Skip to main content

Blog number 1716. ಚರ್ಮ ರಕ್ಷಣೆಗೆ ಮಲೆನಾಡು ಗಿಡ್ಡ ಗೋತಳಿ A - 2 ಹಾಲು, ಶುದ್ಧ ಕೊಬ್ಬರಿ ಎಣ್ಣೆ ಮತ್ತು ಸುಗಂದ ತೈಲದಿಂದ ತಯಾರಾದ A - 2 ಮಿಲ್ಕ್ ಸೋಪು ಬಳಕೆ.

#ಮಿಲ್ಕ್_ಸೋಪುಗಳು

#ಅದರಲ್ಲೂ_ದೇಶಿ_ಗೋವಿನ_ಹಾಲಿನ_A2_ಮಿಲ್ಕ್_ಸೋಪುಗಳು

#ನಾನು_ರಾಸಾಯನಿಕ_ಸೋಪಿನಿಂದ_ಮಲೆನಾಡು_ಗಿಡ್ಡ_ತಳಿಯ_ಹಾಲಿನ_ಸೋಪಿಗೆ_ಬದಲಾಗಿದ್ದೇನೆ.

#ಸೌಂದರ್ಯವರ್ದನೆಗಾಗಿ_ಹಾಲಿನಿಂದ_ಸ್ನಾನ_ಮಾಡುತ್ತಿದ್ದರು.

#ಭಾರತೀಯ_ಆಯುರ್ವೇದದಲ್ಲಿ_ಕ್ಷೀರಾದಾರ_ಚಿಕಿತ್ಸೆ_ಇದೆ.

#ಇತಿಹಾಸದಲ್ಲಿ_ಕ್ಲೀಯೋಪಾತ್ರ_ಇಂಗ್ಲೇಂಡಿನ_ರಾಣಿ_ಎಲಿಜಬೆತ್_ಹಾಲಿನಿಂದ_ಸ್ನಾನ_ಮಾಡುತ್ತಿದ್ದರು.
   ನನ್ನ ಬಾಲ್ಯದಲ್ಲಿ ನಮ್ಮ ತಂದೆಯವರು ಆಯ್ಕೆ ಮಾಡಿದ್ದ ಲೈಫ್ ಬಾಯ್ ಸೋಪು ಖಾಯ೦ ಆಗಿತ್ತು ಇದರ ಮಧ್ಯದಲ್ಲಿ ಶಾಲಾ ರಜಾ ದಿನಗಳಲ್ಲಿ  ಈಜಾಡುವ ಹಪಾಹಪಿಯಿಂದ ಬಟ್ಟೆ ಸೋಪು ಕಸ್ತೂರಿ ಬಾರ್ ನ ಒ೦ದೆರೆಡು ಗೆರೆ ಮನೆಯಲ್ಲಿ ಗೊತ್ತಾಗದಂತೆ ಕತ್ತರಿಸಿ ಒಯ್ಯುತ್ತಿದ್ದೆ.
   ಪ್ರಾಯದಲ್ಲಿ ಹಮಾಮ್‌ ನಂತರ ಲಕ್ಸ್ ಸೋಪಿಗೆ ಅಲ್ಲಿಂದ ಜಾಹಿರಾತುಗಳಿಂದ ಪ್ರೇರಣೆಯಿಂದ ಲಿರಿಲ್ ನಂತರ ಮೈ ತುರಿಕೆ ಉಪಶಮನಕ್ಕಾಗಿ ಚಂದ್ರಿಕಾ ನಂತರ ಸರಿಯಾದ ಬುದ್ಧಿ ಸ್ಥಿಮಿತಕ್ಕೆ ಬಂದಂದಿನಿಂದ ನಮ್ಮ ರಾಜ್ಯದ ಮೈಸೂರು ಸ್ಯಾಂಡಲ್ ಸೋಪಿನಲ್ಲಿ ನಿಂತಿದೆ.
  ಮೊನ್ನೆ ಗೆಳೆಯರು ಅವರ ಸಂಸ್ಥೆಯ ಮಲೆನಾಡು ಗಿಡ್ದ ತಳಿಯ ಗೋವಿನ ಹಾಲಿನಿಂದ ತಯಾರಿಸಿದ A - 2 ಮಿಲ್ಕ್ ಸೋಪು ಸ್ಯಾಂಪಲ್ ಕೊಟ್ಟಿದ್ದನ್ನು ಬಳಸಲು ಶುರು ಮಾಡಿದ ಮೇಲೆ ಮೈಸೂರು ಸ್ಯಾಂಡಲ್ ನಿಂದ A - 2 ಮಿಲ್ಕ್ ಸೋಪಿಗೆ ಬದಲಾಗುವ ಮನಸಾಗಿದೆ.
  ಕಾರಣ ನಾವು ಬಳಸುವ ಸೋಪು ಗಳಲ್ಲಿ ವಿಪರೀತ ರಾಸಾಯನಿಕ ಬಳಕೆ ಮಾಡುತ್ತಾರೆ ಇದು ಚರ್ಮಕ್ಕೂ ಅಪಾಯ ಮತ್ತು ತಲೆ ಕೂದಲು ಉದುರಿ ಬೋಳಾಗಿಸಲು ಕಾರಣ ಆದ್ದರಿಂದ ರಾಸಾಯನಿಕ ಬಳಕೆ ಇಲ್ಲದ ದೇಶಿ ಗೋವಿನ ಹಾಲು ಮತ್ತು ಶುದ್ಧ ಕೊಬ್ಬರಿ ಎಣ್ಣೆಯಿಂದ ತಯಾರಿಸುವ A - 2 ಸೋಪು ಅತ್ಯುತ್ತಮ.
   ಉಡುಪಿ ಜಿಲ್ಲೆಯ ತ್ರಿಮದುರ A - 2 ಮಿಲ್ಕ್ ಸೋಪು ಬೇಕಾದವರು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಆರ್ಡರ್ ಮಾಡಬಹುದು https://www.olufresh.com/product/desi-cow-milk-soap-a2-cow-milk-soap-100-grams/

 ಇತಿಹಾಸದಲ್ಲಿ ದಾಖಲಾಗಿರುವ ಈಜಿಪ್ಟನ ವಿಶ್ವ ಸುಂದರಿ ಕ್ಲಿಯೋಪಾತ್ರ ಹಾಲಿನಿಂದ ಸ್ನಾನ ಮಾಡುತ್ತಿದ್ದರು ಇದರಿಂದ ಇವರ ಸೌಂದರ್ಯವರ್ದನೆ ಹೆಚ್ಚಾಯಿತು ಎ೦ಬ ಲೇಖನಗಳಿದೆ ಇದೇ ರೀತಿ ಬ್ರಿಟನ್ ರಾಣಿ ಎಲಿಜಾಬೆತ್ ಹಾಲಿನಿಂದ ಸ್ನಾನ ಮಾಡುತ್ತಿದ್ದರು.
  1800 ರಲ್ಲಿ ಅಮೇರಿಕಾದಲ್ಲಿ ಹಾಲಿನಿಂದ ಸ್ನಾನ ಹೆಚ್ಚು ಪ್ರಚಾರದಲ್ಲಿತ್ತು, ಭಾರತೀಯ ಆಯುರ್ವೇದದಲ್ಲಿ ಕ್ಷೀರಾದಾರ ಎಂಬ ಹಾಲಿನ ಸ್ನಾನದ ಚಿಕಿತ್ಸೆ ಇದೆ.
  ಭಾರತೀಯ ಹಿಂದೂ ದರ್ಮಿಯರ ಪೂಜಾ ವಿಧಾನದಲ್ಲಿ ಶಿಲಾಮೂರ್ತಿಗೆ ಹಾಲಿನ ಅಭಿಶೇಕ ಪುರಾಣ ಕಾಲದಿಂದಲೂ ಆಚರಣೆಯಲ್ಲಿದೆ.
  ಆದರೆ ವೈಜ್ಞಾನಿಕವಾಗಿ ಹಾಲಿನ ಸ್ನಾನದ ಲಾಭಗಳ ಬಗ್ಗೆ ಹೆಚ್ಚಿನ ಸಬೂತು ಸಿಕ್ಕಿಲ್ಲವಾದರೂ ಹಾಲಿನಲ್ಲಿರುವ ವಿಟಮಿನ್- ಮಿನರಲ್ - ಲಾಕ್ಟಿಕ್ ಆಸಿಡ್ ಚರ್ಮದಲ್ಲಿ ಸತ್ತ ಜೀವಕೋಶಗಳನ್ನು ಹಿಡಿದಿಡುವ ಪ್ರೋಟಿನ್ ಕರಗಿಸುತ್ತದೆ ಎನ್ನುವುದು ದೇಹದ ಚರ್ಮ ಸೌಂದರ್ಯಕ್ಕೆ ಹಾಲಿನ ಸ್ನಾನ ಉಪಯುಕ್ತವಾಗಿದೆ.
  ಹಾಲಿನ ಜೊತೆ ಜೇನುತುಪ್ಪ - ಗುಲಾಬಿ ಹೂವು - ಸಾರಭೂತ ತೈಲಗಳ ಪರಿಮಳ ಸೇರಿಸಿ ಹಾಲಿನ ಮಿಲ್ಕ್ ಬಾತ್ ಮಾಡುತ್ತಿದ್ದ ಕಾಲ ಬದಲಾಗಿ ಈಗಿನ ಕಾಲದಲ್ಲಿ ಇವೆಲ್ಲ ಸೇರಿಸಿದ ಮಿಲ್ಕ್ ಸೋಪು ಬಳಕೆ ಜಾಸ್ತಿ ಆಗಿದೆ.
   ಮಲೆನಾಡಿನ ಅವಸಾನದ ಅಂಚಿನ ಮಲೆನಾಡು ಗಿಡ್ಡ ತಳಿ ಸಂವರ್ಧನಾ ಕಾರ್ಯಕ್ರಮದಂತ ಅದರ ಹಾಲು, ಶುದ್ಧ ತೆಂಗಿನ ಎಣ್ಣೆ ಮತ್ತು ಸುಗಂದ ತೈಲ ಸೇರಿಸಿದ ಈ A - 2 ಮಿಲ್ಕ್ ರಾಸಾಯನಿಕದ ಬೆರಕೆ ಇಲ್ಲದ ಚರ್ಮದ ಆರೋಗ್ಯ ವರ್ದಕ ಪರಿಸರ ಸ್ನೇಹಿ ಸೋಪಾಗಿದೆ.

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...