Skip to main content

Blog number 1721. ನೆಟ್ ಪ್ಲಿಕ್ಸ್ ನಲ್ಲಿ ಇರುವ ವೆಬ್ ಸೀರೀಸ್ ಹಂಟ್ ಪಾರ್ ವೀರಪ್ಪನ್ ಟ್ರೂ ಕ್ರೈಂ ಡಾಕ್ಯುಮೆಂಟರಿ.

#Hunt_for_Veerappan_Webseries.

#ಇಪ್ಪತ್ತು_ದೀರ್ಘ_ವರ್ಷಗಳ_ವೀರಪ್ಪನ್_ಅಟ್ಟಹಾಸ.

#ವೀರಪ್ಪನ್_ಅಂತ್ಯದವರೆಗೆ

#ಟ್ರೂ_ಕ್ರೈಂ_ಡಾಕ್ಯುಮೆಂಟರಿ_ನೆಟ್_ಪ್ಲಿಕ್ಸ್_ನಲ್ಲಿ_ನೋಡಬಹುದು.


   ಹೆಚ್ಚು ಕಡಿಮೆ ನಾನು ವೀರಪ್ಪನ್ ಬಗ್ಗೆ ಬರೆದ ಎಲ್ಲಾ ಲೇಖನ ಪುಸ್ತಕಗಳನ್ನು ಓದಿದ್ದೇನೆ.
   ಶಿವಸುಬ್ರಮಣ್ಯಂ ತೆಗೆದ ವೀರಪ್ಪನ್ ಮೊದಲ ಪೋಟೋಗಳು ಮಾಡಿದ ಸುದ್ದಿ ಆದಿನಗಳಲ್ಲಿ ದೊಡ್ಡ ಸಂಚಲನವೇ ಆಗಿತ್ತು.
   ಖ್ಯಾತ ವನ್ಯ ಪ್ರಾಣಿಗಳ ಛಾಯಾಗ್ರಾಹಕರಾದ ಕೃಪಕರ ಮತ್ತು ಸೇನಾನಿ ಅಪಹರಣದಿಂದ ಕನ್ನಡದ ಹೆಸರಾಂತ ನಟ ರಾಜ್ ಕುಮಾರ್ ಅಪಹರಣದವರೆಗೆ ವೀರಪ್ಪನ್ ಅಟ್ಟಹಾಸ ಸರ್ಕಾರಗಳಿಗೆ ದೊಡ್ಡ ಸವಾಲು ಆಗಿತ್ತು.
   ಈವರೆಗಿನ ಎಲ್ಲಾ ಲೇಖನಗಳು ಬಿಡಿ ಬಿಡಿ ಅಧ್ಯಾಯಗಳಾಗಿತ್ತು ಆದರೆ ಹಂಟ್ ಫಾರ್ ವೀರಪ್ಪನ್ ಎಂಬ ವೆಬ್ ಸೀರೀಸ್ ಪೂರ್ಣ ಪ್ರಮಾಣದಲ್ಲಿ ವಿವರಗಳನ್ನು ದಾಖಲೆ ಸಮೇತ ದಾಖಲಿಸಿದೆ.
  ಇಂಗ್ಲೀಷ್ ತಮಿಳು ಕನ್ನಡದಲ್ಲಿರುವ ವೀರಪ್ಪನ್ ಶಿಕಾರಿಯ ಸತ್ಯ ಕಥೆಯನ್ನು ಸೆಲ್ವಮಣಿ ಸೆಲ್ವರಾಜ್ ನಿರ್ದೇಶಿಸಿದ್ದಾರೆ ಇದನ್ನು ನಿರ್ಮಿಸಿದವರು ಅಪೂರ್ವ ಭಕ್ಷಿ .
   ಇದನ್ನು ದಿನಾಂಕ 4 ಆಗಸ್ಟ್ 2023ರಂದು Netflix ನಲ್ಲಿ ಬಿಡುಗಡೆ ಆಗಿದೆ ಅಸಂಖ್ಯಾತ ವೀಕ್ಷಣೆಯ ದಾಖಲೆ ಮಾಡಿದೆ.
   ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಜೊತೆ ಸಂದರ್ಷನ ಪ್ರಾರಂಭವಾಗಿ ಎಲ್ಲಾ ಘಟನೆಗಳು ಅದರ ಪತ್ರಿಕಾ ವರದಿ ಅಂದಿನ ಅಧಿಕಾರಿಗಳ ಮತ್ತು ಸ್ಥಳಿಯರ ಸಂದರ್ಶನದ ಜೊತೆ ಸಾಗುತ್ತಾ ಮೂರು ಎಪಿಸೋಡಿನಲ್ಲಿ ವೀರಪ್ಪನ್ ಹತ್ಯೆ ಮತ್ತು ಆತನ ಸಮಾದಿ ತನಕ ಸಾಗುತ್ತದೆ.
  ಶಿವಸುಬ್ರಮಣ್ಯ ತೆಗೆದ ವೀರಪ್ಪನ್ ಮತ್ತು ಸಹಚರರ ಫೋಟೋ ಸೆಷನ್ ನಿಂದ ಅವರೆಲ್ಲರ ವಂಶವೃಕ್ಷ ಸಂಗ್ರಹ ಸಾಧ್ಯವಾಯಿತು ಇದರಿಂದ ವೀರಪ್ಪನ್ ಗೆ ಸಹಾಯ ಮಾಡುವವರ ಮಾಹಿತಿ ದೊರೆಯಿತು ಇದು ವೀರಪ್ಪನ್ ಮಾಡಿದ ದೊಡ್ಡ ತಪ್ಪು ಎಂದು ಟೈಗರ್ ಅಶೋಕ್ ಹೇಳುತ್ತಾರೆ.
   ಶಂಕರ ಮಹಾದೇವ ಬಿದರಿ ಆತ್ಮ ಚರಿತ್ರೆ ಓದಿದ್ದೇನೆ ಅವರ ಶ್ರಮದಿಂದ ವೀರಪ್ಪನ್ ಗ್ಯಾಂಗ್ ತಲ್ಲಣಿಸಿರುವುದು ಸತ್ಯ ಆದರೆ ಅವರು ಮಾನವ ಹಕ್ಕುಗಳ ಉಲ್ಲಂಘಿಸಿದರಾ? ಎಂಬ ಪ್ರಶ್ನೆಗಳು ಇದೆ ...ಅಂತಿಮವಾಗಿ ಸುಪ್ರಿಂ ಕೋರ್ಟ್ ಅವರಿಗೆ ಕ್ಲೀನ್ ಚಿಟ್ ಕೊಟ್ಟಿದೆ.
   ವೀರಪ್ಪನ್ ಅಂತ್ಯಗೊಳಿಸಿದ ತಮಿಳುನಾಡಿನ ಪೋಲಿಸ್ ಅಧಿಕಾರಿ ವಿಜಯ ಕುಮಾರ್ ಅವರ ಆಪರೇಷನ್ ಕುಕೂನ್ ಸತ್ಯವಾ ಎಂಬ ಪ್ರಶ್ನೆಗೆ ಉತ್ತರ ಇಲ್ಲ ಕಾರಣ ವೀರಪ್ಪನ್ ಮತ್ತು ಅವರ ಮೂವರು ಸಹಚರರನ್ನು ಪಾಯಿಂಟ್ ರೇಂಜ್ ನಲ್ಲಿ ಹತ್ಯೆ ಮಾಡಿದ್ದು ಸತ್ತವರ ದೇಹದ ಸಾಕ್ಷಿ ತೋರಿಸುತ್ತೆ ಇದಕ್ಕೆ ಪೋಲಿಸ್ ಅಧಿಕಾರಿ ಸಂದರ್ಶನದಲ್ಲಿ ಅಂತ್ಯದಲ್ಲಿ ಹೇಳುವುದು 3 ಪ್ರಶ್ನೆಗಳಿದೆ ಒ0ದು ವೀರಪ್ಪನ್ ಸತ್ತಿದಾನೋ ಇಲ್ಲವೊ?... ಎರಡನೆಯದ್ದು ಇದನ್ನು ನಂಬುತ್ತೀರೋ ಇಲ್ಲವೋ? .... ಮೂರನೆಯದ್ದು ವೀರಪ್ಪನ್ ಕೊಂದದ್ದು STF ಹೌದೊ ಅಲ್ಲವೋ?.... ಇದರ ಮಧ್ಯ ನೀವು ಏನಾದರೂ ಸೇರಿಸಿಕೊಳ್ಳಿ ಎಂದು ನಗುತ್ತಾರೆ.
    ನಿಜಕ್ಕೂ ಇಡೀ ದೇಶಕ್ಕೆ ಮಾತ್ರ ಅಲ್ಲ ವಿಶ್ವದಲ್ಲೇ ವೀರಪ್ಪನ್ ದೊಡ್ಡ ಸಮಸ್ಯೆ ಆಗಿದ್ದನ್ನು ಎಲ್ಲಾ ಹಂತದಲ್ಲಿ ಸರಿಯಾಗಿ ಜೋಡಿಸಿ ಅನಾವಶ್ಯಕವಾಗಿ ಏನನ್ನು ಸುತ್ತಿಸದೆ ಸ್ವೀಟ್ ಅಂಡ್ ಶಾರ್ಟ್ ಆಗಿ 20 ವರ್ಷದ ದೀರ್ಘ ಕಾರ್ಯಚರಣೆಯ #ಹಂಟ್_ಪಾರ್_ವೀರಪ್ಪನ್ ಅತ್ಯುತ್ತಮವಾದ #True_Crime_Documentory ಆಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...