Skip to main content

Blog number 1862. ನನ್ನ ಇವತ್ತಿನ ಅತಿಥಿ ಪದ್ಮಶ್ರೀ ಪುರಸ್ಕೃತ ರಾದ ಮಂಜಮ್ಮ ಜೋಗತಿ 12- ಡಿಸೆಂಬರ್ - 2023

https://youtube.com/shorts/3EoD6ZXKp3E?feature=shared

#ಪದ್ಮಶ್ರೀ_ಪ್ರಶಸ್ತಿ_ವಿಜೇತ_ಮಂಜಮ್ಮ_ಜೋಗತಿ_ನನ್ನ_ಅತಿಥಿ.

#ಮೂರು_ವರ್ಷದ_ನಂತರ_ಈ_ಬೇಟಿ

#ನಿರಂತರ_ಓದು_ಪೇಸ್_ಬುಕ್_ಟ್ವೀಟರ್_ಎಲ್ಲಾ_ಜಾಲತಾಣದಲ್ಲಿ_ಸಕ್ರಿಯ.

#ತೃತಿಯ_ಲಿಂಗಿ_ಮಕ್ಕಳಾದರೆ_ಯಾವುದೇ_ತಾರತಮ್ಯ_ತೋರದೆ_ವಿದ್ಯೆ_ಕೊಡಿ_ಎಂಬ_ಅವರ_ಅಭಿಯಾನ_ಪ್ರಾರಂಬ.

#ಅವರ_ಬಗ್ಗೆ_ಹರ್ಷಭಟ್_ಬರೆದ_ಇಂಗ್ಲೀಷ್_ಪುಸ್ತಕ_ಮತ್ತು_ನೆನಪಿನ_ಕಾಣಿಕೆ_ಪ್ರೀತಿಯಿಂದ_ನೀಡಿದ್ದಾರೆ

#ನಮ್ಮ_ಸಂಸ್ಥೆ_ವತಿಯಿಂದ_ಅವರನ್ನು_ಸನ್ಮಾನಿಸಿ_ಶ್ರೀಕೃಷ್ಣಕಥಾ_ಮಂಜರಿ_ಮತ್ತು_ನನ್ನ_ಬಿಲಾಲಿಬಿಲ್ಲಿ_ಪುಸ್ತಕ_ನೀಡಿದೆ.


  ನಿನ್ನೆ ಪದ್ಮಶ್ರೀ ಪ್ರಶಸ್ತಿ ವಿಜೇತ ಮಂಜಮ್ಮ ಜೋಗತಿ ಅವರು ನಾಳೆ ನಿಮ್ಮ ಊರಿಗೆ ಬರುತ್ತಿದ್ದೇನೆ ಅಂದಾಗ ತುಂಬಾ ಸಂತೋಷದಿಂದ ಸ್ವಾಗತಿಸಿದ್ದೆ.
   ಇವತ್ತು ಮಂಜಮ್ಮ ಜೋಗತಿ ಅವರು ಬಂದಾಗ ನಮಗೆಲ್ಲ ಸಂಭ್ರಮ ಒಂದು ವಿಶೇಷ ಅಂದರೆ ಮಂಜಮ್ಮ ಜೋಗತಿ ನಮ್ಮ ಎಲ್ಲಾ ಸಿಬ್ಬಂದಿಗಳಿಗೆ ಅವರ ಟೀವಿ ಸಂದರ್ಶನಗಳಿಂದ ಚಿರಪರಿಚಿತರು ಅಷ್ಟೇ ಅಲ್ಲ ಇವರ ಸಂದರ್ಶನದಿಂದ ಇವರೆಲ್ಲರೂ ಕಣ್ಣೀರು ಸುರಿಸಿದವರೆ.
  ನಮ್ಮ ಸಂಸ್ಥೆ ವತಿಯಿಂದ ನಾನು ನನ್ನ ಸಹೋದರ ನಾಗರಾಜ್ ಮತ್ತು ಅವರ ಪುತ್ರ, ನನ್ನ ಪುತ್ರ, ನನ್ನ ವ್ಯವಸ್ಥಾಪಕರಾದ ಅನಿಲ್, ಕಣ್ಣೂರು ನಾಗರಾಜ್ ಸೇರಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮಂಜಮ್ಮ ಜೋಗತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು ನೆನಪಿನ ಕಾಣಿಕೆಯಾಗಿ ಕುಂಟಿಕಾನು ಮಠ ಬಾಲಕೃಷ್ಣ ಭಟ್ಟರು ಬರೆದ #ಶ್ರೀಕೃಷ್ಣ_ಕಥಾ_ಮಂಜರಿ, ನನ್ನ ಸಣ್ಣ ಕಥಾ ಸಂಕಲನ #ಬಿಲಾಲಿ_ಬಿಲ್ಲಿ_ಅಭ್ಯಂಜನ ಮತ್ತು 2024ರ ನಮ್ಮ ಸಂಸ್ಥೆಯ ಟೀಬಲ್ ಕ್ಯಾಲೆಂಡರ್ ನೀಡಿದೆ.
  ಮಂಜಮ್ಮ ಜೋಗತಿ ಅವರು ನನಗೆ ಅವರ ಅಭಿಯಾನದ ಟ್ಯಾಗ್ ಲೈನ್ ಸ್ಲಿಪ್, ಶೃತಿಯಾಕಾರದ ಸುಂದರ ನೆನಪಿನ ಕಾಣಿಕೆ ಮತ್ತು ಇವರ ಆತ್ಮಚರಿತ್ರೆ ಹರ್ಷಾ ಭಟ್ ಬರೆದ ಇಂಗ್ಲೀಷ್ ಪುಸ್ತಕ ನನಗೆ ನೀಡಿದರು.
   ನನ್ನ ಮತ್ತು ಮಂಜಮ್ಮ ಜೋಗತಿ ಅವರನ್ನು ಗೆಳೆತನದ ಬಂದನಕ್ಕೆ ಸೇರಿಸಿದ್ದು ನನ್ನ ಕಾದಂಬರಿ #ಬೆಸ್ತರ_ರಾಣಿ_ಚಂಪಕಾ ದಿನಾ೦ಕಾ 17 ಜನವರಿ 2021 ರಂದು ರಾಜ್ಯ ಜನಪದ ಅಕಾಡೆಮಿ ಅಧ್ಯಕ್ಷರಾದ ಮಂಜಮ್ಮ  ಜೋಗತಿ ಅವರು ಕಾರ್ಯಕ್ರಮದ ನಿಮಿತ್ತ ಆಯೋಜಕರು ನಮ್ಮ ಲಾಡ್ಜ್ ನಲ್ಲಿ ಅವರನ್ನು ಉಳಿಸಿದ್ದರು ಆಗ ನಾನು ಅವರಿಗೆ ಈ ಕಾದಂಬರಿ ನೀಡಿದ್ದೆ.
  ಅವರು ನನ್ನ ಕಾದಂಬರಿ ಓದುವ ನಿರೀಕ್ಷೆ ನನಗೆ ಇರಲಿಲ್ಲ ನಾನು ಇವರ ಫೋನ್ ನಂಬರ್ ಪಡೆಯಲಿಲ್ಲ ಅವರೂ ನನ್ನ ಫೋನ್ ನಂಬರ್ ಕೇಳಲಿಲ್ಲ ಆದರೆ ಒಂದೆರೆಡು ದಿನದ ನಂತರ ಫೋನ್ ಕರೆ ಸ್ವೀಕರಿಸಿದಾಗ "ನಾನು ಮಂಜಮ್ಮ ಜೋಗತಿ ... ಅರುಣ್ ಪ್ರಸಾದ್ ಅವರಾ?... ಅಂದಾಗಲೇ ಗೊತ್ತಾಗಿದ್ದು ನನ್ನ ಕಾದಂಬರಿ ಪುಸ್ತಕದಲ್ಲಿ ಅಚ್ಚಾದ ನನ್ನ ನಂಬರ್ ನೋಡಿ ಫೋನ್ ಮಾಡಿದ್ದಾರೆ ಅಂತ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿನೋಡಿ ನನ್ನ ಕಾದಂಬರಿ ಓದಿ ಅವರು ಏನು ಮಾತಾಡಿದ್ದಾರೆ ಅಂತ.
https://m.facebook.com/story.php?story_fbid=pfbid06EDf1RzcUccR42j1oH7X3qYvXaae8fFQwdiaQG1xwZBzDf6WvATBgyXrf1HJDi4Dl&id=1556115154684584&mibextid=Nif5oz.
  ನಾನು ಇವರ ಆತ್ಮಚರಿತ್ರೆ ಅರುಣ್ ಜೋಳದ ಕೂಡ್ಲಿಗೆ ಬರೆದ "ನಡುವೆ ಸುಳಿವ ಹೆಣ್ಣು" ಓದಿದ್ದೆ ಈ ಪುಸ್ತಕದಿಂದ ನಾನು ಅವರ ಬಗ್ಗೆ ಹೆಚ್ಚು ತಿಳಿಯಲು ಸಾಧ್ಯವಾಗಿತ್ತು.
   ಇವತ್ತು ಸಂಜೆ ಇವರಿಗೆ ಸಮೀಪದ ಮುರುಘಾ ಮಠದಲ್ಲಿ ನಡೆಯುವ ಕಾರ್ತಿಕ ಮಹೋತ್ಸವದಲ್ಲಿ #ರಾಣಿ_ಚೆನ್ನಮ್ಮ_ಪ್ರಶಸ್ತಿ ನೀಡುವ ಕಾರ್ಯಕ್ರಮ ಇದೆ.
  ಅಲ್ಲಿ ತನಕ ಮಂಜಮ್ಮ ಜೋಗತಿ ಅವರೊಂದಿಗೆ ಅನೇಕ ವಿಚಾರ ವಿನಿಮಯ ಮಾಡಿಕೊಳ್ಳಲು ಅವಕಾಶ ಆಯಿತು.
  ಮಂಜಮ್ಮ ಜೋಗತಿ ಅವರೊಂದಿಗೆ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವ ಮುನ್ನ ರಾಷ್ಟ್ರಪತಿಗಳಿಗೆ #ದೃಷ್ಟಿ ತೆಗೆದ ಬಗ್ಗೆ, ಜೀವನದಲ್ಲಿ ಅವರು ಯಾವುದನ್ನೂ ಬಯಸದೇ ಬಂದ ಭಾಗ್ಯದ ಬಗ್ಗೆ, ಮುಂದೆ ನಿಮ್ಮನ್ನು ರಾಜ್ಯಸಭಾ ಸದಸ್ಯರಾಗಿ ನಾಮಕರಣ ಮಾಡಿದರೆ?.... ಇಂತಹ ಪ್ರಶ್ನೆಗಳಿಗೆ ಅವರ ಉತ್ತರಗಳ ಕೆಲ ಕಂತುಗಳ ಸಂದರ್ಶನ ಕೂಡ ಮಾಡಿದ್ದೇನೆ.
  ನಾಳೆ ಮಂಜಮ್ಮ ಜೋಗತಿ ಅವರ ಸಂದರ್ಶನದ ಮೊದಲ ಭಾಗದ ಪೋಸ್ಟ್ ಮಾಡುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...