Skip to main content

Blog number 1716. ಚರ್ಮ ರಕ್ಷಣೆಗೆ ಮಲೆನಾಡು ಗಿಡ್ಡ ಗೋತಳಿ A - 2 ಹಾಲು, ಶುದ್ಧ ಕೊಬ್ಬರಿ ಎಣ್ಣೆ ಮತ್ತು ಸುಗಂದ ತೈಲದಿಂದ ತಯಾರಾದ A - 2 ಮಿಲ್ಕ್ ಸೋಪು ಬಳಕೆ.

#ಮಿಲ್ಕ್_ಸೋಪುಗಳು

#ಅದರಲ್ಲೂ_ದೇಶಿ_ಗೋವಿನ_ಹಾಲಿನ_A2_ಮಿಲ್ಕ್_ಸೋಪುಗಳು

#ನಾನು_ರಾಸಾಯನಿಕ_ಸೋಪಿನಿಂದ_ಮಲೆನಾಡು_ಗಿಡ್ಡ_ತಳಿಯ_ಹಾಲಿನ_ಸೋಪಿಗೆ_ಬದಲಾಗಿದ್ದೇನೆ.

#ಸೌಂದರ್ಯವರ್ದನೆಗಾಗಿ_ಹಾಲಿನಿಂದ_ಸ್ನಾನ_ಮಾಡುತ್ತಿದ್ದರು.

#ಭಾರತೀಯ_ಆಯುರ್ವೇದದಲ್ಲಿ_ಕ್ಷೀರಾದಾರ_ಚಿಕಿತ್ಸೆ_ಇದೆ.

#ಇತಿಹಾಸದಲ್ಲಿ_ಕ್ಲೀಯೋಪಾತ್ರ_ಇಂಗ್ಲೇಂಡಿನ_ರಾಣಿ_ಎಲಿಜಬೆತ್_ಹಾಲಿನಿಂದ_ಸ್ನಾನ_ಮಾಡುತ್ತಿದ್ದರು.
   ನನ್ನ ಬಾಲ್ಯದಲ್ಲಿ ನಮ್ಮ ತಂದೆಯವರು ಆಯ್ಕೆ ಮಾಡಿದ್ದ ಲೈಫ್ ಬಾಯ್ ಸೋಪು ಖಾಯ೦ ಆಗಿತ್ತು ಇದರ ಮಧ್ಯದಲ್ಲಿ ಶಾಲಾ ರಜಾ ದಿನಗಳಲ್ಲಿ  ಈಜಾಡುವ ಹಪಾಹಪಿಯಿಂದ ಬಟ್ಟೆ ಸೋಪು ಕಸ್ತೂರಿ ಬಾರ್ ನ ಒ೦ದೆರೆಡು ಗೆರೆ ಮನೆಯಲ್ಲಿ ಗೊತ್ತಾಗದಂತೆ ಕತ್ತರಿಸಿ ಒಯ್ಯುತ್ತಿದ್ದೆ.
   ಪ್ರಾಯದಲ್ಲಿ ಹಮಾಮ್‌ ನಂತರ ಲಕ್ಸ್ ಸೋಪಿಗೆ ಅಲ್ಲಿಂದ ಜಾಹಿರಾತುಗಳಿಂದ ಪ್ರೇರಣೆಯಿಂದ ಲಿರಿಲ್ ನಂತರ ಮೈ ತುರಿಕೆ ಉಪಶಮನಕ್ಕಾಗಿ ಚಂದ್ರಿಕಾ ನಂತರ ಸರಿಯಾದ ಬುದ್ಧಿ ಸ್ಥಿಮಿತಕ್ಕೆ ಬಂದಂದಿನಿಂದ ನಮ್ಮ ರಾಜ್ಯದ ಮೈಸೂರು ಸ್ಯಾಂಡಲ್ ಸೋಪಿನಲ್ಲಿ ನಿಂತಿದೆ.
  ಮೊನ್ನೆ ಗೆಳೆಯರು ಅವರ ಸಂಸ್ಥೆಯ ಮಲೆನಾಡು ಗಿಡ್ದ ತಳಿಯ ಗೋವಿನ ಹಾಲಿನಿಂದ ತಯಾರಿಸಿದ A - 2 ಮಿಲ್ಕ್ ಸೋಪು ಸ್ಯಾಂಪಲ್ ಕೊಟ್ಟಿದ್ದನ್ನು ಬಳಸಲು ಶುರು ಮಾಡಿದ ಮೇಲೆ ಮೈಸೂರು ಸ್ಯಾಂಡಲ್ ನಿಂದ A - 2 ಮಿಲ್ಕ್ ಸೋಪಿಗೆ ಬದಲಾಗುವ ಮನಸಾಗಿದೆ.
  ಕಾರಣ ನಾವು ಬಳಸುವ ಸೋಪು ಗಳಲ್ಲಿ ವಿಪರೀತ ರಾಸಾಯನಿಕ ಬಳಕೆ ಮಾಡುತ್ತಾರೆ ಇದು ಚರ್ಮಕ್ಕೂ ಅಪಾಯ ಮತ್ತು ತಲೆ ಕೂದಲು ಉದುರಿ ಬೋಳಾಗಿಸಲು ಕಾರಣ ಆದ್ದರಿಂದ ರಾಸಾಯನಿಕ ಬಳಕೆ ಇಲ್ಲದ ದೇಶಿ ಗೋವಿನ ಹಾಲು ಮತ್ತು ಶುದ್ಧ ಕೊಬ್ಬರಿ ಎಣ್ಣೆಯಿಂದ ತಯಾರಿಸುವ A - 2 ಸೋಪು ಅತ್ಯುತ್ತಮ.
   ಉಡುಪಿ ಜಿಲ್ಲೆಯ ತ್ರಿಮದುರ A - 2 ಮಿಲ್ಕ್ ಸೋಪು ಬೇಕಾದವರು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಆರ್ಡರ್ ಮಾಡಬಹುದು https://www.olufresh.com/product/desi-cow-milk-soap-a2-cow-milk-soap-100-grams/

 ಇತಿಹಾಸದಲ್ಲಿ ದಾಖಲಾಗಿರುವ ಈಜಿಪ್ಟನ ವಿಶ್ವ ಸುಂದರಿ ಕ್ಲಿಯೋಪಾತ್ರ ಹಾಲಿನಿಂದ ಸ್ನಾನ ಮಾಡುತ್ತಿದ್ದರು ಇದರಿಂದ ಇವರ ಸೌಂದರ್ಯವರ್ದನೆ ಹೆಚ್ಚಾಯಿತು ಎ೦ಬ ಲೇಖನಗಳಿದೆ ಇದೇ ರೀತಿ ಬ್ರಿಟನ್ ರಾಣಿ ಎಲಿಜಾಬೆತ್ ಹಾಲಿನಿಂದ ಸ್ನಾನ ಮಾಡುತ್ತಿದ್ದರು.
  1800 ರಲ್ಲಿ ಅಮೇರಿಕಾದಲ್ಲಿ ಹಾಲಿನಿಂದ ಸ್ನಾನ ಹೆಚ್ಚು ಪ್ರಚಾರದಲ್ಲಿತ್ತು, ಭಾರತೀಯ ಆಯುರ್ವೇದದಲ್ಲಿ ಕ್ಷೀರಾದಾರ ಎಂಬ ಹಾಲಿನ ಸ್ನಾನದ ಚಿಕಿತ್ಸೆ ಇದೆ.
  ಭಾರತೀಯ ಹಿಂದೂ ದರ್ಮಿಯರ ಪೂಜಾ ವಿಧಾನದಲ್ಲಿ ಶಿಲಾಮೂರ್ತಿಗೆ ಹಾಲಿನ ಅಭಿಶೇಕ ಪುರಾಣ ಕಾಲದಿಂದಲೂ ಆಚರಣೆಯಲ್ಲಿದೆ.
  ಆದರೆ ವೈಜ್ಞಾನಿಕವಾಗಿ ಹಾಲಿನ ಸ್ನಾನದ ಲಾಭಗಳ ಬಗ್ಗೆ ಹೆಚ್ಚಿನ ಸಬೂತು ಸಿಕ್ಕಿಲ್ಲವಾದರೂ ಹಾಲಿನಲ್ಲಿರುವ ವಿಟಮಿನ್- ಮಿನರಲ್ - ಲಾಕ್ಟಿಕ್ ಆಸಿಡ್ ಚರ್ಮದಲ್ಲಿ ಸತ್ತ ಜೀವಕೋಶಗಳನ್ನು ಹಿಡಿದಿಡುವ ಪ್ರೋಟಿನ್ ಕರಗಿಸುತ್ತದೆ ಎನ್ನುವುದು ದೇಹದ ಚರ್ಮ ಸೌಂದರ್ಯಕ್ಕೆ ಹಾಲಿನ ಸ್ನಾನ ಉಪಯುಕ್ತವಾಗಿದೆ.
  ಹಾಲಿನ ಜೊತೆ ಜೇನುತುಪ್ಪ - ಗುಲಾಬಿ ಹೂವು - ಸಾರಭೂತ ತೈಲಗಳ ಪರಿಮಳ ಸೇರಿಸಿ ಹಾಲಿನ ಮಿಲ್ಕ್ ಬಾತ್ ಮಾಡುತ್ತಿದ್ದ ಕಾಲ ಬದಲಾಗಿ ಈಗಿನ ಕಾಲದಲ್ಲಿ ಇವೆಲ್ಲ ಸೇರಿಸಿದ ಮಿಲ್ಕ್ ಸೋಪು ಬಳಕೆ ಜಾಸ್ತಿ ಆಗಿದೆ.
   ಮಲೆನಾಡಿನ ಅವಸಾನದ ಅಂಚಿನ ಮಲೆನಾಡು ಗಿಡ್ಡ ತಳಿ ಸಂವರ್ಧನಾ ಕಾರ್ಯಕ್ರಮದಂತ ಅದರ ಹಾಲು, ಶುದ್ಧ ತೆಂಗಿನ ಎಣ್ಣೆ ಮತ್ತು ಸುಗಂದ ತೈಲ ಸೇರಿಸಿದ ಈ A - 2 ಮಿಲ್ಕ್ ರಾಸಾಯನಿಕದ ಬೆರಕೆ ಇಲ್ಲದ ಚರ್ಮದ ಆರೋಗ್ಯ ವರ್ದಕ ಪರಿಸರ ಸ್ನೇಹಿ ಸೋಪಾಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...