Skip to main content

Blog number 3359.ಶಿವಮೊಗ್ಗದ ಮಧು ಲಾಯರ್ ಬಾವ ಚಿತ್ರ ಅನಾವರಣ ಕಾರ್ಯಕ್ರಮ

#ಶಿವಮೊಗ್ಗ_ಮದುಲಾಯರ್

 ಜಿ. ಮಧು- ಮಧುಗೋಪಾಲಸ್ವಾಮಿ -ಮಧುಲಾಯರ್ ಎಂದು ಜನ ಕರೆಯುವ ಜನಾನುರಾಗಿ ವಕೀಲರಾದ ಮದು ಲಾಯರ್ ನಮ್ಮನ್ನಗಲಿ ಎರಡು ವರ್ಷಗಳಾಯಿತು (3-ನವೆಂಬರ್-2022).

ಇದೇ ಬರುವ 13 ನೇ ತಾರೀಕು ಶುಕ್ರವಾರ ಅಂದರೆ 13 ಡಿಸೆಂಬರ್ 2024 ರ ಶುಕ್ರವಾರದಂದು ಶಿವಮೊಗ್ಗ ಜಿಲ್ಲಾ ವಕೀಲರ ಸಂಘದಲ್ಲಿ ಶಿವಮೊಗ್ಗದ ಖ್ಯಾತ ವಕೀಲರಾಗಿದ್ದ ಮದು ಲಾಯರ್ ಅವರ ಭಾವಚಿತ್ರ ಅನಾವರಣ ಕಾರ್ಯಕ್ರಮ ಆಹ್ವಾನ ಪತ್ರಿಕೆ ಬಂದಿದೆ.


  ಅಧ್ಯಕ್ಷರು ಪದಾಧಿಕಾರಿಗಳು ಜಿಲ್ಲಾ ವಕೀಲರ ಸಂಘ, ಜಿ. ಮಧು ಕಿರಿಯ ವಕೀಲರ ಬಳಗ ಮತ್ತು ಮದು ಲಾಯರ್ ಕುಟುಂಬದ ವತಿಯ ಆಹ್ವಾನ ಪತ್ರಿಕೆ ಕಳಿಸಿದವರು ಶಿವಮೊಗ್ಗದ ಅನಂತದತ್ತ ವಕೀಲರು.

 ಶಿವಮೊಗ್ಗ ಜಿಲ್ಲಾ ವಕೀಲರ ಸಂಘದಿಂದ ನಡೆಯುವ ಖ್ಯಾತ ವಕೀಲರಾಗಿದ್ದ ಮದು ಲಾಯರ್ ಬಾವ ಚಿತ್ರ ಅನಾವರಣ ಕಾರ್ಯಕ್ರಮ ಯಶಸ್ವಿಯಾಗಲಿ, ಮಧು ಲಾಯರ್ ನೆನಪು ಚಿರಸ್ಥಾಯವಾಗಿ ಉಳಿಯಲಿ ಎಂದು ಹಾರೈಸುತ್ತೇನೆ.

ಇಬ್ಬರೂ ಮುಖ್ಯಮಂತ್ರಿಗಳಾದವರೂ ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಕೊಡುಗೆ ಇಂತಹ ಅನೇಕ ದಾಖಲೆಗಳ ಕಾರಣದಿಂದಲೇ ರಾಜ್ಯದಲ್ಲೇ ಶಿವಮೊಗ್ಗ ಜಿಲ್ಲಾ ವಕೀಲರ ಸಂಘ ಪ್ರತಿಷ್ಠಿತ ವಕೀಲರ ಸಂಘ ಎಂದು ಹೆಸರಾಗಿದೆ.

#shivamogga #DistrictAdvocate #ಜಿಲ್ಲಾವಕೀಲರಸಂಘ #BarAssociation #sbangarappa #kadidalmanjappa #badarinarayanayangar #Anandapuram #madhulayar #advocatehighcourt #advocate #ananthadatta #shivamoggacourt 

ದಿನಾಂತ 13 - ಡಿಸೆಂಬರ್- 2024ರ ಶುಕ್ರವಾರ ಸಂಜೆ 6.30ಕ್ಕೆ ಶಿವಮೊಗ್ಗದ ಬಾಲರಾಜ್ ಅರಸ್ ರಸ್ತೆಯ ಜಿಲ್ಲಾ ನ್ಯಾಯಾಲಯದ ಆವರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಇದು ಶಿವಮೊಗ್ಗದ ಜಿಲ್ಲಾ  ವಕೀಲರ ಸಂಘದಲ್ಲಿ ಹಿಂದಿನಿಂದಲೂ ನಡೆದು ಬಂದ ಒಂದು ಸಂಪ್ರದಾಯವಾಗಿದೆ.

 ಶಿವಮೊಗ್ಗ ಜಿಲ್ಲಾ ವಕೀಲರ ಸಂಘದಿಂದ ನಡೆಯುವ ಖ್ಯಾತ ವಕೀಲರಾಗಿದ್ದ ಮದು ಲಾಯರ್ ಬಾವ ಚಿತ್ರ ಅನಾವರಣ ಕಾರ್ಯಕ್ರಮ ಯಶಸ್ವಿಯಾಗಲಿ, ಮಧು ಲಾಯರ್ ನೆನಪು ಚಿರಸ್ಥಾಯವಾಗಿ ಉಳಿಯಲಿ ಎಂದು ಹಾರೈಸುತ್ತೇನೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಾಗರದ ಕೋರ್ಟ್ ಮೊದಲಿಗೆ ಪ್ರಾರಂಭವಾಗಿದ್ದು ಆನಂದಪುರ0ನ  ಪ್ರವಾಸಿ ಮಂದಿರದಲ್ಲಿ ಆಗ ಆನಂದಪುರಂ ತಾಲ್ಲೂಕು ಕೇಂದ್ರವಾಗಿತ್ತು.

ಸ್ಥಳೀಯರಾದ  ಚಿವುಡಾ ಶೆಟ್ಟರು ಈ ನ್ಯಾಯಾಲಯದ ಪ್ರಥಮ ಸ್ಥಳೀಯ ವಕೀಲರು, ಇದು ಸ್ವತಂತ್ರ ಪೂರ್ವದ ನ್ಯಾಯಾಲಯ ಆಗಿತ್ತು ಆಗ ಚಿವುಡ ಶೆಟ್ಟರು ಆಗಿನ ಜನಪ್ರಿಯ ವಾಹನ ಕುದುರೆ ಸವಾರಿ ಮಾಡುತ್ತಿದ್ದರಂತೆ.

   ಆಗ ಆನಂದಪುರಂನ ದೊಡ್ಡ ಭೂಮಾಲೀಕರು - ಇನಾಮ್ದಾರರು ಆಗಿದ್ದ ರಾಮಕೃಷ್ಣ ಅಯ್ಯಂಗಾರ್ ಕುಟುಂಬದ ವಕೀಲರಾಗಿದ್ದವರು ಕಡಿದಾಳ ಮಂಜಪ್ಪನವರು.

 ನಂತರ ಅವರು ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ,
ಜಮೀನ್ದಾರ್ ರಾಮಕೃಷ್ಣ ಅಯ್ಯಂಗಾರ್ ಅವರ ಆಪ್ತರಿಗೂ ಕಡಿದಾಳು ಮಂಜಪ್ಪನವರೇ ಕಾನೂನು ಸಲಹೆಗಾರರು ಆಗಿದ್ದರು ಆ ಕಾಲದಲ್ಲಿ ವಕೀಲರಾಗಿದ್ದ ಕಡಿದಾಳು ಮಂಜಪ್ಪನವರು ಬರೆದ ಕೆಲ ಪತ್ರಗಳು ಕೆಲ ಕುಟುಂಬದಲ್ಲಿ ಈಗಲೂ ಇದೆ.

ನಂತರ ರಾಮಕೃಷ್ಣ ಅಯ್ಯಂಗಾರ್ ಪುತ್ರರಾದ ಬದರಿನಾರಾಯಣ ಅಯ್ಯಂಗಾರ್ ವಕೀಲಿ ವೃತ್ತಿಯನ್ನು  ಶಿವಮೊಗ್ಗದ ನ್ಯಾಯಾಲಯದಲ್ಲಿ ಪ್ರಾರಂಬಿಸಿ ಶಿವಮೊಗ್ಗದ ಪ್ರಸಿದ್ಧ ವಕೀಲರಾಗುತ್ತಾರೆ.

 ಮುಂದೆ ರಾಜ್ಯದ ವಿದ್ಯಾಮಂತ್ರಿಯಾಗುತ್ತಾರೆ ಮತ್ತು ಸಂಸದರೂ ಆಗುತ್ತಾರೆ ಅವರ ಭಾವಚಿತ್ರ ಕೂಡ ಶಿವಮೊಗ್ಗದ ವಕೀಲರ ಸಂಘದ ಸಂಘದಲ್ಲಿ ಅನಾವರಣ ಮಾಡಲಾಗಿದೆ.

 ಬದರಿ ನಾರಾಯಣ್ ಅಯ್ಯಂಗಾರ್ ವಕೀಲಿ ವೃತ್ತಿ ಬಿಡಲು ಒಂದು ಘಟನೆ ಕಾರಣವಾಗುತ್ತದೆ....ಅವರು ಆಗಿನ ಕಾಲದಲ್ಲಿ ಒಂದು ಕೊಲೆ ಕೇಸಿನಲ್ಲಿ ಅಪರಾಧಿಯ ಪರವಾಗಿ ವಾದಿಸಿ ಅಪರಾಧಿ ನಿರಪರಾಧಿ ಎಂದು ಬಿಡುಗಡೆ ಮಾಡಿಸುತ್ತಾರೆ.

 ಆದರೆ ತೀರ್ಪಿನ ದಿನ ಅವರಿಗೆ ತಾನು ಬಿಡುಗಡೆ ಮಾಡಲು ಪ್ರಯತ್ನಿಸಿದ ಅಪರಾಧಿ ನಿರಪರಾಧಿಯಲ್ಲ ನಿಜವಾದ ಕೊಲೆಗಾರ ಎಂಬುದು ಗೊತ್ತಾಗುತ್ತದೆ ಇದರಿಂದ ನೊಂದ ಆ ಕುಟುಂಬದವರು ರೋಧಿಸುವುದನ್ನ ನೋಡಿ ಬದರಿ ನಾರಾಯಣ ಅಯ್ಯಂಗಾರ್ ಅವರಿಗೆ ಭ್ರಮನಿರಸನ ಆಗುತ್ತದೆ ಇದರಿಂದ ತಮ್ಮ ವಕೀಲಿ ವೃತ್ತಿಯನ್ನ ಕೈ ಬಿಡುತ್ತಾರೆ.

  ಶಿವಮೊಗ್ಗದ ಪ್ರತಿಷ್ಠಿತ ವಕೀಲರ ಸಂಘದಲ್ಲಿ ಕಡಿದಾಳು ಮಂಜಪ್ಪನವರು, ಬಂಗಾರಪ್ಪನವರ ಬಾವಚಿತ್ರಗಳೂ ಅನಾವರಣ ಆಗಿದೆ ಇದು ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಒಂದು ದಾಖಲೆ ಮತ್ತು  ಇತಿಹಾಸವೇ ಆಗಿದೆ.

 ಇಬ್ಬರೂ ಮುಖ್ಯಮಂತ್ರಿಗಳಾದವರೂ ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಕೊಡುಗೆ ಇಂತಹ ಅನೇಕ ದಾಖಲೆಗಳ ಕಾರಣದಿಂದಲೇ ರಾಜ್ಯದಲ್ಲೇ ಶಿವಮೊಗ್ಗ ಜಿಲ್ಲಾ ವಕೀಲರ ಸಂಘ ಪ್ರತಿಷ್ಠಿತ ವಕೀಲರ ಸಂಘ ಎಂದು ಹೆಸರಾಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...