Skip to main content

Blog number 1857. ನನ್ನ ಜೀವಮಾನದ ಮೊದಲ ಪತ್ರಿಕಾ ಲೇಖನ ಪ್ರಕಟವಾಗಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಛಲಗಾರ ದಿನ ಪತ್ರಿಕೆಯಲ್ಲಿ ಆಗ ನನಗೆ 12 ವರ್ಷ ಪ್ರಾಯ.

#ನನ್ನ_ಜೀವಮಾನದ_ಮೊದಲ_ಲೇಖನ_ಪ್ರಕಟವಾಗಿದ್ದು_ಛಲಗಾರ_ಪತ್ರಿಕೆಯಲ್ಲಿ

#ಕಾಡಿನ_ನ್ಯಾಯ_ಎಂಬ_ಶಿರೋನಾಮೆ_ನೀಡಿದ್ದು_ಸಂಪಾದಕ_ಗಣಪತಿಯವರು

#ನನಗೆ_ಆಗ_ಹನ್ನೆರೆಡು_ವರ್ಷ.


 ತೀರ್ಥಹಳ್ಳಿಯ #ಛಲಗಾರ_ಪತ್ರಿಕೆ  ನನ್ನ ಪೇಸ್ ಬುಕ್ ಲೇಖನ ಪತ್ರಿಕೆಯಲ್ಲಿ ಪುನರ್ ಪ್ರಕಟಿಸಿದೆ ಸಂಪಾದಕರಾದ ನಿಶಾಂತ್ ಗೆ ದನ್ಯವಾದಗಳು.
  ಇಲ್ಲಿ ಕ್ಲಿಕ್ ಮಾಡಿ ಆ ಲೇಖನ ಓದಿ
https://arunprasadhombuja.blogspot.com/2023/12/blog-number-1854.html
  ನಿಶಾಂತರ ತಂದೆ ಗಣಪತಿಯವರು ನನ್ನ ತಂದೆಯ ಗೆಳೆಯರು ಇವರ ಮೂಲ ಊರು ನಮ್ಮ ಊರಿನ ಸಮೀಪದ ಆಲಗೇರಿ ಮಂಡ್ರಿ.
   ನನ್ನ ಅಣ್ಣ 1975 ರಿಂದ ಈ ಪತ್ರಿಕೆಯ ಆನಂದಪುರಂನ ವರದಿಗಾರ ಮತ್ತು ಏಜೆಂಟ್ ಆಗಿದ್ದರು.
  1976 ಅಥವ 1977 ರಲ್ಲಿ ಹಕ್ಕಿಪಿಕ್ಕಿ ಸಮುದಾಯದ ಮೈಲಪ್ಪ ಎಂಬಾತ ಕಾಡು ಕೋಳಿ ಮಾರಾಟಕ್ಕೆ ನಮ್ಮ ಮನೆ ಎದುರಿನ ಯಡೇಹಳ್ಳಿ ವೃತ್ತಕ್ಕೆ ಬಂದಿದ್ದ ಆಗ ಅಲ್ಲಿಗೆ ಬಂದ ಚೋರಡಿ ರೇಂಜರ್ ಜೀಪಿನಲ್ಲಿ ಮೈಲಪ್ಪನನ್ನು ಹೊಡೆದು ಬಡಿದು ಹಾಕಿಕೊಂಡು ಹೋಗಿದ್ದರು.
  ನಾವೆಲ್ಲ ಆಗೆಲ್ಲ ಆರನೇ ಕ್ಲಾಸೋ ಅಥವ ಏಳನೆ ಕ್ಲಾಸಿನ ವಿದ್ಯಾರ್ಥಿಗಳು ನಮಗೆ ದುಃಖ ಮತ್ತು ಅಧಿಕಾರಿಗಳ ಮೇಲೆ ಕೋಪ ಹಾಗೆಯೇ ಮೈಲಪ್ಪನನ್ನು ಬಿಟ್ಟು ಕಳಿಸುತ್ತಾರೋ ಇಲ್ಲವೊ? ಅವನ ಕ್ಯಾಂಪ್ ನಮ್ಮ ಮನೆ ಹಿಂದಿನ ಮುಸ್ಲಿಂ ಸ್ಮಶಾನದ ಗೋಳಿ ಮರದ ನೆರಳಲ್ಲಿತ್ತು.
  ಸಂಜೆ ಮೈಲಪ್ಪ ನಾಟದ ಲಾರಿಯಲ್ಲಿ ಬಂದಿಳಿದಾಗ ಅವನ ಬೆನ್ನು ಪೂರ್ತಿ ಬಾಸುಂಡೆಗಳಿಂದ ಚಿತ್ತಾರ ಮೂಡಿಸಿತ್ತು. ಅರಣ್ಯಾಧಿಕಾರಿಗಳು ಇವನು ಶಿಕಾರಿ ಮಾಡಿದ್ದ ಕಾಡು ಕೋಳಿ ಇವನಿಂದಲೇ ಹಸೆ ಮಾಡಿಸಿ ಉಂಡಿದ್ದಾರೆ.
  ಇದನ್ನೇ ನನ್ನ ನೋಟ್ ಬುಕ್ ನ ಹಾಳೆಯಲ್ಲಿ ನನ್ನ ಬಾಲ್ಯದ ಆ ಕಾಲದ ಬರವಣಿಗೆಯಲ್ಲಿ ಬರೆದು ಪ್ರತಿ ನಿತ್ಯ ಸಂಜೆ ಸಾಗರದಿಂದ ತೀರ್ಥಹಳ್ಳಿಗೆ ಹೋಗುವ #ಶಂಕರ್ ಬಸ್ಸಿನ ಡ್ರೈವರ್ ಹತ್ತಿರ ನನ್ನ ಅಣ್ಣ ಕಳಿಸುತ್ತಿದ್ದ ನಿತ್ಯ ವರದಿಗಳ ಜೊತೆ ಕಳಿಸಿದ್ದೆ.
  ಎರೆಡು ದಿನದ ನಂತರ ಏನಾಶ್ಚರ್ಯ ಛಲಗಾರ ದಿನ ಪತ್ರಿಕೆಯ ಮುಖ ಪುಟದಲ್ಲಿ #ಕಾಡಿನ_ನ್ಯಾಯ ಎಂಬ ಶಿರ್ಷಿಕೆಯಲ್ಲಿ ನನ್ನ ಲೇಖನ ನನ್ನ ಹೆಸರಲ್ಲಿ ಬಾಕ್ಸ್ ಲೇಖನವಾಗಿ ಪ್ರಕಟವಾಗಿತ್ತು.
  ಇದು ನನ್ನ ಜೀವಮಾನದ ಮೊದಲ ಪತ್ರಿಕಾ ಲೇಖನ ಎಂಬ ಹೆಮ್ಮೆ ನನ್ನದು ಇವತ್ತು ಗಣಪತಿಯವರ ಮಗ ನಿಶಾಂತ್ ನನ್ನ FB ಲೇಖನ ಛಲಗಾರದಲ್ಲಿ ಪ್ರಕಟಿಸಿದ್ದು ನೋಡಿ ನೆನಪಾಯಿತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...