Skip to main content

Blog number 1689. ಮೊದಲ ಪುಸ್ತಕದ ಸಂಭ್ರಮ ಯಾವತ್ತೂ ಮರೆಯಲಾಗದ ಸವಿ ಸವಿ ನೆನಪುಗಳು

#ಮೂರು_ವರ್ಷದ_ಹಿಂದೆ_ಸಂಭ್ರಮದಿಂದ_ಬರೆದ_ನೆನಪು.

#ಮೊದಲ_ಪುಸ್ತಕ_ಮುದ್ರಣಗೊಂಡು_ಕೈ_ಸೇರಿದ_ಸಂತೋಷ_ನಂತರ_ಸಿಗುವುದಿಲ್ಲ.

#ಎರಡನೆ_ಪುಸ್ತಕ_ಬಿಲಾಲಿ_ಬಿಲ್ಲಿ_ಅಭ್ಯಂಜನ 

#ಮೂರನೆಯದ್ದು_ಚಂಪಕ_ರಾಣಿ_ಇಂಗ್ಲೀಷ್_ಅವತರಣಿಕೆ

#ನಾಲ್ಕನೆಯದ್ದು_ಆನಂದಪುರಂ_ಇತಿಹಾಸ_ಸದ್ಯವೇ_ಕೈ_ಸೇರಲಿದೆ.

#ಕೆಳದಿ_ಸಾಮ್ರಾಜ್ಯ_ಇತಿಹಾಸ_ಮರೆತಿರುವ
#ಬೆಸ್ತರರಾಣಿ_ಚಂಪಕ
(ಕೆಳದಿಯ ಖ್ಯಾತ ರಾಜ ವೆಂಕಟಪ್ಪ ನಾಯಕ ಮತ್ತು ಚಂಪಕಾ ರಾಣಿ ದುರಂತ ಪ್ರೇಮ ಕಥೆ )

#ಇದು_ಇತಿಹಾಸವನ್ನಾಧರಿಸಿದ_ಕಾಲ್ಪನಿಕ_ಕಾದ೦ಬರಿ


  ಸುಮಾರು 10 ವರ್ಷದ ಹಿಂದೆ ಮುದ್ರಿಸ ಬೇಕಾದ ಈ ಕಾದಂಬರಿ ಇವತ್ತು ಮಿತ್ರರಾದ ಹಾಯ್ ಬೆಂಗಳೂರು ವರದಿಗಾರ ಮತ್ತು ಶಿವಮೊಗ್ಗದ ಜನ ಹೋರಾಟ ಪತ್ರಿಕೆ ಸಂಪಾದಕರಾದ ಶೃಂಗೇಶ್ ರ ಸಹಕಾರದಿಂದ ಪ್ರಿಂಟ್ ಆಗಿ ರಕ್ಷಾ ಬಂದನದ ದಿನ ನನ್ನ ಕೈ ತಲುಪಿದೆ.
  ನನ್ನ ಹಲವು ಅವತಾರ ನೋಡಿರುವ ಅವರದ್ದೇ ಸುಂದರ ಮುನ್ನುಡಿ ಇದೆ.
  ಈ ಪುಸ್ತಕ ಆನಂದಪುರದ #ಮುರುಘರಾಜೇಂದ್ರ_ಸ್ವಾಮೀಜಿಗಳಿಗೆ, #ಆನಂದಪುರದ_ಕನ್ನಡ_ಸಂಘಕ್ಕೆ, #ಆನಂದಪುರದ_ಇತಿಹಾಸ_ಉಳಿಸಿ_ಅಭಿಯಾನ_ಸಮಿತಿಗೆ_ಮತ್ತು #ಆನಂದಪುರದ_ಈಜು_ಮಿತ್ರರ_ಬಳಗಕ್ಕೆ_ಅಪಿ೯ಸಿದ್ದೇನೆ.
  ಇದು ಆನಂದಪುರದ್ದೇ ಇತಿಹಾಸ ಮತ್ತು ಆನಂದಪುರದಲ್ಲೇ ಇರುವ ಚಂಪಕ ರಾಣಿ ಸ್ಮಾರಕದ ಕಥೆ ಆಗಿದೆ.
  ಕೆಳದಿಯಿಂದ ಕೇರಳದ ಬೇಕಲ್ ವರೆಗೆ ಕೆಳದಿ ರಾಜ್ಯದ ಆಡಳಿತ, ಅವರ ಅವಧಿಯಲ್ಲಿ ನಿಮಿ೯ಸಿದ ಕೋಟೆ ಕೊತ್ತಳ, ದೇವಾಲಯ ಆ ಕಾಲದ ರೀತಿ ನೀತಿ ರಿವಾಜು, ಕೋಟಿ ಕಟ್ಟಿ ಕೋಟೆ ನಿವ೯ಹಿಸುವ ಕೋಟೆಗಾರ ಸಮಾಜ, ಕೊಡಚಾದ್ರಿಯ ತುದಿಯ ಮೂಲ ಮುಕಾಂಬಿಕೆಯ ಅಚ೯ಕರಾದ ಬಳೆಗಾರರು, ಪ್ರತಿ 12 ವರ್ಷಕ್ಕೆ ನಾಸಿಕ್ ನಿಂದ ನಡೆದು ಮಂಗಳೂರು ತಲುಪುವ ಬಾರಾಪಂಥ್, ಕೊಡಚಾದ್ರಿಯ ಪುರಾಣ ಪ್ರಸಿದ್ಧ ಉಕ್ಕಿನ ಕಂಭ, ಈ ಭಾಗದ ಜಂಬಿಟ್ಟಿಗೆ ಮಹತ್ವ, ಕಟ್ಟಡ ತಯಾರಿಕೆಗೆ ಮರ ಕಡಿಯುತ್ತಿದ್ದ ಗಂಜಿ ಮನೆತನಗಳು, ಚಂಪಕಾಳ ಬೆಸ್ತರ ಜಾತಿ, ರಾಣಿ ಅಬ್ಬಕ್ಕಳು ಪೋಚು೯ಗಿಸರ ಮೇಲೆ ನಡೆಸಿದ ಗೆರಿಲ್ಲಾ ಯುದ್ಧ ಮತ್ತು ಇವರಿಬ್ಬರ ಪ್ರೇಮಾ೦ಕುರ ಕ್ಕೆ ಕಾರಣವಾದ ರಂಗೋಲಿ ಇವೆಲ್ಲ ಈ ಕಾಲ್ಪನಿಕ ಕಾದಂಬರಿಯಲ್ಲಿ ಸೇರಿದೆ.
   ಇತಿಹಾಸದ ಕಾಲ ಘಟ್ಟದಲ್ಲಿ ನಡೆದ ಈ ದುರಂತ ಪ್ರೇಮ ಕಥೆ ಜನ ಮಾನಸದಲ್ಲಿ ಮರೆಯುವ ಮೊದಲೆ ಈ ಪುಸ್ತಕವಾಗಿ ಬಂದಿದೆ.
  ಇದಕ್ಕೂ ಮೊದಲು ಮುದ್ರಣ ಆಗಬೇಕಾಗಿದ್ದ ನನ್ನ ಸಣ್ಣ ಕಥೆಯ ಎರೆಡು ಪುಸ್ತಕ ಮುಂದಿನ ವಷ೯ ಮುದ್ರಿಸಲಿದ್ದೇನೆ.
  ಹೊಸ ಲೇಖಕಕರ ಪುಸ್ತಕ ಪ್ರಕಟಿಸಲು ಪ್ರಕಾಶನಗಳು ಬರಲು ಸಾಧ್ಯವಿಲ್ಲ ಮತ್ತೆ ಕೆಲ ಪ್ರಕಾಶನಗಳು ಮುದ್ರಿಸಿದರೂ ಗ್ರಂಥಾಲಯಗಳಿಗಾಗಿ ಮುದ್ರಿಸಿ ಬರೆದವರಿಗೆ 100 ಉಚಿತ ಪ್ರತಿ ನೀಡುತ್ತಾರೆ ಆದರೆ ಇಲ್ಲಿ ನಿಜವಾದ ಓದುಗನಿಗೆ ಪುಸ್ತಕ ತಲುಪುವುದಿಲ್ಲ ಹಾಗಾಗಿ ನನ್ನದೇ ಪ್ರಕಾಶನ ಪ್ರಾರಂಬಿಸಿದ್ದೇನೆ ಅದರ ಹೆಸರು "ಪಶ್ಚಿಮ ಘಟ್ಟದ ಶಿವಮೊಗ್ಗ ಓದುಗ -ವಿಮಶ೯ಕ ಬಳಗ" ಈ ಪ್ರಕಾಶನದಿಂದ ಪ್ರತಿ ವಷ೯ ಮಲೆನಾಡಿನ ಹೊಸ ಬರಹಗಾರರ ಕೆಲ ಪುಸ್ತಕ ಪ್ರಕಟಿಸುವ ಯೋಚನೆ ಕೂಡ ಇದೆ.
  ಮುಂದಿನ ವಾರ ಪುಸ್ತಕ ಬಿಡುಗಡೆ ಮತ್ತು ಮಾರಾಟ ಪ್ರಾರಂಭ ಮಾಡಬೇಕು.
  #ನನ್ನ_ಹಲವು_ಅವತಾರಗಳಲ್ಲಿ_ಇದೂ_ಒಂದು_ಅವತಾರ

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ