Skip to main content

Blog number 3358. ಕಳೆದ 2023ರಲ್ಲಿ ಕಾಡಾನೆ ರಾಷ್ಟ್ರೀಯ ಹೆದ್ದಾರಿ ಸಂಚಾರ ನಿರ್ಬಂದ ಮಾಡಿ ಆನೆ ಸ್ಥಳಾಂತರ

*#viralvedeo*

https://m.youtube.com/shorts/LmvAQLj_r6E

*#ಕಾಡಾನೆಗಳನ್ನು_ರಾಷ್ಟ್ರೀಯ_ಹೆದ್ದಾರಿ_ವಾಹನ_ಸಂಚಾರ_ನಿರ್ಬಂಧಿಸಿ*

*#ರಸ್ತೆ_ದಾಟಿಸಿದ_ಅಪರೂಪದ_ವಿಡಿಯೊ*

*ಕಳೆದ ವರ್ಷದ 25 - ಡಿಸೆಂಬರ್- 2023ರ  ವಿಡಿಯೋ ನೋಡಿ.*

 *ಆನಂದಪುರಂ ಭಾಗದಲ್ಲಿ ಕಳೆದ ವರ್ಷ ಮೊದಲ ಬಾರಿಗೆ ಕಾಣಿಸಿಕೊಂಡ ಕಾಡಾನೆಗಳು*

*ಕಾಡಾನೆಗಳು 80 ದಿನಗಳ ನಂತರ ಭದ್ರಾ ಅಭಯಾರಣ್ಯಕ್ಕೆ ಕಳಿಸುವ ಪ್ರಯತ್ನದಲ್ಲಿ.*

*ಆನಂದಪುರಂ ಸಮೀಪದ ಪತ್ರೆಹೊಂಡ ಮತ್ತು ಗಿಳಾಲಗುಂಡಿ ಮಧ್ಯದ ಶಿವಮೊಗ್ಗ ಸಾಗರ ರಾಷ್ಟ್ರೀಯ ಹೆದ್ದಾರಿ 69 ದಾಟಿಸಲು ನಡೆದ ಹರಸಾಹಸ.*

 *ತುಪ್ಪೂರಿನಿಂದ ಗಿಳಾಲಗುಂಡಿ ತನಕ ಮೂರು ಗಂಟೆ ಕಾಲ ರಾಷ್ಟ್ರೀಯ ಹೆದ್ದಾರಿ ವಾಹನ ಸಂಚಾರ ತಡೆಯಲಾಗಿತ್ತು​.*

*ಇದು  ಅವತ್ತಿನ ಸಂತೋಷದ ಸುದ್ದಿ​ ಆಗಿತ್ತು.*

*ಮುಂದೆ ಅಯನೂರು ರಿಪ್ಪನಪೇಟೆ ರಸ್ತೆ ದಾಟಿಸಿ ಈ ಕಾಡಾನೆಗಳನ್ನ ಅವುಗಳ ಮೂಲ ನೆಲೆ ತಲುಪಿಸುವ ಕಾರ್ಯಯೋಜನೆ.*

*ದಿನಾಂಕ  28-ಡಿಸೆಂಬರ್- 2023 ರ ಬೆಳಗಿನ ಜಾವ ಅರಸಾಳು ರಿಪ್ಪನಪೇಟಿ ರಾಜ್ಯ ಹೆದ್ದಾರಿಯ 9ನೇ ಮೈಲಿಕಲ್ಲಿನಲ್ಲಿ ಆನಂದಪುರಂ ಭಾಗದಿಂದ ರಸ್ತೆ ದಾಟಿ ಭದ್ರಾ ಅಭಯಾರಣ್ಯದ ಕಡೆ ದಾಟಿ ಹೋಗಿದ್ದವು.*

*ದೀರ್ಘಾವದಿ ದಾರಿ ತಪ್ಪಿದ ಕಾಡಾನೆಗಳಿಗೆ ಹ್ಯಾಪಿ ಜರ್ನಿ... ಬೈ ಬೈ​.... ಅಂತ ಸುಖಾಂತ್ಯವಾದ ಪ್ರಕರಣ ಪುನಃ ಈ ವರ್ಷ ಮರುಕಳಿಸುವ ಸಾಧ್ಯತೆ.*
    *ವಿಳಂಭವಾದರೂ ಅಂತಿಮವಾಗಿ 80 ದಿನಗಳ ನಂತರ ಭದ್ರಾ ಅಭಯಾರಣ್ಯದಿಂದ ಅರಸಾಳು- ಕೆ೦ಚನಾಲ- ಕೆರೆಹಿತ್ತಲು - ಗಿಳಾಲಗುಂಡಿ - ಪತ್ರೆಹೊಂಡ-ಚೊರಡಿ - ಕುಂಸಿ - ಅಯನೂರು - ಅಂಬ್ಲಿಗೋಳ - ಬೈರಾಪುರ ಭಾಗದಲ್ಲಿ ದಾರಿ ತಪ್ಪಿ ಸಂಚರಿಸುತ್ತಿದ್ದ ಕಾಡಾನೆಗಳನ್ನು ಅವುಗಳು ಮಾನವ ಸಂಘರ್ಷ ಮಾಡುವ ಮೊದಲೇ ಅವುಗಳ ಮೂಲ ನೆಲೆ ಭದ್ರಾ ಅಭಯಾರಣ್ಯ ತಲುಪಿಸುವ ಕೆಲಸ ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಮಾಡಿತ್ತು.*

   *ಇಲ್ಲದಿದ್ದರೆ ಈ ಭಾಗದ ಜನರ ಜೀವ ಮತ್ತು ಕಾಡಾನೆಗಳ ಜೀವಕ್ಕೆ ಆಪತ್ತು ಎಂದು ಸುದ್ದಿ ಆಗಿತ್ತು.*

  *ಮೂರು ಆನೆ ಮತ್ತು ಒಂದು ಮರಿ ಆನೆ ಈ ಭಾಗದಲ್ಲಿ ಸಂಚರಿಸುತ್ತಿತ್ತು, ಕಳೆದ ವರ್ಷ ಡಿಸೆಂಬರ್ ತಿಂಗಳು ಪೂರ್ತಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ದಾರಿ ತಪ್ಪಿದ ಕಾಡಾನೆಗಳನ್ನು ಭದ್ರಾ ಅಭಯಾರಣ್ಯ ಸೇರಿಸುವ ಕೆಲಸವೇ ಆಗಿತ್ತು.*

  *ಅವತ್ತು ಮಧ್ಯಾಹ್ನ ರಾ.ಹೆದ್ದಾರಿ 69ರ ಶಿವಮೊಗ್ಗ ಸಾಗರ ಮಾರ್ಗದಲ್ಲಿ ತುಪ್ಪೂರಿನಿಂದ ಗಿಳಾಲಗುಂಡಿ ತನಕ ಸಂಪೂರ್ಣವಾಹನ ಸಂಚಾರ ನಿರ್ಬಂದಿಸಲಾಗಿತ್ತು.*

  *ಅರಣ್ಯ ಇಲಾಖೆಯ ಪರಿಶ್ರಮದಿಂದ ಆನಂದಪುರಂ ಸಮೀಪದ ಗಿಳಾಲಗುಂಡಿ ಸಮೀಪ ಎರೆಡು ಕಾಡಾನೆಗಳು ರಾಷ್ಟ್ರೀಯ ಹೆದ್ದಾರಿ ದಾಟಿದ ವಿಡಿಯೋ ಇದು.*

   *ಇಲ್ಲಿಂದ ಪತ್ರೆಹೊಂಡ, ಗಿಳಾಲಗುಂಡಿ, ಕೆರೆಹಿತ್ತಲು, ಲಕ್ಕವಳ್ಳಿ, ಮಾದಾಪುರ, ಕೆಂಚನಾಲ ದಾಟಿ ಅಯನೂರು - ರಿಪ್ಪನಪೇಟೆ ಮಾರ್ಗದ ರಾಜ್ಯ ಹೆದ್ದಾರಿ ದಾಟಬೇಕಾದ ಈ ಕಾಡಾನೆಗಳು ಇದೇ ಮಾರ್ಗದಲ್ಲಿ ಇಲ್ಲಿಗೆ ಬಂದಿದ್ದವು.*

    *ಅರಸಾಳು ರಿಪ್ಪನಪೇಟಿ ಹೆದ್ದಾರಿ ದಾಟಿಸಿ ಬಿಟ್ಟರೆ ಭದ್ರಾ ಅಭಯಾರಣ್ಯ ಸೇರುತ್ತದೆ.*

   *ಮಾರ್ಗ ಮದ್ಯದಲ್ಲಿ ಈ ಆನೆಗಳಿಗೆ ಕಾಯುತ್ತಿರುವ ಇದರ ಗುಂಪಿನ ತಾಯಿ ಮತ್ತು ಮಗು ಆನೆ ಕೂಡ ಈ ಗುಂಪಿಗೆ ಸೇರಿಕೊಳ್ಳಲಿದೆ ಎನ್ನಲಾಗಿತ್ತು.*

*ಇದರಿಂದ ಈ ಕಾಡಾನೆಗಳು ತಮ್ಮ 80 ದಿನಗಳ ದೀರ್ಘಾವದಿ ಅತಂತ್ರದ ದಾರಿ ತಪ್ಪಿದ ಕಷ್ಟದ ಜೀವನ ಕೊನೆಗೊಳ್ಳಲಿದೆ ಎಂಬ ಆಶಾ ಭಾವನೆ ಈ ಭಾಗದ ಜನರದ್ದು.*

*ಆದರೆ ಈ ರಾಷ್ಟ್ರೀಯ ಹೆದ್ದಾರಿ ದಾಟಿದ ಕಾಡಾನೆಗಳು ಮರುದಿನ ಮತ್ತೆ ವಾಪಾಸು ರಾಷ್ಟ್ರೀಯ ಹೆದ್ದಾರಿ ದಾಟಿ ಕುಣೇಹೊಸೂರು ಕಾಡಲ್ಲಿ ಕಾಣಿಸಿಕೊಂಡಿತ್ತು.*

 *ದಿನಾಂಕ  28-ಡಿಸೆಂಬರ್- 2023 ರ ಬೆಳಗಿನ ಜಾವ ಅರಸಾಳು ರಿಪ್ಪನಪೇಟಿ ರಾಜ್ಯ ಹೆದ್ದಾರಿಯ 9ನೇ ಮೈಲಿಕಲ್ಲಿನಲ್ಲಿ ಆನಂದಪುರಂ ಭಾಗದಿಂದ ರಸ್ತೆ ದಾಟಿ ಭದ್ರಾ ಅಭಯಾರಣ್ಯದ ಕಡೆ ದಾಟಿ ಹೋಗಿದ್ದವು.*

*ಆದರೆ ಕಾಡಾನೆಗಳು ಮುಂದಿನ ವರ್ಷ ಇದೇ ಮಾರ್ಗದಲ್ಲಿ ಬರುವ ಸಾಧ್ಯತೆ ಇದೆ ಅಂತಲೂ ಹಾಗೂ ಕಾಡಾನೆಗಳು ಹೊಸದಾಗಿ ಕಾರಿಡಾರ್ ಗುರುತಿಸಿ ಕೊಳ್ಳುವ ಸಾಧ್ಯತೆ ಇರುತ್ತದೆಂದು ವನ್ಯಜೀವಿ ಸಂಶೋದಕರು ಹೇಳಿದ್ದರು.*

*ಅವರ ಮಾತು ಸತ್ಯ ಅನ್ನಿಸುವಂತೆ ನಿನ್ನೆ ಈ ಮಾರ್ಗದ ಸಮೀಪ ಕಾಡಾನೆಗಳು ಪ್ರತ್ಯಕ್ಷವಾಗಿದೆ.*

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...