Skip to main content

Blog number 1862. ನನ್ನ ಇವತ್ತಿನ ಅತಿಥಿ ಪದ್ಮಶ್ರೀ ಪುರಸ್ಕೃತ ರಾದ ಮಂಜಮ್ಮ ಜೋಗತಿ 12- ಡಿಸೆಂಬರ್ - 2023

https://youtube.com/shorts/3EoD6ZXKp3E?feature=shared

#ಪದ್ಮಶ್ರೀ_ಪ್ರಶಸ್ತಿ_ವಿಜೇತ_ಮಂಜಮ್ಮ_ಜೋಗತಿ_ನನ್ನ_ಅತಿಥಿ.

#ಮೂರು_ವರ್ಷದ_ನಂತರ_ಈ_ಬೇಟಿ

#ನಿರಂತರ_ಓದು_ಪೇಸ್_ಬುಕ್_ಟ್ವೀಟರ್_ಎಲ್ಲಾ_ಜಾಲತಾಣದಲ್ಲಿ_ಸಕ್ರಿಯ.

#ತೃತಿಯ_ಲಿಂಗಿ_ಮಕ್ಕಳಾದರೆ_ಯಾವುದೇ_ತಾರತಮ್ಯ_ತೋರದೆ_ವಿದ್ಯೆ_ಕೊಡಿ_ಎಂಬ_ಅವರ_ಅಭಿಯಾನ_ಪ್ರಾರಂಬ.

#ಅವರ_ಬಗ್ಗೆ_ಹರ್ಷಭಟ್_ಬರೆದ_ಇಂಗ್ಲೀಷ್_ಪುಸ್ತಕ_ಮತ್ತು_ನೆನಪಿನ_ಕಾಣಿಕೆ_ಪ್ರೀತಿಯಿಂದ_ನೀಡಿದ್ದಾರೆ

#ನಮ್ಮ_ಸಂಸ್ಥೆ_ವತಿಯಿಂದ_ಅವರನ್ನು_ಸನ್ಮಾನಿಸಿ_ಶ್ರೀಕೃಷ್ಣಕಥಾ_ಮಂಜರಿ_ಮತ್ತು_ನನ್ನ_ಬಿಲಾಲಿಬಿಲ್ಲಿ_ಪುಸ್ತಕ_ನೀಡಿದೆ.


  ನಿನ್ನೆ ಪದ್ಮಶ್ರೀ ಪ್ರಶಸ್ತಿ ವಿಜೇತ ಮಂಜಮ್ಮ ಜೋಗತಿ ಅವರು ನಾಳೆ ನಿಮ್ಮ ಊರಿಗೆ ಬರುತ್ತಿದ್ದೇನೆ ಅಂದಾಗ ತುಂಬಾ ಸಂತೋಷದಿಂದ ಸ್ವಾಗತಿಸಿದ್ದೆ.
   ಇವತ್ತು ಮಂಜಮ್ಮ ಜೋಗತಿ ಅವರು ಬಂದಾಗ ನಮಗೆಲ್ಲ ಸಂಭ್ರಮ ಒಂದು ವಿಶೇಷ ಅಂದರೆ ಮಂಜಮ್ಮ ಜೋಗತಿ ನಮ್ಮ ಎಲ್ಲಾ ಸಿಬ್ಬಂದಿಗಳಿಗೆ ಅವರ ಟೀವಿ ಸಂದರ್ಶನಗಳಿಂದ ಚಿರಪರಿಚಿತರು ಅಷ್ಟೇ ಅಲ್ಲ ಇವರ ಸಂದರ್ಶನದಿಂದ ಇವರೆಲ್ಲರೂ ಕಣ್ಣೀರು ಸುರಿಸಿದವರೆ.
  ನಮ್ಮ ಸಂಸ್ಥೆ ವತಿಯಿಂದ ನಾನು ನನ್ನ ಸಹೋದರ ನಾಗರಾಜ್ ಮತ್ತು ಅವರ ಪುತ್ರ, ನನ್ನ ಪುತ್ರ, ನನ್ನ ವ್ಯವಸ್ಥಾಪಕರಾದ ಅನಿಲ್, ಕಣ್ಣೂರು ನಾಗರಾಜ್ ಸೇರಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮಂಜಮ್ಮ ಜೋಗತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು ನೆನಪಿನ ಕಾಣಿಕೆಯಾಗಿ ಕುಂಟಿಕಾನು ಮಠ ಬಾಲಕೃಷ್ಣ ಭಟ್ಟರು ಬರೆದ #ಶ್ರೀಕೃಷ್ಣ_ಕಥಾ_ಮಂಜರಿ, ನನ್ನ ಸಣ್ಣ ಕಥಾ ಸಂಕಲನ #ಬಿಲಾಲಿ_ಬಿಲ್ಲಿ_ಅಭ್ಯಂಜನ ಮತ್ತು 2024ರ ನಮ್ಮ ಸಂಸ್ಥೆಯ ಟೀಬಲ್ ಕ್ಯಾಲೆಂಡರ್ ನೀಡಿದೆ.
  ಮಂಜಮ್ಮ ಜೋಗತಿ ಅವರು ನನಗೆ ಅವರ ಅಭಿಯಾನದ ಟ್ಯಾಗ್ ಲೈನ್ ಸ್ಲಿಪ್, ಶೃತಿಯಾಕಾರದ ಸುಂದರ ನೆನಪಿನ ಕಾಣಿಕೆ ಮತ್ತು ಇವರ ಆತ್ಮಚರಿತ್ರೆ ಹರ್ಷಾ ಭಟ್ ಬರೆದ ಇಂಗ್ಲೀಷ್ ಪುಸ್ತಕ ನನಗೆ ನೀಡಿದರು.
   ನನ್ನ ಮತ್ತು ಮಂಜಮ್ಮ ಜೋಗತಿ ಅವರನ್ನು ಗೆಳೆತನದ ಬಂದನಕ್ಕೆ ಸೇರಿಸಿದ್ದು ನನ್ನ ಕಾದಂಬರಿ #ಬೆಸ್ತರ_ರಾಣಿ_ಚಂಪಕಾ ದಿನಾ೦ಕಾ 17 ಜನವರಿ 2021 ರಂದು ರಾಜ್ಯ ಜನಪದ ಅಕಾಡೆಮಿ ಅಧ್ಯಕ್ಷರಾದ ಮಂಜಮ್ಮ  ಜೋಗತಿ ಅವರು ಕಾರ್ಯಕ್ರಮದ ನಿಮಿತ್ತ ಆಯೋಜಕರು ನಮ್ಮ ಲಾಡ್ಜ್ ನಲ್ಲಿ ಅವರನ್ನು ಉಳಿಸಿದ್ದರು ಆಗ ನಾನು ಅವರಿಗೆ ಈ ಕಾದಂಬರಿ ನೀಡಿದ್ದೆ.
  ಅವರು ನನ್ನ ಕಾದಂಬರಿ ಓದುವ ನಿರೀಕ್ಷೆ ನನಗೆ ಇರಲಿಲ್ಲ ನಾನು ಇವರ ಫೋನ್ ನಂಬರ್ ಪಡೆಯಲಿಲ್ಲ ಅವರೂ ನನ್ನ ಫೋನ್ ನಂಬರ್ ಕೇಳಲಿಲ್ಲ ಆದರೆ ಒಂದೆರೆಡು ದಿನದ ನಂತರ ಫೋನ್ ಕರೆ ಸ್ವೀಕರಿಸಿದಾಗ "ನಾನು ಮಂಜಮ್ಮ ಜೋಗತಿ ... ಅರುಣ್ ಪ್ರಸಾದ್ ಅವರಾ?... ಅಂದಾಗಲೇ ಗೊತ್ತಾಗಿದ್ದು ನನ್ನ ಕಾದಂಬರಿ ಪುಸ್ತಕದಲ್ಲಿ ಅಚ್ಚಾದ ನನ್ನ ನಂಬರ್ ನೋಡಿ ಫೋನ್ ಮಾಡಿದ್ದಾರೆ ಅಂತ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿನೋಡಿ ನನ್ನ ಕಾದಂಬರಿ ಓದಿ ಅವರು ಏನು ಮಾತಾಡಿದ್ದಾರೆ ಅಂತ.
https://m.facebook.com/story.php?story_fbid=pfbid06EDf1RzcUccR42j1oH7X3qYvXaae8fFQwdiaQG1xwZBzDf6WvATBgyXrf1HJDi4Dl&id=1556115154684584&mibextid=Nif5oz.
  ನಾನು ಇವರ ಆತ್ಮಚರಿತ್ರೆ ಅರುಣ್ ಜೋಳದ ಕೂಡ್ಲಿಗೆ ಬರೆದ "ನಡುವೆ ಸುಳಿವ ಹೆಣ್ಣು" ಓದಿದ್ದೆ ಈ ಪುಸ್ತಕದಿಂದ ನಾನು ಅವರ ಬಗ್ಗೆ ಹೆಚ್ಚು ತಿಳಿಯಲು ಸಾಧ್ಯವಾಗಿತ್ತು.
   ಇವತ್ತು ಸಂಜೆ ಇವರಿಗೆ ಸಮೀಪದ ಮುರುಘಾ ಮಠದಲ್ಲಿ ನಡೆಯುವ ಕಾರ್ತಿಕ ಮಹೋತ್ಸವದಲ್ಲಿ #ರಾಣಿ_ಚೆನ್ನಮ್ಮ_ಪ್ರಶಸ್ತಿ ನೀಡುವ ಕಾರ್ಯಕ್ರಮ ಇದೆ.
  ಅಲ್ಲಿ ತನಕ ಮಂಜಮ್ಮ ಜೋಗತಿ ಅವರೊಂದಿಗೆ ಅನೇಕ ವಿಚಾರ ವಿನಿಮಯ ಮಾಡಿಕೊಳ್ಳಲು ಅವಕಾಶ ಆಯಿತು.
  ಮಂಜಮ್ಮ ಜೋಗತಿ ಅವರೊಂದಿಗೆ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವ ಮುನ್ನ ರಾಷ್ಟ್ರಪತಿಗಳಿಗೆ #ದೃಷ್ಟಿ ತೆಗೆದ ಬಗ್ಗೆ, ಜೀವನದಲ್ಲಿ ಅವರು ಯಾವುದನ್ನೂ ಬಯಸದೇ ಬಂದ ಭಾಗ್ಯದ ಬಗ್ಗೆ, ಮುಂದೆ ನಿಮ್ಮನ್ನು ರಾಜ್ಯಸಭಾ ಸದಸ್ಯರಾಗಿ ನಾಮಕರಣ ಮಾಡಿದರೆ?.... ಇಂತಹ ಪ್ರಶ್ನೆಗಳಿಗೆ ಅವರ ಉತ್ತರಗಳ ಕೆಲ ಕಂತುಗಳ ಸಂದರ್ಶನ ಕೂಡ ಮಾಡಿದ್ದೇನೆ.
  ನಾಳೆ ಮಂಜಮ್ಮ ಜೋಗತಿ ಅವರ ಸಂದರ್ಶನದ ಮೊದಲ ಭಾಗದ ಪೋಸ್ಟ್ ಮಾಡುತ್ತೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ