Skip to main content

Blog number 1869. ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾರ ದುರಂತ ಪ್ರೇಮ ಕಥೆಯ ಸ್ಮಾರಕ ಆನಂದಪುರಂನ ಚಂಪಕ ಸರಸ್ಸುವಿನ 400 ನೆ ವರ್ಷಾಚಾರಣೆ ಸ್ಥಳೀಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ನೇತೃತ್ವ ವಹಿಸಲಿ ನಾಡಿನ ಮುಖ್ಯಮಂತ್ರಿ ಕರೆತಂದು ಉದ್ಘಾಟಿಸಲಿ ಎಂದು ಆಶಿಸುತ್ತೇನೆ.

#ಗೋಪಾಲಕೃಷ್ಣ_ಬೇಳೂರು

#ಮೂರನೆ_ಅವಧಿಯಲ್ಲಿ_ಶಾಸಕರಾಗಿ_ಮಂತ್ರಿ_ಆಗುವ_ನಿರೀಕ್ಷೆಯಲ್ಲಿದ್ದಾರೆ.

#ಕೆಳದಿ_ರಾಜ_ವೆಂಕಟಪ್ಪನಾಯಕರು_ನಿರ್ಮಿಸಿದ_ಪಟ್ಟಣ_ಸದಾಶಿವಸಾಗರವೇ

#ಈಗಿನ_ಸಾಗರ_ಪಟ್ಟಣ_ಸಾಗರ_ವಿಧಾನಸಭಾ_ಕ್ಷೇತ್ರದ_ಶಾಸಕರು

#ಅವರದೇ_ವಿದಾನಸಭಾ_ಕ್ಷೇತ್ರದ_ಸ್ಮಾರಕ_ಚಂಪಕ_ಸರಸ್ಸುವಿಗೆ_400ನೇ_ವಷಾ೯ಚಾರಣೆ.

#ಬರುವ_2024_ಮತ್ತು_2025_ಪೂರ್ತಿ_ವರ್ಷಾಚಾರಣೆ_ನಡೆಸ_ಬಹುದು

#ರಾಜ್ಯದ_ಮುಖ್ಯಮಂತ್ರಿ_ಕರೆಸಿ_ಅದ್ದೂರಿ_ಕಾರ್ಯಕ್ರಮ_ಹಮ್ಮಿಕೊಳ್ಳ_ಬಹುದು

#ಕೆಳದಿ_ಅರಸರ_ಮೂಲ_ದೀವರಾ_ಈ_ಬಗ್ಗೆ_ಸಂಶೋದನೆಗಳಾಗಲಿ.
  ಕೆಳದಿ ಸಾಮ್ರಾಜ್ಯದಲ್ಲಿ ದೀರ್ಘ ಅವದಿ ಅಂದರೆ 43 ವರ್ಷ ಆಡಳಿತ ಮಾಡಿ ಸಾಮ್ರಾಜ್ಯ ವಿಸ್ತರಿಸಿದ ರಾಜ ವೆಂಕಟಪ್ಪ ನಾಯಕರು ನಿರ್ಮಿಸಿದ ಸದಾಶಿವ ಸಾಗರ ಎಂಬ ಪಟ್ಟಣವೇ ಈಗಿನ ಸಾಗರ ಪಟ್ಟಣ.
  ಕೆಳದಿ ರಾಜ ವೆಂಕಟಪ್ಪ ನಾಯಕ ತನ್ನ ಅಜ್ಜ ಸದಾಶಿವ ನಾಯಕರ ಹೆಸರಲ್ಲಿ ಈ ಪಟ್ಟಣ ನಿರ್ಮಿಸಿದ್ದು ಈಗಿನ ಗಣಪತಿ ಕೆರೆಯೆ ಸದಾಶಿವ ಸಾಗರ.
   ಯುದ್ಧದಲ್ಲಿ ಗೆದ್ದು ಬಂದಾಗ ಊರ ಮಧ್ಯದಲ್ಲಿ ಮಾರಿಕಾಂಬಾ ಗದ್ದಿಗೆ ಸ್ಥಾಪಿಸುತ್ತಾರೆ ಅದೇ ಸಾಗರದ ಈಗಿನ ಪ್ರಸಿದ್ಧವಾದ ಮಾರಿಕಾಂಬಾ ದೇವಿಯ ದೇವಾಲಯ ಮತ್ತು ಮೂರು ವರ್ಷಕೊಮ್ಮೆ ಈ ಜಾತ್ರೆ ರಾಜ್ಯದಲ್ಲೇ ಪ್ರಸಿದ್ದಿ ಪಡೆದಿದೆ.
ಈ ಐತಿಹಾಸಿಕ ಮಹತ್ವದ ಸಾಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾಗಿರುವವರು ಇಡೀ ರಾಜ್ಯದ ಗಮನ ಸೆಳೆಯುವ ನಡೆ - ನುಡಿ - ವೇಷಭೂಷಣಗಳ ಗೋಪಾಲಕೃಷ್ಣ ಬೇಳೂರು ಇವರು ಮೂರನೇ ಬಾರಿ ಸಾಗರ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ ಇವರ ಸೀನಿಯಾರಿಟಿ ಮತ್ತು ಬಹುಸಂಖ್ಯಾತ ದೀವರ ಜಾತಿ ಆಧಾರದ ಮೇಲೆ ಮೊದಲ ಹಂತದ ಮಂತ್ರಿ ಮಂಡಳದಲ್ಲಿ ಮಂತ್ರಿಗಳಾಗುತ್ತಾರೆಂಬ ನಿರೀಕ್ಷೆ ಇತ್ತು ಆದರೆ ಎರಡನೆ ಅವಧಿಯ ಮಂತ್ರಿ ಆಗುವ ನಿರೀಕ್ಷೆ ಇದೆ.
  ಗೆಳೆಯರಾದ ಗೋಪಾಲಕೃಷ್ಣ ಬೇಳೂರು 2013ರಲ್ಲಿ ಇವರು ಬಿಜೆಪಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಜೆಡಿಎಸ್ ಸೇರಿ ವಿಧಾನ ಸಭಾ ಚುನಾವಣೆಗೆ ಸ್ಪರ್ದಿಸಿದಾಗ ನಾನು ಸಾಗರ ತಾಲೂಕಿನ ಜೆಡಿಎಸ್ ಅಧ್ಯಕ್ಷ , ಆ ಚುನಾವಣೆಯಲ್ಲಿ ಕಾಗೋಡು ಕಾಂಗ್ರೆಸ್ ನಿಂದ ವಿಜಯಿ ಆದರು, ಜೆಡಿಎಸ್ ಗೋಪಾಲಕೃಷ್ಣ ಬೇಳೂರು 23 ಸಾವಿರ ಮತ ಗಳಿಸಿದ್ದರು, ಬಿಜೆಪಿಯಿಂದ ಸ್ಪರ್ಧಿಸಿದ್ದ ಶರಾವತಿ ಸಿ.ರಾವ್ 5 ಸಾವಿರ ಮತ ಪಡೆದಿದ್ದರು.
   ರಾಜ ವೆಂಕಟಪ್ಪ ನಾಯಕ ಆನಂದಪುರಂ ಕೋಟೆಯಿಂದ (ಆಗ ಅದರ ಹೆಸರು ಯಡೇಹಳ್ಳಿ ಕೋಟೆ) ಕವಲೆದುರ್ಗ, ಬಿದನೂರಿಗೆ ಪ್ರಾತಃ ಕಾಲದಲ್ಲಿ ಕುದುರೆ ಸವಾರಿ ಮಾಡುತ್ತಾ ಹೋಗುತ್ತಿದ್ದಾಗ ಬಲ ಬಾಗದ ಆನಂದಪುರ೦ನ ಗುತ್ಯಮ್ಮ ದೇವರ ಗುಡಿಗೆ ನಮಸ್ಕರಿಸಿ ಎಡಕ್ಕೆ ತಿರುಗಿದರೆ ಅಲ್ಲಿನ ಮನೆ ಎದರು ಸುಂದರ ರಂಗೋಲಿ ನೋಡುತ್ತಿದ್ದರು ಇದು ಸುಂದರಿ ರಂಗೋಲಿ ಪ್ರವೀಣೆ ಬೆಸ್ತರ ಚಂಪಕಾಳ ಕೈಯಲ್ಲಿ ಅರಳುತ್ತಿದ್ದ ರಂಗೋಲಿ ಇದೇ ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾಳ ದುರಂತ ಪ್ರೇಮ ಕಥೆ.
   ಮಾಂಸಹಾರಿ ಶೂದ್ರ ಹೆಣ್ಣು ಮಗಳ ರಂಗೋಲಿಯಿಂದ ಆಕರ್ಷಿತರಾಗಿ ಮದುವೆ ಆಗಿದ್ದು ಪಟ್ಟದ ರಾಣಿ ಭದ್ರಮ್ಮಾಜಿ ಅವರಿಗೆ ಆಗಿ ಬರದೆ ಅನ್ನಾಹಾರ ತ್ಯಜಿಸಿ ಮೃತರಾಗುತ್ತಾರೆ, ಇದು ರಾಜ ವೆಂಕಟಪ್ಪ ನಾಯಕರ ಮೇಲೆ ಪ್ರಜೆಗಳಲ್ಲಿ ಕೆಟ್ಟ ಅಭಿಪ್ರಾಯ ಉಂಟಾಗುತ್ತದೆ (ಇಟಲಿ ಪ್ರವಾಸಿ ಡೊಲ್ಲಾವಲ್ಲೆ ಈ ಸಂದರ್ಭದಲ್ಲಿ ರಾಜ ವೆಂಕಟಪ್ಪ ನಾಯಕರ ಬೇಟಿಗಾಗಿ ಆವಿನಳ್ಳಿಯಲ್ಲಿ ಕಾಯುತ್ತಿರುತ್ತಾರೆ ಅವರು ಇದನ್ನು ದಾಖಲಿಸಿದ್ದಾರೆ).
     ಇದರಿಂದ ನೊಂದ ಬೆಸ್ತರ ರಾಣಿ ಚಂಪಕಾ ವಜ್ರದ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಚಂಪಕಾಳ ಸ್ಮರಣಾರ್ಥ ನಿರ್ಮಿಸಿದ ಪ್ರೇಮ ಸೌಧ, ಸ್ಮಾರಕ, ಸಮಾದಿ ಸ್ಥಳ #ಚಂಪಕ_ಸರಸ್ಸು ಇದರಿಂದಲೇ #ಆನಂದಪುರಂ ಎಂಬ ಹೆಸರು ಬಂತು.
   ಈ ಸ್ಮಾರಕ ನಿರ್ವಹಣೆಗಾಗಿ ಸಮೀಪದ ಬನ್ನಿ ಮಂಟಪದ ಹತ್ತಿರ ಇದ್ದ ಮಹಾಂತರ ಮಠಕ್ಕೆ(ಉತ್ತರ ಭಾರತದ ಗೋರಕನಾಥದ ನಾಥ ಪಂಥದ್ದು, ಈಗಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಸಂಬಂದಿಸಿದ್ದು) ವಹಿಸುತ್ತಾರೆ ಇದಕ್ಕಾಗಿ ಈ ಮಠಕ್ಕೆ ಅಡಿಕೆ ಬತ್ತ ಇತ್ಯಾದಿ ಸಾಗಾಣಿಕೆಗೆ ಸುಂಕದ ವಿನಾಯಿತಿ ನೀಡುತ್ತಾರೆ ಇದೆಲ್ಲ ದಾಖಲೆಗಳು ಲಭ್ಯವಿದೆ.
  ಈ ಅಂತರ್ಜಾತಿ ವಿವಾಹ ರಾಜ ವೆಂಕಟಪ್ಪ ನಾಯಕರನ್ನ ಇತಿಹಾಸದಿಂದ ತೆಗೆದು ಹಾಕುವ ಕೆಲಸ ಆಗಿನ ಕೆಳದಿ ರಾಜ ವಂಶಸ್ಥರಲ್ಲಿ ನಡೆದು ಬಂದಿದ್ದು ಸುಳ್ಳಲ್ಲ.
   ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾರ ದುರಂತ ಪ್ರೇಮ ಕಥೆಯೇ ರಾಜ ವೆಂಕಟಪ್ಪ ನಾಯಕರನ್ನು ಜಾತಿ ಕಾರಣದಿಂದ ಇತಿಹಾಸದಲ್ಲಿ ಮುಸುಕು ಮಾಡಲು ಕಾರಣವಾಗಿದೆ, ರಾಜಾಶ್ರಯದ ಕವಿಗಳೂ ಇದನ್ನು ದಾಖಲಿಸಲು ಸಾಧ್ಯವೂ ಇಲ್ಲ.
   ಈ  ಪ್ರೇಮದ ಸ್ಮಾರಕ ತಾಜ್ ಮಹಲಿಗಿಂತ 28 ವಷ೯ ಮೊದಲೇ ನಿರ್ಮಾಣವಾಗಿದೆ ಅನ್ನುವುದೇ ಒಂದು ವಿಶೇಷ.
   ಶಾಸಕರಾದ ಗೋಪಾಲ ಕೃಷ್ಣ ಬೇಳೂರು ಆನಂದಪುರಂನ ಚಂಪಕ ಸರಸ್ಸು ಅಭಿವೃದ್ದಿ ಪಡಿಸಲು ಮುಂದಾಗ ಬೇಕು.
    ಕೆಳದಿ ಅರಸರ ಮೂಲ ಅವರು ಈ ಭಾಗದ ಬಹುಸಂಖ್ಯಾತ ದೀವರ ಜಾತಿಯವರ?...ಈ ಬಗ್ಗೆ 10 ನೇ ಶತಮಾನದ ಶಿಲಾ ಶಾಸನಗಳಲ್ಲಿ ಕಾಣಬಹುದಾದ ನಾಯಕರು ಯಾರು?... ಆದರೆ ಇದನ್ನು ಹೇಳಲು ಬರೆಯಲು ಅಗೋಚರ ಭಯ ಈ ಜನಾಂಗದಲ್ಲಿದೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಸಂಶೋದನೆಗಳು ಆಗಬೇಕು.
  ಕೆಳದಿ ಅರಸರ ಕೊನೆಯ ವಂಶಸ್ಥರು ಕೇರಳದ ಕುಂಬಳೆ ಭಾಗದ ರಾಮ ಕ್ಷತ್ರಿಯರು.
  ಮಾನ್ಯ ಶಾಸಕರಲ್ಲಿ ವಿನಂತಿ, ಕೆಳದಿ ರಾಜ ವೆಂಕಟಪ್ಪ ನಾಯಕರ ಹೆಸರು ಚಿರಸ್ಥಾಯಿ ಮಾಡುವಂತೆ ಸಾಗರ ಪಟ್ಟಣದಲ್ಲಿನ ರಸ್ತೆ, ರಂಗಮಂದಿರಗಳಿಗೆ ಅವರ ಹೆಸರು ಇಡಬೇಕು.
 ಆನಂದಪುರಂನಲ್ಲಿ ರಾಷ್ಟೀಯ ಹೆದ್ದಾರಿ ಕನ್ನಡ ಸಂಘದ ಎದುರು ಪದವಿ ಪೂರ್ವ ಕಾಲೇಜ್ ಮತ್ತು ಕೆ.ಎಂ.ಎಸ್ ರೈಸ್ ಮಿಲ್ ಮಧ್ಯದ ಹಾಳು ಬಿದ್ದಿರುವ ನಕಾಶೆ ಕಂಡ ಚಂಪಕ ಸರಸ್ಸುಗೆ ತಲುಪುವ ರಸ್ತೆ ರಾಜರು ನಿರ್ಮಿಸಿದ ಚಂಪಕ ಸರಸ್ಸು ರಸ್ತೆ ಇದನ್ನು ಸರಿಪಡಿಸಿ ಚಂಪಕ ಸರಸ್ಸುವಿಗೆ ವೀಕ್ಷಣೆಗೆ ಪ್ರವಾಸಿಗಳಿಗೆ ಅನುವು ಮಾಡಿ ಕೊಡಲು ವಿನಂತಿಸುತ್ತೇನೆ.
    ಕೆಳದಿ ರಾಜ ವೆಂಕಟಪ್ಪ ನಾಯಕರ (ಆಡಳಿತ 1586-1629) ಪಟ್ಟದ ರಾಣಿ ಭದ್ರಮ್ಮಾಜಿ ಮರಣ 25 -ಆಕ್ಟೋಬರ್ - 1624, ಇತಿಹಾಸಕಾರ ಪಿಯೊತ್ರಾ ಡೊಲ್ಲಾವಲ್ಲೆ ಇಕ್ಕೇರಿ ಕೋಟಿಯಲ್ಲಿ ರಾಜ ವೆಂಕಟಪ್ಪ ನಾಯಕರ ಬೇಟಿ 8- ನವೆಂಬರ್ -1624.
   ಚಂಪಕ ರಾಣಿ ಮರಣ ಅಂದಾಜು 1624ರ ನವೆಂಬರ್ ಅಥವ ಡಿಸೆಂಬರ್ ಆದ್ದರಿಂದ 2024-25 ಚಂಪಕ ರಾಣಿಯ ಸ್ಮಾರಕದ ನಾಲ್ಕು ನೂರನೇ ವರ್ಷಾಚಾರಣೆ ಆಗಿ ಆಚರಿಸ ಬೇಕು.
   ಶಾಸಕರಾದ ಗೋಪಾಲಕೃಷ್ಣ ಬೇಳೂರು ಇದರ ನೇತೃತ್ವ ವಹಿಸಿ ರಾಜ್ಯದ ಮುಖ್ಯಮಂತ್ರಿಗಳನ್ನು ಕರೆಸಿ ಉದ್ಘಾಟಿಸಬೇಕು ವರ್ಷಪೂರ್ತಿ ಆಚರಣೆ ನಡೆಸಬೇಕು ಎಂದು ವಿನಂತಿಸುತ್ತೇನೆ.
   
ವಂದನೆಗಳೊಂದಿಗೆ
ಕೆ.ಅರುಣ್ ಪ್ರಸಾದ್.
17-ಡಿಸೆಂಬರ್ -2024.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ