Skip to main content

Blog number 1857. ನನ್ನ ಜೀವಮಾನದ ಮೊದಲ ಪತ್ರಿಕಾ ಲೇಖನ ಪ್ರಕಟವಾಗಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಛಲಗಾರ ದಿನ ಪತ್ರಿಕೆಯಲ್ಲಿ ಆಗ ನನಗೆ 12 ವರ್ಷ ಪ್ರಾಯ.

#ನನ್ನ_ಜೀವಮಾನದ_ಮೊದಲ_ಲೇಖನ_ಪ್ರಕಟವಾಗಿದ್ದು_ಛಲಗಾರ_ಪತ್ರಿಕೆಯಲ್ಲಿ

#ಕಾಡಿನ_ನ್ಯಾಯ_ಎಂಬ_ಶಿರೋನಾಮೆ_ನೀಡಿದ್ದು_ಸಂಪಾದಕ_ಗಣಪತಿಯವರು

#ನನಗೆ_ಆಗ_ಹನ್ನೆರೆಡು_ವರ್ಷ.


 ತೀರ್ಥಹಳ್ಳಿಯ #ಛಲಗಾರ_ಪತ್ರಿಕೆ  ನನ್ನ ಪೇಸ್ ಬುಕ್ ಲೇಖನ ಪತ್ರಿಕೆಯಲ್ಲಿ ಪುನರ್ ಪ್ರಕಟಿಸಿದೆ ಸಂಪಾದಕರಾದ ನಿಶಾಂತ್ ಗೆ ದನ್ಯವಾದಗಳು.
  ಇಲ್ಲಿ ಕ್ಲಿಕ್ ಮಾಡಿ ಆ ಲೇಖನ ಓದಿ
https://arunprasadhombuja.blogspot.com/2023/12/blog-number-1854.html
  ನಿಶಾಂತರ ತಂದೆ ಗಣಪತಿಯವರು ನನ್ನ ತಂದೆಯ ಗೆಳೆಯರು ಇವರ ಮೂಲ ಊರು ನಮ್ಮ ಊರಿನ ಸಮೀಪದ ಆಲಗೇರಿ ಮಂಡ್ರಿ.
   ನನ್ನ ಅಣ್ಣ 1975 ರಿಂದ ಈ ಪತ್ರಿಕೆಯ ಆನಂದಪುರಂನ ವರದಿಗಾರ ಮತ್ತು ಏಜೆಂಟ್ ಆಗಿದ್ದರು.
  1976 ಅಥವ 1977 ರಲ್ಲಿ ಹಕ್ಕಿಪಿಕ್ಕಿ ಸಮುದಾಯದ ಮೈಲಪ್ಪ ಎಂಬಾತ ಕಾಡು ಕೋಳಿ ಮಾರಾಟಕ್ಕೆ ನಮ್ಮ ಮನೆ ಎದುರಿನ ಯಡೇಹಳ್ಳಿ ವೃತ್ತಕ್ಕೆ ಬಂದಿದ್ದ ಆಗ ಅಲ್ಲಿಗೆ ಬಂದ ಚೋರಡಿ ರೇಂಜರ್ ಜೀಪಿನಲ್ಲಿ ಮೈಲಪ್ಪನನ್ನು ಹೊಡೆದು ಬಡಿದು ಹಾಕಿಕೊಂಡು ಹೋಗಿದ್ದರು.
  ನಾವೆಲ್ಲ ಆಗೆಲ್ಲ ಆರನೇ ಕ್ಲಾಸೋ ಅಥವ ಏಳನೆ ಕ್ಲಾಸಿನ ವಿದ್ಯಾರ್ಥಿಗಳು ನಮಗೆ ದುಃಖ ಮತ್ತು ಅಧಿಕಾರಿಗಳ ಮೇಲೆ ಕೋಪ ಹಾಗೆಯೇ ಮೈಲಪ್ಪನನ್ನು ಬಿಟ್ಟು ಕಳಿಸುತ್ತಾರೋ ಇಲ್ಲವೊ? ಅವನ ಕ್ಯಾಂಪ್ ನಮ್ಮ ಮನೆ ಹಿಂದಿನ ಮುಸ್ಲಿಂ ಸ್ಮಶಾನದ ಗೋಳಿ ಮರದ ನೆರಳಲ್ಲಿತ್ತು.
  ಸಂಜೆ ಮೈಲಪ್ಪ ನಾಟದ ಲಾರಿಯಲ್ಲಿ ಬಂದಿಳಿದಾಗ ಅವನ ಬೆನ್ನು ಪೂರ್ತಿ ಬಾಸುಂಡೆಗಳಿಂದ ಚಿತ್ತಾರ ಮೂಡಿಸಿತ್ತು. ಅರಣ್ಯಾಧಿಕಾರಿಗಳು ಇವನು ಶಿಕಾರಿ ಮಾಡಿದ್ದ ಕಾಡು ಕೋಳಿ ಇವನಿಂದಲೇ ಹಸೆ ಮಾಡಿಸಿ ಉಂಡಿದ್ದಾರೆ.
  ಇದನ್ನೇ ನನ್ನ ನೋಟ್ ಬುಕ್ ನ ಹಾಳೆಯಲ್ಲಿ ನನ್ನ ಬಾಲ್ಯದ ಆ ಕಾಲದ ಬರವಣಿಗೆಯಲ್ಲಿ ಬರೆದು ಪ್ರತಿ ನಿತ್ಯ ಸಂಜೆ ಸಾಗರದಿಂದ ತೀರ್ಥಹಳ್ಳಿಗೆ ಹೋಗುವ #ಶಂಕರ್ ಬಸ್ಸಿನ ಡ್ರೈವರ್ ಹತ್ತಿರ ನನ್ನ ಅಣ್ಣ ಕಳಿಸುತ್ತಿದ್ದ ನಿತ್ಯ ವರದಿಗಳ ಜೊತೆ ಕಳಿಸಿದ್ದೆ.
  ಎರೆಡು ದಿನದ ನಂತರ ಏನಾಶ್ಚರ್ಯ ಛಲಗಾರ ದಿನ ಪತ್ರಿಕೆಯ ಮುಖ ಪುಟದಲ್ಲಿ #ಕಾಡಿನ_ನ್ಯಾಯ ಎಂಬ ಶಿರ್ಷಿಕೆಯಲ್ಲಿ ನನ್ನ ಲೇಖನ ನನ್ನ ಹೆಸರಲ್ಲಿ ಬಾಕ್ಸ್ ಲೇಖನವಾಗಿ ಪ್ರಕಟವಾಗಿತ್ತು.
  ಇದು ನನ್ನ ಜೀವಮಾನದ ಮೊದಲ ಪತ್ರಿಕಾ ಲೇಖನ ಎಂಬ ಹೆಮ್ಮೆ ನನ್ನದು ಇವತ್ತು ಗಣಪತಿಯವರ ಮಗ ನಿಶಾಂತ್ ನನ್ನ FB ಲೇಖನ ಛಲಗಾರದಲ್ಲಿ ಪ್ರಕಟಿಸಿದ್ದು ನೋಡಿ ನೆನಪಾಯಿತು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ