Skip to main content

Blog number 3337. ಅಲೆಮಾರಿ ಬುಡಕಟ್ಟು ಜನಾಂಗವನ್ನ ಆ ಕಾಲದ ರಾಜರ ಆಡಳಿತದಲ್ಲಿ ಬಳಕೆ

#ಕಾಡುಗೆಣಸು

ಅಲೆಮಾರಿ ಬುಡಕಟ್ಟು ಜನಾಂಗಗಳು.

    ವಷ೯ಕ್ಕೆ ಎರೆಡು ಬಾರಿ ಕಾಡು ಗೆಣಸು ಕಾಡಿನಿಂದ ಕಿತ್ತು ತಂದು ತಿನ್ನಿಸುವ ಹಾವು ಗೊಲ್ಲ ಮಿತ್ರರು
   
       ಹಾವು ಗೊಲ್ಲರು ಈಗ ಅಲೆಮಾರಿಗಳ ಜೀವನದಿಂದ ಅರೆ ಅಲೆಮಾರಿಗಳಾಗಿದ್ದಾರೆ.

      ರಾಜರ ಕಾಲದಲ್ಲಿ ಅನೇಕ ಅಲೆಮಾರಿ ಬುಡಕಟ್ಟು ಜನಾಂಗದವರನ್ನ ರಾಜ ತನ್ನ ಅನೇಕ ಆಡಳಿತ ವಿಚಾರಗಳಿಗೆ ಬಳಕೆ ಮಾಡುತ್ತಿದ್ದರು.

     ಆದ್ದರಿಂದ ಪ್ರತಿ ವರ್ಷ ಮಳೆಗಾಲದ ಮುನ್ನ ಕೆಳದಿ ರಾಜರ ಆನಂದಪುರಂ ಕೋಟೆ ಎದರು ಈ ಎಲ್ಲಾ ಜನಾಂಗಗಳು ಬಂದು ಸೇರಿ ಮಳೆಗಾಲ ಕಳೆದ ನಂತರ ಪುನಃ ತಮ್ಮ ಸಂಚಾರಕ್ಕೆ ಹೊರಡುತ್ತಿದ್ದರು.

#tribals #snakerescue #Cowards #sidda #sudugadusidda #korama #dombaru #keladi #Anandapuram #malenadu #ಅಲೆಮಾರಿ #ಬುಡಕಟ್ಟು #Kings #army 

  90 ರ ದಶಕದ ತನಕ ನಮ್ಮ ಆನಂದಪುರಂನ ಕೆಳದಿ ಅರಸರ ಕೋಟೆ ಎದುರಿನ ಕೆರೆ ಮತ್ತು ಆನಂದಪುರಂ ಕಾಲೇಜು ಎದುರಿನ ಬಯಲು (ಈಗ ಅಲ್ಲಿ ಹಾಸ್ಟೆಲ್ - ಪೆಟ್ರೋಲ್ ಬಂಕ್ - ಪೋಲಿಸ್ ಠಾಣೆ ಆಗಿದೆ) ಪ್ರದೇಶದಲ್ಲಿ ವರ್ಷವಿಡಿ ಸಂಚರಿಸುವ ಅಲೆಮಾರಿ ಬುಡಕಟ್ಟು ಜನಾಂಗದವರೆಲ್ಲ ಮಳೆಗಾಲದ ಮುನ್ನ ಬಂದು ತಂಗುವ ಖಾಯಂ ಜಾಗವಾಗಿತ್ತು.

ಇದು ಸುಮಾರು ಶತಮಾನಗಳಿಂದ ನಡೆದು ಕೊಂಡು ಬಂದ ಪದ್ದತಿ ಆಗಿತ್ತು ಬಹುಶಃ ಈ ಅಲೆಮಾರಿ ಬುಡಕಟ್ಟು ಜನಾಂಗದವರು ರಾಜರಿಗೆ ನಜರು ಒಪ್ಪಿಸಿ ಅವರಿಗೆ ತಮ್ಮ ತಿರುಗಾಟದಲ್ಲಿ ಅಕ್ಕ ಪಕ್ಕದ ರಾಜ್ಯದ ವಿದ್ಯಾಮಾನ ತಿಳಿಸಿ ಭಕ್ಷೀಸು ಪಡೆಯುವ ಪದ್ದತಿ ಆಗಿರಬಹುದು.

ಆ ಕಾಲದ ಸೈನ್ಯದ ಹಿಂದಿನಿಂದ ಇಂತಹ ಬುಡಕಟ್ಟು ಜನ ಸೈನಿಕರಿಗೆ ಸಹಾಯಕರಾಗಿ ಅಥವ ಅವರಿಗೆ ಮನರಂಜನೆ ನೀಡುವ ತಂಡಗಳಾಗಿ ಸಾಗುತ್ತಿದ್ದರೆಂಬ ಉಲ್ಲೇಖ ಇದೆ.

ಪಕ್ಕದ ರಾಜ್ಯಗಳಲ್ಲಿ ಕಳ್ಳತನ ಮಾಡಿಸಿ ಅಲ್ಲಿ ಅರಾಜಕತೆ ಉಂಟು ಮಾಡಿ ನಂತರ ಅಲ್ಲಿ ದಾಳಿ ನಡೆಸಿ ವಶಪಡಿಸಿಕೊಳ್ಳುವಾಗ ಅಲ್ಲಿನ ಪ್ರಜೆಗಳು ಈ ಕಳ್ಳತನದಿಂದ ರೋಸಿ ಹೋಗಿ ಅದಕ್ಕೆಲ್ಲ ಕಾರಣ ಅವರ ರಾಜನ ದುರಾಡಳಿತ ಎಂದು ಈ ರಾಜನಿಗೆ ಬೆಂಬಲಿಸುತ್ತಿದ್ದರಂತೆ ಆದರೆ ಈ ಕಳ್ಳತನ ಮಾಡಿಸಿದ ರಾಜ ಅವರ ರಾಜ್ಯದ ಮೇಲೆ ಅಕ್ರಮಣ ಮಾಡಿದ ರಾಜನೇ ಆಗಿರುತ್ತಿದ್ದ.

  ಈ ರೀತಿ ಅಲೆ ಅಲೆಮಾರಿ ಬುಡಕಟ್ಟು ಜನಾಂಗದವರನ್ನ ಆ ಕಾಲದ ಸೀಮಿತ ವಿಸ್ತೀರ್ಣದ ರಾಜರುಗಳು ತಮ್ಮ ಆಡಳಿತದಲ್ಲಿ ರಾಜ ತಾಂತ್ರಿಕವಾಗಿ ಬಳಸಿಕೊಳ್ಳುತ್ತಿದ್ದರು.

   ಹಾವು ಗೊಲ್ಲರು, ದೊಂಬರಾಟದ ದೊಂಬಿದಾಸರು, ಸುಡುಗಾಡು ಸಿದ್ದರು, ಹಂದಿಜೋಗಿಗಳು, ಬಳೆಗಾರರು, ಕೊರಮರು, ಬೆಸ್ತರು, ದನಗಾಹಿ ಗೊಲ್ಲರು, ಸಿದ್ಧರು.... ಇನ್ನೂ ಅನೇಕ ಜನಾಂಗದವರು ಆನಂದಪುರಂ ಸುತ್ತ ಮುತ್ತ ಈಗ ಖಾಯಂ ನೆಲೆ ಕಂಡಿದ್ದಾರೆ.

ಇವರಲ್ಲಿ ಕೊನೆಯವರೇ ಈ ಹಾವು ಗೊಲ್ಲರು.

     ಜಿಲ್ಲೆಯ ಸಾಗರ ತಾಲ್ಲೂಕಿನ ಶಿರವ೦ತೆ, ಹೆಗ್ಗೋಡು, ಹೊಸನಗರ ತಾಲ್ಲೂಕಿನ ಹಾಲು ಗುಡ್ಡೆಗಳಲ್ಲಿ ಸಕಾ೯ರದ ಜಾಗ ಮನೆ ಪಡೆದಿದ್ದರಿಂದ ಒಂದೆಡೆ ನೆಲೆಸಿದ್ದಾರೆ.

ಹಾವು ಹಿಡಿದು ಜೀವನ ಮಾಾಡುವುದಕ್ಕಿಂತ ಈಗ ಬೇರೆ ಉದ್ಯೋಗದಲ್ಲಿ ಹೆಚ್ಚು ತೊಡಗಿದ್ದಾರೆ.

 ಇವರ ಕೇರಿಯಲ್ಲಿ ನಾಗ ಪ್ರತಿಷ್ಟೆ ಮಾಡಿ ಯಾರೂ ಹಾವು ಹಿಡಿಯದ೦ತೆ ಕೆಲವರು ತಾಕೀತು ಮಾಡಿದ್ದಾರೆ ಆದರೆ ಕೆಲವರು ಗುಟ್ಟಾಗಿ ಹಾವು ಹಿಡಿಯುವ ಇವರ ಪುರಾತನ ವಂಶಪಾರಂಪಯ೯ ವಿದ್ಯ ಉಳಿಸಿ ಕೊಂಡಿದ್ದಾರೆ, 

1985 ರಲ್ಲಿ ಕ್ಯಾಮೆರ ಕಡಿಮೆ ಇರುವ ಕಾಲದಲ್ಲಿ ಇವರೆಲ್ಲರ ಕುಟುಂಬದ photo ಸೆಷನ್ ಮಾಡಿದ್ದೆ,ನಮ್ಮ ರೈಸ್ ಮಿಲ್ನಲ್ಲಿ ಒಂದು ಕೋಟು, ಕಪ್ಪು ಕನ್ನಡಕ ಮಾತ್ರ ಎಲ್ಲಾ ಕುಟು೦ಬದ ಹಿರಿಯನು ಧರಿಸಲು ಬದಲಾಗುತ್ತಿತ್ತು, 

  ಅವತ್ತು ಚಿತ್ರದಲ್ಲಿದ್ದ ಮಕ್ಕಳೆಲ್ಲ ಈಗ ಅಜ್ಜOದಿರಾಗಿದ್ದಾರೆ ಅಂದರೆ ಸಣ್ಣ ವಯಸ್ಸಲ್ಲೇ ಮದುವೆ ಮಾಡುತ್ತಾರೆ ಅವರಲ್ಲಿ.

  ಇವರೆಲ್ಲ ಆಗಾಗ್ಗೆ ಬಂದು ಬೇಟಿ ಮಾಡಿ ಅವರ ದರ್ಶನ ನನಗೆ ನೀಡಿದ್ದಕ್ಕೆ ಭಕ್ಷೀಸು ಪಡೆಯುತ್ತಾರೆ.

ಇವರು ದಶ೯ನ ನೀಡಿದಕ್ಕಾಗಿ ನಾನು ಭಕ್ಷಿಸು ನೀಡಬೇಕಾ? ಅಂತ ನೀವು ಕೇಳಬಹುದು ಇದೊಂದು ತರ ನನ್ನ ಅವರ ಅವಿನಾಭಾವ ಸಂಬಂಧ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...