Skip to main content

Blog number 1881. ಪ್ಯಾಷನ್ ಪ್ರೂಟ್ ಒಳಗಿನ ಸುವಾಸನ ಯುಕ್ತ ರುಚಿಕರ ತಿರಳು... ದಿನಕ್ಕೊಂದು ಪ್ಯಾಷನ್ ಪ್ರೂಟ್ .... ಪ್ರತಿ ಮನೆಯಲ್ಲಿರಲಿ ಈ ಹಣ್ಣಿನ ಬಳ್ಳಿ ....

https://youtu.be/u6fA-WrWJlo?feature=shared

#ಪ್ಯಾಷನ್_ಪ್ರೂಟ್_ದಿನಕ್ಕೊಂದು

#ಗಟ್ಟಿ_ಕವಚದ_ಹಣ್ಣಿನ_ಒಳಗೆ_ರುಚಿಕರ_ಸುವಾಸನೆಯ_ತಿರುಳು.

#ಚಮಚದಿಂದ_ತೆಗೆದು_ನಾಲಿಗೆ_ಮೇಲೆ_ಇಟ್ಟರಾಯಿತು

#ಷ್ಯಾಷನ್_ಪ್ರೂಟ್_ಮತ್ತು_ಅದರ_ಸಸಿ_ನೀಡಿದ_ಪ್ರೆಂಚ್_ಪ್ರವಾಸಿ

#ಈಗ_ನಮ್ಮ_ಮನೆಯಲ್ಲಿ_ಪ್ಯಾಷನ್_ಫ್ರೂಟ್_ರಾಶಿ

#ಹೊಸ_ಸಸಿಗಳು_ತಯಾರಿದೆ.

  2014ರಲ್ಲಿ ಫ್ರೆಂಚ್ ಪ್ರವಾಸಿ ಒಬ್ಬರು ಕೊಡೈಕೆನಾಲ್ ನಿಂದ ಗೋವಾಕ್ಕೆ ತೆರಳುವಾಗ ಅವರ ಬೈಕಿನ ಪೆಟ್ರೋಲ್ ಟ್ಯಾಂಕ್ ಲೀಕ್ ಆಗುತ್ತಿದ್ದರಿಂದ ನಮ್ಮಲ್ಲಿ ಅವರು ಅವರ ಮಗ ತಂಗಿದ್ದರು.
  ಪುನಃ 2015ರಲ್ಲಿ ಕಾರಿನಲ್ಲಿ ಬಂದು ಹಳೆಯ ಪರಿಚಯದಿಂದ ನಮ್ಮಲ್ಲೇ ತಂಗಿದ್ದರು ಇವರ ಪತ್ನಿ ಗೋವಾದವರು, ಇವರ ಒಡೆತನದ ಮನೆ ಆಸ್ತಿ ಕೊಡೈಕೆನಾಲ್ ನಲ್ಲಿದೆ, ಮಗ ಗೋವಾದಲ್ಲಿ ಹಳೆಯ ಮಾಡೆಲ್ ಬೈಕ್ ಗಳನ್ನು ನವೀಕರಿಸಿ ಬೈಕ್ ರೈಡರ್ ಗಳಿಗೆ ಮಾರಾಟ ಮಾಡುವ ಉದ್ಯೋಗವಂತೆ ಪ್ರತಿ ವರ್ಷ ಕೊಡೈಕೆನಾಲ್ ಗೆ ಬಂದು ಕೆಲ ಕಾಲ ತಂಗುತ್ತಾರೆ ನಂತರ ಗೋವಾ ತಲುಪಿ ಅಲ್ಲಿಂದ ಅವರ ದೇಶಕ್ಕೆ ವಾಪಾಸಾಗುತ್ತಾರೆ.
   ಅವರು ನನಗೆ ಈ ಪ್ಯಾಷನ್ ಫ್ರೂಟ್ ತಿನ್ನಲು ನೀಡಿದ್ದರು ಅದೇ ಮೊದಲು ನಾನು ಈ ಹಣ್ಣು ನೋಡಿದ್ದು ಜೊತೆಗೆ ಈ ಹಣ್ಣಿನ ಬಳ್ಳಿಯ ಸಣ್ಣ ಸಸಿ ಒಂದು ನೀಡಿದ್ದರು.
   ಈಗ ನಮ್ಮ ಕಾಟೇಜಿನ ಗಾರ್ಡನ್ ನಲ್ಲಿ ಪ್ಯಾಷನ್ ಫ್ರೂಟ್ ನ ನಾಕಾರು ಬಳ್ಳಿ ಕಾಡು ಬಾದಾಮಿ ಮರಕ್ಕೆ ಹಬ್ಬಿ ರಾಶಿ ಹಣ್ಣುಗಳು ನೀಡುತ್ತಿದೆ.
   ಪ್ಯಾಷನ್ ಪ್ರೂಟ್ ಜ್ಯೂಸ್ ಅನುಕೂಲಗಳ ಬಗ್ಗೆ ಬರೆದ ಲೇಖನ ಇಲ್ಲಿ ಕ್ಲಿಕ್ ಮಾಡಿ ನೋಡಿ https://arunprasadhombuja.blogspot.com/2023/08/blog-number-1719.html.
  ಹೊಸ ಸಸಿಗಳು ಮುಂದಿನ ಮಳೆಗಾಲದಲ್ಲಿ ನಡಲು ತಯಾರಾಗಿದೆ.
    ಪ್ರತಿ ನಿತ್ಯ ಬೆಳಿಗ್ಗೆ ನನ್ನ ವಾಕಿಂಗ್ ಮುಗಿಸಿ ವಾಕಿಂಗ್ ಸಂಗಾತಿ ರಾಟ್ ವೈಲರ್ ಶಂಭೂರಾಮನ ಜೊತೆ ಮನೆಗೆ ಬಂದ ನಂತರ ಯೋಗಾಸನ ಪ್ರಾಣಾಯಾಮಗಳು ಪ್ರಾರಂಬಿಸುವ ಮೊದಲು ಹಣ್ಣು ತಿನ್ನುತ್ತೇನೆ ಈಗ ನಮ್ಮದೇ ಪ್ಯಾಷನ್ ಫ್ರೂಟ್ ಸಿಗುತ್ತಿರುವುದರಿಂದ ಪ್ರತಿ ದಿನ ಒಂದು  ಪ್ಯಾಷನ್ ಪ್ರೂಟ್ ಅಡ್ಡ ತುಂಡರಿಸಿ ಚಮಚದಿಂದ ಹಣ್ಣಿನ ತಿರಳು ತಿನ್ನುತ್ತೇನೆ.
   ರುಚಿ ಸುವಾಸನೆಯ ಪ್ಯಾಷನ್ ಪ್ರೂಟ್ ಹಾಗೇಯೇ ತಿನ್ನುವ ಅಭ್ಯಾಸ ನನಗೆ ಹೆಚ್ಚಿನ ಶಕ್ತಿ ನೀಡುತ್ತಿದೆ, ಮನೆ ಮನೆಗಳಲ್ಲಿ ಈ ಪ್ಯಾಷನ್ ಫ್ರೂಟ್ ಬಳ್ಳಿ ಹಬ್ಬಲಿ ಎಂದು ಹಾರೈಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...