Skip to main content

Blog number 3335. ಅಡಿಕೆಯನ್ನ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಕ್ಯಾನ್ಸರ್ ಕಾರಕ ಹಣೆ ಪಟ್ಟದಿಂದ ತೆಗೆಸುವುದು ಹೇಗೆ?

#ಅಡಿಕೆ

ಅಡಿಕೆ ಬೆಳೆಗಾರರ ಸಮಾವೇಶದ ಸಂದರ್ಭದ ಸರಣಿ ಲೇಖನ ಭಾಗ-9.


ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಮಾವೇಶದ ಉದ್ದೇಶ

ತುರ್ತಾಗಿ ತೆಗೆದು ಕೊಳ್ಳಬೇಕಾದ ತೀರ್ಮಾನಗಳು

ಅಡಿಕೆ ಬೆಳೆಗಾರರಿಗೆ ಸಿಗಬೇಕಾದ ಭರವಸೆಗಳು.

  ಬಹುತೇಕ ಅಡಿಕೆ ಬೆಳೆಗಾರರಿಗೆ ಪ್ರಸಕ್ತ ಅಡಿಕೆ ಬೆಳೆಯ ಸಮಸ್ಯೆ ಏನು ಎನ್ನುವುದು ಅರಿವು ಮೂಡಿಸುವ ಕೆಲಸ ಮೊದಲು ಆಗ ಬೇಕಾಗಿದೆ.

   ತಕ್ಷಣ ಅಡಿಕೆ ಕ್ಲೀನಿಕಲ್ ಟ್ರಯಲ್ ಪ್ರಾರಂಬಿಸಿದರೂ ಅಂತಿಮ ಪಲಿತಾಂಶ ಪಡೆಯಲು ಕನಿಷ್ಟ 10 ವರ್ಷ ಬೇಕು.

    ಅಡಿಕೆಗೆ ಬಂದ ಗಂಡಾಂತರ ಭಾರತದ ಸಂಸತ್ ಅಥವ ಸರ್ವೋಚ್ಚ ನ್ಯಾಯಾಲಯದಿಂದ ಬಗೆಹರಿಯುವುದಿಲ್ಲ ಎನ್ನುವುದು ಪ್ರತಿಯೊಬ್ಬ ಅಡಿಕೆ ಬೆಳೆಗಾರರಿಗೆ ತಿಳಿದಿರಲಿ.

#arecanut #arecafarmers #malenadu #panmasala #gutka #CancerCare #Cancerawareness #shivamogga #sagar #campco 

  9-ಅಕ್ಟೋಬರ್- 2024ರಂದು ವಿಶ್ವ ಆರೋಗ್ಯ ಸಂಸ್ಥೆ ಅಡಿಕೆ ಕ್ಯಾನ್ಸರ್ ಕಾರಕ ಘೋಷಣೆ ಮಾಡಿದೆ ಇದರ ಪರಿಣಾಮಗಳು ಅಡಿಕೆ ಬೆಳೆ ಮತ್ತು ಬಳಕೆ ಮೇಲೆ ಯಾವ ರೀತಿ ಆಗಲಿದೆ?....

  ಸುಪ್ರಿಂ ಕೋರ್ಟ್ ನಲ್ಲಿ ಅಡಿಕೆ ಬಗ್ಗೆ ಇದ್ದ ವ್ಯಾಜ್ಯ ಯಾವುದು? 2014 ರಲ್ಲಿ ಕೇಂದ್ರ ಸರ್ಕಾರ ಸಲ್ಲಿಸಿದ ಅಫಿಡವಿಟ್ ನಲ್ಲಿ ಏನಿದೆ? .....

  ಸಂಸದ್ ಅದಿವೇಶನದಲ್ಲಿ ಸರ್ಕಾರ ನೀಡಿದ ಉತ್ತರ ಏನು?...

   ಇವುಗಳನ್ನ ವಿವರಿಸಬೇಕು.

 ಅಡಿಕೆ ಬೆಳೆಗಾರರ ಹಿತ ಕಾಪಾಡಲು ಕ್ಯಾಂಪ್ಕೊ , ಮಾಮ್ಕೋಸ್, ಅಪ್ಸ್ಕೋಸ್ ಕಳೆದ 20 ವರ್ಷದಲ್ಲಿ ಮಾಡಿದ ಪ್ರಯತ್ನಗಳ ದಾಖಲೆಗಳು ಏನು ಎಂಬುದು ತಿಳಿದು ಕೊಳ್ಳಬೇಕು.

    ಸದ್ಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ WHO ಗೆ ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಎಂಬ ಸಂಶೋದನಾ ವರದಿ ಸಲ್ಲಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ ಅದು ಅಮೇರಿಕಾದ FDA (Food & Drug Administration Authority) ಅಪ್ರೂವ್ ಮಾಡಿದ ಲ್ಯಾಬ್ ನಿಂದಲೇ ಕ್ಲೀನಿಕಲ್ ಟ್ರಯಲ್ ವರದಿ ನೀಡಬೇಕಾಗಿದೆ.

    FDA ವಿಶ್ವ ದರ್ಜೆಯಲ್ಲಿ ಎಲ್ಲಾ ಔಷದಿ ಬಳಕೆಗೆ ಅಂತಿಮ ಅನುಮತಿ ನೀಡುವ ವೈಜ್ಞಾನಿಕ ಸಂಸ್ಥೆ ಆಗಿದೆ.

    ಇದಕ್ಕಾಗಿ ಕನಿಷ್ಟ 10 ರಿಂದ 12 ವರ್ಷ ಪರಿಣಾಮಕಾರಿಯಾಗಿ ವಿಶ್ವದರ್ಜೆಯಲ್ಲಿ ಸಂಶೋಧನೆ ಮೂಲಕ ನಾವು ಪ್ರಯತ್ನಿಸಿದರೆ ಮಾತ್ರ ಅಂತಿಮ ತೀರ್ಪು ಅಡಿಕೆ ಪರವಾಗಿ ದೊರೆಯುತ್ತದೆ.

   ಇದಕ್ಕೆ ಬೇಕಾದ ಆರ್ಥಿಕ ಸಹಾಯ 10 ರಿಂದ 15 ಕೋಟಿ ರೂಪಾಯಿಗಳು ಆಗಲಿದೆ.

   ಈ ಬಗ್ಗೆ ಅಡಿಕೆ ಬೆಳೆಗಾರರು ತುರ್ತು ನಿರ್ಧಾರಕ್ಕೆ ಬರಬೇಕಾಗಿದೆ ಇದಕ್ಕೆ ಬೇಕಾಗುವ ಹಣ ಅಡಿಕೆ ಬೆಳೆಗಾರರಿಂದ ಪರೋಕ್ಷವಾಗಿ ಮತ್ತು ಅಡಿಕೆ ಬೆಳೆಗಾರರ ಸಹಕಾರಿ ಸಂಸ್ಥೆಗಳಿಂದ ನೇರವಾಗಿ ಸಂಗ್ರಹಿಸುವ ಕೆಲಸ ಆಗಬೇಕು.

   ಸಂಶೋದನಾ ಕೆಲಸ ಪ್ರಾರಂಭ ಮಾಡಿದ ನಂತರವೇ ಹೆಚ್ಚಿನ ಸಹಾಯಕ್ಕೆ ಸರ್ಕಾರದಿಂದ ನಿರೀಕ್ಷೆ ಮಾಡ ಬೇಕು ಇಲ್ಲದಿದ್ದರೆ ಸರ್ಕಾರಕ್ಕೆ ಸಲ್ಲಿಸುವ ಆರ್ಥಿಕ ಸಹಾಯ ಕೇಳುವ ಕಡತಗಳು ಮುಂದಿನ 5 ವರ್ಷದಲ್ಲೂ ಬಗೆಹರಿಯುವ ಸಾಧ್ಯತೆ ನಂಬಲು ಸಾಧ್ಯವಿಲ್ಲ.

   ತಕ್ಷಣ ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಎಂದು ಸಾಬೀತುಪಡಿಸಲು ಕ್ಲೀನಿಕಲ್ ಟ್ರಯಲ್ ವಿಳಂಬವಾದರೆ? ರಾಜಕಾರಣಿಗಳ ಸುಳ್ಳು ಭರವಸೆ ನಂಬಿದರೆ ಮುಂದೆ ತಂಬಾಕಿಗೆ ಇರುವಂತ ನಿಯಂತ್ರಣ ಅಡಿಕೆಗೆ ಬರಲಿದೆ.

   ತಂಬಾಕು ಉತ್ಪನ್ನದ ಪೊಟ್ಟಣಗಳ ಮೇಲೆ ಅಚ್ಚುಹಾಕುವಂತೆ ಅಡಿಕೆ ಮತ್ತು ಅದರ ಬಳಕೆಯ ಪ್ಯಾಕ್  ಮೇಲೆ ಶಾಸನ ವಿದಿಸಿದ ಎಚ್ಚರಿಕೆ "ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಕ್ಯಾನ್ಸರ್ ಕಾರಣ" ಎಂದು ಕಡ್ಡಾಯವಾಗಿ ನಮೂದು ಮಾಡಬೇಕಾಗುತ್ತದೆ.

   ಆಮದು ರಪ್ತು ನಿಯಂತ್ರಣ, ದುಬಾರಿ ತೆರಿಗೆಗಳಿಂದ ಅಡಿಕೆ ಬಳಕೆ ಕಡಿಮೆ ಆಗಲಿದೆ, ಮುಂದೆ ತಂಬಾಕು ಮಂಡಳಿ ಅನುಮತಿ ಪಡೆದು ತಂಬಾಕು ಕೃಷಿ ಮಾಡಿದಂತೆ ಅಡಿಕೆ ಕೃಷಿ ಮಾಡಬೇಕಾದೀತು.

 ಈ ರೀತಿಯ ನಿಯಂತ್ರಣಗಳಿಂದ ಅಡಿಕೆ ಕೃಷಿಗೆ ಹೆಚ್ಚು ವೆಚ್ಚಗಳಾದರೆ ಲಾಭ ಕಡಿಮೆ ಆದರೆ ಕೃಷಿಕರು ಅನಿವಾರ್ಯವಾಗಿ ಅಡಿಕೆಯಿಂದ ಪರ್ಯಾಯ ಕೃಷಿ ಕಡೆ ಗಮನ ಹರಿಸ ಬೇಕಾದೀತು.

  ಇಂತಹ ಸಾಧ್ಯಾ ಸಾಧ್ಯತೆ ಬಗ್ಗೆ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ವಿವರಿಸುವಂತ ಸಂಪನ್ಮೂಲ ವ್ಯಕ್ತಿಗಳನ್ನ ಆಮಂತ್ರಿಸ ಬೇಕು ಈ ಬಗ್ಗೆ ಸಮಾವೇಶದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು.

   ಕನ್ನಡಿಗರೇ ಅಡಿಕೆ ಬೆಳೆಗಾರರೇ ಆದ WHO ಸಂಸ್ಥೆ ಜೊತೆ FDA ಅನುಮೋದಿಸಿದಂತ ಲ್ಯಾಬ್ ಮುಖಾಂತರ ಸಂಶೋಧನೆ ಕ್ಲೀನಿಕಲ್ ಟ್ರಯಲ್ ಮಾಡಿಸುವ ಅಡಿಕೆಗೆ ನ್ಯಾಯ ಕೊಡಿಸುವಂತ ಕುಮಾರ್ ಕುಂಠಿಕಾನಮಠ ಮತ್ತು ಕುಮಾರ ಸುಬ್ರಮಣ್ಯ ಮುಲಿಯಾಲ ಅಂತವರನ್ನ ಅಡಿಕೆ ಬೆಳೆಗಾರರ ಸಮಾವೇಶಕ್ಕೆ ಆಮಂತ್ರಿಸಿ ಅವರಿಂದ ಅಡಿಕೆ ಬೆಳೆಗಾರರಿಗೆ ಪ್ರಸಕ್ತ ಸಮಯದಲ್ಲಿ ಐಸಿಯುನಲ್ಲಿರುವ  ಅಡಿಕೆ ಬದುಕಿಸುವ ಬಗ್ಗೆ ಸಮಾಲೋಚಿಸ ಬೇಕಾಗಿದೆ.

ಅಡಿಕೆಗೆ ಬಂದ ಗಂಡಾಂತರ ಭಾರತದ ಸಂಸತ್ ಅಥವ ಸರ್ವೋಚ್ಚ ನ್ಯಾಯಾಲಯದಿಂದ ಬಗೆಹರಿಯುವುದಿಲ್ಲ ಎನ್ನುವುದು ಪ್ರತಿಯೊಬ್ಬ ಅಡಿಕೆ ಬೆಳೆಗಾರರಿಗೆ ತಿಳಿದಿರಲಿ ಅದು ವಿಶ್ವ ಆರೋಗ್ಯ ಸಂಸ್ಥೆ (WHO) ಅಂಗಳದ ಚೆಂಡು ಆಗಿ ಹೋಗಿದೆ 2014ರಲ್ಲೇ ನಮ್ಮ ಸರ್ಕಾರಗಳು ಮತ್ತು ಅಡಿಕೆ ಬೆಳೆಗಾರರ ಸಂಘಟನೆಗಳ ಕೈ ತಪ್ಪಿ ಹೋಗಿದೆ.

   ಕುಮಾರ್ ಕುಂಠಿಕಾನ ಮಠ ಸಂಪರ್ಕ ಸಂಖ್ಯೆ
 +44 7715673881.

ಕುಮಾರ್ ಸುಬ್ರಮಣ್ಯ ಮುನಿಯಾಲರ ಸಂಪರ್ಕ ಸಂಖ್ಯೆ
6362175696.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...