Skip to main content

Blog number 1890. ಕುವೆಂಪು ಅವರ ಕುಪ್ಪಳ್ಳಿಯ ಕವಿಶೈಲದಲ್ಲಿ ಕವಿ ಕುವೆಂಪು ಸ್ಮಾರಕದ ಮಾರ್ಗದರ್ಶಿ ಆಗಿ ಸಾರ್ಥಕ ಸೇವೆ ಸಲ್ಲಿಸಿದ ಉಂಟೂರು ಮಾನಪ್ಪ ಗೌಡರು ನನಗೆ ಸದಾ ನೆನಪಾಗುತ್ತಲೇ ಇರುತ್ತಾರೆ.

https://youtu.be/kRXXOCiP8wU

#ಕವಿಶೈಲದಲ್ಲಿ_ಮಾನಪ್ಪಗೌಡರಂತ_ಗೈಡ್

#ಇನ್ನೊಬ್ಬರು_ಈವರೆಗೆ_ಸಿಕ್ಕಿಲ್ಲ

#ಕುವೆಂಪು_ಅವರ_113ನೇ_ಹುಟ್ಟು_ಹಬ್ಬದಂದು_ನಮಗೆ_ಮಾರ್ಗ_ದರ್ಶಕರಾಗಿದ್ದರು

#ಅವತ್ತಿನ_ವಿಡಿಯೋ_ಇಲ್ಲಿದೆ

#ಉಂಟೂರು_ಮಾನಪ್ಪ_ಗೌಡರು_ಈಗಿಲ್ಲ

#ಆದರೂ_ಅವರ_ಮರೆಯಲುಂಟೆ.

#ಕುವೆಂಪು_119ನೇ_ಜನ್ಮದಿನದಂದು_ಅವರ_ನೆನಪು


   ದಿನಾಂಕ 29- ಡಿಸೆಂಬರ್ -2017 ರಂದು ಕುವೆಂಪು ಅವರ 113ನೇ ಜನ್ಮ ದಿನದಂದು ನಾನು ಕವಿಶೈಲಕ್ಕೆ ಹೋದಾಗ ಅಲ್ಲಿನ ನಿವ೯ಹಣೆ ನೋಡಿ ಸಂತೋಷ ಆಯಿತು, ಕವಿ ಸಮಾದಿ ಹತ್ತಿರ ಗೈಡ್ ಒಬ್ಬರು ಸಿಕ್ಕಿದ್ದರು ಅವರ ಬಾಯಿ ತುಂಬಾ ಮಲೆನಾಡಿನ ರಸಗವಳ ತುಂಬಿತ್ತು.
    ಇಲ್ಲಿನ ವಿವರ ನೀಡುತ್ತೀರಾ ಅಂದೆ... ಖಂಡಿತಾ ಅಂದ ಅವರು ಕುವೆಂಪುರವರ ಹುಟ್ಟು ಸಾವಿನ ಮದ್ಯದ ಘಟನೆಗಳನ್ನು ಕುವೆಂಪು ಅವರ ರಚನೆಯ ಕವನಗಳ ಸಾಲು ಸಾಲುಗಳನ್ನು ಸಂದರ್ಭಕ್ಕೆ ತಕ್ಕಂತೆ ಜೋಡಿಸುತ್ತಾ ಕುವೆಂಪು ಅವರ ಸಂಬಂದಿಗಳ ಹೆಸರು, ಮಕ್ಕಳು, ಮರಿ ಮಕ್ಕಳುಗಳ ವಿವರಗಳು ತೆರೆ ತೆರೆಯಾಗಿ ರಾಗವಾಗಿ ಗದ್ಯ - ಪದ್ಯದ ರೂಪವಾಗಿ ಹೇಳಿದರು, ಇದನ್ನು ಕೇಳಿ ನಮಗೆಲ್ಲ ಸಂತೋಷ ಆಯಿತು ಅಷ್ಟೇ ಅಲ್ಲ ಅವತ್ತು ಕವಿ ಶೈಲ ವೀಕ್ಷಿಸಲು ಬಂದ ಅನೇಕರಿಗೆ ರಸ ಕವಿಯ ರಸಗವಳ ಸವಿದಂತೆ ಆಗಿತ್ತು ಗೈಡ್ ಮಾನಪ್ಪ ಗೌಡರ ಕವಿಶೈಲದ ಮಾರ್ಗದರ್ಶನ,ಇವರ ನೆನಪಿನ ಶಕ್ತಿ ನೋಡಿ ನಮಗೆಲ್ಲ ಆಶ್ಚಯ೯ವಾಯಿತು.
  ಕುವೆಂಪು ಅವರ ಕವನದಲ್ಲಿನ ಸಾಲುಗಳು.. ಬೆಳಕು... ನೆರಳು ಅವರ ಬಾಯಲ್ಲಿ ರಸವತ್ತಾಗಿ ಹರಿದು ಬರುವಾಗ ಕವಿಶೈಲಲ್ಲಿ ಸೂರ್ಯಾಸ್ತದ ಸಮಯ ಆಗಿತ್ತು ನನ್ನ ವಿಡಿಯೋದಲ್ಲಿ ಕವಿ ಶೈಲದಲ್ಲಿನ ಮಾನಪ್ಪ ಗೌಡರ, ಕುವೆಂಪು ಸಮಾದಿಗಳ ಮೇಲೆ  ಕಾಕತಾಳಿಯವಾಗಿ ಸೂಯ೯ನ ಬೆಳಕಿನ ನೆರಳಿನ ಸಾಲುಗಳೂ ಗಮನಿಸಿ.
  ಇವರಿಗೆ ಕವಿಶೈಲ ಟ್ರಸ್ಟ್ ಮಾಸಿಕ ವೇತನ 10 ಸಾವಿರ ನೀಡುತ್ತದೆಯಂತೆ,ವಷ೯ದಿಂದ ವಷ೯ಕ್ಕೆ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆಯ೦ತೆ, ಈಗ ವಾಷಿ೯ಕ ಒಂದು ಲಕ್ಷದ ಅರವತ್ತು ಸಾವಿರ ಜನ ಭೇಟಿ ನೀಡುತ್ತಿದ್ದಾರಂತೆ ಅಂತೆಲ್ಲ ಅವತ್ತು (2017) ತಿಳಿಸಿದರು.
  ಮಳೆಗಾಲದಲ್ಲಿ ಬರುವವರು ಕಡಿಮೆ ಇರಬೇಕು ಅಂದೆ... ಅದಕ್ಕೆ ಅವರು ಹೇಳಿದ್ದು ಮಳೆಗಾಲದಲ್ಲಿಯೇ ಬೆಂಗಳೂರಿನವರು ಅತಿ ಹೆಚ್ಚು ಬರುತ್ತಾರೆ ಅಂದರು.
 ಗೈಡ್ ಮಾನಪ್ಪ ಗೌಡರು ನನಗೆ ತುಂಬಾ ಇಷ್ಟವಾದರು ಅವರು ಕವಿಶೈಲದ ಮಾರ್ಗದರ್ಶಿಯಾಗಿ ಅತ್ಯುತ್ತಮ ಸೇವೆ ಸಲ್ಲಿಸಿರುವುದು ನೋಡಿ ಸಂತೋಷದಿಂದ ಬರುವಾಗ ಅವರಿಗಿ ಭಕ್ಷೀಸು ನೀಡಲೇ ಬೇಕೆನ್ನಿಸಿ ಹಣ ಕೊಡಲು ಹೋದಾಗ ಅವರು ನಿರಾಕರಿಸಿದರು.
ಇವರ ಹೆಸರು ಉಂಟೂರು ಮಾನಪ್ಪ ಗೌಡರು ಇವರು ಕವಿಶೈಲದ ಸಮೀಪದ ಹಳ್ಳಿಯವರು ಇವರು ಪಡೆಯುವ ವೇತನಕ್ಕಿಂತ ಕೆಲವು ಪಟ್ಟು ಹೆಚ್ಚು ಕೆಲಸ ಮಾಡುತ್ತಾರೆ.
  23 ಮೇ 2021 ರಂದು ಉಂಟೂರು ಮಾನಪ್ಪ ಗೌಡರು ಇಹಲೋಕ ತ್ಯಜಿಸಿದ್ದಾರೆ ಆದರೂ ಕುವೆಂಪು -ಕವಿಶೈಲ ನೆನಪಾದಾಗೆಲ್ಲ ಅಲ್ಲಿಗೆ ಹೋದಾಗೆಲ್ಲ ಉಂಟೂರು ಮಾನಪ್ಪ ಗೌಡರ ನೆನಪಾಗದೇ ಇರುವುದಿಲ್ಲ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...