Skip to main content

Blog number 3373. ಆನಂದಪುರಂ ಆನೆ ಕಾರಿಡಾರ್ ಅಪ್ಡೇಟ್

#ಆನಂದಪುರಂ_ಆನೆ_ಕಾರಿಡಾರ್

ಆನೆ ತಜ್ಞರ ಅಂದಾಜು ಸರಿಯಾಗಿದೆ.

ಕಳೆದ ವರ್ಷ ಸುಮಾರು 74 ದಿನ ಈ ಪ್ರದೇಶದಲ್ಲಿ ಸಂಚರಿಸಿದ್ದ ಕಾಡಾನೆಗಳು ಈ ವರ್ಷ 53 ದಿನ ತಡವಾಗಿ ಇಲ್ಲಿಗೆ ಬಂದಿದೆ ಆದರೆ ಕೇವಲ 9 ದಿನಗಳಲ್ಲಿ ತಮ್ಮ ಅಂತಿಮ ಗುರಿ ತಲುಪಿದೆ.


ಕಳೆದ ವರ್ಷ ಈ ಭಾಗದಲ್ಲಿ ಸಂಚಾರ ಮಾಡಿದ್ದ ಕಾಡಾನೆಗಳು ಈ ವರ್ಷ ಕೂಡ ಅದೇ ಮಾರ್ಗದಲ್ಲಿ ಸಂಚರಿಸಿದೆ.

ಈ ಪ್ರದೇಶದ ಜನರು ಜಾಗೃತರಾಗಿರಬೇಕು ಆನೆಗಳು ಬೆಳಿಗ್ಗೆ 4 ರಿಂದ 10 ರವರೆಗೆ ಮತ್ತು ಸಂಜೆ 4ರಿಂದ ರಾತ್ರಿ 8ರವರೆಗೆ ಸಂಚಾರ ಮಾಡುವುದರಿಂದ ಈ ಸಮಯದಲ್ಲಿ ಕಾಡಾನೆ ಸಂಚರಿಸುವ ಪ್ರದೇಶದಲ್ಲಿ ಜನ ಸಂಚಾರ ಮಾಡಬಾರದು.

ಅರಣ್ಯ ಇಲಾಖೆಯವರು ಈ ಕಾಡುಆನೆ ಸಂಚಾರ ಮಾನಿಟರಿಂಗ್ ಮಾಡುತ್ತಿದ್ದು ಕಾಲ ಕಾಲಕ್ಕೆ ಅವುಗಳು ಇರುವ ಪ್ರದೇಶದಲ್ಲಿನ ಜನವಸತಿ ಪ್ರದೇಶಗಳಲ್ಲಿ ಮತ್ತು ಕೃಷಿಕರಿಗೆ ಧ್ವನಿವರ್ಧಕಗಳ ಮೂಲಕ ಎಚ್ಚರಿಸುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಅರಸಾಳು ಸರ್ವೇ ನಂಬರ್ 116 ರಲ್ಲಿ ಪ್ರವೇಶ ಮಾಡಿ ಕಮದೂರಿನ ತೋಟದ ಕೆರೆಯಿಂದ ಸಾಗರ ತಾಲೂಕಿನ ಗಿಳಾಲಗುಂಡಿ ಸಮೀಪದ ಕೊಲ್ಲಿಬಚ್ಚಲು ನೀರಾವರಿ ಆಣೆಕಟ್ಟು ತಲುಪಿ ಅಂತಿಮವಾಗಿ ಸಾಗರ ಮತ್ತು ಶಿಕಾರಿಪುರ ತಾಲೂಕಿನ ಅಂಚಿನಲ್ಲಿರುವ ಅಂಬ್ಲಿಗೋಳ ನೀರಾವರಿ ಅಣೆಕಟ್ಟು ತಲುಪುತ್ತದೆ.

ಕಳೆದ ವರ್ಷ ಸುಮಾರು 78 ದಿನ ಈ ಪ್ರದೇಶದಲ್ಲಿ ಸಂಚರಿಸಿದ್ದ ಕಾಡಾನೆಗಳು ಈ ವರ್ಷ 53 ದಿನ ತಡವಾಗಿ ಇಲ್ಲಿಗೆ ಬಂದಿದೆ ಆದರೆ ಕೇವಲ 9 ದಿನಗಳಲ್ಲಿ ತಮ್ಮ ಅಂತಿಮ ಗುರಿ ತಲುಪಿದೆ.

ಬಹುಶಃ ಈ ವರ್ಷ ಬೇಗನೇ ಬಂದ ದಾರಿಯಲ್ಲಿ ವಾಪಾಸು ಹೋಗುವ ಸಾಧ್ಯತೆ ಅಂದಾಜಿಸಲಾಗಿದೆ ಅಥವ ಅಂಬ್ಲಿಗೋಳ ಜಲಾಶಯದಿಂದ ಶಿಕಾರಿಪುರದ ಅಂಜನಾಪುರ ನೀರಾವರಿ ಆಣೆಕಟ್ಟು ಅಥವ ಶರಾವತಿ ಅರಣ್ಯ ಪ್ರದೇಶದಲ್ಲಿ ಸಾಗುವ ಸಾಧ್ಯತೆ ಇದೆಯಾ? ಗೊತ್ತಿಲ್ಲ.

#sagar #Anandapuram #ambligoladam #kollibachaludam #shikaripura #byrapura #elephantcorridor #wildelephants #ForestDepartment #shivamogga 

ಈ ಕೆಳಗಿನ ಕಳೆದ ವರ್ಷದ ಆನೆ ಸಂಚಾರದ ಮಾಹಿತಿ ಮತ್ತು ಈ ವರ್ಷದ ಮಾಹಿತಿ ಪರಾಮರಿಸಿ ನೋಡಿ...

#ಕಳೆದ_ವರ್ಷದ_ಕಾಡಾನೆ_ಸಂಚಾರದ_updateಗಳು
1) 2023 - ಅಕ್ಟೋಬರ್ -15 ರಂದು ಹೊಸನಗರ ತಾಲೂಕಿನ ಕೆಂಚನಾಲದಲ್ಲಿ ಮರಿ ಮತ್ತು ತಾಯಿ ಆನೆ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು.

2) 2023 - ಡಿಸೆಂಬರ್-16 ರಂದು ಸಾಗರ ತಾಲೂಕಿನ ಪತ್ರೆಹೊಂಡದಲ್ಲಿ.

3) 2023- ಡಿಸೆಂಬರ್- 22ರವರೆಗೆ ಅಂಬ್ಲಿಗೋಳದವರೆಗೆ 

4) 2023 - ಡಿಸೆಂಬರ್ - 24 ರಾ.ಹೆ 69 ವಾಹನ ಸಂಚಾರ ನಿರ್ಬಂದಿಸಿ ಕೊಲ್ಲಿಬಚ್ಚಲು ಡ್ಯಾಮಿನ ಭಾಗದಿಂದ ರಾಷ್ಟ್ರೀಯ ಹೆದ್ದಾರಿ ದಾಟಿಸಿದ್ದರು ಅರಣ್ಯ ಇಲಾಖೆಯವರು.

5)  2023- ಡಿಸೆಂಬರ್- 28ರ ಬೆಳಗಿನ ಜಾವ ಹೊಸನಗರ ತಾಲೂಕಿನ ಅರಸಾಳು ರಿಪ್ಪನ್ ಪೇಟೆ ಮಾರ್ಗದ 9ನೇ ಮೈಲಿ ಕಲ್ಲಿನಲ್ಲಿ ಈ ಭಾಗದಿಂದ ದಾಟಿ ವಾಪಾಸು ಹೋಗಿತ್ತು.

(ಈ ಪ್ರದೇಶದಲ್ಲಿ ಆನೆ ಸಂಚಾರದ ಅಂದಾಜು ಒಟ್ಟು 74 ದಿನಗಳು)

#ಈ_ವರ್ಷದ_ಕಾಡಾನೆ_ಸಂಚಾರದ_ಅಪ್ಡೇಟ್ಗಳು ...
1 ) ದಿನಾಂಕ 7 - ಡಿಸೆಂಬರ್- 2024 ಶನಿವಾರ ಬೆಳಿಗ್ಗೆ ಶಿವಮೊಗ್ಗ ತಾಲ್ಲೂಕಿನ ಚೋರಡಿ ಶೆಟ್ಟಿಕೆರೆ ಹತ್ತಿರ ಕಾಣಿಸಿಕೊಂಡ ಮೂರು ಕಾಡಾನೆಗಳು ಸಂಜೆ ಸೂಡೂರು ಗೇಟ್ ಹತ್ತಿರ ಕಾಣಿಸಿಕೊಂಡಿತ್ತು.

2). ದಿನಾಂಕ  8 - ಡಿಸೆಂಬರ್- 2024 ಬಾನುವಾರ ಬೆಳಿಗ್ಗೆ ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯಿತಿಯ ಆಲವಳ್ಳಿ ಸಮೀಪದ ಕಮದೂರಿನ ಕಾಡು ಸಿದ್ದೇಶ್ವರ ಗುಡಿ ಮೇಲಿನ ಕಾಡಿನಲ್ಲಿರುವ ತೋಟದಕೆರೆಗೆ ಬಂದಿದೆ ಅಲ್ಲಿರುವ ಭೋಜಪ್ಪ ಗೌಡರ ಲಿಂಗರಾಜರ ಜಮೀನಿನಲ್ಲಿ ಆನೆ ಹೆಜ್ಜೆಗಳಿದೆ.

3) ದಿನಾಂಕ  9 - ಡಿಸೆಂಬರ್ - 2024ರ ರಾತ್ರಿ ತ0ಗಳವಾಡಿ

4) 10-ಡಿಸೆಂಬರ್-2024 ಸೋಮವಾರ 
ಮತ್ತು ಮಂಗಳವಾರ  ಹೊಸಕೊಪ್ಪ ಭಾಗದಲ್ಲಿ.

5) ದಿನಾಂಕ 11-ಡಿಸೆಂಬರ್- 2024 ಬುಧವಾರ ರಾತ್ರಿ ತಂಗಳವಾಡಿ ಸಮೀಪದ ಚಂದಾಳಗೆರೆ.

6) ದಿನಾಂಕ 12 ರಿಂದ 13ರವರೆಗೆ ಸುದ್ದಿ ಇಲ್ಲ. (ಗುರುವಾರ & ಶುಕ್ರವಾರ)

7)ದಿನಾಂಕ 14- ಡಿಸೆಂಬರ್- 2024 ಶನಿವಾರ ರಾತ್ರಿ ಬೈರಾಪುರ ಭಾಗದಲ್ಲಿ.

8) ದಿನಾಂಕ 15-ಡಿಸೆಂಬರ್ - 2024 ಭಾನುವಾರ ಬೆಳಿಗ್ಗೆ ಬೈರಾಪುರದಿಂದ ಕಾಡಿಗೆ ಸಾಗಿ ಹೋಗಿದೆ.
( ಈ ವರ್ಷ ಒಟ್ಟು 9 ದಿನಗಳಾಯಿತು ಕಾಡಾನೆ ಸಂಚಾರಕ್ಕೆ)

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...