Skip to main content

Blog number 1864. ಸಜ್ಜನ ಸಂಪನ್ನ ಸಾಹುಕಾರ್ ಅಬ್ದುಲ್ ಯಾಹ್ಯಾ ಸಾಹೇಬರ ನೆನಪುಗಳು.

#ನಮ್ಮ_ಊರಿನ_ಸಜ್ಜನ_ಉಪಕಾರಿ_ಸಾಹುಕಾರರಾದ_ಯಾಹ್ಯಾ_ಸಾಹೇಬ್.

#ಅರವತ್ತರ_ದಶಕದಲ್ಲಿ_ಇಡೀ_ಆನಂದಪುರಂ_ಹೋಬಳಿಗೆ_ದೊಡ್ಡ_ವರ್ತಕರು

#ಆ_ಕಾಲದ_ಕೌಬಾಯ್_ಫ್ಯಾಷನ್_ಇವರದ್ದು

#ಆ_ಕಾಲದ_ಹಿಂದಿ_ನಟ_ರಾಜೇಶ್_ಖನ್ನಾ_ರೀತಿ

#ಕುದುರೆ_ಸವಾರಿ_ಶಿಕಾರಿ_ಜೀಪ್_ಬೈಕ್_ಸವಾರಿ_ಕೃಷಿ_ವ್ಯಾಪಾರ_ಇವರದ್ದು

#ರೈಪಲ್_ತೋಟಾ_ಬಂದೂಕು_ರಿವಾಲ್ವಾರ್_ಸಂಗ್ರಹಣೆಯ_ಶೋಕಿ_ಅವರದ್ದು

#ಇವರ_ಅಂಗಡಿಯ_ಕಡು_ನೀಲಿ_ಬಣ್ಣದ_ಸಾಲದ_ಪುಸ್ತಕ_ಸಿಕ್ಕರೆ_ಈಕಾಲದ_ಬ್ಯಾಂಕ್_ಒಡಿ_ಸಿಕ್ಕಿದಂತೆ

#ಸಾಗರ_ಶಿವಮೊಗ್ಗ_ತಾಲ್ಲೂಕು_ಅಂಚಿನ_ಕುಣೇಹೊಸೂರು_ಸಮೀಪದಲ್ಲಿ_ನೂರು_ಎಕರೆ_ಅಡಿಕೆ_ತೋಟ

#ಯಡೇಹಳ್ಳಿಯ_ಆರ್_ಆರ್_ರೈಸ್_ಮಿಲ್_ಇವರದ್ದೆ.


1970 ರಲ್ಲಿ ಅವರಿಗೆ 50 ವಷ೯ ಇರಬಹುದು ನಮಗೆಲ್ಲ 5 ವಷ೯ ಅವರ ದಿನಸಿ ಅಂಗಡಿ ಇಡೀ ಊರಿಗೆ ದೊಡ್ಡದು, ಆ ಕಾಲದಲ್ಲಿ ಹುಬ್ಬಳ್ಳಿಯಿಂದ ಇವರ ಸ್ವಂತ ಲಾರಿಗಳಲ್ಲಿ ದಿನಸಿ ತರಿಸುತ್ತಿದ್ದರು.
   ಪೊಟ್ಟಣ ಕಟ್ಟಲು ಹತ್ತಾರು ಸಹಾಯಕರು. ದಿನಸಿ ಪಟ್ಟಿ ಬರೆಯಲು ನಾಕಾರು ರೈಟರು, ಹಣ ಪಡೆಯಲು ಮತ್ತಿಬ್ಬರು ಹೀಗೆ ದೊಡ್ಡ ಪ್ರಮಾಣದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ ಮಾಲಿಕರು ಮಿರ, ಮಿರ ಮಿಂಚುವ ಜೀಪಿನಲ್ಲಿ ಬರುತ್ತಿದ್ದರು, ನೈಲಾನ್ ಬಟ್ಟಿಯ ಬಣ್ಣದ ಶಟ್೯ ಆ ಕಾಲದ ರಾಜೇಶ್ ಖನ್ನರ ಸ್ಟೈಲ್ ನ ಟೈಟ್ ಪ್ಯಾಂಟ್, ಚೂಪು ಬೂಟು, ಸೊ೦ಟದಲ್ಲಿ ರಿವಾಲ್ವರ್, ಗಮ ಗಮ ಎನ್ನಿಸುವ ಪರಿಮಳ ಸಿಂಪಡಿಸಿಕೊಂಡು ಟಕ್ ಟಕ್ ಎನ್ನುವ ಚೂಪು ತುದಿಯ ಬೂಟಿನ ಸದ್ದಿನೊಂದಿಗೆ ಬಂದು ತಿರುಗುವ ಕುಚಿ೯ಯಲ್ಲಿ ಕುಳಿತು ಪಕ್ಕದಲ್ಲಿನ ದೊಡ್ಡ ಟ್ರಿಜರಿಯ ಬಾಗಿಲು ತೆಗೆದರೆ ಅದರಲ್ಲಿ ಕಂತೆ ಕಂತೆ ನೋಟುಗಳು.
      ಅವರಿಗೆ ಶಿವಮೊಗ್ಗ ಸಾಗರ ತಾಲೂಕಿನ ಗಡಿಯಾದ ಕುಣೇಹೊಸೂರು ಸಮೀಪದ ದಟ್ಟ ಕಾಡಿನ ಮಧ್ಯದ ಬೆಟ್ಟಗಳ ಪ್ರದೇಶವಾದ ಉದನೂರು ಎಂಬಲ್ಲಿ ನೂರಾರು ಎಕರೆ ಜಮೀನು, ಅಲ್ಲಿ ಕಾಡು ಪ್ರಾಣಿ ಶಿಕಾರಿ ಮಾಡುವ ಹವ್ಯಾಸ ಅದಕ್ಕಾಗಿ ತರಹೇವಾರಿ ಬಂದೂಕುಗಳು, ತಿರುಗಾಡಲು ಅತ್ಯುತ್ತಮ ತಳಿಯ ಕುದುರೆ ಮತ್ತು ಕುದುರೆ ಗಾಡಿ, ಆ ಕಾಲದ ಕೆಂಪು ಬುಲೆಟ್ ಬೈಕ್, ಮಿಲ್ಟ್ರಿ ಜೀಪ್, ಅತ್ಯುತ್ತಮ ದರ್ಜೆಯ ಉಡುಪು, ಬೂಟು, ಕೈ ಗಡಿಯಾರ, ಪರಿಮಳ ದ್ರವ್ಯಗಳು ಅವರನ್ನು ಆ ಕಾಲದ ಯಂಗ್ ಅಂಡ್ ಎನಜ೯ಟಿಕ್ ಹೀರೋ ಮಾಡಿತ್ತು, ಹೀಗೆ ಯಾಹ್ಯಾ ಸಾಹೇಬರದ್ದು ರಾಜಾ ಠೀವಿ.
  ಯಾರ ಜೊತೆಯೂ ಜಗಳವಿಲ್ಲ, ಎಲ್ಲರ ಜೊತೆ ಬೆರೆಯುತ್ತಿರಲಿಲ್ಲ ಅವರ ಸಿಬ್ಬಂದಿಗಳ ಮೂಲಕವೆ ಇವರನ್ನು ಸಂಪರ್ಕಿಸ ಬೇಕಾಗಿತ್ತು.
    ಇವರ ಅಂಗಡಿಯಲ್ಲಿ ನೀಲಿ ಬಣ್ಣದ ಸಾಲದ ಪುಸ್ತಕ ಸಿಕ್ಕಿದವರ ಮನೆಯಲ್ಲಿ ಆ ಕಾಲದಲ್ಲಿ ಹಸಿವು ಇರುತ್ತಿರಲಿಲ್ಲ, ಆದರೆ ಅದು ಸುಲಭವಾಗಿ ಸಿಗುವುದಲ್ಲ ಈಗೆಲ್ಲ ಬ್ಯಾಂಕಿನಲ್ಲಿ OD ಸಿಕ್ಕ೦ತೆ, ಆಗ ಬಡತನ ಹೆಚ್ಚು ಒಂದು ಹೊತ್ತು ಇದ್ದರೆ ಇನ್ನೊಂದು ಹೊತ್ತು ಇಲ್ಲ. 
   ನಮ್ಮ ತಂದೆ ಇವರ ಅಂಗಡೀಯಲ್ಲಿ ಸಾಲದ ಖಾತೆ ಹೊಂದಿದ್ದರು ಹಾಗಾಗಿ ನಮ್ಮ ಮನೇಲೂ ಒಂದು ನೀಲಿ ಬಣ್ಣದ ಸಾಲದ ಪುಸ್ತಕ ಇತ್ತು ಅದನ್ನ ತೆಗೆದುಕೊಂಡು ದಿನಸಿ ತರಲು ನಮ್ಮ ಅಣ್ಣನೊಂದಿಗೆ ಇವರ ಅಂಗಡಿಗೆ ಹೋಗುತ್ತಿದ್ದೆ ಆಗೆಲ್ಲ ಯಾಹ್ಯಾ ಸಾಹೇಬರನ್ನೆ ಅಚ್ಚರಿಯಿ೦ದ ನೋಡುವುದೇ ನಮಗೆಲ್ಲ ಸಂಭ್ರಮ ಆಗಿತ್ತು.
   ಅಬ್ಬುಲ್ ಯಾಹ್ಯಾ ಸಾಹೇಬರು ಇಹ ಲೋಕ ತ್ಯಜಿಸಿ ಏಳು ವರ್ಷಗಳಾಯಿತು (13 - ಡಿಸೆಂಬರ್ -2016) ಇವರ ಮೊದಲ ಪುತ್ರ ಅಬೀಬುಲ್ಲಾ ಸಾಹೇಬರೂ ಈಗಿಲ್ಲ, ಎರಡನೆ ಪುತ್ರ ರಹಮತುಲ್ಲಾ ಮತ್ತು ಕೊನೆಯ ಪುತ್ರರು ರೈಸ್ ಮಿಲ್ ಮತ್ತು ತೋಟ ನೋಡಿಕೊಳ್ಳುತ್ತಿದ್ದಾರೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ