Skip to main content

Blog number 1849. ಕನಕದಾಸರ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ

#ಕನಕದಾಸರ_ಜಯಂತಿ

ಕನಕದಾಸರ ಸಮಾದಿ ಸ್ಥಳ ಮತ್ತು ಅವರು ನೆಟ್ಟಿರುವ ಅರಳಿಮರ ಒಳಗೊಂಡ ಸುಮಾರು ನೂರು ಎಕರೆ ಪ್ರದೇಶ ರಾಜ್ಯ ಸಕಾ೯ರ ಅತ್ಯುತ್ತಮವಾಗಿ ಅಭಿವೃದ್ದಿ ಪಡಿಸಿದೆ ಅಷ್ಟೇ ಅಲ್ಲ ಕನಕದಾಸರ ಜನ್ಮ ಸ್ಥಳ ಮತ್ತು ಅವರು ಆಳಿದ ಕೋಟೆ ಕೂಡ ಸುಂದರ ಸ್ಮಾರಕವಾಗಿದೆ ಇದೆಲ್ಲದರ ಕ್ರೆಡಿಟ್ ಯಡೂರಪ್ಪರಿಗೆ ಸಿಗುತ್ತದೆ ಯಾಕೆಂದರೆ ಈ ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿ ಆದಾಗ ಇದನ್ನೆಲ್ಲ ಪ್ರಾರಂಬಿಸಿದ್ದರು ಆದರೆ ಅವರ ಅವದಿ ನಂತರ ಎಲ್ಲಾ ಅಭಿವೃದ್ದಿ ಕೆಲಸ ಸ್ಥಗಿತ ಆಗಿತ್ತು ಈಗ ಪುನಃ ಭರದಿಂದ ನಡೆದಿದೆ.
ಕನಕದಾಸರ ಬಗ್ಗೆ ಆಸಕ್ತಿ ಇದ್ದವರು ಶಿವಮೊಗ್ಗ ಜಿಲ್ಲೆಯಿಂದ ಒಂದು ದಿನದ ಪಿಕ್ನಿಕ್ ಹೋಗಬಹುದು ನಿಜಕ್ಕೂ ಸುಂದರ ಮತ್ತು ಜಾತ್ಯಾತೀತ ಕನಕದಾಸರ ನೆನಪಲ್ಲಿ ಇಲ್ಲಿ ಸಿಗುವ ಅನುಭೂತಿ ಕೂಡ ಹೇಳಲಾಗದ ಅನುಭವ.

Comments