮರೆಯಬಾರದು... #ಸತ್ತಂತೆ_ಇರುವವರನ್ನು_ಬಡಿದೆಬ್ಬಿಸುವ_ಕೆಲಸ_ಶಿವಮೊಗ್ಗ_ಪತ್ರಕರ್ತರಿಂದ_ಆಗಲಿ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ