Skip to main content

Blog number 3369. ಆನಂದಪುರಂ ಆನೆ ಕಾರಿಡಾರ್ ದಿನಾಂಕ 13- ಡಿಸೆಂಬರ್- 2024 ರ ವರೆಗೆ ಅಪ್ಡೇಟ್

https://www.facebook.com/share/p/15pjBrQzia/

*#ಆನಂದಪುರಂ_ಆನೆ_ಕಾರಿಡಾರ್_ಅಪ್ಡೇಟ್*

*10-ಡಿಸೆಂಬರ್ - 2024 ಮಂಗಳವಾರ ಮತ್ತು 11-ಡಿಸೆಂಬರ್-2024ರ ರಾತ್ರಿ 10ರ ತನಕದ ಮಾಹಿತಿ.*


   *ನಿನ್ನೆ ರಾತ್ರಿ ಕಾಡಾನೆಗಳು (11 ಡಿಸೆಂಬರ್ 2024 ಬುಧವಾರ) ರಾತ್ರಿ 8 ಗಂಟೆಗೆಆನಂದಪುರಂ ಹೋಬಳಿಯ ಆಚಾಪುರ ಗ್ರಾಮ ಪಂಚಾಯಿತಿಯ ತಂಗಳವಾಡಿ ಸಮೀಪದ ಚಂದಾಳಗೆರೆ ಭಾಗದಲ್ಲಿ ಕಂಡುಬಂದಿತ್ತು*

   *ರಾತ್ರಿ 8:00 ಸಮಯದಲ್ಲಿ ರೈತರೊಬ್ಬರು ತಮ್ಮ ತೋಟದ ಬೋರ್ವೆಲ್ ನೀರಿನ ಪೈಪ್ ವಾಲ್  ತಿರುಗಿಸಲು ಹೋದಾಗ ಅವರ ತೋಟದ  ಮೇಲ್ಭಾಗದಲ್ಲಿ ಆನೆಗಳು ಇರುವುದು ಗೊತ್ತಾಗಿ ಊರವರಿಗೆಲ್ಲಾ ಫೋನ್ ಮಾಡಿ ಕರೆದಿದ್ದಾರೆ ನಂತರ ಊರವರೆಲ್ಲ ಸೇರಿ ಶಬ್ದ ಮಾಡಿ ಪಟಾಕಿ ಸಿಡಿಸಿದ್ದರಿಂದ ಆ ಭಾಗದಿಂದ ಆನೆಗಳು ಉದನೂರು ಕಾಡಿನ ಭಾಗಕ್ಕೆ ಹೋಗಿರುತ್ತದೆ.*

*ಇದೇ ಸಂದರ್ಭದಲ್ಲಿ ಈ ಊರಿನ ಚೆನ್ನಪ್ಪ ಗೌಡರ ತೋಟವನ್ನು ಹಾದು ಹೋಗಿರುತ್ತದೆ.*

*ಸೋಮವಾರ ರಾತ್ರಿ ಅಥವಾ ಮಂಗಳವಾರದ ಬೆಳಿಗಿನ ಜಾವ ಗೌತಮಪುರ ಗ್ರಾಮ ಪಂಚಾಯಿತಿಯ ಹೊಸಕೊಪ್ಪದ ಭಾಗದಲ್ಲಿ ಈ ಆನೆಗಳು ಸಂಚರಿಸಿದೆ, ಬೆಳಗಿನ ಜಾವ ಹೊಸಕೊಪ್ಪದ ರೈತ ಶಿವಾನಂದರ ಮನೆ ಪಕ್ಕದ ಗುಮ್ಮನಾಳ ಕೆರೆಗೆ ಬಂದಿದ್ದ ಆನೆಗಳು ಆ ಕೆರೆಯಲ್ಲಿ ನೀರು ಕುಡಿದು ಅಲ್ಲಿ ಲದ್ದಿಗಳನ್ನು ಹಾಕಿ ಹೋಗಿದೆ.*

   *ಈ ಆನೆಗಳ ತಂಡದಲ್ಲಿ ಒಟ್ಟು ಐದು ಆನೆಗಳಿದೆ, ಒಂದು ಹೆಣ್ಣಾನೆ ಈ ಆನೆ ತಂಡದ ನಾಯಕಿಯಾಗಿದೆ.*

*ಚಂದಾಳಗೆರೆ 5 ರಿಂದ 6 ಎಕರೆ ವಿಸ್ತೀರ್ಣ ಇದ್ದು ವರ್ಷಪೂರ್ತಿ ನೀರು ಇರುತ್ತದೆ, ಅಕ್ಕ ಪಕ್ಕದ ಉದನೂರು ಗುಡ್ಡದ ಕಾಡಿನಿಂದ ಮಳೆಗಾಲ ನೀರು ಹರಿದು ಬರುತ್ತದೆ ಇದೆ ಈ ಕೆರೆಯಿಂದ 300 ಮೀಟರ್ ದೂರದಲ್ಲಿ ಆಲಗೇರಿ ಮಂಡ್ರಿಯ  ಚೆನ್ನಮ್ಮಾಜಿ ಶಾಲೆಯ ನಿವೃತ್ತ ಉದ್ಯೋಗಿ ರಂಗನಾಥ ಅವರ ಮನೆ ಇದೆ ಅಕ್ಕ ಪಕ್ಕದಲ್ಲಿ ಇವರ ಸಹೋದರ ಸಂಬಂದಿಗಳ ಮನೆ ತೋಟಗಳಿದೆ.*

 *ನಿನ್ನೆ ರಾತ್ರಿ 10 ಗಂಟೆಗೆ (11 - ಡಿಸೆಂಬರ್ -2024)  ರಂಗನಾಥರು ಪೋನ್ ಮಾಡಿ ಈ ವಿಚಾರ ತಿಳಿಸಿದ್ದರು*

*ನಿನ್ನೆ ಬೆಳಿಗ್ಗೆ  (11-ಡಿಸೆಂಬರ್- 2024 )  ಬುಧವಾರ ಬೆಳಗ್ಗೆ ಅವರ ಊರಿನ ಕುಂಬಾರಹೊಂಡದ ಗದ್ದೆಯಲ್ಲಿ ಆನೆ ಸಾಗು ಹೋಗಿದ್ದ ಹೆಜ್ಜೆ ಗುರುತುಗಳನ್ನು ಗುರುತಿಸಿ ಅರಣ್ಯ ಇಲಾಖೆಯವರು ಈ ಭಾಗದವರಿಗೆ ಎಚ್ಚರದಿಂದಿರಲು ತಿಳಿಸಿದ್ದರಂತೆ.*

*ಸೋಮವಾರ ರಾತ್ರಿ ಈ ಭಾಗದಲ್ಲಿ ಚಲಿಸಿದ ಆನೆಗಳ ಗುಂಪು ಹೊಸಕೊಪ್ಪದಲ್ಲಿ ಕಂಡುಬಂದಿದ್ದು ಪುನಃ ಬುಧವಾರ ರಾತ್ರಿ ಚಂದಾಳಗೆರೆಯಲ್ಲಿ ಕಾಣಿಸಿಕೊಂಡಿದೆ,ಇಲ್ಲಿಗೆ ಸಮೀಪದಲ್ಲಿ #ಕೊಲ್ಲಿಬಚ್ಚಲು ನೀರಾವರಿ ಡ್ಯಾಮ್ ಇರುವುದು ಈ ಆನೆಗಳಿಗೆ ತಂಗಲು ಅನುಕೂಲವಾಗಿರಬಹುದು ಎಂದು ತಿಳಿಸಿದ್ದಾರೆ.*

   *50 ವರ್ಷದ ಹಿಂದೆ (ಅಂದಾಜು 1975) ಇವರು ಸಣ್ಣ ಬಾಲಕನಾಗಿದ್ದಾಗ ಎರಡು ಆನೆಗಳು ಚೆಂದಾಲಗೆರೆಯ ಇವರ ಜಮೀನಿನಲ್ಲಿ ಹಾದು ಹೋಗಿದ್ದು ನೋಡಿದ್ದರಂತೆ ಅದರ ಮರು ವರ್ಷವೂ ಆ ಎರಡು ಆನೆ ಬಂದಿತ್ತಂತೆ ನಂತರದ ವರ್ಷ ಆನೆಗಳು ಬರಲಿಲ್ಲ ಆಗ ಈ ವಿಚಾರಗಳು ಎಲ್ಲೂ ಸುದ್ದಿ ಆಗಲಿಲ್ಲ ಎನ್ನುತ್ತಾರೆ.*

*ಅದರ ನಂತರ ಆನೆ ಈ ಭಾಗದಲ್ಲಿ ಮೊದಲು ಕಾಣಿಸಿದ್ದು ಕಳೆದ ವರ್ಷ ಮತ್ತು ಈ ವರ್ಷ ಎನ್ನುತ್ತಾರೆ.*

*ಗುರುವಾರ ರಾತ್ರಿ (12-ಡಿಸೆಂಬರ್- 2024) ಮತ್ತು ಶುಕ್ರವಾರ (13-ಡಿಸೆಂಬರ್-2024 ) ಬೆಳಿಗ್ಗೆ ಈ ಆನೆಗಳ ಸುದ್ದಿಗಾಗಿ ಕಾಯುತ್ತಿದ್ದೇವೆ.*

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...