Skip to main content

Blog number 3360. ಕಾಡಾನೆಗಳ ಎರಡನೇ ವರ್ಷದ ಸಂಚಾರ

https://www.facebook.com/share/p/18AzftsbvP/

*#ಕಾಡಾನೆಗಳು*

*ಹೊಸ ಆನೆ ಕಾರಿಡಾರ್ ನಿರ್ಮಾಣವಾಯಿತಾ?*

 *ಈ ವರ್ಷವೂ ಈ ಪ್ರದೇಶದ ಸುತ್ತಮುತ್ತ ಕಾಡಾನೆ ಬರುವ ಸಾಧ್ಯತೆ ಇದೆಯೇ?*

*ಕಳೆದ ವರ್ಷ ನಮ್ಮ ಆನಂದಪುರಂನ ಈ ಪ್ರದೇಶದಲ್ಲಿ ಕಾಡಾನೆಗಳು ಕಾಣಿಸಿಕೊಂಡಿದ್ದವು.*

*ಅರಸಾಳು -ಕೆಂಚನಾಲ- ಕೆರೆಹಿತ್ತಲು - ಗಿಳಾಲಗುಂಡಿ -  ಪತ್ರೆಹೊಂಡ- ಕೊಲ್ಲಿಬಚ್ಚಲು ಡ್ಯಾಮ್ - -ಉದನೂರು-ಕಣ್ಣೂರು- ಬೈರಾಪುರ-ಅಂಬ್ಲಿಗೋಳ ಡ್ಯಾಮ್*
*ಕಳೆದ ವರ್ಷ 62 ದಿನ ಕಾಡಾನೆ ಸಂಚರಿಸುತ್ತಿದ್ದ ಪ್ರದೇಶವಾಗಿತ್ತು.


      *ಇವತ್ತು ಚೋರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಕೆರೆ, ಶಾಂತಿಕೆರೆ ಭಾಗದಲ್ಲಿ ಮತ್ತು ಸೂಡೂರು ಗೇಟ್ ಬಳಿ ಮೂರು ಕಾಡಾನೆಗಳು ಸಂಚರಿಸುತ್ತಿರುವ ಸುದ್ದಿ ಇದೆ.*

    *ಆನೆ ಪ್ರವೇಶ ನಿರ್ಬಂಧಿಸಲು ಪಸಲು ರಕ್ಷಣೆ ಮಾಡಲು ಬೇಲಿಗಳಿಗೆ ವಿದ್ಯುತ್ ನೀಡುವ ತಪ್ಪು ಕೆಲಸ ಮಾತ್ರ ಈ ಭಾಗದಲ್ಲಿ ಯಾರೂ ರೈತರು ಮಾಡಬಾರದಾಗಿ ವಿನಂತಿ.*

      *ವನ್ಯಜೀವಿ ಸಂರಕ್ಷಣಾ ಕಾಯ್ದೆ ನಿಯಮಗಳು ದೊಡ್ಡ ಶಿಕ್ಷೆಗೆ ಕಾರಣವಾಗಲಿದೆ ಇದನ್ನು ಈ ಪ್ರದೇಶದ ವಾಸಿಗಳಿಗೆ ರೈತರಿಗೆ ಹೆಚ್ಚು ಶೇರ್ ಮಾಡಲು ವಿನಂತಿ.*

     *ಕಳೆದ ವರ್ಷ ಅಕ್ಟೋಬರ್ 15 ರಲ್ಲಿ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಕೆಂಚನಾಲದಲ್ಲಿ ಕಾಡಾನೆಗಳು ಕಾಣಿಸಿಕೊಂಡಿತ್ತು.*

      *ಕಳೆದ ವಷ೯ ಡಿಸೆಂಬರ್ 16ರಂದು ಅನಂದಪುರಂ ಸಮೀಪದ ಆಚಾಪುರ ಗ್ರಾಮ ಪಂಚಾಯಿತಿಯ ಗಿಳಾಲಗುಂಡಿ ಮತ್ತು ಪತ್ರೆಹೊಂಡ ಭಾಗದಲ್ಲಿ ಹೆಚ್ಚು ಸಂಚರಿಸಿತು.*

    *ಕಳೆದ ವಷ೯ ಡಿಸೆಂಬರ್ 22 ರಲ್ಲಿ ಈ ಕಾಡಾನೆಗಳು ಸಾಗರ ತಾಲೂಕಿನ ಆನಂದಪುರಂ ಸಮೀಪದ ಗಿಳಾಲಗುಂಡಿ,ಕೆರೆಹಿತ್ತಲು, ಕಣ್ಣೂರು, ಹಿರಿಯರಕ, ಬೈರಾಪುರ ಅಲ್ಲೆಲ್ಲ ಸಂಚರಿಸಿ ಶಿಕಾರಿಪುರ ತಾಲ್ಲೂಕಿನ ಅಂಚಿನ ಅಂಬ್ಲಿಗೋಳ ಡ್ಯಾಮಿನ  ಹಿನ್ನೀರಿನ ತನಕ ಸಾಗಿದ್ದವು.*

       *ಕಳೆದ ವರ್ಷಗಿಳಾಲಗುಂಡಿ ಸಮೀಪದ ಕೊಲ್ಲಿ ಬಚ್ಚಲು ಡ್ಯಾಮ್ ಹಿಂಭಾಗದಲ್ಲಿ ಕೆಲವು ದಿನ ತಂಗಿದ್ದವು.*

    *ನಮ್ಮ ಊರು ಆನಂದಪುರಂ ಗೆ ಅತಿ ಸಮೀಪದಲ್ಲಿ ಸುಮಾರು 62 ದಿನಗಳು ಈ ಕಾಡಿನ ಆನೆಗಳು ವಾಪಸು ಹೋಗಲು ಸುರಕ್ಷಿತ ಮಾರ್ಗವಿಲ್ಲದೆ ಇಲ್ಲೇ ಉಳಿದಿದ್ದವು.*

    *ವಾಪಾಸು ಹೋಗುವ ಮಾರ್ಗದಲ್ಲಿ ರೈತರು ತಮ್ಮ ಸುಗ್ಗಿ ಕಾಲದ ಫಸಲು ರಕ್ಷಣೆಗಾಗಿ ಪಟಾಕಿಗಳನ್ನು ಸಿಡಿಸಿದ್ದರಿಂದ ಇವುಗಳಿಗೆ ವಾಪಸಾತಿಗೆ ತಡೆ ಉಂಟಾಗಿತ್ತು.*

   *ನಂತರ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ಪ್ರಾರಂಭಿಸಿದ್ದರು ಅದರ ಫಲವಾಗಿ ಕಳೆದ ವರ್ಷ 28 ಡಿಸೆಂಬರ್ 2023ರ ಬೆಳಗಿನ ಜಾವ ಅಯನೂರು- ರಿಪ್ಪನಪೇಟೆ ಮಾರ್ಗ ಮಧ್ಯದ ಒಂಬತ್ತನೇ ಮೈಲಿಕಲ್ಲಿನಲ್ಲಿ ಆನಂದಪುರಂ ಭಾಗದಲ್ಲಿ ದೀರ್ಘಕಾಲ ಉಳಿದಿದ್ದ ಕಾಡಾನೆಗಳು ರಸ್ತೆ ದಾಟಿ ಭದ್ರಾ ಅಭಯಾರಣ್ಯದ ಕಡೆ ಸಾಗಿದ ಸುದ್ದಿ ಬಂದಿತ್ತು.*

   *ಬಹುಷ್ಯ ಕಳೆದ ವರ್ಷ ಕಾಡಾನೆಗಳು ಓಡಾಡಿದ ಮಾರ್ಗದಲ್ಲೇ ಈ ವರ್ಷವೂ ಬರುವ ಸಾಧ್ಯತೆಗಳು ಇದೆ ಈ ಮೂಲಕ ಈ ಮಾರ್ಗ ಹೊಸ ಆನೆ ಕಾರಿಡಾರ್ ಆಗುವ ಸಾಧ್ಯತೆ ಇದೆ ಈ ಭಾಗದ ಜನ ವಸತಿ ಕೇಂದ್ರಗಳಲ್ಲಿ ಮತ್ತು ರೈತರ ಕೃಷಿ ಭೂಮಿಗಳಲ್ಲಿ ವಾಸಿಸುವ ಜನರು ಜಾಗೃತರಾಗಿರಬೇಕು.*

  *ಅರಸಾಳು ಕೆಂಚನಾಲ ಭಾಗದಲ್ಲಿ ಕಳೆದ ವರ್ಷ ಕಾಡಾನೆ ಸಾಗಿ ಬಂದ ಮಾರ್ಗ ಈಗ ಹೆಚ್ಚು ಜಾಗೃತಿಯಿಂದ ಕಾಯುವ ಮೂಲಕ ಈ ಮಾರ್ಗ ಪ್ರವೇಶಿಸದಂತೆ ಅಲ್ಲಿಯೇ ದಿಗ್ಬಂದನ ಹಾಕಿದರೆ ಆನೆಗಳು ಆನಂದಪುರಂ ಭಾಗಕ್ಕೆ ಸಾಗುವುದಿಲ್ಲ, ಇದನ್ನು ಅರಣ್ಯ ಇಲಾಖೆ ಹೆಚ್ಚು ಗಮನಿಸಬೇಕು.*

   *ಒಂದೊಮ್ಮೆ ಕಾಡಾನೆಗಳು ಕಳೆದ ವರ್ಷದಂತೆ ಈ ಭಾಗಕ್ಕೆ ಬಂದರೆ ಪುನಃ ಬಂದ ದಾರಿಯಲ್ಲಿ ವಾಪಸು ಸಾಗಲು ಈ ಪ್ರದೇಶದ ರೈತರು ಅವಕಾಶ ಮಾಡಿಕೊಡಬೇಕಾಗುತ್ತದೆ, ವಾಪಸು ಹೋಗುವ ಸಂದರ್ಭದಲ್ಲಿ ವಾಪಾಸು ಹೋಗುವ ಮಾರ್ಗದಲ್ಲಿ ಪಟಾಕಿಗಳನ್ನು ಸಿಡಿಸಿದರೆ ಅವುಗಳು ಭಯದಿಂದ ವಾಪಸ್ ಆಗದೆ ಇಲ್ಲೇ ಉಳಿಯುವ ಸಾಧ್ಯತೆ ಹೆಚ್ಚು.*

   *ಸಹಜವಾಗಿ ರೈತರು ಸುಗ್ಗಿ ಕಾಲ ತಮ್ಮ ಪಸಲು ರಕ್ಷಣೆಗಾಗಿ ತಮ್ಮ ಅಡಿಕೆ ತೆಂಗು ತೋಟಗಳ ಸಂರಕ್ಷಣೆಗಾಗಿ ಆನೆಗಳ ಪ್ರವೇಶ ನಿರ್ಬಂಧಿಸಲು ಪಟಾಕಿ ಸಿಡಿಸುವುದು ಒಂದೇ ಪರಿಹಾರ ಆಗಿದ್ದರೂ ಈ ಕಾಡಾನೆಗಳನ್ನ ಅವುಗಳ ಮೂಲಸ್ಥಾನ ಅಭಯಾರಣ್ಯಕ್ಕೆ ಹೋಗಲು ಅನುವು ಮಾಡದಿದ್ದರೆ ಅವುಗಳು ಮನುಷ್ಯನ ಜೊತೆ ಸಂಘರ್ಷಕ್ಕೆ ಮುಂದಾದರೆ ದೊಡ್ಡ ಅಪಾಯವೇ ಮುಂದಿನ ದಿನದಲ್ಲಿ ಎದುರಿಸಬೇಕಾದೀತು.*

   *ಆನೆ ಪ್ರವೇಶ ನಿರ್ಬಂಧಿಸಲು ಪಸಲು ರಕ್ಷಣೆ ಮಾಡಲು ಬೇಲಿಗಳಿಗೆ ವಿದ್ಯುತ್ ನೀಡುವ ತಪ್ಪು ಕೆಲಸ ಮಾತ್ರ ಈ ಭಾಗದಲ್ಲಿ ಯಾರೂ ರೈತರು ಮಾಡಬಾರದಾಗಿ ವಿನಂತಿ.*

 *ವನ್ಯಜೀವಿ ಸಂರಕ್ಷಣಾ ಕಾಯ್ದೆ ನಿಯಮಗಳು ದೊಡ್ಡ ಶಿಕ್ಷೆಗೆ ಕಾರಣವಾಗಲಿದೆ ಇದನ್ನು ಈ ಪ್ರದೇಶದ ವಾಸಿಗಳಿಗೆ ರೈತರಿಗೆ ಹೆಚ್ಚು ಶೇರ್ ಮಾಡಲು ವಿನಂತಿ.*

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...