Skip to main content

Blog number 1878. ದಂಡಾವತಿ ನದಿ ಆಣೆಕಟ್ಟು ವಿರೋದಿ ಹೋರಾಟ ಸಮಿತಿಯ ಅಧ್ಯಕ್ಷರು, ಎಸ್.ಆರ್.ಹಿರೇಮಠರ ಜನ ಸಂಗ್ರಾಮ ಪರಿಷತ್ ರಾಜ್ಯ ಉಪಾಧ್ಯಕ್ಷರಾದ ವಾಮದೇವ ಗೌಡರು ನನ್ನ ಕಛೇರಿಯಲ್ಲಿ.

#ದಂಡಾವತಿ_ನದಿ_ಆಣೆಕಟ್ಟು_ವಿರೋದಿ_ಹೋರಾಟದ_ದಂಡಾನಾಯಕ

#ವಾಮದೇವ_ಗೌಡರು .

#ಎಸ್_ಆರ್_ಹಿರೇಮಠರ_ರಾಜ್ಯ_ಭ್ರಷ್ಟಾಚಾರಿ_ವಿರೋದಿ_ಆಂದೋಲನದ_ಜನಸಂಗ್ರಾಮ_ಪರಿಷತ್ತಿನ

#ರಾಜ್ಯ_ಉಪಾದ್ಯಕ್ಷರು.

#ನಾವೆಲ್ಲ_ಇವರ_ಹೋರಾಟದ_ಸ್ಥಳಕ್ಕೆ_ಹೋಗಿ_ಹೋರಾಟಕ್ಕೆ_ನಮ್ಮ_ಬೆಂಬಲ_ಘೋಷಿಸಿದ್ದ_ನೆನಪುಗಳು

#ಹೋರಾಟಗಾರ_ಟಿ_ಆರ್_ಕೃಷ್ಣಪ್ಪರ_ಜೊತೆ_ನನ್ನ_ಕಛೇರಿಗೆ_ಬಂದಾಗಿನ_ಮಾತುಕಥೆ_ನೆನಪುಗಳು

  ಅವತ್ತು ಅನಿರೀಕ್ಷಿತವಾಗಿ (18-ಡಿಸೆಂಬರ್ -2016 )  ಸೊರಬದ ವಾಮದೇವ ಗೌಡರು ರಿಪ್ಪನಪೇಟೆಯ ಹೋರಾಟಗಾರರಾದ ಟಿ.ಆರ್.ಕೃಷ್ಣಪ್ಪರ ಜೊತೆ ನನ್ನ ಕಛೇರಿಗೆ ಬಂದಿದ್ದರು.     

     ಅವರು ಸೊರಬದ ದಂಡಾವತಿ ಆಣೆಕಟ್ಟು ವಿರೋದಿ ಹೋರಾಟ ಸಮಿತಿ ಅಧ್ಯಕ್ಷರು,ಹಾಲಿ ಎಸ್.ಆರ್.ಹಿರೇಮಠರ ರಾಜ್ಯ ಭ್ರಷ್ಟಾಚಾರಿ ವಿರೋದಿ ಆಂದೋಲನದ ಜನಸಂಗ್ರಾಮ ಪರಿಷತ್ ನ ರಾಜ್ಯ ಉಪಾಧ್ಯಕ್ಷರು.
 
   ಚಹಾ ಸ್ವೀಕರಿಸುತ್ತಾ "ದಂಡಾವತಿ ಆಣೆಕಟ್ಟು ವಿರೋದಿ  ಹೋರಾಟದ ಸಂದಭ೯ದಲ್ಲಿ ಅರುಣ್ ಪ್ರಸಾದ್ ನಮ್ಮ ಹೋರಾಟದ ಸ್ಥಳಕ್ಕೆ ಬಂದು ಬೆಂಬಲಿಸಿ ನಿತ್ಯದ ಊಟದ ವೆಚ್ಚಕ್ಕಾಗಿ ದೇಣಿಗೆ ನೀಡಿದ್ದನ್ನ ಮರೆತಿಲ್ಲ, ನಮ್ಮ ಖಚು೯ ವೆಚ್ಚದ ಪಟ್ಟಿ ನೋಡಿದಾಗಲೆಲ್ಲ ಅವರು ನೆನಪಾಗುತ್ತಾರೆ" ಅಂದರು.

        ನಾನು ಮರೆತು ಬಿಟ್ಟಿದ್ದೆ ...  ಆ ದಿನ ಸಾಗರದಿಂದ ನಾನು, ಕಾಗೋಡು ಹೋರಾಟದ ನೇತಾರರಾದ ಗಣಪತಿಯಪ್ಪ, ತೀ.ನಾ.ಶ್ರೀನಿವಾಸ್, ಮಾಜಿ ಶಾಸಕರಾದ ಸ್ವಾಮಿ ರಾವ್, ಕಲ್ಲೂರು ಮೇಘರಾಜ್, ಪತ್ರಕತ೯ರಾದ ಎಂ.ರಾಘು, ಚಾವಾ೯ಕ ರಾಘು ಮತ್ತು ಗೆಳೆಯರು ದಂಡಾವತಿ ಹೋರಾಟದ ಸ್ಥಳಕ್ಕೆ ಹೋಗಿದ್ದೆವು ಅದರ ಹಿಂದಿನ ದಿನ ಗೌರಿ ಗಣಪತಿ ಹಬ್ಬ ಇತ್ತು, ಹೋರಾಟಗಾರರು ಮಣ್ಣಿನ ಗಣಪತಿ ವಿಗ್ರಹ ಪೂಜೆ ಮಾಡಿ ನಿಯೋಜಿತ ಆಣೆಕಟ್ಟು ಪ್ರದೇಶದ ನೀರಲ್ಲಿ ವಿಸಜ೯ನೆ ಮಾಡಿದ್ದರು.
 
     ಮಳೆಗಾಲದ ಆ ದಿನದಲ್ಲೇ ದಂಡಾವತಿ ನದಿ ಸಣ್ಣ ಹಳ್ಳದಂತೆ ಇತ್ತು, ಹಿಂದಿನ ದಿನ ವಿಸಜ೯ನೆ ಮಾಡಿದ ಗಣಪತಿಯೇ ಮುಳುಗಿರಲಿಲ್ಲ, ಆಗ ಗಣಪತಿಯಪನವರು ಕೈ ಮುಗಿದು "ಮಹಾಗಣಪತಿ ಇಲ್ಲಿ ದಂಡಾವತಿ ಆಣೆಕಟ್ಟು ಕಟ್ಟದಂತೆ ನೋಡಿಕೊಂಡು ಈ ರೈತರ ಹೋರಾಟಕ್ಕೆ ಜಯ ತಂದು ಕೊಡು" ಅಂತ ಬೇಡಿಕೊಂಡರು, ರೈತ ಪರ ಹೋರಾಟಗಾರ ಗಣಪತಿಯಪರ ಪ್ರಾಥ೯ನೆಯಂತೆ ಮತ್ತು ವಾಮದೇವ ಗೌಡರ ಪ್ರಾಮಾಣಿಕ ಹೋರಾಟದಿಂದ ದಂಡಾವತಿ ಆಣೆಕಟ್ಟು ನಿಮಾ೯ಣ ಆಗಿಲ್ಲ ಇದೆಲ್ಲ ಅವತ್ತು ನೆನಪಾಯಿತು.
   
  
   ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಪ್ರವಹಿಸುವ ಸಣ್ಣ ನದಿ ದಂಡಾವತಿ ಉಗಮ ಸ್ಥಾನ ಸೊರಬ ಪಟ್ಟಣದ ದಕ್ಷಿಣಕ್ಕೆ 15 ಕಿ.ಮಿ.ದೂರದ ಕುಪ್ಪೆ ಗ್ರಾಮದ ಹತ್ತಿರದ ಕಟ್ಟಿನ ಕೆರೆ.

     ಮಳೆಗಾಲದಲ್ಲಿ ಕಟ್ಟಿನಕೆರೆ ತುಂಬಿದಾಗ ಈ ಕೆರೆ ಕೋಡಿ ನೀರಿನ ಜೊತೆ ಸುತ್ತ ಮುತ್ತಲಿನ ಹರಿವು ಸೇರಿ ದಂಡಾವತಿ ನದಿ ಆಗಿ ಹರಿಯುತ್ತದೆ,ಸೊರಬ ಪಟ್ಟಣದ ರಂಗನಾಥ ಸ್ವಾಮಿ ದೇವಸ್ಥಾನ ಈ ನದಿ ದಂಡೆ ಮೇಲಿದೆ.

    ಉಗಮ ಸ್ಥಳದಿಂದ 55 ಕಿ.ಮಿ. ಹರಿದು ಆನವಟ್ಟಿ ಬಳಿಯ ಬಂಕಸಾಣ ಎಂಬ ಸ್ಥಳದಲ್ಲಿ ವರದಾ ನದಿಗೆ ಸೇರುತ್ತದೆ, ನಂತರ ವರದಾ ನದಿ ತುಂಗ ಭದ್ರಾ ನದಿಗೆ ಸೇರಿ ನಂತರ ತುಂಗಾಭದ್ರ ಕೃಷ್ಣಾ ನದಿಗೆ ಸೇರಿ ಬಂಗಾಳಕೊಲ್ಲಿ ಸಮುದ್ರಕ್ಕೆ ಸೇರುತ್ತದೆ.
   
    ಸೊರಬದ ಚೀಲನೂರು ಗ್ರಾಮದ ಹತ್ತಿರ ದಂಡಾವತಿ ನದಿಗೆ ಆಣೆಕಟ್ಟು ಕಟ್ಟಿದರೆ ಸೊರಬ ಮತ್ತು ಶಿಕಾರಿಪುರದ ಸುಮಾರು 50 ಸಾವಿರ ಎಕರೆಗೆ ನೀರಾವರಿ ಆಗುತ್ತದೆ, 4 TMC ನೀರು ಶೇಖರಿಸ ಬಹುದು ಎಂಬುದು ಯೋಜನೆ.

   ದಂಡಾವತಿ ನದಿ ವಿರೋದಿ ಹೋರಾಟ ಸಮಿತಿ ಹೇಳುವುದು "ರಾಜಕೀಯ ಕಾರಣಗಳಿಂದ ಈ ಯೋಜನೆ ಜಾರಿಗೊಳಿಸುವ ಪ್ರಯತ್ನ ನಡೆಸಿದ್ದಾರೆ, ಮಳೆಕಾಡು ಮತ್ತು ಕೃಷಿ ಭೂಮಿ ಮುಳುಗಿಸಿ ಶುಷ್ಕ ಖುಷ್ಕಿ ಭೂಮಿ ನೀರಾವರಿ ಮಾಡಿಕೊಳ್ಳುವ ಯೋಜನೆ ಇದಾಗಿದೆ" ಎಂದು ಈ ಯೋಜನೆಯ ತಾರ್ಕಿಕತೆಯನ್ನು ಪ್ರಶ್ನಿಸಿದೆ.

    ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ವಾಮದೇವ ಗೌಡರ ನೇತೃತ್ವದ ದಂಡಾವತಿ ನದಿ ವಿರೋದಿ ಹೋರಾಟ ಸಮಿತಿಯ ಹೋರಾಟವನ್ನು ಬೆಂಬಲಿಸಿದ್ದರು.
  
    ವಾಮದೇವ ಗೌಡರು ಆ ಹೋರಾಟದ ದಿನದಲ್ಲಿ ಸಿದ್ದರಾಮಯ್ಯ ನಮ್ಮ ಜೊತೆ ಕುಳಿತು ನಮ್ಮ ಹೋರಾಟ ಬೆಂಬಲಿಸಿದ್ದರು, ಈಗ ಮುಖ್ಯಮಂತ್ರಿ ಆಗಿದ್ದಾರೆ ಆದರೆ ಸಂಪುಟ ಸಭೆಯಲ್ಲಿ ಈವರೆಗೆ ಆಣೆಕಟ್ಟು ಕಟ್ಟಬೇಕೆಂಬ ಹಿಂದಿನ ಸಕಾ೯ರದ ನಿಣ೯ಯ ಮಾತ್ರ ಎಷ್ಟು ಸಾರಿ ನೆನಪಿಸಿದರೂ ರದ್ದು ಮಾಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದರು.

     ಈ ಇಳಿ ವಯಸ್ಸಲ್ಲೂ ವಾಮದೇವ ಗೌಡರ ಹೋರಾಟದ ಕಿಚ್ಚು ಕೊಂಚವೂ ಕಡಿಮೆ ಆಗಿಲ್ಲ, ಅವರಿಗೆ ದೇವರು ಆರೋಗ್ಯ ಆಯಸ್ಸು ಮತ್ತು ಯಶಸ್ಸು ನೀಡಲಿ ಎಂದು ಹಾರೈಸುತ್ತೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ