Skip to main content

Blog number 1869. ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾರ ದುರಂತ ಪ್ರೇಮ ಕಥೆಯ ಸ್ಮಾರಕ ಆನಂದಪುರಂನ ಚಂಪಕ ಸರಸ್ಸುವಿನ 400 ನೆ ವರ್ಷಾಚಾರಣೆ ಸ್ಥಳೀಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ನೇತೃತ್ವ ವಹಿಸಲಿ ನಾಡಿನ ಮುಖ್ಯಮಂತ್ರಿ ಕರೆತಂದು ಉದ್ಘಾಟಿಸಲಿ ಎಂದು ಆಶಿಸುತ್ತೇನೆ.

#ಗೋಪಾಲಕೃಷ್ಣ_ಬೇಳೂರು

#ಮೂರನೆ_ಅವಧಿಯಲ್ಲಿ_ಶಾಸಕರಾಗಿ_ಮಂತ್ರಿ_ಆಗುವ_ನಿರೀಕ್ಷೆಯಲ್ಲಿದ್ದಾರೆ.

#ಕೆಳದಿ_ರಾಜ_ವೆಂಕಟಪ್ಪನಾಯಕರು_ನಿರ್ಮಿಸಿದ_ಪಟ್ಟಣ_ಸದಾಶಿವಸಾಗರವೇ

#ಈಗಿನ_ಸಾಗರ_ಪಟ್ಟಣ_ಸಾಗರ_ವಿಧಾನಸಭಾ_ಕ್ಷೇತ್ರದ_ಶಾಸಕರು

#ಅವರದೇ_ವಿದಾನಸಭಾ_ಕ್ಷೇತ್ರದ_ಸ್ಮಾರಕ_ಚಂಪಕ_ಸರಸ್ಸುವಿಗೆ_400ನೇ_ವಷಾ೯ಚಾರಣೆ.

#ಬರುವ_2024_ಮತ್ತು_2025_ಪೂರ್ತಿ_ವರ್ಷಾಚಾರಣೆ_ನಡೆಸ_ಬಹುದು

#ರಾಜ್ಯದ_ಮುಖ್ಯಮಂತ್ರಿ_ಕರೆಸಿ_ಅದ್ದೂರಿ_ಕಾರ್ಯಕ್ರಮ_ಹಮ್ಮಿಕೊಳ್ಳ_ಬಹುದು

#ಕೆಳದಿ_ಅರಸರ_ಮೂಲ_ದೀವರಾ_ಈ_ಬಗ್ಗೆ_ಸಂಶೋದನೆಗಳಾಗಲಿ.
  ಕೆಳದಿ ಸಾಮ್ರಾಜ್ಯದಲ್ಲಿ ದೀರ್ಘ ಅವದಿ ಅಂದರೆ 43 ವರ್ಷ ಆಡಳಿತ ಮಾಡಿ ಸಾಮ್ರಾಜ್ಯ ವಿಸ್ತರಿಸಿದ ರಾಜ ವೆಂಕಟಪ್ಪ ನಾಯಕರು ನಿರ್ಮಿಸಿದ ಸದಾಶಿವ ಸಾಗರ ಎಂಬ ಪಟ್ಟಣವೇ ಈಗಿನ ಸಾಗರ ಪಟ್ಟಣ.
  ಕೆಳದಿ ರಾಜ ವೆಂಕಟಪ್ಪ ನಾಯಕ ತನ್ನ ಅಜ್ಜ ಸದಾಶಿವ ನಾಯಕರ ಹೆಸರಲ್ಲಿ ಈ ಪಟ್ಟಣ ನಿರ್ಮಿಸಿದ್ದು ಈಗಿನ ಗಣಪತಿ ಕೆರೆಯೆ ಸದಾಶಿವ ಸಾಗರ.
   ಯುದ್ಧದಲ್ಲಿ ಗೆದ್ದು ಬಂದಾಗ ಊರ ಮಧ್ಯದಲ್ಲಿ ಮಾರಿಕಾಂಬಾ ಗದ್ದಿಗೆ ಸ್ಥಾಪಿಸುತ್ತಾರೆ ಅದೇ ಸಾಗರದ ಈಗಿನ ಪ್ರಸಿದ್ಧವಾದ ಮಾರಿಕಾಂಬಾ ದೇವಿಯ ದೇವಾಲಯ ಮತ್ತು ಮೂರು ವರ್ಷಕೊಮ್ಮೆ ಈ ಜಾತ್ರೆ ರಾಜ್ಯದಲ್ಲೇ ಪ್ರಸಿದ್ದಿ ಪಡೆದಿದೆ.
ಈ ಐತಿಹಾಸಿಕ ಮಹತ್ವದ ಸಾಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾಗಿರುವವರು ಇಡೀ ರಾಜ್ಯದ ಗಮನ ಸೆಳೆಯುವ ನಡೆ - ನುಡಿ - ವೇಷಭೂಷಣಗಳ ಗೋಪಾಲಕೃಷ್ಣ ಬೇಳೂರು ಇವರು ಮೂರನೇ ಬಾರಿ ಸಾಗರ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ ಇವರ ಸೀನಿಯಾರಿಟಿ ಮತ್ತು ಬಹುಸಂಖ್ಯಾತ ದೀವರ ಜಾತಿ ಆಧಾರದ ಮೇಲೆ ಮೊದಲ ಹಂತದ ಮಂತ್ರಿ ಮಂಡಳದಲ್ಲಿ ಮಂತ್ರಿಗಳಾಗುತ್ತಾರೆಂಬ ನಿರೀಕ್ಷೆ ಇತ್ತು ಆದರೆ ಎರಡನೆ ಅವಧಿಯ ಮಂತ್ರಿ ಆಗುವ ನಿರೀಕ್ಷೆ ಇದೆ.
  ಗೆಳೆಯರಾದ ಗೋಪಾಲಕೃಷ್ಣ ಬೇಳೂರು 2013ರಲ್ಲಿ ಇವರು ಬಿಜೆಪಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಜೆಡಿಎಸ್ ಸೇರಿ ವಿಧಾನ ಸಭಾ ಚುನಾವಣೆಗೆ ಸ್ಪರ್ದಿಸಿದಾಗ ನಾನು ಸಾಗರ ತಾಲೂಕಿನ ಜೆಡಿಎಸ್ ಅಧ್ಯಕ್ಷ , ಆ ಚುನಾವಣೆಯಲ್ಲಿ ಕಾಗೋಡು ಕಾಂಗ್ರೆಸ್ ನಿಂದ ವಿಜಯಿ ಆದರು, ಜೆಡಿಎಸ್ ಗೋಪಾಲಕೃಷ್ಣ ಬೇಳೂರು 23 ಸಾವಿರ ಮತ ಗಳಿಸಿದ್ದರು, ಬಿಜೆಪಿಯಿಂದ ಸ್ಪರ್ಧಿಸಿದ್ದ ಶರಾವತಿ ಸಿ.ರಾವ್ 5 ಸಾವಿರ ಮತ ಪಡೆದಿದ್ದರು.
   ರಾಜ ವೆಂಕಟಪ್ಪ ನಾಯಕ ಆನಂದಪುರಂ ಕೋಟೆಯಿಂದ (ಆಗ ಅದರ ಹೆಸರು ಯಡೇಹಳ್ಳಿ ಕೋಟೆ) ಕವಲೆದುರ್ಗ, ಬಿದನೂರಿಗೆ ಪ್ರಾತಃ ಕಾಲದಲ್ಲಿ ಕುದುರೆ ಸವಾರಿ ಮಾಡುತ್ತಾ ಹೋಗುತ್ತಿದ್ದಾಗ ಬಲ ಬಾಗದ ಆನಂದಪುರ೦ನ ಗುತ್ಯಮ್ಮ ದೇವರ ಗುಡಿಗೆ ನಮಸ್ಕರಿಸಿ ಎಡಕ್ಕೆ ತಿರುಗಿದರೆ ಅಲ್ಲಿನ ಮನೆ ಎದರು ಸುಂದರ ರಂಗೋಲಿ ನೋಡುತ್ತಿದ್ದರು ಇದು ಸುಂದರಿ ರಂಗೋಲಿ ಪ್ರವೀಣೆ ಬೆಸ್ತರ ಚಂಪಕಾಳ ಕೈಯಲ್ಲಿ ಅರಳುತ್ತಿದ್ದ ರಂಗೋಲಿ ಇದೇ ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾಳ ದುರಂತ ಪ್ರೇಮ ಕಥೆ.
   ಮಾಂಸಹಾರಿ ಶೂದ್ರ ಹೆಣ್ಣು ಮಗಳ ರಂಗೋಲಿಯಿಂದ ಆಕರ್ಷಿತರಾಗಿ ಮದುವೆ ಆಗಿದ್ದು ಪಟ್ಟದ ರಾಣಿ ಭದ್ರಮ್ಮಾಜಿ ಅವರಿಗೆ ಆಗಿ ಬರದೆ ಅನ್ನಾಹಾರ ತ್ಯಜಿಸಿ ಮೃತರಾಗುತ್ತಾರೆ, ಇದು ರಾಜ ವೆಂಕಟಪ್ಪ ನಾಯಕರ ಮೇಲೆ ಪ್ರಜೆಗಳಲ್ಲಿ ಕೆಟ್ಟ ಅಭಿಪ್ರಾಯ ಉಂಟಾಗುತ್ತದೆ (ಇಟಲಿ ಪ್ರವಾಸಿ ಡೊಲ್ಲಾವಲ್ಲೆ ಈ ಸಂದರ್ಭದಲ್ಲಿ ರಾಜ ವೆಂಕಟಪ್ಪ ನಾಯಕರ ಬೇಟಿಗಾಗಿ ಆವಿನಳ್ಳಿಯಲ್ಲಿ ಕಾಯುತ್ತಿರುತ್ತಾರೆ ಅವರು ಇದನ್ನು ದಾಖಲಿಸಿದ್ದಾರೆ).
     ಇದರಿಂದ ನೊಂದ ಬೆಸ್ತರ ರಾಣಿ ಚಂಪಕಾ ವಜ್ರದ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಚಂಪಕಾಳ ಸ್ಮರಣಾರ್ಥ ನಿರ್ಮಿಸಿದ ಪ್ರೇಮ ಸೌಧ, ಸ್ಮಾರಕ, ಸಮಾದಿ ಸ್ಥಳ #ಚಂಪಕ_ಸರಸ್ಸು ಇದರಿಂದಲೇ #ಆನಂದಪುರಂ ಎಂಬ ಹೆಸರು ಬಂತು.
   ಈ ಸ್ಮಾರಕ ನಿರ್ವಹಣೆಗಾಗಿ ಸಮೀಪದ ಬನ್ನಿ ಮಂಟಪದ ಹತ್ತಿರ ಇದ್ದ ಮಹಾಂತರ ಮಠಕ್ಕೆ(ಉತ್ತರ ಭಾರತದ ಗೋರಕನಾಥದ ನಾಥ ಪಂಥದ್ದು, ಈಗಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಸಂಬಂದಿಸಿದ್ದು) ವಹಿಸುತ್ತಾರೆ ಇದಕ್ಕಾಗಿ ಈ ಮಠಕ್ಕೆ ಅಡಿಕೆ ಬತ್ತ ಇತ್ಯಾದಿ ಸಾಗಾಣಿಕೆಗೆ ಸುಂಕದ ವಿನಾಯಿತಿ ನೀಡುತ್ತಾರೆ ಇದೆಲ್ಲ ದಾಖಲೆಗಳು ಲಭ್ಯವಿದೆ.
  ಈ ಅಂತರ್ಜಾತಿ ವಿವಾಹ ರಾಜ ವೆಂಕಟಪ್ಪ ನಾಯಕರನ್ನ ಇತಿಹಾಸದಿಂದ ತೆಗೆದು ಹಾಕುವ ಕೆಲಸ ಆಗಿನ ಕೆಳದಿ ರಾಜ ವಂಶಸ್ಥರಲ್ಲಿ ನಡೆದು ಬಂದಿದ್ದು ಸುಳ್ಳಲ್ಲ.
   ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾರ ದುರಂತ ಪ್ರೇಮ ಕಥೆಯೇ ರಾಜ ವೆಂಕಟಪ್ಪ ನಾಯಕರನ್ನು ಜಾತಿ ಕಾರಣದಿಂದ ಇತಿಹಾಸದಲ್ಲಿ ಮುಸುಕು ಮಾಡಲು ಕಾರಣವಾಗಿದೆ, ರಾಜಾಶ್ರಯದ ಕವಿಗಳೂ ಇದನ್ನು ದಾಖಲಿಸಲು ಸಾಧ್ಯವೂ ಇಲ್ಲ.
   ಈ  ಪ್ರೇಮದ ಸ್ಮಾರಕ ತಾಜ್ ಮಹಲಿಗಿಂತ 28 ವಷ೯ ಮೊದಲೇ ನಿರ್ಮಾಣವಾಗಿದೆ ಅನ್ನುವುದೇ ಒಂದು ವಿಶೇಷ.
   ಶಾಸಕರಾದ ಗೋಪಾಲ ಕೃಷ್ಣ ಬೇಳೂರು ಆನಂದಪುರಂನ ಚಂಪಕ ಸರಸ್ಸು ಅಭಿವೃದ್ದಿ ಪಡಿಸಲು ಮುಂದಾಗ ಬೇಕು.
    ಕೆಳದಿ ಅರಸರ ಮೂಲ ಅವರು ಈ ಭಾಗದ ಬಹುಸಂಖ್ಯಾತ ದೀವರ ಜಾತಿಯವರ?...ಈ ಬಗ್ಗೆ 10 ನೇ ಶತಮಾನದ ಶಿಲಾ ಶಾಸನಗಳಲ್ಲಿ ಕಾಣಬಹುದಾದ ನಾಯಕರು ಯಾರು?... ಆದರೆ ಇದನ್ನು ಹೇಳಲು ಬರೆಯಲು ಅಗೋಚರ ಭಯ ಈ ಜನಾಂಗದಲ್ಲಿದೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಸಂಶೋದನೆಗಳು ಆಗಬೇಕು.
  ಕೆಳದಿ ಅರಸರ ಕೊನೆಯ ವಂಶಸ್ಥರು ಕೇರಳದ ಕುಂಬಳೆ ಭಾಗದ ರಾಮ ಕ್ಷತ್ರಿಯರು.
  ಮಾನ್ಯ ಶಾಸಕರಲ್ಲಿ ವಿನಂತಿ, ಕೆಳದಿ ರಾಜ ವೆಂಕಟಪ್ಪ ನಾಯಕರ ಹೆಸರು ಚಿರಸ್ಥಾಯಿ ಮಾಡುವಂತೆ ಸಾಗರ ಪಟ್ಟಣದಲ್ಲಿನ ರಸ್ತೆ, ರಂಗಮಂದಿರಗಳಿಗೆ ಅವರ ಹೆಸರು ಇಡಬೇಕು.
 ಆನಂದಪುರಂನಲ್ಲಿ ರಾಷ್ಟೀಯ ಹೆದ್ದಾರಿ ಕನ್ನಡ ಸಂಘದ ಎದುರು ಪದವಿ ಪೂರ್ವ ಕಾಲೇಜ್ ಮತ್ತು ಕೆ.ಎಂ.ಎಸ್ ರೈಸ್ ಮಿಲ್ ಮಧ್ಯದ ಹಾಳು ಬಿದ್ದಿರುವ ನಕಾಶೆ ಕಂಡ ಚಂಪಕ ಸರಸ್ಸುಗೆ ತಲುಪುವ ರಸ್ತೆ ರಾಜರು ನಿರ್ಮಿಸಿದ ಚಂಪಕ ಸರಸ್ಸು ರಸ್ತೆ ಇದನ್ನು ಸರಿಪಡಿಸಿ ಚಂಪಕ ಸರಸ್ಸುವಿಗೆ ವೀಕ್ಷಣೆಗೆ ಪ್ರವಾಸಿಗಳಿಗೆ ಅನುವು ಮಾಡಿ ಕೊಡಲು ವಿನಂತಿಸುತ್ತೇನೆ.
    ಕೆಳದಿ ರಾಜ ವೆಂಕಟಪ್ಪ ನಾಯಕರ (ಆಡಳಿತ 1586-1629) ಪಟ್ಟದ ರಾಣಿ ಭದ್ರಮ್ಮಾಜಿ ಮರಣ 25 -ಆಕ್ಟೋಬರ್ - 1624, ಇತಿಹಾಸಕಾರ ಪಿಯೊತ್ರಾ ಡೊಲ್ಲಾವಲ್ಲೆ ಇಕ್ಕೇರಿ ಕೋಟಿಯಲ್ಲಿ ರಾಜ ವೆಂಕಟಪ್ಪ ನಾಯಕರ ಬೇಟಿ 8- ನವೆಂಬರ್ -1624.
   ಚಂಪಕ ರಾಣಿ ಮರಣ ಅಂದಾಜು 1624ರ ನವೆಂಬರ್ ಅಥವ ಡಿಸೆಂಬರ್ ಆದ್ದರಿಂದ 2024-25 ಚಂಪಕ ರಾಣಿಯ ಸ್ಮಾರಕದ ನಾಲ್ಕು ನೂರನೇ ವರ್ಷಾಚಾರಣೆ ಆಗಿ ಆಚರಿಸ ಬೇಕು.
   ಶಾಸಕರಾದ ಗೋಪಾಲಕೃಷ್ಣ ಬೇಳೂರು ಇದರ ನೇತೃತ್ವ ವಹಿಸಿ ರಾಜ್ಯದ ಮುಖ್ಯಮಂತ್ರಿಗಳನ್ನು ಕರೆಸಿ ಉದ್ಘಾಟಿಸಬೇಕು ವರ್ಷಪೂರ್ತಿ ಆಚರಣೆ ನಡೆಸಬೇಕು ಎಂದು ವಿನಂತಿಸುತ್ತೇನೆ.
   
ವಂದನೆಗಳೊಂದಿಗೆ
ಕೆ.ಅರುಣ್ ಪ್ರಸಾದ್.
17-ಡಿಸೆಂಬರ್ -2024.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...