Skip to main content

Blog number 1858. ಒಂದು ಕಾಲದ ಶರಾವತಿ ನದಿ ದಂಡೆಯಿಂದ ವರದಾ ನದಿ ದಂಡೆಗೆ ಸಂಚರಿಸುತ್ತಿದ್ದ ವರದಾ ಬಸ್ಸಿನ ಮಾಲಿಕರಾದ ನಾಗಪ್ಪಣ್ಣರ ಪುತ್ರ ಸಾಗರದ ಪ್ರಖ್ಯಾತ ಉಡುಪಿ ಮೆಡಿಕಲ್ಸ್ ಚಂದ್ರಶೇಖರ್ ರ ನೂತನ ಮನೆ ಅಪ್ಪಯ್ಯ ಗೃಹ ಪ್ರವೇಶ.

#ಶ್ರೀ_ವರದಾ_ಮೋಟಾರ್_ಸರ್ವಿಸ್

#ಶರಾವತಿ_ನದಿಗೂ_ವರದಾ_ನದಿಗೂ_ಸಂಪರ್ಕಿಸಿದ_ಮೊದಲ_ಖಾಸಾಗಿ_ಬಸ್

#ಮಾಲಿಕರಾದ_ಮುತ್ತಣ್ಣ_ನಾಗಪ್ಪಣ್ಣ

#ನಾಗಪ್ಪಣ್ಣರ_ಪುತ್ರರೇ_ಸಾಗರದ_ಪ್ರಖ್ಯಾತ_ಉಡುಪಿ_ಮೆಡಿಕಲ್ಸ್_ಚಂದ್ರಶೇಖರ್

#ಇವರ_ತಾಯಿಯ_ಸಹೋದರ_ತುಪ್ಪೂರಿನ_ಅಂತಣ್ಣ_ನಾಯಕರು

#ಚಂದ್ರು_ನೂತನ_ಮನೆಗೆ_ಅಪ್ಪಯ್ಯ_ಎಂಬ_ನಾಮಾಂಕಿತ_ಗೃಹ_ಪ್ರವೇಶ

#ಈ_ಮೂಲಕ_ವರದಾ_ಬಸ್ಸು_ನಾಗಪ್ಪಣ್ಣ_ಮುತ್ತಣ್ಣರ_ನೆನಪುಗಳು.

   ಮೊನ್ನೆ ತಡವಾಗಿ ಆಫೀಸಿಗೆ ತಲುಪಿದಾಗ ಸಾಗರದ ಪ್ರಖ್ಯಾತ #ಉಡುಪಿ_ಮೆಡಿಕಲ್_ಸ್ಟೋರ್ಸ್ ಮಾಲಿಕ ಚಂದ್ರಶೇಖರ್ ನೂತನವಾಗಿ ನಿರ್ಮಿಸಿರುವ ಅವರ ಮನೆ ಗೃಹ ಪ್ರವೇಶದ ಆಹ್ವಾನ ಪತ್ರಿಕೆ ತಲುಪಿತು.
   ಚಂದ್ರು ತಮ್ಮ ನೂತನ ಮನೆಗೆ #ಅಪ್ಪಯ್ಯ ಅಂತ ನಾಮಕರಣ ಮಾಡಿದ್ದಾರೆ ಕಳೆದ ತಿಂಗಳು ಶರಾವತಿ ಮುಳುಗಡೆ ಪ್ರದೇಶದ ಕರೂರಿನ ಜಿ.ಟಿ. ಸತ್ಯನಾರಾಯಣ್ ಅವರ ತಂದೆ ಪೇಟೆ ತಿಮ್ಮಣ್ಣರ ಆತ್ಮ ಚರಿತ್ರೆ ಪುಸ್ತಕ ಬಿಡುಗಡೆ ಮಾಡಿದ್ದರು ಆ ಪುಸ್ತಕದ ಶಿರೋನಾಮೆ ಕೂಡ #ಅಪ್ಪಯ್ಯ ಹಾಗಾಗಿ ಇಲ್ಲಿ ಚಂದ್ರು ಅಪ್ಪಯ್ಯ ವರದಾ ಬಸ್ಸಿನ ಮಾಲಿಕರಾದ ನಾಗಪ್ಪಣ್ಣರ ನೆನಪುಗಳನ್ನು ದಾಖಲಿಸಿದ್ದೇನೆ.
   70 ರ ದಶಕದಲ್ಲಿ ಶರಾವತಿ ನದಿಗೆ ಆಣೆಕಟ್ಟು ನಿರ್ಮಾಣದಿಂದ ಕರೂರು ಬಾರಂಗಿ ಹೋಬಳಿಗೆ ರಸ್ತೆ ಸಂಪರ್ಕ ಕಡಿದು ಹೋಗಿತ್ತು ಆಗಿನ ಏಕ ಮಾತ್ರ ಸಣ್ಣ ಬಾರ್ಜ್ ನಿಂದ ಜನ ಸಂಚರಿಸುತ್ತಿದ್ದ ಕಾಲ, ಆಗ ಸಾಗರದಿಂದ ಮೊದಲ ಖಾಸಾಗಿ ಬಸ್ ಸಂಪರ್ಕ ವ್ಯವಸ್ತೆಯನ್ನು ಮಾಡಿದವರು ಮುತ್ತಣ್ಣ ಮತ್ತು ನಾಗಪ್ಪಣ್ಣ.
   ಆ ಕಾಲದಲ್ಲಿ ಅಂದರೆ 50 ವರ್ಷದ ಹಿಂದೆ ಅವರ ಬಸ್ಸಿಗೆ ಅವರು ಇಟ್ಟಿದ್ದ ಹೆಸರು #ವರದಾ_ಮೋಟಾರ್_ಸರ್ವಿಸ್ ಬಹುಶಃ ವರದಾ ನದಿ ದಂಡೆಯ ಸಾಗರಕ್ಕೂ ಮತ್ತು ಶರಾವತಿ ನದಿ ದಂಡೆಗೂ ಸಂಪರ್ಕ ಮಾಡುವ ಬಸ್ಸಿಗೆ ವರದಾ ನದಿಯ ಹೆಸರು ಸೂಕ್ತ ಅಂತ ಮುತ್ತಣ್ಣ ಮತ್ತು ನಾಗಪ್ಪಣ್ಣ ನಿರ್ದರಿಸಿರಬೇಕು.
  ಈ ಸಂಸ್ಥೆಯ ಎಲ್ಲಾ ಬಸ್ಸುಗಳ ಹಿಂಬಾಗದಲ್ಲಿ ಇರುತ್ತಿದ್ದ ಟ್ಯಾಗ್ ಲೈನ್ "ಜೀವನ ಪರ್ಯಂತ ಸಾದನೆ" ಇದನ್ನು ನೆನಪಿಸಿದರು ಸಾಗರದ ಸಾಹಿತಿಗಳಾದ ಜಿ.ಎಸ್ ಭಟ್ಟರ ಪುತ್ರ ಪತ್ರಕರ್ತ ಯೋಗಿಶ್
   ನಾನು ಆರೇಳು ವರ್ಷದವನಿರುವಾಗ ನಮ್ಮ ತಂದೆ ಜೊತೆ ಸಾಗರದ ನೆಹರೂ ನಗರದ ಇವರ ಮೂಲ ಮನೆಗೆ ಹೋಗಿದ್ದು ನೆನಪಿದೆ ಆಗಲೇ ವಯೋವೃದ್ಧರಾಗಿದ್ದ ಮುತ್ತಣ್ಣರನ್ನು ನೋಡಿದ್ದೆ.
  ಮುತ್ತಣ್ಣರ ನಂತರ ನಾಗಪ್ಪಣ್ಣ ವರದಾ ಬಸ್ಸಿನ ಸಂಸ್ಥೆ ಅಭಿವೃದ್ಧಿ ಮಾಡಿದರು, ನಾಗಪ್ಪಣ್ಣರ ಪತ್ನಿ ತಂದೆ ರಾಮನಾಯಕರು ಆ ಕಾಲದಲ್ಲಿ  ನಮ್ಮ ಭಾಗದ ದೊಡ್ಡ ಜಮೀನ್ದಾರರು ಶೇರೇಗಾರರೂ ಆಗಿದ್ದರು, ಶಿವಮೊಗ್ಗ ಮಾರ್ಗದ ತುಪ್ಪೂರು ಸಮೀಪದ ಕೋಣೆಹೊಸೂರಿನಲ್ಲಿ ಅವರ ದೊಡ್ಡ ಹಿಡುವಳಿ ಜಮೀನು ಇತ್ತು,ಅವರ ಪುತ್ರ ಈರಣ್ಣ ನಾಯಕರು ದ.ಕ.ಜಿಲ್ಲೆಯಲ್ಲಿ ಹೆಸರುವಾಸಿ ಆದವರು ಮೀನುಗಾರಿಕೆ ಯಾಂತ್ರಿಕ ದೋಣಿ ಹೊಂದಿದವರು, ಇವರ ತಮ್ಮ ಅಂತಣ್ಣ ನಾಯಕರು (ಚಂದ್ರು ತಾಯಿ ಅಣ್ಣಂದಿರು) ಈ ಜಮೀನು ಮುಂಬೈ ಸುಭಾಷ್ ಶೆಟ್ಟರಿಗೆ ಮಾರಾಟ ಮಾಡಿ ಉಡುಪಿ ಜಿಲ್ಲೆಯ ಕೋಟ ಸಮೀಪದ ತೆಕ್ಕಟ್ಟೆಯ ಅವರ ಮೂಲ ಮನೆಗೆ ಹೋದರು ನಂತರ ಈಗ ಈ ಜಮೀನು ಸಾಗರದ ರಾದಾ ಕೃಷ್ಣ ಅಡಿಕೆ ಮಂಡಿಯವರು ಖರೀದಿಸಿದ್ದಾರೆ.
  ಬಾಲ್ಯದಲ್ಲಿ ಚಂದ್ರು ನಾನು ಈ ಜಮೀನಿನಲ್ಲಿ ಆಟ ಆಡುತ್ತಿದ್ದ ನೆನಪುಗಳು ಹಸಿರಾಗಿದೆ, ಚಂದ್ರು ಆಗ ತುಂಬಾ ಚುರುಕು ಮತ್ತು ತುಂಟಾಟದ ಗೆಳೆಯ.
  ನಾಗಪ್ಪಣ್ಣರ ಜೊತೆ ಅವರ ಪುತ್ರ (ಚಂದ್ರು ಅಣ್ಣ) ಮಂಜುನಾಥ್ ವರದಾ ಬಸ್ಸಿನ ಸಂಸ್ಥೆ ತುಂಬಾ ವರ್ಷ ನಡೆಸಿದರು.
  ಈಗ ವರದಾ ಬಸ್ಸು ಸಂಸ್ಥೆ ಈಗಿಲ್ಲ ಬಹುಶಃ ಈ ಬಸ್ಸು ಮಾಗ೯ದ ಪರ್ಮಿಟ್ ಬೇರೆ ಬಸ್ ಸಂಸ್ಥೆ ನಡೆಸುತ್ತಿರಬಹುದು.
  ಚಂದ್ರು ತುಂಬಾ ಅದ್ದೂರಿಯಾಗಿ ಕಟ್ಟಿಸಿರುವ ಮನೆಗೆ ತಮ್ಮ ತಂದೆ ವರದಾ ಬಸ್ಸು ಮಾಲಿಕರಾಗಿದ್ದ ನಾಗಪ್ಪಣ್ಣರ ಸ್ಮರಣಾರ್ಥ #ಅಪ್ಪಯ್ಯ ಎಂದು ನಾಮಕರಣ ಮಾಡಿದ್ದು ತುಂಬಾ ಖುಷಿ ಆಯಿತು ಅವರ ಕುಟುಂಬದಲ್ಲಿ ಆ ಕಾಲದಲ್ಲಿ ಸಾಹಸಿ ಬಸ್ ಉದ್ಯಮ ನಡೆಸಿದ ಮುತ್ತಣ್ಣ ಮತ್ತು ನಾಗಪ್ಪಣ್ಣರ ಕೃಪೆ ಸದಾ ಅವರ ಮಕ್ಕಳ ಮೇಲಿರಲಿ ಎಂದು ಹಾರೈಸುತ್ತಾ ನೂತನ ಗೃಹ ಚಂದ್ರು ದಂಪತಿಗಳಿಗೆ ಆಯುರಾರೋಗ್ಯ ಆಯಸ್ಸು ಐಶ್ವರ್ಯ ದಯಪಾಲಿಸಲಿ ಎಂದು ನಮ್ಮ ಊರ ದೇವರಾದ ಶ್ರೀವರ ಸಿದ್ದಿ ವಿನಾಯಕ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ.
  ಈ ಕಾರ್ಯಕ್ರಮದಲ್ಲಿ ನನ್ನ ಸಹೋದರ ಮತ್ತು ನನ್ನ ಬಾವಂದಿರು ಭಾಗವಹಿಸಿದ್ದರು.
  ನನ್ನ ಲೇಖನಕ್ಕೆ ಪ್ರತಿಕ್ರಿಯಿಸಿ ಚಂದ್ರು ವಾಟ್ಸಪ್ ಸಂದೇಶ ಕಳಿಸಿದ್ದಾರೆ 

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ