Skip to main content

Blog number 1858. ಒಂದು ಕಾಲದ ಶರಾವತಿ ನದಿ ದಂಡೆಯಿಂದ ವರದಾ ನದಿ ದಂಡೆಗೆ ಸಂಚರಿಸುತ್ತಿದ್ದ ವರದಾ ಬಸ್ಸಿನ ಮಾಲಿಕರಾದ ನಾಗಪ್ಪಣ್ಣರ ಪುತ್ರ ಸಾಗರದ ಪ್ರಖ್ಯಾತ ಉಡುಪಿ ಮೆಡಿಕಲ್ಸ್ ಚಂದ್ರಶೇಖರ್ ರ ನೂತನ ಮನೆ ಅಪ್ಪಯ್ಯ ಗೃಹ ಪ್ರವೇಶ.

#ಶ್ರೀ_ವರದಾ_ಮೋಟಾರ್_ಸರ್ವಿಸ್

#ಶರಾವತಿ_ನದಿಗೂ_ವರದಾ_ನದಿಗೂ_ಸಂಪರ್ಕಿಸಿದ_ಮೊದಲ_ಖಾಸಾಗಿ_ಬಸ್

#ಮಾಲಿಕರಾದ_ಮುತ್ತಣ್ಣ_ನಾಗಪ್ಪಣ್ಣ

#ನಾಗಪ್ಪಣ್ಣರ_ಪುತ್ರರೇ_ಸಾಗರದ_ಪ್ರಖ್ಯಾತ_ಉಡುಪಿ_ಮೆಡಿಕಲ್ಸ್_ಚಂದ್ರಶೇಖರ್

#ಇವರ_ತಾಯಿಯ_ಸಹೋದರ_ತುಪ್ಪೂರಿನ_ಅಂತಣ್ಣ_ನಾಯಕರು

#ಚಂದ್ರು_ನೂತನ_ಮನೆಗೆ_ಅಪ್ಪಯ್ಯ_ಎಂಬ_ನಾಮಾಂಕಿತ_ಗೃಹ_ಪ್ರವೇಶ

#ಈ_ಮೂಲಕ_ವರದಾ_ಬಸ್ಸು_ನಾಗಪ್ಪಣ್ಣ_ಮುತ್ತಣ್ಣರ_ನೆನಪುಗಳು.

   ಮೊನ್ನೆ ತಡವಾಗಿ ಆಫೀಸಿಗೆ ತಲುಪಿದಾಗ ಸಾಗರದ ಪ್ರಖ್ಯಾತ #ಉಡುಪಿ_ಮೆಡಿಕಲ್_ಸ್ಟೋರ್ಸ್ ಮಾಲಿಕ ಚಂದ್ರಶೇಖರ್ ನೂತನವಾಗಿ ನಿರ್ಮಿಸಿರುವ ಅವರ ಮನೆ ಗೃಹ ಪ್ರವೇಶದ ಆಹ್ವಾನ ಪತ್ರಿಕೆ ತಲುಪಿತು.
   ಚಂದ್ರು ತಮ್ಮ ನೂತನ ಮನೆಗೆ #ಅಪ್ಪಯ್ಯ ಅಂತ ನಾಮಕರಣ ಮಾಡಿದ್ದಾರೆ ಕಳೆದ ತಿಂಗಳು ಶರಾವತಿ ಮುಳುಗಡೆ ಪ್ರದೇಶದ ಕರೂರಿನ ಜಿ.ಟಿ. ಸತ್ಯನಾರಾಯಣ್ ಅವರ ತಂದೆ ಪೇಟೆ ತಿಮ್ಮಣ್ಣರ ಆತ್ಮ ಚರಿತ್ರೆ ಪುಸ್ತಕ ಬಿಡುಗಡೆ ಮಾಡಿದ್ದರು ಆ ಪುಸ್ತಕದ ಶಿರೋನಾಮೆ ಕೂಡ #ಅಪ್ಪಯ್ಯ ಹಾಗಾಗಿ ಇಲ್ಲಿ ಚಂದ್ರು ಅಪ್ಪಯ್ಯ ವರದಾ ಬಸ್ಸಿನ ಮಾಲಿಕರಾದ ನಾಗಪ್ಪಣ್ಣರ ನೆನಪುಗಳನ್ನು ದಾಖಲಿಸಿದ್ದೇನೆ.
   70 ರ ದಶಕದಲ್ಲಿ ಶರಾವತಿ ನದಿಗೆ ಆಣೆಕಟ್ಟು ನಿರ್ಮಾಣದಿಂದ ಕರೂರು ಬಾರಂಗಿ ಹೋಬಳಿಗೆ ರಸ್ತೆ ಸಂಪರ್ಕ ಕಡಿದು ಹೋಗಿತ್ತು ಆಗಿನ ಏಕ ಮಾತ್ರ ಸಣ್ಣ ಬಾರ್ಜ್ ನಿಂದ ಜನ ಸಂಚರಿಸುತ್ತಿದ್ದ ಕಾಲ, ಆಗ ಸಾಗರದಿಂದ ಮೊದಲ ಖಾಸಾಗಿ ಬಸ್ ಸಂಪರ್ಕ ವ್ಯವಸ್ತೆಯನ್ನು ಮಾಡಿದವರು ಮುತ್ತಣ್ಣ ಮತ್ತು ನಾಗಪ್ಪಣ್ಣ.
   ಆ ಕಾಲದಲ್ಲಿ ಅಂದರೆ 50 ವರ್ಷದ ಹಿಂದೆ ಅವರ ಬಸ್ಸಿಗೆ ಅವರು ಇಟ್ಟಿದ್ದ ಹೆಸರು #ವರದಾ_ಮೋಟಾರ್_ಸರ್ವಿಸ್ ಬಹುಶಃ ವರದಾ ನದಿ ದಂಡೆಯ ಸಾಗರಕ್ಕೂ ಮತ್ತು ಶರಾವತಿ ನದಿ ದಂಡೆಗೂ ಸಂಪರ್ಕ ಮಾಡುವ ಬಸ್ಸಿಗೆ ವರದಾ ನದಿಯ ಹೆಸರು ಸೂಕ್ತ ಅಂತ ಮುತ್ತಣ್ಣ ಮತ್ತು ನಾಗಪ್ಪಣ್ಣ ನಿರ್ದರಿಸಿರಬೇಕು.
  ಈ ಸಂಸ್ಥೆಯ ಎಲ್ಲಾ ಬಸ್ಸುಗಳ ಹಿಂಬಾಗದಲ್ಲಿ ಇರುತ್ತಿದ್ದ ಟ್ಯಾಗ್ ಲೈನ್ "ಜೀವನ ಪರ್ಯಂತ ಸಾದನೆ" ಇದನ್ನು ನೆನಪಿಸಿದರು ಸಾಗರದ ಸಾಹಿತಿಗಳಾದ ಜಿ.ಎಸ್ ಭಟ್ಟರ ಪುತ್ರ ಪತ್ರಕರ್ತ ಯೋಗಿಶ್
   ನಾನು ಆರೇಳು ವರ್ಷದವನಿರುವಾಗ ನಮ್ಮ ತಂದೆ ಜೊತೆ ಸಾಗರದ ನೆಹರೂ ನಗರದ ಇವರ ಮೂಲ ಮನೆಗೆ ಹೋಗಿದ್ದು ನೆನಪಿದೆ ಆಗಲೇ ವಯೋವೃದ್ಧರಾಗಿದ್ದ ಮುತ್ತಣ್ಣರನ್ನು ನೋಡಿದ್ದೆ.
  ಮುತ್ತಣ್ಣರ ನಂತರ ನಾಗಪ್ಪಣ್ಣ ವರದಾ ಬಸ್ಸಿನ ಸಂಸ್ಥೆ ಅಭಿವೃದ್ಧಿ ಮಾಡಿದರು, ನಾಗಪ್ಪಣ್ಣರ ಪತ್ನಿ ತಂದೆ ರಾಮನಾಯಕರು ಆ ಕಾಲದಲ್ಲಿ  ನಮ್ಮ ಭಾಗದ ದೊಡ್ಡ ಜಮೀನ್ದಾರರು ಶೇರೇಗಾರರೂ ಆಗಿದ್ದರು, ಶಿವಮೊಗ್ಗ ಮಾರ್ಗದ ತುಪ್ಪೂರು ಸಮೀಪದ ಕೋಣೆಹೊಸೂರಿನಲ್ಲಿ ಅವರ ದೊಡ್ಡ ಹಿಡುವಳಿ ಜಮೀನು ಇತ್ತು,ಅವರ ಪುತ್ರ ಈರಣ್ಣ ನಾಯಕರು ದ.ಕ.ಜಿಲ್ಲೆಯಲ್ಲಿ ಹೆಸರುವಾಸಿ ಆದವರು ಮೀನುಗಾರಿಕೆ ಯಾಂತ್ರಿಕ ದೋಣಿ ಹೊಂದಿದವರು, ಇವರ ತಮ್ಮ ಅಂತಣ್ಣ ನಾಯಕರು (ಚಂದ್ರು ತಾಯಿ ಅಣ್ಣಂದಿರು) ಈ ಜಮೀನು ಮುಂಬೈ ಸುಭಾಷ್ ಶೆಟ್ಟರಿಗೆ ಮಾರಾಟ ಮಾಡಿ ಉಡುಪಿ ಜಿಲ್ಲೆಯ ಕೋಟ ಸಮೀಪದ ತೆಕ್ಕಟ್ಟೆಯ ಅವರ ಮೂಲ ಮನೆಗೆ ಹೋದರು ನಂತರ ಈಗ ಈ ಜಮೀನು ಸಾಗರದ ರಾದಾ ಕೃಷ್ಣ ಅಡಿಕೆ ಮಂಡಿಯವರು ಖರೀದಿಸಿದ್ದಾರೆ.
  ಬಾಲ್ಯದಲ್ಲಿ ಚಂದ್ರು ನಾನು ಈ ಜಮೀನಿನಲ್ಲಿ ಆಟ ಆಡುತ್ತಿದ್ದ ನೆನಪುಗಳು ಹಸಿರಾಗಿದೆ, ಚಂದ್ರು ಆಗ ತುಂಬಾ ಚುರುಕು ಮತ್ತು ತುಂಟಾಟದ ಗೆಳೆಯ.
  ನಾಗಪ್ಪಣ್ಣರ ಜೊತೆ ಅವರ ಪುತ್ರ (ಚಂದ್ರು ಅಣ್ಣ) ಮಂಜುನಾಥ್ ವರದಾ ಬಸ್ಸಿನ ಸಂಸ್ಥೆ ತುಂಬಾ ವರ್ಷ ನಡೆಸಿದರು.
  ಈಗ ವರದಾ ಬಸ್ಸು ಸಂಸ್ಥೆ ಈಗಿಲ್ಲ ಬಹುಶಃ ಈ ಬಸ್ಸು ಮಾಗ೯ದ ಪರ್ಮಿಟ್ ಬೇರೆ ಬಸ್ ಸಂಸ್ಥೆ ನಡೆಸುತ್ತಿರಬಹುದು.
  ಚಂದ್ರು ತುಂಬಾ ಅದ್ದೂರಿಯಾಗಿ ಕಟ್ಟಿಸಿರುವ ಮನೆಗೆ ತಮ್ಮ ತಂದೆ ವರದಾ ಬಸ್ಸು ಮಾಲಿಕರಾಗಿದ್ದ ನಾಗಪ್ಪಣ್ಣರ ಸ್ಮರಣಾರ್ಥ #ಅಪ್ಪಯ್ಯ ಎಂದು ನಾಮಕರಣ ಮಾಡಿದ್ದು ತುಂಬಾ ಖುಷಿ ಆಯಿತು ಅವರ ಕುಟುಂಬದಲ್ಲಿ ಆ ಕಾಲದಲ್ಲಿ ಸಾಹಸಿ ಬಸ್ ಉದ್ಯಮ ನಡೆಸಿದ ಮುತ್ತಣ್ಣ ಮತ್ತು ನಾಗಪ್ಪಣ್ಣರ ಕೃಪೆ ಸದಾ ಅವರ ಮಕ್ಕಳ ಮೇಲಿರಲಿ ಎಂದು ಹಾರೈಸುತ್ತಾ ನೂತನ ಗೃಹ ಚಂದ್ರು ದಂಪತಿಗಳಿಗೆ ಆಯುರಾರೋಗ್ಯ ಆಯಸ್ಸು ಐಶ್ವರ್ಯ ದಯಪಾಲಿಸಲಿ ಎಂದು ನಮ್ಮ ಊರ ದೇವರಾದ ಶ್ರೀವರ ಸಿದ್ದಿ ವಿನಾಯಕ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ.
  ಈ ಕಾರ್ಯಕ್ರಮದಲ್ಲಿ ನನ್ನ ಸಹೋದರ ಮತ್ತು ನನ್ನ ಬಾವಂದಿರು ಭಾಗವಹಿಸಿದ್ದರು.
  ನನ್ನ ಲೇಖನಕ್ಕೆ ಪ್ರತಿಕ್ರಿಯಿಸಿ ಚಂದ್ರು ವಾಟ್ಸಪ್ ಸಂದೇಶ ಕಳಿಸಿದ್ದಾರೆ 

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...